ETV Bharat / sports

ವಿಶ್ವಕಪ್​ ಗೆಲ್ಲಲು ಕೊಹ್ಲಿ-ರೋಹಿತ್​ರಂತಹ ಮ್ಯಾಚ್​ ವಿನ್ನರ್ಸ್​ ಹೆಚ್ಚಿನ ಸಂಖ್ಯೆಯಲ್ಲಿರಬೇಕು : ಭಜ್ಜಿ

author img

By

Published : Nov 22, 2020, 8:11 PM IST

ಪ್ರಸ್ತುತ ಕೆಎಲ್​ ರಾಹುಲ್​ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಂದುವರಿಯುತ್ತಾ ಭಾರತ ತಂಡಕ್ಕೆ ಕೀ ಪ್ಲೇಯರ್​ ಆಗಿದ್ದಾರೆ. ನಮಗೆ ಕೊಹ್ಲಿ-ರೋಹಿತ್ ಸುತ್ತ ರಾಹುಲ್​ ಅಂತಹ ಆಟಗಾರರ ಅಗತ್ಯವಿದೆ. ಯಾರೇ ಔಟಾದರೂ ತಂಡವನ್ನು ಗೆಲ್ಲಿಸುವ ಮನೋಬಲವುಳ್ಳ ಆಟಗಾರರ ಅಗತ್ಯವಿದೆ..

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಮುಂಬೈ : ಭಾರತ ತಂಡ ಪ್ರಸ್ತುತ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದಾಗಿದೆ. ಆದರೆ, ಪಂದ್ಯದ ಗೆಲುವಿನಲ್ಲಿ ಕೆಲವೇ ಆಟಗಾರರನ್ನು ಹೆಚ್ಚು ನಂಬಿಕೊಳ್ಳುವುದರಿಂದ ಐಸಿಸಿ ಟೂರ್ನಿಗಳಲ್ಲಿ ಗೆಲ್ಲಲೂ ವಿಫಲವಾಗುತ್ತಿದೆ. ಹಾಗಾಗಿ ಟೀಮ್ ಇಂಡಿಯಾಗೆ ರೋಹಿತ್, ಕೊಹ್ಲಿಯಂತಹ ಮ್ಯಾಚ್​ ವಿನ್ನರ್​ಗಳ ಅಗತ್ಯ ಖಂಡಿತಾ ಇದೆ ಎಂದು ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ಕೊನೆಯ ಬಾರಿ 2013ರಲ್ಲಿ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿದ್ದೆ ಕೊನೆಯ ಐಸಿಸಿ ಟ್ರೋಫಿಯಾಗಿದೆ. ನಂತರ 2015,2019ರ ಏಕದಿನ ವಿಶ್ವಕನ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡರೆ, 2012ರ ಟಿ20 ವಿಶ್ವಕಪ್​ನಲ್ಲಿ ರನ್ನರ್​ ಅಪ್ ಮತ್ತು 2016ರಲ್ಲಿ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಹಾಗೂ 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ರನ್ನರ್​ ಅಪ್ ಆಗಿದೆ.

2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಟಾಪ್​ ರ್ಯಾಂಕ್​ ತಂಡವಾಗಿ ಕಣಕ್ಕಿಳಿದು ಗುಂಪು ಹಂತದಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ, ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡದ ವಿರುದ್ಧ 240 ರನ್​ಗಳನ್ನು ಚೇಸ್​ ಮಾಡಲಾಗದೆ ಸೋಲು ಕಂಡಿತ್ತು. ಹಿರಿಯ ಸ್ಪಿನ್ನರ್​​ ಹರ್ಭಜನ್​ ಸಿಂಗ್ ಭಾರತ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕಾದರೆ ಕೊಹ್ಲಿ-ರೋಹಿತ್‌ರಂತಹ ಮ್ಯಾಚ್​ ವಿನ್ನರ್​ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ತಂಡದ 2-3 ಆಟಗಾರರ ಹಿಂದೆ ಹೋಗುವುದನ್ನು ನಿಲ್ಲಿಸಬೇಕು, ಕಳೆದ ವಿಶ್ವಕಪ್​ನಲ್ಲಿ ರೋಹಿತ್​ ಕೀ ಪ್ಲೇಯರ್​ ಆದರೆ, ಕೊಹ್ಲಿ ಸದಾ ಟೀಮ್ ಇಂಡಿಯಾಗೆ ಪ್ರಮುಖ ಆಟಗಾರರಾಗಿರುತ್ತಾರೆ. ಆದರೆ, ನಿಮ್ಮ ತಂಡದಲ್ಲಿ ಹೆಚ್ಚು ಮ್ಯಾಚ್ ​ವಿನ್ನರ್​ಗಳನ್ನು ಹೊಂದಿರಬೇಕು.

ಖಂಡಿತ ವಿಶ್ವಕಪ್​ ಗೆಲ್ಲಲು ಭಾರತ ತಂಡಕ್ಕೆ ರೋಹಿತ್​-ಕೊಹ್ಲಿ ಜೊತೆಗೆ ಮತ್ತಷ್ಟು ಮ್ಯಾಚ್​ ವಿನ್ನರ್​ಗಳು ಬೇಕಾಗಿದ್ದಾರೆ. ಅವರಿಬ್ಬರು ಒತ್ತಡದ ಪಂದ್ಯಗಳಲ್ಲಿ ಬೇಗ ಔಟಾದರೆ, ಅವರ ಜವಾಬ್ದಾರಿಯನ್ನು ವಹಿಸಿಕೊಂಡು ಟೀಮ್ ಇಂಡಿಯಾಕ್ಕಾಗಿ ಕೆಲಸ ಮಾಡುವ ನಂಬಿಕೆಯನ್ನ ಅವರು ಹೊಂದಿರಬೇಕು" ಎಂದು ಭಜ್ಜಿ ಹೇಳಿದ್ದಾರೆ.

ಪ್ರಸ್ತುತ ಕೆಎಲ್​ ರಾಹುಲ್​ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಂದುವರಿಯುತ್ತಾ ಭಾರತ ತಂಡಕ್ಕೆ ಕೀ ಪ್ಲೇಯರ್​ ಆಗಿದ್ದಾರೆ. ನಮಗೆ ಕೊಹ್ಲಿ-ರೋಹಿತ್ ಸುತ್ತ ರಾಹುಲ್​ ಅಂತಹ ಆಟಗಾರರ ಅಗತ್ಯವಿದೆ. ಯಾರೇ ಔಟಾದರೂ ತಂಡವನ್ನು ಗೆಲ್ಲಿಸುವ ಮನೋಬಲವುಳ್ಳ ಆಟಗಾರರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

2011ರಲ್ಲಿ ಭಾರತ ತಂಡ ಸಚಿನ್​ ತೆಂಡೂಲ್ಕರ್​ ಮತ್ತು ಸೆಹ್ವಾಗ್​ ಔಟಾದರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಹೊಂದಿದ್ದೆವು. ಡ್ರೆಸ್ಸಿಂಗ್​ ರೂಮ್​ನಲ್ಲಿ ಗಂಭೀರ್​, ಧೋನಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿತ್ತು. ಅಥವಾ ಯುವರಾಜ್​ ಸಿಂಗ್ ಆ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿತ್ತು. ಅವರಿಂದ ಆಗದಿದ್ದರೆ ನಾನು ಆ ಕೆಲಸ ಮಾಡುತ್ತೇನೆಂಬ ನಂಬಿಕೆ ಇತ್ತು. ಎಲ್ಲಾ ಆಟಗಾರರಲ್ಲಿ ಆ ನಂಬಿಕೆ ಒಳಗಿನಿಂದ ಬರಬೇಕು ಎಂದು ಹರ್ಭಜನ್​ ಹೇಳಿದ್ದಾರೆ.​

ಮುಂಬೈ : ಭಾರತ ತಂಡ ಪ್ರಸ್ತುತ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದಾಗಿದೆ. ಆದರೆ, ಪಂದ್ಯದ ಗೆಲುವಿನಲ್ಲಿ ಕೆಲವೇ ಆಟಗಾರರನ್ನು ಹೆಚ್ಚು ನಂಬಿಕೊಳ್ಳುವುದರಿಂದ ಐಸಿಸಿ ಟೂರ್ನಿಗಳಲ್ಲಿ ಗೆಲ್ಲಲೂ ವಿಫಲವಾಗುತ್ತಿದೆ. ಹಾಗಾಗಿ ಟೀಮ್ ಇಂಡಿಯಾಗೆ ರೋಹಿತ್, ಕೊಹ್ಲಿಯಂತಹ ಮ್ಯಾಚ್​ ವಿನ್ನರ್​ಗಳ ಅಗತ್ಯ ಖಂಡಿತಾ ಇದೆ ಎಂದು ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ಕೊನೆಯ ಬಾರಿ 2013ರಲ್ಲಿ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿದ್ದೆ ಕೊನೆಯ ಐಸಿಸಿ ಟ್ರೋಫಿಯಾಗಿದೆ. ನಂತರ 2015,2019ರ ಏಕದಿನ ವಿಶ್ವಕನ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡರೆ, 2012ರ ಟಿ20 ವಿಶ್ವಕಪ್​ನಲ್ಲಿ ರನ್ನರ್​ ಅಪ್ ಮತ್ತು 2016ರಲ್ಲಿ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಹಾಗೂ 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ರನ್ನರ್​ ಅಪ್ ಆಗಿದೆ.

2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಟಾಪ್​ ರ್ಯಾಂಕ್​ ತಂಡವಾಗಿ ಕಣಕ್ಕಿಳಿದು ಗುಂಪು ಹಂತದಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ, ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡದ ವಿರುದ್ಧ 240 ರನ್​ಗಳನ್ನು ಚೇಸ್​ ಮಾಡಲಾಗದೆ ಸೋಲು ಕಂಡಿತ್ತು. ಹಿರಿಯ ಸ್ಪಿನ್ನರ್​​ ಹರ್ಭಜನ್​ ಸಿಂಗ್ ಭಾರತ ತಂಡ ಐಸಿಸಿ ಟೂರ್ನಿಗಳನ್ನು ಗೆಲ್ಲಬೇಕಾದರೆ ಕೊಹ್ಲಿ-ರೋಹಿತ್‌ರಂತಹ ಮ್ಯಾಚ್​ ವಿನ್ನರ್​ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ತಂಡದ 2-3 ಆಟಗಾರರ ಹಿಂದೆ ಹೋಗುವುದನ್ನು ನಿಲ್ಲಿಸಬೇಕು, ಕಳೆದ ವಿಶ್ವಕಪ್​ನಲ್ಲಿ ರೋಹಿತ್​ ಕೀ ಪ್ಲೇಯರ್​ ಆದರೆ, ಕೊಹ್ಲಿ ಸದಾ ಟೀಮ್ ಇಂಡಿಯಾಗೆ ಪ್ರಮುಖ ಆಟಗಾರರಾಗಿರುತ್ತಾರೆ. ಆದರೆ, ನಿಮ್ಮ ತಂಡದಲ್ಲಿ ಹೆಚ್ಚು ಮ್ಯಾಚ್ ​ವಿನ್ನರ್​ಗಳನ್ನು ಹೊಂದಿರಬೇಕು.

ಖಂಡಿತ ವಿಶ್ವಕಪ್​ ಗೆಲ್ಲಲು ಭಾರತ ತಂಡಕ್ಕೆ ರೋಹಿತ್​-ಕೊಹ್ಲಿ ಜೊತೆಗೆ ಮತ್ತಷ್ಟು ಮ್ಯಾಚ್​ ವಿನ್ನರ್​ಗಳು ಬೇಕಾಗಿದ್ದಾರೆ. ಅವರಿಬ್ಬರು ಒತ್ತಡದ ಪಂದ್ಯಗಳಲ್ಲಿ ಬೇಗ ಔಟಾದರೆ, ಅವರ ಜವಾಬ್ದಾರಿಯನ್ನು ವಹಿಸಿಕೊಂಡು ಟೀಮ್ ಇಂಡಿಯಾಕ್ಕಾಗಿ ಕೆಲಸ ಮಾಡುವ ನಂಬಿಕೆಯನ್ನ ಅವರು ಹೊಂದಿರಬೇಕು" ಎಂದು ಭಜ್ಜಿ ಹೇಳಿದ್ದಾರೆ.

ಪ್ರಸ್ತುತ ಕೆಎಲ್​ ರಾಹುಲ್​ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಂದುವರಿಯುತ್ತಾ ಭಾರತ ತಂಡಕ್ಕೆ ಕೀ ಪ್ಲೇಯರ್​ ಆಗಿದ್ದಾರೆ. ನಮಗೆ ಕೊಹ್ಲಿ-ರೋಹಿತ್ ಸುತ್ತ ರಾಹುಲ್​ ಅಂತಹ ಆಟಗಾರರ ಅಗತ್ಯವಿದೆ. ಯಾರೇ ಔಟಾದರೂ ತಂಡವನ್ನು ಗೆಲ್ಲಿಸುವ ಮನೋಬಲವುಳ್ಳ ಆಟಗಾರರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

2011ರಲ್ಲಿ ಭಾರತ ತಂಡ ಸಚಿನ್​ ತೆಂಡೂಲ್ಕರ್​ ಮತ್ತು ಸೆಹ್ವಾಗ್​ ಔಟಾದರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಹೊಂದಿದ್ದೆವು. ಡ್ರೆಸ್ಸಿಂಗ್​ ರೂಮ್​ನಲ್ಲಿ ಗಂಭೀರ್​, ಧೋನಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿತ್ತು. ಅಥವಾ ಯುವರಾಜ್​ ಸಿಂಗ್ ಆ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿತ್ತು. ಅವರಿಂದ ಆಗದಿದ್ದರೆ ನಾನು ಆ ಕೆಲಸ ಮಾಡುತ್ತೇನೆಂಬ ನಂಬಿಕೆ ಇತ್ತು. ಎಲ್ಲಾ ಆಟಗಾರರಲ್ಲಿ ಆ ನಂಬಿಕೆ ಒಳಗಿನಿಂದ ಬರಬೇಕು ಎಂದು ಹರ್ಭಜನ್​ ಹೇಳಿದ್ದಾರೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.