ETV Bharat / sports

ವೃದ್ಧಿಮಾನ್​​ ಬಿಟ್ಟು ಪಂತ್​ ಆಯ್ಕೆಗೆ ಸಮರ್ಥನೆ: ಸುದ್ದಿಗೋಷ್ಠಿ ವೇಳೆ ಕ್ಯಾಪ್ಟನ್​ ಕೊಹ್ಲಿ ಗರಂ!

author img

By

Published : Mar 2, 2020, 11:04 AM IST

ಟೀಂ ಇಂಡಿಯಾ ಟೆಸ್ಟ್​ ಸರಣಿಯಲ್ಲಿ ಕಿವೀಸ್​​ ನೆಲದಲ್ಲಿ ಹೀನಾಯ ಸೋಲು ಕಂಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೊಹ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ.

Kohli loses cool
Kohli loses cool

ಕ್ರೈಸ್ಟ್​ಚರ್ಚ್​​: ಟೆಸ್ಟ್​​ ಕ್ರಿಕೆಟ್​​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದ ಕೊಹ್ಲಿ ಪಡೆಗೆ ನ್ಯೂಜಿಲ್ಯಾಂಡ್ ತಂಡ ವೈಟ್​ವಾಶ್​ ಮುಖಭಂಗದ ರುಚಿ ತೋರಿಸಿದ್ದು, ಈ ಮೂಲಕ ಟೆಸ್ಟ್​​ನಲ್ಲಿ ಟೀಂ ಇಂಡಿಯಾ 8 ವರ್ಷಗಳ ನಂತರ ಟೆಸ್ಟ್​​ ಕ್ರಿಕೆಟ್​ನಲ್ಲಿ ಸರಣಿ ಸೋಲು ಕಂಡಿದೆ.

ಸುದ್ದಿಗೋಷ್ಠಿ ವೇಳೆ ಗರಂ ಆದ ಕ್ಯಾಪ್ಟನ್​ ಕೊಹ್ಲಿ!

ಸೋಲು ಕಾಣುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್​​ ಕೊಹ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಎರಡು ಟೆಸ್ಟ್​​ ಪಂದ್ಯಗಳಲ್ಲಿ ವೃದ್ಧಿಮಾನ್​ ಸಾಹಾ ಬಿಟ್ಟು ರಿಷಭ್​ ಪಂತ್​ಗೆ ಅವಕಾಶ ನೀಡಿದ್ದರ ಬಗ್ಗೆ ಮಾತನಾಡಿದ ಕೊಹ್ಲಿ, ಸ್ಟಂಪ್​ ಹಿಂದೆ ಪಂತ್​​ ಕಠಿಣ ಅಭ್ಯಾಸ ನಡೆಸಿದ್ದರು. ನಮ್ಮ ಪ್ರಕಾರ ಟೆಸ್ಟ್​ನಲ್ಲಿ ಆತ ಉತ್ತಮ ಪ್ರದರ್ಶನ ನೀಡುತ್ತಾನೆಂದು ನಾವೆಲ್ಲ ಅಂದುಕೊಂಡಿದ್ದೆವು. ಆದ್ರೆ ನಾವು ಅಂದುಕೊಂಡ ರೀತಿ ನಡೆಯಲಿಲ್ಲ. ರಹಾನೆ, ಪೂಜಾರಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ ಎಂದರು. ತಂಡದಲ್ಲಿ ಯಾರೂ ತಮ್ಮ ಇಷ್ಟದ ರೀತಿ ನಡೆದುಕೊಳ್ಳಲು ಬಿಡಲ್ಲ. ಪ್ರತಿಭೆ ಇರುವ ಆಟಗಾರರಿಗೆ ಖಂಡಿತವಾಗಿ ಅವಕಾಶ ಸಿಕ್ಕಿದೆ ಎಂದರು.

ಇದೇ ವೇಳೆ, ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆ ವೇಳೆ ಕ್ಯಾಪ್ಟನ್​ ಕೊಹ್ಲಿ ತಾಳ್ಮೆ ಕಳೆದುಕೊಂಡು ಅವರು ವಿರುದ್ಧ ವಾಗ್ದಾಳಿ ನಡೆಸಿರುವ ಘಟನೆ ಸಹ ನಡೆದಿದೆ. ಎರಡನೇ ಟೆಸ್ಟ್​​ ಪಂದ್ಯದ ವೇಳೆ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸ್​ನ ಹಾಗೂ ಟಾಮ್​ ಲ್ಯಾಥಮ್​ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ಆಕ್ರಮಣಕಾರಿಯಾಗಿ ಕೊಹ್ಲಿ ಸಂಭ್ರಮಾಚರಣೆ ಮಾಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಪತ್ರಕರ್ತನೋರ್ವ, ನಿಮ್ಮ ಆಕ್ರಮಣಶೀಲತೆ ಕಡಿಮೆಗೊಳಿಸಕೊಳ್ಳಬೇಕು ಎಂದು ಅನಿಸುತ್ತದೆಯಾ ಎಂದು ಕೇಳಿದರು. ಇದಕ್ಕೆ ಅರ್ಧ ಜ್ಞಾನದೊಂದಿಗೆ ಇಲ್ಲಿಗೆ ಬರಬೇಡಿ ಎಂದು ಹರಿಹಾಯ್ದಿದ್ದಾರೆ.

ಕ್ರೈಸ್ಟ್​ಚರ್ಚ್​​: ಟೆಸ್ಟ್​​ ಕ್ರಿಕೆಟ್​​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದ ಕೊಹ್ಲಿ ಪಡೆಗೆ ನ್ಯೂಜಿಲ್ಯಾಂಡ್ ತಂಡ ವೈಟ್​ವಾಶ್​ ಮುಖಭಂಗದ ರುಚಿ ತೋರಿಸಿದ್ದು, ಈ ಮೂಲಕ ಟೆಸ್ಟ್​​ನಲ್ಲಿ ಟೀಂ ಇಂಡಿಯಾ 8 ವರ್ಷಗಳ ನಂತರ ಟೆಸ್ಟ್​​ ಕ್ರಿಕೆಟ್​ನಲ್ಲಿ ಸರಣಿ ಸೋಲು ಕಂಡಿದೆ.

ಸುದ್ದಿಗೋಷ್ಠಿ ವೇಳೆ ಗರಂ ಆದ ಕ್ಯಾಪ್ಟನ್​ ಕೊಹ್ಲಿ!

ಸೋಲು ಕಾಣುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್​​ ಕೊಹ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಎರಡು ಟೆಸ್ಟ್​​ ಪಂದ್ಯಗಳಲ್ಲಿ ವೃದ್ಧಿಮಾನ್​ ಸಾಹಾ ಬಿಟ್ಟು ರಿಷಭ್​ ಪಂತ್​ಗೆ ಅವಕಾಶ ನೀಡಿದ್ದರ ಬಗ್ಗೆ ಮಾತನಾಡಿದ ಕೊಹ್ಲಿ, ಸ್ಟಂಪ್​ ಹಿಂದೆ ಪಂತ್​​ ಕಠಿಣ ಅಭ್ಯಾಸ ನಡೆಸಿದ್ದರು. ನಮ್ಮ ಪ್ರಕಾರ ಟೆಸ್ಟ್​ನಲ್ಲಿ ಆತ ಉತ್ತಮ ಪ್ರದರ್ಶನ ನೀಡುತ್ತಾನೆಂದು ನಾವೆಲ್ಲ ಅಂದುಕೊಂಡಿದ್ದೆವು. ಆದ್ರೆ ನಾವು ಅಂದುಕೊಂಡ ರೀತಿ ನಡೆಯಲಿಲ್ಲ. ರಹಾನೆ, ಪೂಜಾರಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ ಎಂದರು. ತಂಡದಲ್ಲಿ ಯಾರೂ ತಮ್ಮ ಇಷ್ಟದ ರೀತಿ ನಡೆದುಕೊಳ್ಳಲು ಬಿಡಲ್ಲ. ಪ್ರತಿಭೆ ಇರುವ ಆಟಗಾರರಿಗೆ ಖಂಡಿತವಾಗಿ ಅವಕಾಶ ಸಿಕ್ಕಿದೆ ಎಂದರು.

ಇದೇ ವೇಳೆ, ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆ ವೇಳೆ ಕ್ಯಾಪ್ಟನ್​ ಕೊಹ್ಲಿ ತಾಳ್ಮೆ ಕಳೆದುಕೊಂಡು ಅವರು ವಿರುದ್ಧ ವಾಗ್ದಾಳಿ ನಡೆಸಿರುವ ಘಟನೆ ಸಹ ನಡೆದಿದೆ. ಎರಡನೇ ಟೆಸ್ಟ್​​ ಪಂದ್ಯದ ವೇಳೆ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸ್​ನ ಹಾಗೂ ಟಾಮ್​ ಲ್ಯಾಥಮ್​ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ಆಕ್ರಮಣಕಾರಿಯಾಗಿ ಕೊಹ್ಲಿ ಸಂಭ್ರಮಾಚರಣೆ ಮಾಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಪತ್ರಕರ್ತನೋರ್ವ, ನಿಮ್ಮ ಆಕ್ರಮಣಶೀಲತೆ ಕಡಿಮೆಗೊಳಿಸಕೊಳ್ಳಬೇಕು ಎಂದು ಅನಿಸುತ್ತದೆಯಾ ಎಂದು ಕೇಳಿದರು. ಇದಕ್ಕೆ ಅರ್ಧ ಜ್ಞಾನದೊಂದಿಗೆ ಇಲ್ಲಿಗೆ ಬರಬೇಡಿ ಎಂದು ಹರಿಹಾಯ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.