ETV Bharat / sports

ಮೊದಲ ಟೆಸ್ಟ್ ಗೆ ಮೊದಲ ದಿನ ಮಳೆಯ ಆಟ.. ಟೀಂ ಇಂಡಿಯಾಕ್ಕೆ ರಹಾನೆ ಆಸರೆ

author img

By

Published : Feb 21, 2020, 11:38 AM IST

122 ಎಸೆತಗಳನ್ನ ಎದುರಿಸಿರುವ ರಹಾನೆ 4 ಬೌಡರಿ ಸಹಿತ 38 ರನ್​ ಗಳಿಸಿದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಯುವ ವಿಕೆಟ್​ ಕೀಪರ್​ ರಿಷಭ್ ಪಂತ್​ 37 ಎಸೆತಗಳಲ್ಲಿ 10 ರನ್​ಗಳಿಸಿ ಅಜೇಯರಾಗಿದ್ದಾರೆ.

India vs New Zealand 1st Test,ವರುಣ ನಾಟಕ್ಕೆ ದಿನದಾಟ ಅಂತ್ಯ
ವರುಣ ನಾಟಕ್ಕೆ ದಿನದಾಟ ಅಂತ್ಯ

ವೆಲ್ಲಿಂಗ್ಟನ್​: ವರುಣನ ಉಪಟಳದಿಂದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 122 ರನ್​ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಕಿವೀಸ್ ಬೌಲರ್​ಗಳು ಆಘಾತ ನೀಡಿದ್ರು. ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 16 ರನ್​ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಭರವಸೆಯ ಆಟಗಾರ ಚೇತೇಶ್ವರ್ ಪುಜಾರ ಕೂಡ ಕೇವಲ 11 ರನ್​ ಗಳಿಸಿ​ ಔಟ್​ ಆಗುವ ಮೂಲಕ ನಿರಾಸೆ ಅನುಭವಿಸಿದ್ರು.

Kyle Jamieson has his maiden Test wicket! 🎉

Pujara becomes the second victim in a testing morning for India's batsmen.#NZvIND pic.twitter.com/JzkHvdbASe

— ICC (@ICC) February 20, 2020

ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಕ್ಕೆ ಆಸರೆಯಾಗಬೇಕಿದ್ದ ನಾಯಕ ವಿರಾಟ್​ ಕೊಹ್ಲಿ 2 ರನ್​ ಗಳಿಸಿ ಜೆಮಿಸನ್​ ಬೌಲಿಂಗ್​ನಲ್ಲಿ ರಾಸ್​ ಟೇಲರ್​ಗೆ ಕ್ಯಾಚ್​ ನೀಡಿದ್ರು. 40 ರನ್​ಗಳಾಗುವಷ್ಟರಲ್ಲೇ ಭಾರತ ತಂಡ ಪ್ರಮುಖ ನಾಲ್ಕು 3 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.

ಒಂದೆಡೆ ವಿಕೆಟ್ ಬಿದ್ದರೂ ಉತ್ತಮವಾಗಿಯೇ ಬ್ಯಾಟ್​ ಬೀಸುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಲ್ಟ್​ ಎಸೆತದಲ್ಲಿ ಜೆಮಿಸನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಇತ್ತ ಹನುಮ ವಿಹಾರಿ ಕೂಡ ಭಾರತ ತಂಕ್ಕೆ ಆಸರೆಯಾಗಲಿಲ್ಲ. ಕೇವಲ 7 ರನ್ ​ಗಳಿಸಿ ನಿರ್ಗಮಿಸಿದ್ರು. ಅಂತಿಮ ಸೆಷನ್​ಗೂ ಮೊದಲು ಮಳೆ ಬಂದ ಕಾರಣ ಮೊದಲ ದಿನದಾಟ ಅಂತ್ಯಗೊಳಿಸಿಸಲಾಗಿದೆ.

ಭಾರತ ತಂಡಕ್ಕೆ ಉಪನಾಯಕನ ಆಸರೆ: ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಉಪನಾಯಕ ಅಜಿಂಕ್ಯಾ ರಹಾನೆ ಸದ್ಯ ಟೀಂ ಇಂಡಿಯಾದ ಭರವಸೆ. 122 ಎಸೆತಗಳನ್ನ ಎದುರಿಸಿರುವ ರಹಾನೆ 4 ಬೌಡರಿ ಸಹಿತ 38 ರನ್​ ಗಳಿಸಿದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಯುವ ವಿಕೆಟ್​ ಕೀಪರ್​ ರಿಷಭ್ ಪಂತ್​ 37 ಎಸೆತಗಳಲ್ಲಿ 10 ರನ್​ಗಳಿಸಿ ಅಜೇಯರಾಗಿದ್ದಾರೆ.

ಕಿವೀಸ್ ತಂಡದ ಪರ ಉತ್ತಮ ಸ್ಪೆಲ್ ಮಾಡಿದ ಜೆಮಿಸನ್ ಮೂರು ವಿಕೆಟ್ ಪಡೆದ್ರೆ, ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ವೆಲ್ಲಿಂಗ್ಟನ್​: ವರುಣನ ಉಪಟಳದಿಂದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 122 ರನ್​ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಕಿವೀಸ್ ಬೌಲರ್​ಗಳು ಆಘಾತ ನೀಡಿದ್ರು. ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 16 ರನ್​ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಭರವಸೆಯ ಆಟಗಾರ ಚೇತೇಶ್ವರ್ ಪುಜಾರ ಕೂಡ ಕೇವಲ 11 ರನ್​ ಗಳಿಸಿ​ ಔಟ್​ ಆಗುವ ಮೂಲಕ ನಿರಾಸೆ ಅನುಭವಿಸಿದ್ರು.

ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಕ್ಕೆ ಆಸರೆಯಾಗಬೇಕಿದ್ದ ನಾಯಕ ವಿರಾಟ್​ ಕೊಹ್ಲಿ 2 ರನ್​ ಗಳಿಸಿ ಜೆಮಿಸನ್​ ಬೌಲಿಂಗ್​ನಲ್ಲಿ ರಾಸ್​ ಟೇಲರ್​ಗೆ ಕ್ಯಾಚ್​ ನೀಡಿದ್ರು. 40 ರನ್​ಗಳಾಗುವಷ್ಟರಲ್ಲೇ ಭಾರತ ತಂಡ ಪ್ರಮುಖ ನಾಲ್ಕು 3 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.

ಒಂದೆಡೆ ವಿಕೆಟ್ ಬಿದ್ದರೂ ಉತ್ತಮವಾಗಿಯೇ ಬ್ಯಾಟ್​ ಬೀಸುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಲ್ಟ್​ ಎಸೆತದಲ್ಲಿ ಜೆಮಿಸನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಇತ್ತ ಹನುಮ ವಿಹಾರಿ ಕೂಡ ಭಾರತ ತಂಕ್ಕೆ ಆಸರೆಯಾಗಲಿಲ್ಲ. ಕೇವಲ 7 ರನ್ ​ಗಳಿಸಿ ನಿರ್ಗಮಿಸಿದ್ರು. ಅಂತಿಮ ಸೆಷನ್​ಗೂ ಮೊದಲು ಮಳೆ ಬಂದ ಕಾರಣ ಮೊದಲ ದಿನದಾಟ ಅಂತ್ಯಗೊಳಿಸಿಸಲಾಗಿದೆ.

ಭಾರತ ತಂಡಕ್ಕೆ ಉಪನಾಯಕನ ಆಸರೆ: ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಉಪನಾಯಕ ಅಜಿಂಕ್ಯಾ ರಹಾನೆ ಸದ್ಯ ಟೀಂ ಇಂಡಿಯಾದ ಭರವಸೆ. 122 ಎಸೆತಗಳನ್ನ ಎದುರಿಸಿರುವ ರಹಾನೆ 4 ಬೌಡರಿ ಸಹಿತ 38 ರನ್​ ಗಳಿಸಿದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಯುವ ವಿಕೆಟ್​ ಕೀಪರ್​ ರಿಷಭ್ ಪಂತ್​ 37 ಎಸೆತಗಳಲ್ಲಿ 10 ರನ್​ಗಳಿಸಿ ಅಜೇಯರಾಗಿದ್ದಾರೆ.

ಕಿವೀಸ್ ತಂಡದ ಪರ ಉತ್ತಮ ಸ್ಪೆಲ್ ಮಾಡಿದ ಜೆಮಿಸನ್ ಮೂರು ವಿಕೆಟ್ ಪಡೆದ್ರೆ, ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.