ETV Bharat / sports

15 ವರ್ಷದ ಬಳಿಕ ಐದು ವಿಕೆಟ್​.. ಕೇರಳ ತಂಡದಲ್ಲಿ ಶ್ರೀಶಾಂತ್ ಮಿಂಚು! - ವೇಗದ ಬೌಲರ್ ಶ್ರೀಶಾಂತ್​

ದೇಶಿ ಕ್ರಿಕೆಟ್ ವಿಜಯ್ ಹರಾಜೆ ಟ್ರೋಫಿಯಲ್ಲಿ ಕೇರಳ ತಂಡದ ವೇಗದ ಬೌಲರ್​ ಶ್ರೀಶಾಂತ್​ ಮಿಂಚು ಹರಿಸಿದ್ದು, ಐದು ವಿಕೆಟ್​ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

Sreesanth
Sreesanth
author img

By

Published : Feb 22, 2021, 4:43 PM IST

ಆಲೂರು(ಬೆಂಗಳೂರು): ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡದ ಪರ ಮಿಂಚು ಹರಿಸಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಎಸ್​.ಶ್ರೀಶಾಂತ್​ ಐದು ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಐಪಿಎಲ್​ ಸ್ಪಾಟ್​ ಫಿಕ್ಸಿಂಗ್ ಬಳಿಕ ದೇಶಿ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿರುವ ಶ್ರೀಶಾಂತ್ ಬರೋಬ್ಬರಿ 15 ವರ್ಷಗಳ ಬಳಿಕ ಐದು ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಈ ಹಿಂದೆ 2006ರಲ್ಲಿ ವೇಗಿ ಐದು ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಪೃಥ್ವಿ ಶಾ ಸ್ಫೋಟಕ ಶತಕ: ಡೆಲ್ಲಿ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಉತ್ತರ ಪ್ರದೇಶ ವಿರುದ್ಧ ಗ್ರೂಪ್ ಸಿ ವಿಭಾಗದ ಪಂದ್ಯ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಶ್ರೀಶಾಂತ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಎಸೆದ 9.4 ಓವರ್​ಗಳಲ್ಲಿ 65ರನ್​ ನೀಡಿ 5 ವಿಕೆಟ್ ಪಡೆದುಕೊಂಡಿದ್ದು, ಉತ್ತರ ಪ್ರದೇಶದ ಆರಂಭಿಕ ಬ್ಯಾಟ್ಸಮನ್​ ಗೋಸ್ವಾಮಿ, ಅಕ್ಷದೀಪ್ ನಾಥ್​, ಭುವನೇಶ್ವರ್ ಕುಮಾರ್​, ಶಿವಂ ಶರ್ಮಾ, ಮೊಶಿನ್​ ಖಾನ್ ವಿಕೆಟ್ ಪಡೆದುಕೊಂಡಿದ್ದಾರೆ.

49.4 ಓವರ್​ಗಳಲ್ಲಿ ಉತ್ತರ ಪ್ರದೇಶ 283ರನ್​ಗಳಿಕೆ ಮಾಡಿದ್ದು, ಇದರ ಬೆನ್ನತ್ತಿರುವ ಕೇರಳ ತಂಡ ರಾಬಿನ್​ ಉತ್ತಪ್ಪ ಅವರ 81ರನ್​ಗಳ ನೆರವಿನಿಂದ 40 ಓವರ್​ಗಳಲ್ಲಿ 223ರನ್​ಗಳಿಕೆ ಮಾಡಿದ್ದು, ಕೊನೆಯ 10 ಓವರ್​ಗಳಲ್ಲಿ 61ರನ್​ಗಳ ಅವಶ್ಯಕತೆ ಇದೆ.

ಆಲೂರು(ಬೆಂಗಳೂರು): ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡದ ಪರ ಮಿಂಚು ಹರಿಸಿರುವ ಟೀಂ ಇಂಡಿಯಾ ಮಾಜಿ ಬೌಲರ್​ ಎಸ್​.ಶ್ರೀಶಾಂತ್​ ಐದು ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಐಪಿಎಲ್​ ಸ್ಪಾಟ್​ ಫಿಕ್ಸಿಂಗ್ ಬಳಿಕ ದೇಶಿ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿರುವ ಶ್ರೀಶಾಂತ್ ಬರೋಬ್ಬರಿ 15 ವರ್ಷಗಳ ಬಳಿಕ ಐದು ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಈ ಹಿಂದೆ 2006ರಲ್ಲಿ ವೇಗಿ ಐದು ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಪೃಥ್ವಿ ಶಾ ಸ್ಫೋಟಕ ಶತಕ: ಡೆಲ್ಲಿ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಉತ್ತರ ಪ್ರದೇಶ ವಿರುದ್ಧ ಗ್ರೂಪ್ ಸಿ ವಿಭಾಗದ ಪಂದ್ಯ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಶ್ರೀಶಾಂತ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಎಸೆದ 9.4 ಓವರ್​ಗಳಲ್ಲಿ 65ರನ್​ ನೀಡಿ 5 ವಿಕೆಟ್ ಪಡೆದುಕೊಂಡಿದ್ದು, ಉತ್ತರ ಪ್ರದೇಶದ ಆರಂಭಿಕ ಬ್ಯಾಟ್ಸಮನ್​ ಗೋಸ್ವಾಮಿ, ಅಕ್ಷದೀಪ್ ನಾಥ್​, ಭುವನೇಶ್ವರ್ ಕುಮಾರ್​, ಶಿವಂ ಶರ್ಮಾ, ಮೊಶಿನ್​ ಖಾನ್ ವಿಕೆಟ್ ಪಡೆದುಕೊಂಡಿದ್ದಾರೆ.

49.4 ಓವರ್​ಗಳಲ್ಲಿ ಉತ್ತರ ಪ್ರದೇಶ 283ರನ್​ಗಳಿಕೆ ಮಾಡಿದ್ದು, ಇದರ ಬೆನ್ನತ್ತಿರುವ ಕೇರಳ ತಂಡ ರಾಬಿನ್​ ಉತ್ತಪ್ಪ ಅವರ 81ರನ್​ಗಳ ನೆರವಿನಿಂದ 40 ಓವರ್​ಗಳಲ್ಲಿ 223ರನ್​ಗಳಿಕೆ ಮಾಡಿದ್ದು, ಕೊನೆಯ 10 ಓವರ್​ಗಳಲ್ಲಿ 61ರನ್​ಗಳ ಅವಶ್ಯಕತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.