ETV Bharat / sports

ರಣಜಿ ಟ್ರೋಫಿ: ಕೊನೆಯ ಓವರ್​ನಲ್ಲಿ ವಿಕೆಟ್​ ಪಡೆದು ತಮಿಳುನಾಡು ವಿರುದ್ಧ ರೋಚಕ ಜಯ ಸಾಧಿಸಿದ ಕರ್ನಾಟಕ

author img

By

Published : Dec 12, 2019, 6:04 PM IST

ಈಗಾಗಲೆ ವಿಜಯ್​ ಹಜಾರೆ, ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ತಮಿಳುನಾಡನ್ನು ಬಗ್ಗುಬಡಿದಿದ್ದ ಕನ್ನಡಿಗರು ರಣಜಿಯ ಮೊದಲ ಪಂದ್ಯದಲ್ಲೆ ಕೊನೆಯ ಓವರ್​ನಲ್ಲಿ ವಿಕೆಟ್​ ಪಡೆಯುವ ಮೂಲಕ 26 ರನ್​ಗಳ ರೋಚಕ ಜಯದೊಂದಿಗೆ ರಣಜಿ ವೃತುವಿನಲ್ಲಿ ಶುಭಾರಂಭ ಮಾಡಿದೆ.

Karnataka beat Tamil Nadu in Ranji thriller
Karnataka beat Tamil Nadu in Ranji thriller

ದಿಂಡಿಗಲ್​: ತಮಿಳುನಾಡು ವಿರುದ್ಧ ರಣಜಿ ಪಂದ್ಯದ ಕೊನೆಯ ದಿನ, ಕೊನೆಯ ಓವರ್​ನಲ್ಲಿ ವಿಕೆಟ್​ ಪಡೆಯುವ ಮೂಲಕ ಡ್ರಾನಲ್ಲಿ ಅಂತ್ಯಗೊಳ್ಳುತ್ತಿದ್ದ ಪಂದ್ಯವನ್ನು 26 ರನ್​ಗಳಿಂದ ಗೆದ್ದು ಬೀಗಿದೆ.

ಈಗಾಗಲೆ ವಿಜಯ್​ ಹಜಾರೆ, ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ತಮಿಳುನಾಡನ್ನು ಬಗ್ಗುಬಡಿದಿದ್ದ ಕನ್ನಡಿಗರು ರಣಜಿಯ ಮೊದಲ ಪಂದ್ಯದಲ್ಲೆ 26 ರನ್​ಗಳ ರೋಚಕ ಜಯದೊಂದಿಗೆ ಶುಭಾರಂಭ ಮಾಡಿದೆ.

ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯಕ್ಕೆ ಕಣಕ್ಕಿಳಿದಿದ್ದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 336 ರನ್​ಗಳಿಸಿತ್ತು ಇದಕ್ಕುತ್ತರವಾಗಿ ತಮಿಳುನಾಡು ತಂಡ 307 ರನ್​ಗಳಿಸಿತ್ತು. 29 ರನ್​ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದಿದ್ದ ಕರ್ನಾಟಕ 151 ರನ್​ಗಳಿಗೆ ಆಲೌಟ್​ ಆಗಿ ಸಂಕಷ್ಟ ಅನುಭವಿಸಿತ್ತು.

181 ರನ್​ಗಳ ಗುರಿ ಪಡೆದಿದ್ದ ತಮಿಳುನಾಡು ತಂಡ ಮೊದಲ 7 ಓವರ್​ಗಳಲ್ಲಿ 46 ರನ್​ಗಳಿಸಿ ಸುಲಭ ಜಯ ಸಾಧಿಸುವ ಮುನ್ಸೂಚನೆ ನೀಡಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಕರ್ನಾಟಕ ಬೌಲರ್​ಗಳು ತಮಿಳುನಾಡಿಗೆ ಡ್ರಾ ಸಾಧಿಸಲು ಅವಕಾಶ ಕೊಡದೆ ಪಂದ್ಯವನ್ನು ಗೆದ್ದು ಬೀಗಿದೆ. ಕೆ.ಗೌತಮ್​ ದಾಳಿಗೆ ತತ್ತರಿಸಿದ ತಮಿಳುನಾಡು 154 ರನ್​ಗಳಿಗೆ ಆಲೌಟ್​ ಆಗಿ ಸೋಲುಕಂಡಿತು. 42 ರನ್​ಗಳಿಸಿದ ಅಭಿನವ್​ ಮುಕುಂದ್​ ತಮಿಳುನಾಡಿನ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಸಯ್ಯದ್​ ಮುಷ್ತಾಕ್​ ಅಲಿಯಲ್ಲಿ ಕೊನೆಯ ಓವರ್​ ಎಸೆದಿದ್ದ ಕೆ ಗೌತಮ್​ ಮತ್ತೊಮ್ಮೆ ಕೊನೆಯ ಓವರ್​ ಸರ್ಕಸ್​ನಲ್ಲಿ ತಮಿಳುನಾಡಿನ ಕೊನೆಯ ವಿಕೆಟ್​ ಪಡೆದು ಕರ್ನಾಟಕಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಲ್ಲದೆ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ಪಡೆದು ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಗೆಲುವಿನೊಂದಿಗೆ ಕರ್ನಾಟಕ ತಂಡ 6 ಅಂಕ ಪಡೆಯಿತು.

ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಹುಬ್ಬಳ್ಳಿಯಲ್ಲಿ ಡಿಸೆಂಬರ್​ 17ರಿಂದ ಉತ್ತರ ಪ್ರದೇಶದ ವಿರುದ್ಧ ಕಣಕ್ಕಿಳಿಯಲಿದೆ.

ದಿಂಡಿಗಲ್​: ತಮಿಳುನಾಡು ವಿರುದ್ಧ ರಣಜಿ ಪಂದ್ಯದ ಕೊನೆಯ ದಿನ, ಕೊನೆಯ ಓವರ್​ನಲ್ಲಿ ವಿಕೆಟ್​ ಪಡೆಯುವ ಮೂಲಕ ಡ್ರಾನಲ್ಲಿ ಅಂತ್ಯಗೊಳ್ಳುತ್ತಿದ್ದ ಪಂದ್ಯವನ್ನು 26 ರನ್​ಗಳಿಂದ ಗೆದ್ದು ಬೀಗಿದೆ.

ಈಗಾಗಲೆ ವಿಜಯ್​ ಹಜಾರೆ, ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ತಮಿಳುನಾಡನ್ನು ಬಗ್ಗುಬಡಿದಿದ್ದ ಕನ್ನಡಿಗರು ರಣಜಿಯ ಮೊದಲ ಪಂದ್ಯದಲ್ಲೆ 26 ರನ್​ಗಳ ರೋಚಕ ಜಯದೊಂದಿಗೆ ಶುಭಾರಂಭ ಮಾಡಿದೆ.

ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯಕ್ಕೆ ಕಣಕ್ಕಿಳಿದಿದ್ದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 336 ರನ್​ಗಳಿಸಿತ್ತು ಇದಕ್ಕುತ್ತರವಾಗಿ ತಮಿಳುನಾಡು ತಂಡ 307 ರನ್​ಗಳಿಸಿತ್ತು. 29 ರನ್​ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದಿದ್ದ ಕರ್ನಾಟಕ 151 ರನ್​ಗಳಿಗೆ ಆಲೌಟ್​ ಆಗಿ ಸಂಕಷ್ಟ ಅನುಭವಿಸಿತ್ತು.

181 ರನ್​ಗಳ ಗುರಿ ಪಡೆದಿದ್ದ ತಮಿಳುನಾಡು ತಂಡ ಮೊದಲ 7 ಓವರ್​ಗಳಲ್ಲಿ 46 ರನ್​ಗಳಿಸಿ ಸುಲಭ ಜಯ ಸಾಧಿಸುವ ಮುನ್ಸೂಚನೆ ನೀಡಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಕರ್ನಾಟಕ ಬೌಲರ್​ಗಳು ತಮಿಳುನಾಡಿಗೆ ಡ್ರಾ ಸಾಧಿಸಲು ಅವಕಾಶ ಕೊಡದೆ ಪಂದ್ಯವನ್ನು ಗೆದ್ದು ಬೀಗಿದೆ. ಕೆ.ಗೌತಮ್​ ದಾಳಿಗೆ ತತ್ತರಿಸಿದ ತಮಿಳುನಾಡು 154 ರನ್​ಗಳಿಗೆ ಆಲೌಟ್​ ಆಗಿ ಸೋಲುಕಂಡಿತು. 42 ರನ್​ಗಳಿಸಿದ ಅಭಿನವ್​ ಮುಕುಂದ್​ ತಮಿಳುನಾಡಿನ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಸಯ್ಯದ್​ ಮುಷ್ತಾಕ್​ ಅಲಿಯಲ್ಲಿ ಕೊನೆಯ ಓವರ್​ ಎಸೆದಿದ್ದ ಕೆ ಗೌತಮ್​ ಮತ್ತೊಮ್ಮೆ ಕೊನೆಯ ಓವರ್​ ಸರ್ಕಸ್​ನಲ್ಲಿ ತಮಿಳುನಾಡಿನ ಕೊನೆಯ ವಿಕೆಟ್​ ಪಡೆದು ಕರ್ನಾಟಕಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಲ್ಲದೆ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ಪಡೆದು ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಗೆಲುವಿನೊಂದಿಗೆ ಕರ್ನಾಟಕ ತಂಡ 6 ಅಂಕ ಪಡೆಯಿತು.

ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಹುಬ್ಬಳ್ಳಿಯಲ್ಲಿ ಡಿಸೆಂಬರ್​ 17ರಿಂದ ಉತ್ತರ ಪ್ರದೇಶದ ವಿರುದ್ಧ ಕಣಕ್ಕಿಳಿಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.