ETV Bharat / sports

ಐಪಿಎಲ್​ನ ಆರಂಭದ ಪಂದ್ಯದಲ್ಲಿ ಸಿಎಸ್​ಕೆಗಿಂತ ಮುಂಬೈ ತಂಡಕ್ಕೆ ಮೇಲುಗೈ: ಗಂಭೀರ್​ ವಿಶ್ವಾಸ

author img

By

Published : Sep 15, 2020, 11:00 PM IST

ತಂಡದ ಸಮತೋಲನ ಮತ್ತು ಬ್ಯಾಟಿಂಗ್​ ಆಳವನ್ನು ನೋಡಿದರೆ ಮುಂಬೈ ಇಂಡಿಯನ್ಸ್‌ ತಂಡ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ. ತಂಡದ ಗೆಲುವು ಸೋಲುಗಳ ಲೆಕ್ಕಾಚಾರ ನೋಡಿದರೆ ಆಡಿರುವ 30 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಹಾಗೂ ಸಿಎಸ್​ಕೆ 12 ರಲ್ಲಿ ಗೆಲುವು ಸಾಧಿಸಿದೆ..

ಗೌತಮ್​ ಗಂಭೀರ್​ ವಿಶ್ಲೇಶಣೆ
ಸಿಎಸ್​ಕೆ ಮುಂಬೈ ಕದನ

ನವದೆಹಲಿ: ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ಸದಾ ರೋಮಾಂಚನಕಾರಿಯಾಗಿ ಕೂಡಿರುವ ಚೆನ್ನೈ-ಮುಂಬೈ ಮುಖಾಮುಖಿಯಲ್ಲಿ ರೋಹಿತ್ ಬಳಗ ಗೆಲುವು ಪಡೆಯಲಿದೆ ಎಂದು ಗಂಭೀರ್​ ಭವಿಷ್ಯ ನುಡಿದಿದ್ದಾರೆ. ರೈನಾ-ಹರ್ಭಜನ್ ಸಿಂಗ್ ತಂಡದಲ್ಲಿಲ್ಲದಿರುವುದು ಧೋನಿ ಟೀಮ್​ಗೆ ಹಿನ್ನಡೆಯಾಗುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

" ನಾನು ನಿಜವಾಗಿಯು ಬುಮ್ರಾ ಮತ್ತು ಬೌಲ್ಟ್‌ ಹೊಸ ಚೆಂಡಿನಲ್ಲಿ ಹೇಗೆ ಬೌಲಿಂಗ್‌ ಮಾಡುತ್ತಾರೆ ಎಂಬುದನ್ನು ನೋಡಲು ಬಹಳ ಉತ್ಸುಕನಾಗಿ ಕಾಯುತ್ತಿದ್ದೇನೆ. ಯಾಕೆಂದರೆ, ಇವರಿಬ್ಬರೂ ವಿಶ್ವದರ್ಜೆಯ ಬೌಲರ್ಸ್​ ಮತ್ತು ಟಿ20 ಕ್ರಿಕೆಟ್​ನಲ್ಲಿ ವಿಕೆಟ್‌ ಪಡೆಯುಲು ಇರುವ ಬೌಲಿಂಗ್​ ಆಯ್ಕೆಗಳು. ಎಡಗೈ ವೇಗಿಬ ಬೌಲ್ಟ್​ ರೈಟ್​ ಹ್ಯಾಂಡ್​ ಬ್ಯಾಟ್ಸ್​ಮನ್​ಗಳಗಳಿಗೆ ಒಳ ನುಗ್ಗುವಂತೆ ಬೌಲಿಂಗ್​ ಮಾಡಬಲ್ಲರು. ಬುಮ್ರಾ ಅವರ ಅಸಂಪ್ರದಾಯಿಕ ಬೌಲಿಂಗ್ ದಾಳಿ ನಡೆಸಲಿದ್ದಾರೆ. ಇವರಿಬ್ಬರನ್ನು ಎದುರಿಸುವುದು ಸಿಎಸ್​ಕೆಗೆ ಸವಾಲಿನ ಕೆಲಸ​ " ಎಂದು ಗಂಭೀರ್​ ಮುಂಬೈ ಬಲ ತಿಳಿಸಿದ್ದಾರೆ.

ಇದರ ಜೊತೆಗೆ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಆಗಿದ್ದ ಸುರೇಶ್‌ ರೈನಾ 3ನೇ ಕ್ರಮಾಂದಲ್ಲಿ ಆಡದಿರುವುದು ಹಾಗೂ ದೀರ್ಘ ಸಮಯದಿಂದ ಕ್ರಿಕೆಟ್​ ಆಡದಿರುವ ಶೇನ್‌ ವಾಟ್ಸನ್‌ ಆರಂಭಿಕನಾಗಿ ಬುಮ್ರಾ ಮತ್ತು ಬೌಲ್ಟ್​ ಸವಾಲನ್ನು ಹೇಗೆ ಎದುರಿಸಲಿದ್ದಾರೆ. ಇನ್ನು, ಅವರು ಯಾರೊಂದಿಗೆ ಇನ್ನಿಂಗ್ಸ್​ ಆರಂಭಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಂಡದ ಸಮತೋಲನ ಮತ್ತು ಬ್ಯಾಟಿಂಗ್​ ಆಳವನ್ನು ನೋಡಿದರೆ ಮುಂಬೈ ಇಂಡಿಯನ್ಸ್‌ ತಂಡ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ. ತಂಡದ ಗೆಲುವು ಸೋಲುಗಳ ಲೆಕ್ಕಾಚಾರ ನೋಡಿದರೆ ಆಡಿರುವ 30 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಹಾಗೂ ಸಿಎಸ್​ಕೆ 12 ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಕಳೆದ 4 ಮುಖಾಮುಖಿಯಲ್ಲಿ ಮುಂಬೈ ತಂಡವೇ ಗೆಲುವು ಸಾಧಿಸಿದೆ.

ನವದೆಹಲಿ: ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ಸದಾ ರೋಮಾಂಚನಕಾರಿಯಾಗಿ ಕೂಡಿರುವ ಚೆನ್ನೈ-ಮುಂಬೈ ಮುಖಾಮುಖಿಯಲ್ಲಿ ರೋಹಿತ್ ಬಳಗ ಗೆಲುವು ಪಡೆಯಲಿದೆ ಎಂದು ಗಂಭೀರ್​ ಭವಿಷ್ಯ ನುಡಿದಿದ್ದಾರೆ. ರೈನಾ-ಹರ್ಭಜನ್ ಸಿಂಗ್ ತಂಡದಲ್ಲಿಲ್ಲದಿರುವುದು ಧೋನಿ ಟೀಮ್​ಗೆ ಹಿನ್ನಡೆಯಾಗುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

" ನಾನು ನಿಜವಾಗಿಯು ಬುಮ್ರಾ ಮತ್ತು ಬೌಲ್ಟ್‌ ಹೊಸ ಚೆಂಡಿನಲ್ಲಿ ಹೇಗೆ ಬೌಲಿಂಗ್‌ ಮಾಡುತ್ತಾರೆ ಎಂಬುದನ್ನು ನೋಡಲು ಬಹಳ ಉತ್ಸುಕನಾಗಿ ಕಾಯುತ್ತಿದ್ದೇನೆ. ಯಾಕೆಂದರೆ, ಇವರಿಬ್ಬರೂ ವಿಶ್ವದರ್ಜೆಯ ಬೌಲರ್ಸ್​ ಮತ್ತು ಟಿ20 ಕ್ರಿಕೆಟ್​ನಲ್ಲಿ ವಿಕೆಟ್‌ ಪಡೆಯುಲು ಇರುವ ಬೌಲಿಂಗ್​ ಆಯ್ಕೆಗಳು. ಎಡಗೈ ವೇಗಿಬ ಬೌಲ್ಟ್​ ರೈಟ್​ ಹ್ಯಾಂಡ್​ ಬ್ಯಾಟ್ಸ್​ಮನ್​ಗಳಗಳಿಗೆ ಒಳ ನುಗ್ಗುವಂತೆ ಬೌಲಿಂಗ್​ ಮಾಡಬಲ್ಲರು. ಬುಮ್ರಾ ಅವರ ಅಸಂಪ್ರದಾಯಿಕ ಬೌಲಿಂಗ್ ದಾಳಿ ನಡೆಸಲಿದ್ದಾರೆ. ಇವರಿಬ್ಬರನ್ನು ಎದುರಿಸುವುದು ಸಿಎಸ್​ಕೆಗೆ ಸವಾಲಿನ ಕೆಲಸ​ " ಎಂದು ಗಂಭೀರ್​ ಮುಂಬೈ ಬಲ ತಿಳಿಸಿದ್ದಾರೆ.

ಇದರ ಜೊತೆಗೆ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಆಗಿದ್ದ ಸುರೇಶ್‌ ರೈನಾ 3ನೇ ಕ್ರಮಾಂದಲ್ಲಿ ಆಡದಿರುವುದು ಹಾಗೂ ದೀರ್ಘ ಸಮಯದಿಂದ ಕ್ರಿಕೆಟ್​ ಆಡದಿರುವ ಶೇನ್‌ ವಾಟ್ಸನ್‌ ಆರಂಭಿಕನಾಗಿ ಬುಮ್ರಾ ಮತ್ತು ಬೌಲ್ಟ್​ ಸವಾಲನ್ನು ಹೇಗೆ ಎದುರಿಸಲಿದ್ದಾರೆ. ಇನ್ನು, ಅವರು ಯಾರೊಂದಿಗೆ ಇನ್ನಿಂಗ್ಸ್​ ಆರಂಭಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಂಡದ ಸಮತೋಲನ ಮತ್ತು ಬ್ಯಾಟಿಂಗ್​ ಆಳವನ್ನು ನೋಡಿದರೆ ಮುಂಬೈ ಇಂಡಿಯನ್ಸ್‌ ತಂಡ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ. ತಂಡದ ಗೆಲುವು ಸೋಲುಗಳ ಲೆಕ್ಕಾಚಾರ ನೋಡಿದರೆ ಆಡಿರುವ 30 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಹಾಗೂ ಸಿಎಸ್​ಕೆ 12 ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಕಳೆದ 4 ಮುಖಾಮುಖಿಯಲ್ಲಿ ಮುಂಬೈ ತಂಡವೇ ಗೆಲುವು ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.