ETV Bharat / sports

ಹರ್ಭಜನ್ ಸಿಂಗ್ ನಮ್ಮ ಸ್ಪಿನ್​ ಬೌಲಿಂಗ್​ ವಿಭಾಗವನ್ನು ಬಲಪಡಿಸಲಿದ್ದಾರೆ: ಇಯಾನ್ ಮಾರ್ಗನ್

author img

By

Published : Mar 31, 2021, 7:33 PM IST

ಕಳೆದ ವರ್ಷ ಕೆಕೆಆರ್ ತಂಡ 5ನೇ ಸ್ಥಾನ ಪಡೆದಿತ್ತು. ಮಧ್ಯಂತರದಲ್ಲಿ ದಿನೇಶ್​ ಕಾರ್ತಿಕ್​ರಿಂದ ನಾಯಕತ್ವವನ್ನು ಹಿಂತೆಗೆದುಕೊಂಡು ಇಯಾನ್ ಮಾರ್ಗನ್​ಗೆ ನೀಡಲಾಗಿತ್ತು.

ಕೆಕೆಆರ್ ಸೇರಿದ ಹರ್ಭಜನ್ ಸಿಂಗ್
ಕೆಕೆಆರ್ ಸೇರಿದ ಹರ್ಭಜನ್ ಸಿಂಗ್

ಕೋಲ್ಕತ್ತಾ: ಹಿರಿಯ ಸ್ಪಿನ್ನರ್ ಹರ್ಭಜನ್​ ಸಿಂಗ್​ ಸೇರ್ಪಡೆಯಿಂದ ನಮ್ಮ ಸ್ಪಿನ್​ ವಿಭಾಗದ ಮತ್ತಷ್ಟು ಬಲವರ್ಧನೆಗೊಂಡಿದೆ ಎಂದು ಕೋಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಸಿಎಸ್​ಕೆ ಕೈಬಿಟ್ಟಿದ್ದ 40 ವರ್ಷದ ಭಜ್ಜಿಯನ್ನು ಕೋಲ್ಕತ್ತಾ ನೈಟ್​ ರೈಟ್​ರೈಡರ್ಸ್​ ಮೂಲಬೆಲೆ 2 ಕೋಟಿ ರೂಗಳಿಗೆ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಏಕೆಂದರೆ ಅವರು 2019ರ ಐಪಿಎಲ್ ಫೈನಲ್ ನಂತರ ಯಾವುದೇ ವೃತ್ತಿಪರ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಈಗಾಗಲೇ ತಂಡದಲ್ಲಿ ಸುನೀಲ್ ನರೈನ್, ಶಕಿಬ್ ಅಲ್ ಹಸನ್, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಸ್ಪಿನ್ನರ್​ಗಳ ಬಲವನ್ನು ಕೆಕೆಆರ್ ಹೊಂದಿದೆ.

ನಮ್ಮ ತಂಡಕ್ಕೆ ಹರ್ಭಜನ್ ಅವರನ್ನು ಸೇರಿಸಿಕೊಂಡಿರುವುದು ನಿಜವಾಗಿಯೂ ಉತ್ತಮ ರೀತಿಯಲ್ಲಿ ನಮ್ಮನ್ನು ಬಲಪಡಿಸಿದೆ. ಕಾಗದದ ಮೇಲೆ ನಮ್ಮ ಸ್ಪಿನ್ ವಿಭಾಗವನ್ನು ನೀವು ನೋಡಿದಾಗ, ಇದು ಟೂರ್ನಿಯಲ್ಲೇ ಅತ್ಯುತ್ತಮವಾದದ್ದಾಗಿದೆ. ಇದು ವಾಸ್ತವ ಕೂಡ ಎಂದು ಕೆಕೆಆರ್ ನಾಯಕ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತೊಳಿಸಿದ್ದಾರೆ.

ಇದನ್ನೂ ಓದಿ: ಈ ಕಾರಣದಿಂದ ಬಹುತೇಕ ಕ್ರಿಕೆಟಿಗರು ಧೋನಿ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ : ಮೊಯಿನ್ ಅಲಿ

ನಮ್ಮಲ್ಲಿರುವ ಆಯ್ಕೆಗಳು ಮತ್ತು ಚೆನ್ನೈನ ನಂತಹ ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಆಡುವಾಗ ನಮಗೆ ಸ್ಪಿನ್ನರ್​ಗಳು ಹೆಚ್ಚು ನಿರ್ಣಾಯಕವಾಗಲಿದೆ ಎಂದಿದ್ದಾರೆ.

ಕಳೆದ ವರ್ಷ ಕೆಕೆಆರ್ ತಂಡ 5ನೇ ಸ್ಥಾನ ಪಡೆದಿತ್ತು. ಮಧ್ಯಂತರದಲ್ಲಿ ದಿನೇಶ್​ ಕಾರ್ತಿಕ್​ರಿಂದ ನಾಯಕತ್ವವನ್ನು ಹಿಂತೆಗೆದುಕೊಂಡು ಇಯಾನ್ ಮಾರ್ಗನ್​ಗೆ ನೀಡಲಾಗಿತ್ತು.

40 ವರ್ಷದ ಹರ್ಭಜನ್ ಸಿಂಗ್ 160 ಪಂದ್ಯಗಳಿಂದ 150 ವಿಕೆಟ್​ ಪಡೆದಿದ್ದಾರೆ. ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ.

ಕೋಲ್ಕತ್ತಾ: ಹಿರಿಯ ಸ್ಪಿನ್ನರ್ ಹರ್ಭಜನ್​ ಸಿಂಗ್​ ಸೇರ್ಪಡೆಯಿಂದ ನಮ್ಮ ಸ್ಪಿನ್​ ವಿಭಾಗದ ಮತ್ತಷ್ಟು ಬಲವರ್ಧನೆಗೊಂಡಿದೆ ಎಂದು ಕೋಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಸಿಎಸ್​ಕೆ ಕೈಬಿಟ್ಟಿದ್ದ 40 ವರ್ಷದ ಭಜ್ಜಿಯನ್ನು ಕೋಲ್ಕತ್ತಾ ನೈಟ್​ ರೈಟ್​ರೈಡರ್ಸ್​ ಮೂಲಬೆಲೆ 2 ಕೋಟಿ ರೂಗಳಿಗೆ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಏಕೆಂದರೆ ಅವರು 2019ರ ಐಪಿಎಲ್ ಫೈನಲ್ ನಂತರ ಯಾವುದೇ ವೃತ್ತಿಪರ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಈಗಾಗಲೇ ತಂಡದಲ್ಲಿ ಸುನೀಲ್ ನರೈನ್, ಶಕಿಬ್ ಅಲ್ ಹಸನ್, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಸ್ಪಿನ್ನರ್​ಗಳ ಬಲವನ್ನು ಕೆಕೆಆರ್ ಹೊಂದಿದೆ.

ನಮ್ಮ ತಂಡಕ್ಕೆ ಹರ್ಭಜನ್ ಅವರನ್ನು ಸೇರಿಸಿಕೊಂಡಿರುವುದು ನಿಜವಾಗಿಯೂ ಉತ್ತಮ ರೀತಿಯಲ್ಲಿ ನಮ್ಮನ್ನು ಬಲಪಡಿಸಿದೆ. ಕಾಗದದ ಮೇಲೆ ನಮ್ಮ ಸ್ಪಿನ್ ವಿಭಾಗವನ್ನು ನೀವು ನೋಡಿದಾಗ, ಇದು ಟೂರ್ನಿಯಲ್ಲೇ ಅತ್ಯುತ್ತಮವಾದದ್ದಾಗಿದೆ. ಇದು ವಾಸ್ತವ ಕೂಡ ಎಂದು ಕೆಕೆಆರ್ ನಾಯಕ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತೊಳಿಸಿದ್ದಾರೆ.

ಇದನ್ನೂ ಓದಿ: ಈ ಕಾರಣದಿಂದ ಬಹುತೇಕ ಕ್ರಿಕೆಟಿಗರು ಧೋನಿ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ : ಮೊಯಿನ್ ಅಲಿ

ನಮ್ಮಲ್ಲಿರುವ ಆಯ್ಕೆಗಳು ಮತ್ತು ಚೆನ್ನೈನ ನಂತಹ ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಆಡುವಾಗ ನಮಗೆ ಸ್ಪಿನ್ನರ್​ಗಳು ಹೆಚ್ಚು ನಿರ್ಣಾಯಕವಾಗಲಿದೆ ಎಂದಿದ್ದಾರೆ.

ಕಳೆದ ವರ್ಷ ಕೆಕೆಆರ್ ತಂಡ 5ನೇ ಸ್ಥಾನ ಪಡೆದಿತ್ತು. ಮಧ್ಯಂತರದಲ್ಲಿ ದಿನೇಶ್​ ಕಾರ್ತಿಕ್​ರಿಂದ ನಾಯಕತ್ವವನ್ನು ಹಿಂತೆಗೆದುಕೊಂಡು ಇಯಾನ್ ಮಾರ್ಗನ್​ಗೆ ನೀಡಲಾಗಿತ್ತು.

40 ವರ್ಷದ ಹರ್ಭಜನ್ ಸಿಂಗ್ 160 ಪಂದ್ಯಗಳಿಂದ 150 ವಿಕೆಟ್​ ಪಡೆದಿದ್ದಾರೆ. ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.