ETV Bharat / sports

ಕೆಪಿಎಲ್​ 2019: ಹುಬ್ಬಳ್ಳಿ ಮಣಿಸಿ ಸತತ 2ನೇ ಜಯ ಸಾಧಿಸಿದ ಬಳ್ಳಾರಿ ಟಸ್ಕರ್ಸ್​

author img

By

Published : Aug 19, 2019, 11:41 PM IST

Updated : Aug 19, 2019, 11:56 PM IST

ಕೆಪಿಎಲ್​ನ 8ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಅಂಡರ್​ 19 ಹೀರೋ ದೇವದತ್​ ಪಡಿಕ್ಕಲ್​ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಬಳ್ಳಾರಿ ಟಸ್ಕರ್ಸ್​ ಹುಬ್ಬಳ್ಳಿ ಟೈಗರ್ಸ್​ ತಂಡವನ್ನು 9 ರನ್​ಗಳಿಂದ ಮಣಿಸಿದೆ.

KPL 2019

ಬೆಂಗಳೂರು: ಕೆಪಿಎಲ್​ನ 8ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಅಂಡರ್​ 19 ಹೀರೋ ದೇವದತ್​ ಪಡಿಕ್ಕಲ್​ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಬಳ್ಳಾರಿ ಟಸ್ಕರ್ಸ್​ ಹುಬ್ಬಳ್ಳಿ ಟೈಗರ್ಸ್​ ತಂಡವನ್ನು 9 ರನ್​ಗಳಿಂದ ಮಣಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟಸ್ಕರ್ಸ್​ 20 ಓವರ್​ಗಳಲ್ಲಿ 163 ರನ್​ಗಳ ಸ್ಪರ್ಧಾತ್ಮ ಮೊತ್ತ ಕಲೆಹಾಕಿತು. ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್ 56 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​​ 70 ರನ್​ಗಳಿಸಿದರು. ಇವರಿಗೆ ಸಾಥ್​ ನೀಡಿದ ಅಭಿಷೇಕ್​ ರೆಡ್ಡಿ 24, ಜೀಶಾನ್​ 25 ರನ್​ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಹುಬ್ಬಳ್ಳಿ ಪರ ವಿನಯ್​ ಕುಮಾರ್​ 1, ಆದಿತ್ಯ ಸೋಮಣ್ಣ 2, ಡೇವಿಡ್​ ಮೆಥಾಯಿಸ್​ 2, ಮಿತ್ರಕಾಂತ್ ಯಾದವ್​ 2 ವಿಕೆಟ್​ ಪಡೆದು ಮಿಂಚಿದರು.

164 ರನ್​ಗಳನ್ನು ಬೆನ್ನೆತ್ತಿದ ಟೈಗರ್ಸ್​ ಮೊದಲ ಓವರ್​ನಲ್ಲೇ ಅನುಭವಿ ತಾಹ ವಿಕೆಟ್​ ಕಳೆದುಕೊಂಡಿತು. ಆದರೆ ವಿಶ್ವನಾಥ್​ 30 ರನ್​, ಲೌನಿತ್​ ಸಿಸೋಡಿಯಾ 22, ಕೆಎಲ್​ ಶ್ರೀಜಿತ್​ 22 ರನ್​, ನಾಯಕ ವಿನಯ್​ ಕುಮಾರ್​ 37 ರನ್​, ಪ್ರವೀಣ್​ ದುಬೆ 28 ರನ್​ಗಳಿಸಿ ಗೆಲುವಿಗಾಗಿ ಕೊನೆಯ ಓವರ್​ವರೆಗೂ ಹೋರಾಟ ನಡೆಸಿದರು. ಆದರೆ 20 ಓವರ್​ಗಳಲ್ಲಿ 154 ರನ್​ಗಳಿಸಲಷ್ಟೇ ಶಕ್ತವಾಗಿ 9 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಬಳ್ಳಾರಿ ಪರ ಪ್ರಸಿದ್​ ಕೃಷ್ಣ 1, ಕೆ ಗೌತಮ್​ 1, ಕಾರ್ತಿಕ್​ ಸಿಎ 3, ಕೆಪಿ ಅಪ್ಪಣ್ಣ 1, ಅಬ್ರಾರ್​ ಕಾಜಿ 2 ವಿಕೆಟ್​ ಪಡೆದು ತಂಡಕ್ಕೆ 9 ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಆಕರ್ಷಕ ಅರ್ಧಶತಕ ಸಿಡಿಸಿದ ಪಡಿಕ್ಕಲ್​ ಸತತ 2ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬೆಂಗಳೂರು: ಕೆಪಿಎಲ್​ನ 8ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಅಂಡರ್​ 19 ಹೀರೋ ದೇವದತ್​ ಪಡಿಕ್ಕಲ್​ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಬಳ್ಳಾರಿ ಟಸ್ಕರ್ಸ್​ ಹುಬ್ಬಳ್ಳಿ ಟೈಗರ್ಸ್​ ತಂಡವನ್ನು 9 ರನ್​ಗಳಿಂದ ಮಣಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟಸ್ಕರ್ಸ್​ 20 ಓವರ್​ಗಳಲ್ಲಿ 163 ರನ್​ಗಳ ಸ್ಪರ್ಧಾತ್ಮ ಮೊತ್ತ ಕಲೆಹಾಕಿತು. ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್ 56 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​​ 70 ರನ್​ಗಳಿಸಿದರು. ಇವರಿಗೆ ಸಾಥ್​ ನೀಡಿದ ಅಭಿಷೇಕ್​ ರೆಡ್ಡಿ 24, ಜೀಶಾನ್​ 25 ರನ್​ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಹುಬ್ಬಳ್ಳಿ ಪರ ವಿನಯ್​ ಕುಮಾರ್​ 1, ಆದಿತ್ಯ ಸೋಮಣ್ಣ 2, ಡೇವಿಡ್​ ಮೆಥಾಯಿಸ್​ 2, ಮಿತ್ರಕಾಂತ್ ಯಾದವ್​ 2 ವಿಕೆಟ್​ ಪಡೆದು ಮಿಂಚಿದರು.

164 ರನ್​ಗಳನ್ನು ಬೆನ್ನೆತ್ತಿದ ಟೈಗರ್ಸ್​ ಮೊದಲ ಓವರ್​ನಲ್ಲೇ ಅನುಭವಿ ತಾಹ ವಿಕೆಟ್​ ಕಳೆದುಕೊಂಡಿತು. ಆದರೆ ವಿಶ್ವನಾಥ್​ 30 ರನ್​, ಲೌನಿತ್​ ಸಿಸೋಡಿಯಾ 22, ಕೆಎಲ್​ ಶ್ರೀಜಿತ್​ 22 ರನ್​, ನಾಯಕ ವಿನಯ್​ ಕುಮಾರ್​ 37 ರನ್​, ಪ್ರವೀಣ್​ ದುಬೆ 28 ರನ್​ಗಳಿಸಿ ಗೆಲುವಿಗಾಗಿ ಕೊನೆಯ ಓವರ್​ವರೆಗೂ ಹೋರಾಟ ನಡೆಸಿದರು. ಆದರೆ 20 ಓವರ್​ಗಳಲ್ಲಿ 154 ರನ್​ಗಳಿಸಲಷ್ಟೇ ಶಕ್ತವಾಗಿ 9 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಬಳ್ಳಾರಿ ಪರ ಪ್ರಸಿದ್​ ಕೃಷ್ಣ 1, ಕೆ ಗೌತಮ್​ 1, ಕಾರ್ತಿಕ್​ ಸಿಎ 3, ಕೆಪಿ ಅಪ್ಪಣ್ಣ 1, ಅಬ್ರಾರ್​ ಕಾಜಿ 2 ವಿಕೆಟ್​ ಪಡೆದು ತಂಡಕ್ಕೆ 9 ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಆಕರ್ಷಕ ಅರ್ಧಶತಕ ಸಿಡಿಸಿದ ಪಡಿಕ್ಕಲ್​ ಸತತ 2ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Intro:Body:Conclusion:
Last Updated : Aug 19, 2019, 11:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.