ETV Bharat / sports

ದೇಶ ಸಾಮಾನ್ಯ ಸ್ಥಿತಿಗೆ ಮರಳಿದರೆ ಅಕ್ಟೋಬರ್​​ನಲ್ಲಿ ಐಪಿಎಲ್  ಶೇ.100ರಷ್ಟು​ ಸಾಧ್ಯತೆ: ನೆಹ್ರಾ - ಆಶಿಶ್​ ನೆಹ್ರಾ

ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೊರೊನಾ ಭೀತಿಯಿಂದಾಗಿ ಮುಂದೂಡಿಕೆಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೆಹ್ರಾ ಮಾತನಾಡಿದ್ದಾರೆ.

Nehra
Nehra
author img

By

Published : Apr 8, 2020, 12:02 PM IST

ನವದೆಹಲಿ: ಕೊರೊನಾ ಭೀತಿ ಹಾಗೂ ಲಾಕ್​ಡೌನ್​ ತಂದಿಟ್ಟ ಸಂಕಷ್ಟದಿಂದಾಗಿ ಅನೇಕ ಕ್ರೀಡಾಕೂಟ ಮುಂದೂಡಿಕೆಯಾಗಿವೆ. ಈಗಾಗಲೇ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿರುವ ಕಾರಣ ಅದು ಯಾವಾಗ ಆರಂಭಗೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಆಶಿಶ್​ ನೆಹ್ರಾ, ದೇಶ ಸಾಮಾನ್ಯ ಸ್ಥಿತಿಗೆ ಮರಳಿದರೆ ಅಕ್ಟೋಬರ್​​ನಲ್ಲಿ ಶೇ.100ರಷ್ಟು ಈ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.

IPL 2020
ಇಂಡಿಯನ್​ ಪ್ರೀಮಿಯರ್​ ಲೀಗ್​​

ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿದ್ದ ಟೂರ್ನಿ ಕೋವಿಡ್​-19ನಿಂದಾಗಿ ಮುಂದೂಡಿಕೆಯಾಗಿದೆ. ಆಗಸ್ಟ್​​ನಲ್ಲಿ ಟೂರ್ನಿ ಆಯೋಜನೆಗೊಂಡರೆ ಮಳೆ ಹೆಚ್ಚಾಳಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ಧುಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹತೋಟಿಗೆ ಬಂದು ಎಲ್ಲವೂ ಈ ಹಿಂದಿನಂತೆ ಆದರೆ ಅಕ್ಟೋಬರ್​ ತಿಂಗಳಲ್ಲಿ ಟೂರ್ನಿ ಆಯೋಜನೆ ಮಾಡಬಹುದು ಎಂದಿದ್ದಾರೆ.

Yuvraj Singh
ಯುವರಾಜ್​ ಸಿಂಗ್​​

ಇದೇ ವೇಳೆ ಯುವರಾಜ್​ ಸಿಂಗ್​ ಕುರಿತು ಮಾತನಾಡಿರುವ ನೆಹ್ರಾ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವಿ ಕ್ರಿಕೆಟ್​ ಕೆರಿಯರ್​ ಅದ್ಭುತವಾಗಿತ್ತು.ಪ್ರತಿಯೊಬ್ಬ ಆಟಗಾರನಿಗೆ ನೆಚ್ಚಿನ ನಾಯಕನಿರುತ್ತಾನೆ. ಅದೇ ರೀತಿಯಾಗಿ ಯುವರಾಜ್​ ಸಿಂಗ್​ 16 ವರ್ಷದ ಕ್ರಿಕೆಟ್​ ಕೆರಿಯರ್​ನಲ್ಲಿ ಧೋನಿ ನೆಚ್ಚಿನ ಕ್ಯಾಪ್ಟನ್​ ಆಗಿದ್ದರೂ ಎಂದಿದ್ದಾರೆ.

ನವದೆಹಲಿ: ಕೊರೊನಾ ಭೀತಿ ಹಾಗೂ ಲಾಕ್​ಡೌನ್​ ತಂದಿಟ್ಟ ಸಂಕಷ್ಟದಿಂದಾಗಿ ಅನೇಕ ಕ್ರೀಡಾಕೂಟ ಮುಂದೂಡಿಕೆಯಾಗಿವೆ. ಈಗಾಗಲೇ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿರುವ ಕಾರಣ ಅದು ಯಾವಾಗ ಆರಂಭಗೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಆಶಿಶ್​ ನೆಹ್ರಾ, ದೇಶ ಸಾಮಾನ್ಯ ಸ್ಥಿತಿಗೆ ಮರಳಿದರೆ ಅಕ್ಟೋಬರ್​​ನಲ್ಲಿ ಶೇ.100ರಷ್ಟು ಈ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.

IPL 2020
ಇಂಡಿಯನ್​ ಪ್ರೀಮಿಯರ್​ ಲೀಗ್​​

ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿದ್ದ ಟೂರ್ನಿ ಕೋವಿಡ್​-19ನಿಂದಾಗಿ ಮುಂದೂಡಿಕೆಯಾಗಿದೆ. ಆಗಸ್ಟ್​​ನಲ್ಲಿ ಟೂರ್ನಿ ಆಯೋಜನೆಗೊಂಡರೆ ಮಳೆ ಹೆಚ್ಚಾಳಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ಧುಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹತೋಟಿಗೆ ಬಂದು ಎಲ್ಲವೂ ಈ ಹಿಂದಿನಂತೆ ಆದರೆ ಅಕ್ಟೋಬರ್​ ತಿಂಗಳಲ್ಲಿ ಟೂರ್ನಿ ಆಯೋಜನೆ ಮಾಡಬಹುದು ಎಂದಿದ್ದಾರೆ.

Yuvraj Singh
ಯುವರಾಜ್​ ಸಿಂಗ್​​

ಇದೇ ವೇಳೆ ಯುವರಾಜ್​ ಸಿಂಗ್​ ಕುರಿತು ಮಾತನಾಡಿರುವ ನೆಹ್ರಾ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವಿ ಕ್ರಿಕೆಟ್​ ಕೆರಿಯರ್​ ಅದ್ಭುತವಾಗಿತ್ತು.ಪ್ರತಿಯೊಬ್ಬ ಆಟಗಾರನಿಗೆ ನೆಚ್ಚಿನ ನಾಯಕನಿರುತ್ತಾನೆ. ಅದೇ ರೀತಿಯಾಗಿ ಯುವರಾಜ್​ ಸಿಂಗ್​ 16 ವರ್ಷದ ಕ್ರಿಕೆಟ್​ ಕೆರಿಯರ್​ನಲ್ಲಿ ಧೋನಿ ನೆಚ್ಚಿನ ಕ್ಯಾಪ್ಟನ್​ ಆಗಿದ್ದರೂ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.