ETV Bharat / sports

ಗೌತಮ್​ ಬೌಲಿಂಗ್​ ಕಮಾಲ್​: ಜಮ್ಮು- ಕಾಶ್ಮೀರವನ್ನು ಬಗ್ಗುಬಡಿದು ರಣಜಿ ಸೆಮಿಫೈನಲ್​ ಪ್ರವೇಶಿಸಿದ ಕರ್ನಾಟಕ

author img

By

Published : Feb 24, 2020, 4:37 PM IST

ಜಮ್ಮು ಕಾಶ್ಮೀರ ತಂಡದ ವಿರುದ್ಧ 167 ರನ್​ಗಳ ಜಯ ಸಾಧಿಸಿದ ಕರ್ನಾಟಕ ತಂಡ ಸೆಮಿಫೈನಲ್​ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ.

KAR vs J&K
ರಣಜಿ ಸೆಮಿಫೈನಲ್​

ಜಮ್ಮು: ಮೊದಲೆರಡು ದಿನ ಮಳೆಗಾಹುತಿಯಾದರೂ ಉಳಿದ ಮೂರು ದಿನಗಳ ಆಟದಲ್ಲೇ ಜಮ್ಮು-ಕಾಶ್ಮೀರ ತಂಡವನ್ನು 167 ರನ್​ಗಳಿಂದ ಬಗ್ಗುಬಡಿದ ಕರ್ನಾಟಕ ತಂಡ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಭಾನುವಾರ 4 ವಿಕೆಟ್ ಕಳೆದುಕೊಂಡು 245 ರನ್​ಗಳಿಸಿದ್ದ ಕರ್ನಾಟಕ 5ನೇ ದಿನ 316 ರನ್​ಗಳಿಸಿ ಆಲೌಟ್​ ಆಯಿತು. 75 ರನ್​ಗಳಿಸಿದ್ದ ಸಿದ್ದಾರ್ಥ್​ ಇಂದು 98 ರನ್​ಗಳಿಸಿ ಔಟಾಗುವ ಮೂಲಕ ಎರಡು ರನ್​ ನಿಂದ ಶತಕ ವಂಚಿತರಾದರು. ಶರತ್​ 34 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಜಮ್ಮ-ಕಾಶ್ಮೀರ ತಂಡದ ಅಬಿದ್​ ಮುಷ್ತಾಕ್​ 6 ವಿಕೆಟ್ ಹಾಗೂ ನಾಯಕ ಪರ್ವೇಜ್​ ರಸೂಲ್​ 3 ವಿಕೆಟ್ ಪಡೆದರು.

  • There you go !! It’s an emphatic 167 runs victory for Karnataka against J&K. Gowtham wrecked havoc with his 7 wkts and JK had no answers. With this win, Karnataka enter the semis in style for the third consecutive time, in the #RanjiTrophy. Two more hurdles to go #JKvKAR

    — Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2020 " class="align-text-top noRightClick twitterSection" data=" ">

331 ರನ್​ಗಳ ಟಾರ್ಗೆಟ್​ ಪಡೆದಿದ್ದ ಜಮ್ಮು-ಕಾಶ್ಮೀರ ಕೆ.ಗೌತಮ್​ ದಾಳಿಗೆ ಸಿಲುಕಿ ಕೇವಲ 163 ರನ್​ಗಳಿಗೆ ಆಲೌಟ್​ ಆಗುವ ಮೂಲಕ 167 ರನ್​ಗಳ ಸೋಲುಕಂಡಿತು. ಆರಂಭಿಕ ಬ್ಯಾಟ್ಸ್​ಮನ್​ ಶುಭಮ್​ ಖಜುರಿಯಾ 30, ಶುಭಮ್​ ಪಂಡಿರ್​ 31, ಅಕ್ಯುಬ್ ನಬಿ 26 ರನ್​ಗಳಿಸಿದರು.

ಕೆ ಗೌತಮ್​ 18.4 ಓವರ್​ಗಳಲ್ಲಿ 54 ರನ್​ ನೀಡಿ 7 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಪ್ರಸಿದ್​ ಕೃಷ್ಣ, ರೋನಿತ್​ ಮೋರೆ ಹಾಗೂ ಸುಚಿತ್ ತಲಾ ಒಂದು ವಿಕೆಟ್​ ಪಡೆದು ಗೌತಮ್​ಗೆ ಸಾಥ್​ ನೀಡಿದರು.

ಕರ್ನಾಟಕ ತಂಡ ಸೆಮಿಫೈನಲ್​ನಲ್ಲಿ ಬೆಂಗಾಲ್​ ತಂಡದ ವಿರುದ್ಧ ಹಾಗೂ ಗುಜರಾತ್​ ಸೌರಾಷ್ಟ್ರದ ವಿರುದ್ಧ ಸೆಣಸಾಡಲಿವೆ.

ಜಮ್ಮು: ಮೊದಲೆರಡು ದಿನ ಮಳೆಗಾಹುತಿಯಾದರೂ ಉಳಿದ ಮೂರು ದಿನಗಳ ಆಟದಲ್ಲೇ ಜಮ್ಮು-ಕಾಶ್ಮೀರ ತಂಡವನ್ನು 167 ರನ್​ಗಳಿಂದ ಬಗ್ಗುಬಡಿದ ಕರ್ನಾಟಕ ತಂಡ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಭಾನುವಾರ 4 ವಿಕೆಟ್ ಕಳೆದುಕೊಂಡು 245 ರನ್​ಗಳಿಸಿದ್ದ ಕರ್ನಾಟಕ 5ನೇ ದಿನ 316 ರನ್​ಗಳಿಸಿ ಆಲೌಟ್​ ಆಯಿತು. 75 ರನ್​ಗಳಿಸಿದ್ದ ಸಿದ್ದಾರ್ಥ್​ ಇಂದು 98 ರನ್​ಗಳಿಸಿ ಔಟಾಗುವ ಮೂಲಕ ಎರಡು ರನ್​ ನಿಂದ ಶತಕ ವಂಚಿತರಾದರು. ಶರತ್​ 34 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಜಮ್ಮ-ಕಾಶ್ಮೀರ ತಂಡದ ಅಬಿದ್​ ಮುಷ್ತಾಕ್​ 6 ವಿಕೆಟ್ ಹಾಗೂ ನಾಯಕ ಪರ್ವೇಜ್​ ರಸೂಲ್​ 3 ವಿಕೆಟ್ ಪಡೆದರು.

  • There you go !! It’s an emphatic 167 runs victory for Karnataka against J&K. Gowtham wrecked havoc with his 7 wkts and JK had no answers. With this win, Karnataka enter the semis in style for the third consecutive time, in the #RanjiTrophy. Two more hurdles to go #JKvKAR

    — Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 24, 2020 " class="align-text-top noRightClick twitterSection" data=" ">

331 ರನ್​ಗಳ ಟಾರ್ಗೆಟ್​ ಪಡೆದಿದ್ದ ಜಮ್ಮು-ಕಾಶ್ಮೀರ ಕೆ.ಗೌತಮ್​ ದಾಳಿಗೆ ಸಿಲುಕಿ ಕೇವಲ 163 ರನ್​ಗಳಿಗೆ ಆಲೌಟ್​ ಆಗುವ ಮೂಲಕ 167 ರನ್​ಗಳ ಸೋಲುಕಂಡಿತು. ಆರಂಭಿಕ ಬ್ಯಾಟ್ಸ್​ಮನ್​ ಶುಭಮ್​ ಖಜುರಿಯಾ 30, ಶುಭಮ್​ ಪಂಡಿರ್​ 31, ಅಕ್ಯುಬ್ ನಬಿ 26 ರನ್​ಗಳಿಸಿದರು.

ಕೆ ಗೌತಮ್​ 18.4 ಓವರ್​ಗಳಲ್ಲಿ 54 ರನ್​ ನೀಡಿ 7 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಪ್ರಸಿದ್​ ಕೃಷ್ಣ, ರೋನಿತ್​ ಮೋರೆ ಹಾಗೂ ಸುಚಿತ್ ತಲಾ ಒಂದು ವಿಕೆಟ್​ ಪಡೆದು ಗೌತಮ್​ಗೆ ಸಾಥ್​ ನೀಡಿದರು.

ಕರ್ನಾಟಕ ತಂಡ ಸೆಮಿಫೈನಲ್​ನಲ್ಲಿ ಬೆಂಗಾಲ್​ ತಂಡದ ವಿರುದ್ಧ ಹಾಗೂ ಗುಜರಾತ್​ ಸೌರಾಷ್ಟ್ರದ ವಿರುದ್ಧ ಸೆಣಸಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.