ETV Bharat / sports

IPL​ ನಡೆಯದಿದ್ರೆ ಧೋನಿ ವಿಶ್ವಕಪ್ ತಂಡಕ್ಕೆ ಮರಳುವುದು ಸಂಶಯ​: ಕೆ.ಶ್ರೀಕಾಂತ್​

author img

By

Published : Apr 12, 2020, 9:46 AM IST

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿಯ ಕ್ರಿಕೆಟ್​ ಬದುಕಿನ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ (ಐಪಿಎಲ್)​ ಟೂರ್ನಿ ನಡೆಯದೇ ಹೋದರೆ ಅವರು ತಂಡ ಸೇರುವುದು ಬಹುತೇಕ ಸಂಶಯವೆಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

MS Dhoni
MS Dhoni

ಚೆನ್ನೈ: ಕೊರೊನಾದಿಂದಾಗಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್‌ ಮುಂದೂಡಲ್ಪಟ್ಟಿದೆ. ಈ ವರ್ಷ ಟೂರ್ನಿ ನಡೆಯುವುದೇ ಸಂಶಯವೆಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿ ತಂಡಕ್ಕೆ ಮತ್ತೊಮ್ಮೆ ಕಮ್​ಬ್ಯಾಕ್​ ಮಾಡುವುದು ಅನುಮಾನ ಮೂಡಿಸಿದೆ.

ಟೀಂ ಇಂಡಿಯಾದ ಕೆಲ ಆಟಗಾರರ ಕ್ರಿಕೆಟ್​ ಭವಿಷ್ಯ ಈ ಬಾರಿಯ ಐಪಿಎಲ್‌ ಮೇಲೆ ನಿಂತಿತ್ತು. ಒಂದ್ವೇಳೆ ಟೂರ್ನಿ ನಡೆಯದೇ ಹೋದರೆ ಈ ಆಟಗಾರರ ಕ್ರಿಕೆಟ್​ ಜೀವನ ಕೊರೊನಾ ಕರಿನೆರಳಲ್ಲಿ ಕಮರಿ ಹೋಗುವ ಆತಂಕ ಎದುರಾಗಿದೆ.

ಐಪಿಎಲ್‌ನಲ್ಲಿ ಭಾಗಿಯಾಗಲು ಭರ್ಜರಿ ತಾಲೀಮು ನಡೆಸಿದ್ದ ಧೋನಿ, ರೈನಾ ಟೀಂ ಇಂಡಿಯಾ ಸೇರಿಕೊಳ್ತಾರೆ​ ಎಂದು ಕ್ರಿಕೆಟ್‌ ಅಭಿಮಾನಿಗಳು ಕನಸು ಕಾಣುತ್ತಿದ್ದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ. ಶ್ರೀಕಾಂತ್​, IPL ಟೂರ್ನಿ ನಡೆಯದಿದ್ದರೆ ಧೋನಿ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವುದು ಸಂಶಯ ಎಂದು​ ಹೇಳಿದ್ದಾರೆ.

ಐಪಿಎಲ್​ನಲ್ಲಿ ಕ್ಯಾಪ್ಟನ್‌ ಕೂಲ್‌ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಸಮಿತಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇತ್ತು. ಆದರೆ ಟೂರ್ನಿ ಮುಂದೂಡಿಕೆಯಾಗಿದೆ. ಹಾಗಾಗಿ ತಂಡಕ್ಕೆ ಅವರ ಮರಳುವಿಕೆ ಸುಲಭವಾಗಿಲ್ಲ.

ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಕಣಕ್ಕಿಳಿದ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ಸಲದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ತಂಡಕ್ಕೆ ಬರುವ​ ಇರಾದೆ ಅವರದ್ದಾಗಿತ್ತು.

ಒಂದ್ವೇಳೆ ಇವರು ತಂಡದಿಂದ ಹೊರಬಿದ್ದಿದ್ದೇ ಆದಲ್ಲಿ ಕೆ.ಎಲ್.ರಾಹುಲ್ ಹಾಗೂ ರಿಷಭ್​ ಪಂತ್ ತಂಡ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಚೆನ್ನೈ: ಕೊರೊನಾದಿಂದಾಗಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್‌ ಮುಂದೂಡಲ್ಪಟ್ಟಿದೆ. ಈ ವರ್ಷ ಟೂರ್ನಿ ನಡೆಯುವುದೇ ಸಂಶಯವೆಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿ ತಂಡಕ್ಕೆ ಮತ್ತೊಮ್ಮೆ ಕಮ್​ಬ್ಯಾಕ್​ ಮಾಡುವುದು ಅನುಮಾನ ಮೂಡಿಸಿದೆ.

ಟೀಂ ಇಂಡಿಯಾದ ಕೆಲ ಆಟಗಾರರ ಕ್ರಿಕೆಟ್​ ಭವಿಷ್ಯ ಈ ಬಾರಿಯ ಐಪಿಎಲ್‌ ಮೇಲೆ ನಿಂತಿತ್ತು. ಒಂದ್ವೇಳೆ ಟೂರ್ನಿ ನಡೆಯದೇ ಹೋದರೆ ಈ ಆಟಗಾರರ ಕ್ರಿಕೆಟ್​ ಜೀವನ ಕೊರೊನಾ ಕರಿನೆರಳಲ್ಲಿ ಕಮರಿ ಹೋಗುವ ಆತಂಕ ಎದುರಾಗಿದೆ.

ಐಪಿಎಲ್‌ನಲ್ಲಿ ಭಾಗಿಯಾಗಲು ಭರ್ಜರಿ ತಾಲೀಮು ನಡೆಸಿದ್ದ ಧೋನಿ, ರೈನಾ ಟೀಂ ಇಂಡಿಯಾ ಸೇರಿಕೊಳ್ತಾರೆ​ ಎಂದು ಕ್ರಿಕೆಟ್‌ ಅಭಿಮಾನಿಗಳು ಕನಸು ಕಾಣುತ್ತಿದ್ದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ. ಶ್ರೀಕಾಂತ್​, IPL ಟೂರ್ನಿ ನಡೆಯದಿದ್ದರೆ ಧೋನಿ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವುದು ಸಂಶಯ ಎಂದು​ ಹೇಳಿದ್ದಾರೆ.

ಐಪಿಎಲ್​ನಲ್ಲಿ ಕ್ಯಾಪ್ಟನ್‌ ಕೂಲ್‌ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಸಮಿತಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇತ್ತು. ಆದರೆ ಟೂರ್ನಿ ಮುಂದೂಡಿಕೆಯಾಗಿದೆ. ಹಾಗಾಗಿ ತಂಡಕ್ಕೆ ಅವರ ಮರಳುವಿಕೆ ಸುಲಭವಾಗಿಲ್ಲ.

ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಕಣಕ್ಕಿಳಿದ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ಸಲದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ತಂಡಕ್ಕೆ ಬರುವ​ ಇರಾದೆ ಅವರದ್ದಾಗಿತ್ತು.

ಒಂದ್ವೇಳೆ ಇವರು ತಂಡದಿಂದ ಹೊರಬಿದ್ದಿದ್ದೇ ಆದಲ್ಲಿ ಕೆ.ಎಲ್.ರಾಹುಲ್ ಹಾಗೂ ರಿಷಭ್​ ಪಂತ್ ತಂಡ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.