ETV Bharat / sports

ಫಲಿತಾಂಶ ಏನಾದ್ರೂ ಚಿಂತೆಯಿಲ್ಲ, ನಮ್ಮ ಕ್ರಿಕೆಟಿಗರ ಬಗ್ಗೆ ಹೆಮ್ಮೆ ಪಡಿ: ಸುನೀಲ್ ಗವಾಸ್ಕರ್​

author img

By

Published : Jan 18, 2021, 10:18 PM IST

ಗಾಯದಿಂದ ಕ್ಷೀಣಿಸಿರುವ ಭಾರತ ತಂಡ ನಾಳಿನ ಪಂದ್ಯ ಗೆದ್ದರೆ, ಸತತ ಎರಡು ಸರಣಿ ಗೆದ್ದಂತಾಗುತ್ತದೆ. ಒಂದು ವೇಳೆ ಡ್ರಾ ಸಾಧಿಸಿದರೆ ಬಾರ್ಡರ್ ಗವಾಸ್ಕರ್ ಸರಣಿ ತನ್ನಲ್ಲೆ ಉಳಿಸಿಕೊಳ್ಳಲಿದೆ. ಆದರೆ ಗಬ್ಬಾದಲ್ಲಿ ಪಿಚ್​ ತುಂಬಾ ಕಠಿಣವಾಗಿದೆ. ಅಲ್ಲಿ ಬಿರುಕುಗಳಿದ್ದು, ಚೆಂಡು ಕೆಟ್ಟದಾಗಿ ವರ್ತಿಸುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳು ಜಾಗರೂಕತೆಯಿಂದ ಆಡಬೇಕಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ಸುನೀಲ್ ಗವಾಸ್ಕರ್​

ಬ್ರಿಸ್ಬೇನ್​: ಭಾರತ ಕ್ರಿಕೆಟ್​ನ ಲೆಜೆಂಡ್​ ಸುನೀಲ್ ಗವಾಸ್ಕರ್ ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತೋರುತ್ತಿರುವ ಅಸಾಧಾರಣ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

4ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ 324 ರನ್​ಗಳ ಗುರಿ ನೀಡಿದ್ದು, ಭಾರತ ವಿಕೆಟ್​ ನಷ್ಟವಿಲ್ಲದೆ 4 ರನ್​ಗಳಿಸಿ 5ನೇ ದಿನಕ್ಕೆ ಕಾಯುತ್ತಿದೆ. ಆದರೆ ಗಬ್ಬಾದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್​ ಪಂದ್ಯದ ಫಲಿತಾಂಶ ಏನೇ ಆದರೂ ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಖಂಡಿತ ಹೆಮ್ಮೆ ಪಡಬೇಕು ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಗಾಯದಿಂದ ಕ್ಷೀಣಿಸಿರುವ ಭಾರತ ತಂಡ ನಾಳಿನ ಪಂದ್ಯ ಗೆದ್ದರೆ, ಸತತ ಎರಡು ಸರಣಿ ಗೆದ್ದಂತಾಗುತ್ತದೆ. ಒಂದು ವೇಳೆ ಡ್ರಾ ಸಾಧಿಸಿದರೆ ಬಾರ್ಡರ್ ಗವಾಸ್ಕರ್ ಸರಣಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಗಬ್ಬಾದಲ್ಲಿ ಪಿಚ್​ ತುಂಬಾ ಕಠಿಣವಾಗಿದೆ. ಅಲ್ಲಿ ಬಿರುಕುಗಳಿದ್ದು, ಚೆಂಡು ಕೆಟ್ಟದಾಗಿ ವರ್ತಿಸುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳು ಜಾಗರೂಕತೆಯಿಂದ ಆಡಬೇಕಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ಭಾರತ vs ಆಸ್ಟ್ರೇಲಿಯಾ ಟೆಸ್ಟ್​

"ಗಬ್ಬಾದಲ್ಲಿ ಫಲಿತಾಂಶ ಏನಾಗಲಿದೆ ಎಂಬುದು ವಿಷಯವಲ್ಲ. ನಾವು ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಹೆಮ್ಮ ಪಡಬೇಕು. ನಾನು ಅನೇಕ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದೇನೆ. ಆದರೆ ಮೊದಲ ಬಾರಿ ಈ ಪ್ರವಾಸ ಎಷ್ಟು ಸವಾಲಿನದ್ದಾಗಿದೆ ಎನಿಸುತ್ತಿದೆ. ಆದರೆ ನಾವು ಇಂತಹ ಅದ್ಭುತ ಸರಣಿಗೆ ಸಾಕ್ಷಿಯಾಗಿರುವುದು ಅಸಾಧಾರಣ ಸಂಗತಿಯಾಗಿದೆ" ಎಂದು ಅವರು ತಿಳಿಸಿದ್ದಾರೆ.

ತಂಡ ಪ್ರದರ್ಶಿಸುತ್ತಿರುವ ಧೈರ್ಯ ಮತ್ತು ಹೋರಾಟದ ಮನೋಭಾವವು ಸ್ಫೂರ್ತಿದಾಯಕವಾಗಿದೆ. ಸರಣಿಯಲ್ಲಿರುವ ಹೆಚ್ಚಿನ ಮಂದಿ ಐದು ತಿಂಗಳಿನಿಂದ ಬಯೋ ಬಬಲ್​ನಲ್ಲಿದ್ದಾರೆ. ಈ ಅವಧಿಯಲ್ಲಿ ತಮ್ಮ ಸ್ನೇಹಿತರು ಗಾಯಗಳಿಂದ ಜರ್ಜರಿತರಾಗುವುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಪ್ರತಿ ತಿರುವಿನಲ್ಲೂ, ಪ್ರತಿ ನಿಮಿಷಕ್ಕೆ ಅವರನ್ನು ಕ್ರಿಕೆಟ್​ ವಿಚಾರದಲ್ಲಿ ಮತ್ತು ಮಾನಸಿಕವಾಗಿ ಪರೀಕ್ಷಿಸಲಾಗಿದೆ. ತೀವ್ರವಾದ ಒತ್ತಡದ ನಡುವೆಯೂ ಅವರು ತಮ್ಮ ಹೋರಾಟವನ್ನು ಮಾತ್ರ ನಿಲ್ಲಿಸಿಲ್ಲ. ಈಗಲೂ ಟ್ರೋಫಿಯನ್ನು ಮನೆಗೆ ತರುವ ಆಶಯದಲ್ಲೇ ಇದ್ದಾರೆ ಎಂದು ಟೀಮ್​ ಇಂಡಿಯಾ ಆಟಗಾರರನ್ನು ಗವಾಸ್ಕರ್​ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಶಾರ್ದುಲ್ ಠಾಕೂರ್ ಆಲ್​ರೌಂಡ್​ ಆಟ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ : ಸಚಿನ್​ ಶ್ಲಾಘನೆ

ಬ್ರಿಸ್ಬೇನ್​: ಭಾರತ ಕ್ರಿಕೆಟ್​ನ ಲೆಜೆಂಡ್​ ಸುನೀಲ್ ಗವಾಸ್ಕರ್ ಪ್ರಸ್ತುತ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತೋರುತ್ತಿರುವ ಅಸಾಧಾರಣ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

4ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ 324 ರನ್​ಗಳ ಗುರಿ ನೀಡಿದ್ದು, ಭಾರತ ವಿಕೆಟ್​ ನಷ್ಟವಿಲ್ಲದೆ 4 ರನ್​ಗಳಿಸಿ 5ನೇ ದಿನಕ್ಕೆ ಕಾಯುತ್ತಿದೆ. ಆದರೆ ಗಬ್ಬಾದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್​ ಪಂದ್ಯದ ಫಲಿತಾಂಶ ಏನೇ ಆದರೂ ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಖಂಡಿತ ಹೆಮ್ಮೆ ಪಡಬೇಕು ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಗಾಯದಿಂದ ಕ್ಷೀಣಿಸಿರುವ ಭಾರತ ತಂಡ ನಾಳಿನ ಪಂದ್ಯ ಗೆದ್ದರೆ, ಸತತ ಎರಡು ಸರಣಿ ಗೆದ್ದಂತಾಗುತ್ತದೆ. ಒಂದು ವೇಳೆ ಡ್ರಾ ಸಾಧಿಸಿದರೆ ಬಾರ್ಡರ್ ಗವಾಸ್ಕರ್ ಸರಣಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಗಬ್ಬಾದಲ್ಲಿ ಪಿಚ್​ ತುಂಬಾ ಕಠಿಣವಾಗಿದೆ. ಅಲ್ಲಿ ಬಿರುಕುಗಳಿದ್ದು, ಚೆಂಡು ಕೆಟ್ಟದಾಗಿ ವರ್ತಿಸುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳು ಜಾಗರೂಕತೆಯಿಂದ ಆಡಬೇಕಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ಭಾರತ vs ಆಸ್ಟ್ರೇಲಿಯಾ ಟೆಸ್ಟ್​

"ಗಬ್ಬಾದಲ್ಲಿ ಫಲಿತಾಂಶ ಏನಾಗಲಿದೆ ಎಂಬುದು ವಿಷಯವಲ್ಲ. ನಾವು ಭಾರತೀಯರು ನಮ್ಮ ಕ್ರಿಕೆಟಿಗರ ಬಗ್ಗೆ ಹೆಮ್ಮ ಪಡಬೇಕು. ನಾನು ಅನೇಕ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದೇನೆ. ಆದರೆ ಮೊದಲ ಬಾರಿ ಈ ಪ್ರವಾಸ ಎಷ್ಟು ಸವಾಲಿನದ್ದಾಗಿದೆ ಎನಿಸುತ್ತಿದೆ. ಆದರೆ ನಾವು ಇಂತಹ ಅದ್ಭುತ ಸರಣಿಗೆ ಸಾಕ್ಷಿಯಾಗಿರುವುದು ಅಸಾಧಾರಣ ಸಂಗತಿಯಾಗಿದೆ" ಎಂದು ಅವರು ತಿಳಿಸಿದ್ದಾರೆ.

ತಂಡ ಪ್ರದರ್ಶಿಸುತ್ತಿರುವ ಧೈರ್ಯ ಮತ್ತು ಹೋರಾಟದ ಮನೋಭಾವವು ಸ್ಫೂರ್ತಿದಾಯಕವಾಗಿದೆ. ಸರಣಿಯಲ್ಲಿರುವ ಹೆಚ್ಚಿನ ಮಂದಿ ಐದು ತಿಂಗಳಿನಿಂದ ಬಯೋ ಬಬಲ್​ನಲ್ಲಿದ್ದಾರೆ. ಈ ಅವಧಿಯಲ್ಲಿ ತಮ್ಮ ಸ್ನೇಹಿತರು ಗಾಯಗಳಿಂದ ಜರ್ಜರಿತರಾಗುವುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಪ್ರತಿ ತಿರುವಿನಲ್ಲೂ, ಪ್ರತಿ ನಿಮಿಷಕ್ಕೆ ಅವರನ್ನು ಕ್ರಿಕೆಟ್​ ವಿಚಾರದಲ್ಲಿ ಮತ್ತು ಮಾನಸಿಕವಾಗಿ ಪರೀಕ್ಷಿಸಲಾಗಿದೆ. ತೀವ್ರವಾದ ಒತ್ತಡದ ನಡುವೆಯೂ ಅವರು ತಮ್ಮ ಹೋರಾಟವನ್ನು ಮಾತ್ರ ನಿಲ್ಲಿಸಿಲ್ಲ. ಈಗಲೂ ಟ್ರೋಫಿಯನ್ನು ಮನೆಗೆ ತರುವ ಆಶಯದಲ್ಲೇ ಇದ್ದಾರೆ ಎಂದು ಟೀಮ್​ ಇಂಡಿಯಾ ಆಟಗಾರರನ್ನು ಗವಾಸ್ಕರ್​ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಶಾರ್ದುಲ್ ಠಾಕೂರ್ ಆಲ್​ರೌಂಡ್​ ಆಟ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ : ಸಚಿನ್​ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.