ETV Bharat / sports

ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್​ ಕಿಡಿ

author img

By

Published : Jan 10, 2021, 4:58 PM IST

ನಮ್ಮ ಸರಣಿ ಇಲ್ಲಿಯವರೆಗೆ ಮಹಾನ್ ಉತ್ಸಾಹದಿಂದ ನಡಯುತ್ತಿದೆ ಎಂದು ನಾನು ಭಾವಿಸುತ್ತೇನೆ, ಎರಡು ತಂಡಗಳ ನಡುವೆ ಇದು ನಂಬಲಾಗದ ಕ್ರಿಕೆಟ್ ಆಗಿದೆ. ಇಂತಹ ಪಂದ್ಯಗಳನ್ನು ಮೈದಾನದಲ್ಲಿ ನೋಡುವುದು ಅದ್ಭುತವಾಗಿದೆ..

ಜಸ್ಟಿನ್ ಲ್ಯಾಂಗರ್​
ಜಸ್ಟಿನ್ ಲ್ಯಾಂಗರ್​

ಸಿಡ್ನಿ: ಮೂರನೇ ಟೆಸ್ಟ್​ ಪಂದ್ಯದ ವೇಳೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೊಳಗಾಗಿರುವುದು ಅತ್ಯಂತ ಅಪಮಾನಕರ ಘಟನೆ ಮತ್ತು ವೈಯಕ್ತಿಕವಾಗಿ ತಮಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್​ ಜಸ್ಟಿನ್ ಲ್ಯಾಂಗರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರನೇ ದಿನ ಸಿರಾಜ್ ಹಾಗೂ ಬುಮ್ರಾರನ್ನು ಕೆಲವು ಪ್ರೇಕ್ಷಕರು ಕುಡಿದ ಮತ್ತಿನಲ್ಲಿದ್ದ ವೈಯಕ್ತಿಕವಾಗಿ ನಿಂದಿಸಿದರೆಂದು ಪಂದ್ಯದ ಅಧಿಕಾರಿಗಳಿಗೆ ಬಿಸಿಸಿಐ ದೂರು ನೀಡಿತ್ತು. ಆದರೆ, ನಾಲ್ಕನೇ ದಿನವೂ ಈ ಘಟನೆ ಮರುಕಳಿಸಿದ್ದರಿಂದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿದ್ದರು.

ಈ ಕುರಿತು ಪಂದ್ಯದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಜಸ್ಟಿನ್ ಲ್ಯಾಂಗರ್​, ಶನಿವಾರ ಮತ್ತು ಭಾನುವಾರದ ಜನಾಂಗೀಯ ನಿಂದನೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಸೀಸ್‌ ಕೋಚ್‌ ಜಸ್ಟಿನ್ ಲ್ಯಾಂಗರ್..​

"ಕ್ಷಮಿಸಿ, ಈ ಘಟನೆ ನನಗೆ ಅಸಮಾಧಾನ ಮತ್ತು ನಿರಾಶೆ ತರಿಸಿದೆ. ಇದೊಂದು ನನ್ನ ಜೀವನದಲ್ಲಿ ಅತ್ಯಂತ ಹೆಚ್ಚು ಕಾಡುವ ಘಟನೆಯಾಗಿದೆ. ಆ ಜನರು ತಾವು ಕ್ರಿಕೆಟ್​ ಅಥವಾ ಬೇರೆ ಯಾವುದೇ ಕ್ರೀಡೆಗಳನ್ನು ನೋಡಲು ಬಂದು, ಹಣ ನೀಡಿರುವುದಕ್ಕಾಗಿ ಆಟಗಾರರನ್ನು ನಿಂದಿಸಬಹುದು ಅಥವಾ ತಮಿಗಿಷ್ಟ ಬಂದಹಾಗೆ ನಡೆದುಕೊಳ್ಳಬಹುದು ಎಂಬ ಆಲೋಚನೆ ಹೊಂದಿದ್ದಾರೆ ಅನ್ನಿಸುತ್ತಿದೆ.

ಇದನ್ನು ನಾನು ಒಬ್ಬ ಆಟಗಾರನಾಗಿ, ಒಬ್ಬಕೋಚ್ ಆಗಿ ಧ್ವೇಷಿಸುತ್ತೇನೆ. ಈ ರೀತಿ ಘಟನೆ ವಿಶ್ವದಾದ್ಯಂತ ನಡೆಯುತ್ತಿರಬಹುದು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ ಎಂದು ಲ್ಯಾಂಗರ್​ ಹೇಳಿದ್ದಾರೆ.

"ನಮ್ಮ ಸರಣಿ ಇಲ್ಲಿಯವರೆಗೆ ಮಹಾನ್ ಉತ್ಸಾಹದಿಂದ ನಡಯುತ್ತಿದೆ ಎಂದು ನಾನು ಭಾವಿಸುತ್ತೇನೆ, ಎರಡು ತಂಡಗಳ ನಡುವೆ ಇದು ನಂಬಲಾಗದ ಕ್ರಿಕೆಟ್ ಆಗಿದೆ. ಇಂತಹ ಪಂದ್ಯಗಳನ್ನು ಮೈದಾನದಲ್ಲಿ ನೋಡುವುದು ಅದ್ಭುತವಾಗಿದೆ.

ಆದರೆ, ಇಂತಹ ಕ್ರೀಡಾಸ್ಫೂರ್ತಿಯ ನಡುವೆ ನಡೆಯುತ್ತಿರುವ ಸರಣಿಯಲ್ಲಿ ಈ ಘಟನೆಗಳ ಬಗ್ಗೆ ಕಳೆದ ರಾತ್ರಿ ಮತ್ತು ನಾವು ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್​ ಅಶ್ವಿನ್​

ಸಿಡ್ನಿ: ಮೂರನೇ ಟೆಸ್ಟ್​ ಪಂದ್ಯದ ವೇಳೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೊಳಗಾಗಿರುವುದು ಅತ್ಯಂತ ಅಪಮಾನಕರ ಘಟನೆ ಮತ್ತು ವೈಯಕ್ತಿಕವಾಗಿ ತಮಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್​ ಜಸ್ಟಿನ್ ಲ್ಯಾಂಗರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರನೇ ದಿನ ಸಿರಾಜ್ ಹಾಗೂ ಬುಮ್ರಾರನ್ನು ಕೆಲವು ಪ್ರೇಕ್ಷಕರು ಕುಡಿದ ಮತ್ತಿನಲ್ಲಿದ್ದ ವೈಯಕ್ತಿಕವಾಗಿ ನಿಂದಿಸಿದರೆಂದು ಪಂದ್ಯದ ಅಧಿಕಾರಿಗಳಿಗೆ ಬಿಸಿಸಿಐ ದೂರು ನೀಡಿತ್ತು. ಆದರೆ, ನಾಲ್ಕನೇ ದಿನವೂ ಈ ಘಟನೆ ಮರುಕಳಿಸಿದ್ದರಿಂದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿದ್ದರು.

ಈ ಕುರಿತು ಪಂದ್ಯದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಜಸ್ಟಿನ್ ಲ್ಯಾಂಗರ್​, ಶನಿವಾರ ಮತ್ತು ಭಾನುವಾರದ ಜನಾಂಗೀಯ ನಿಂದನೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಸೀಸ್‌ ಕೋಚ್‌ ಜಸ್ಟಿನ್ ಲ್ಯಾಂಗರ್..​

"ಕ್ಷಮಿಸಿ, ಈ ಘಟನೆ ನನಗೆ ಅಸಮಾಧಾನ ಮತ್ತು ನಿರಾಶೆ ತರಿಸಿದೆ. ಇದೊಂದು ನನ್ನ ಜೀವನದಲ್ಲಿ ಅತ್ಯಂತ ಹೆಚ್ಚು ಕಾಡುವ ಘಟನೆಯಾಗಿದೆ. ಆ ಜನರು ತಾವು ಕ್ರಿಕೆಟ್​ ಅಥವಾ ಬೇರೆ ಯಾವುದೇ ಕ್ರೀಡೆಗಳನ್ನು ನೋಡಲು ಬಂದು, ಹಣ ನೀಡಿರುವುದಕ್ಕಾಗಿ ಆಟಗಾರರನ್ನು ನಿಂದಿಸಬಹುದು ಅಥವಾ ತಮಿಗಿಷ್ಟ ಬಂದಹಾಗೆ ನಡೆದುಕೊಳ್ಳಬಹುದು ಎಂಬ ಆಲೋಚನೆ ಹೊಂದಿದ್ದಾರೆ ಅನ್ನಿಸುತ್ತಿದೆ.

ಇದನ್ನು ನಾನು ಒಬ್ಬ ಆಟಗಾರನಾಗಿ, ಒಬ್ಬಕೋಚ್ ಆಗಿ ಧ್ವೇಷಿಸುತ್ತೇನೆ. ಈ ರೀತಿ ಘಟನೆ ವಿಶ್ವದಾದ್ಯಂತ ನಡೆಯುತ್ತಿರಬಹುದು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ ಎಂದು ಲ್ಯಾಂಗರ್​ ಹೇಳಿದ್ದಾರೆ.

"ನಮ್ಮ ಸರಣಿ ಇಲ್ಲಿಯವರೆಗೆ ಮಹಾನ್ ಉತ್ಸಾಹದಿಂದ ನಡಯುತ್ತಿದೆ ಎಂದು ನಾನು ಭಾವಿಸುತ್ತೇನೆ, ಎರಡು ತಂಡಗಳ ನಡುವೆ ಇದು ನಂಬಲಾಗದ ಕ್ರಿಕೆಟ್ ಆಗಿದೆ. ಇಂತಹ ಪಂದ್ಯಗಳನ್ನು ಮೈದಾನದಲ್ಲಿ ನೋಡುವುದು ಅದ್ಭುತವಾಗಿದೆ.

ಆದರೆ, ಇಂತಹ ಕ್ರೀಡಾಸ್ಫೂರ್ತಿಯ ನಡುವೆ ನಡೆಯುತ್ತಿರುವ ಸರಣಿಯಲ್ಲಿ ಈ ಘಟನೆಗಳ ಬಗ್ಗೆ ಕಳೆದ ರಾತ್ರಿ ಮತ್ತು ನಾವು ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್​ ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.