ETV Bharat / sports

ಯಾರ್ಕರ್​ ಸ್ಪೆಷಲಿಸ್ಟ್​ ನಟರಾಜನ್ ಐಪಿಎಲ್​ನ ಕೊಡುಗೆ: ವಾರ್ನರ್​ ಬಣ್ಣನೆ

author img

By

Published : Nov 9, 2020, 5:26 PM IST

ಭುವನೇಶ್ವರ್​ ಅವರಂತಹ ಅನುಭವಿ ವೇಗಿ ಇಲ್ಲದ ಕೊರತೆಯನ್ನು ನಟರಾಜನ್​ ತೀರಿಸಿದ್ದಾರೆ. ಟೂರ್ನಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಯಾರ್ಕರ್​ಗಳು ನಿಜಕ್ಕೂ ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿದೆ. ಐಪಿಎಲ್​ ಈ ವರ್ಷದ ಆವೃತ್ತಿಯಲ್ಲಿ ಕೊಡುಗೆಯಾಗಿ ನೀಡಿರುವ ಬೌಲರ್​ಗಳಲ್ಲಿ ಅವರು ಒಬ್ಬರು ಎಂದು ಕೊಂಡಾಡಿದ್ದಾರೆ.

ವಾರ್ನರ್​
ನಟರಾಜನ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್​ ನಲ್ಲಿ ಪಾಲ್ಗೊಳ್ಳುವ ಕ್ರಿಕೆಟರ್​ಗಳಿಗೆ ಕೇವಲ ಹಣ ಮಾತ್ರ ಮುಖ್ಯವಾಗುವುದಿಲ್ಲ. ಬದಲಾಗಿ ಈ ಲೀಗ್​ ವಿಶ್ವದೆಲ್ಲೆಡೆ ಪ್ರತಿಭೆಗಳ ಅನಾವರಣಕ್ಕೂ ಕಾರಣವಾಗುತ್ತಿದೆ. 13ನೇ ಆವೃತ್ತಿ ಕೋವಿಡ್​ ಸಂಕಷ್ಟದಲ್ಲಿ ನಡೆದರೂ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುವುದರಲ್ಲಿ ಮಾತ್ರ ಎಂದಿಗೂ ಹಿಂದೆ ಬಿದ್ದಿಲ್ಲ.

ಈಗಾಗಲೇ ಟೂರ್ನಿಯಿಂದ ಹೊರಬಿದ್ದರೂ 2020ರ ಐಪಿಎಲ್​ನಲ್ಲಿ ಆರ್​ಸಿಬಿಯಿಂದ ಪಡಿಕ್ಕಲ್, ರಾಜಸ್ಥಾನ್​ ತಂಡದಿಂದ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಕೆಕೆಆರ್​ನಲ್ಲಿ ನಾಗರಕೋಟಿ, ಚೆನ್ನೈ ತಂಡದಲ್ಲಿ ರುತುರಾಜ್ ಗಾಯಕ್ವಾಡ್​ , ಪಂಜಾಬ್​ನಲ್ಲಿ ಬಿಷ್ಣೋಯ್​ ಹಾಗೂ ಸನ್​ರೈಸರ್ಸ್​ ತಂಡದಲ್ಲಿ ನಟರಾಜನ್​ ತಮ್ಮನ್ನು ತಾವು ಪ್ರದರ್ಶನದ ಮೂಲಕ ಗುರುತಿಸಿಕೊಳ್ಳಲು ಐಪಿಎಲ್​ ನೆರವಾಗಿದೆ.

ಭಾನುವಾರ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡ ನಂತರ ಮಾತನಾಡಿದ ಡೇವಿಡ್ ವಾರ್ನರ್​, ಟಿ. ನಟರಾಜನ್​ ಈ ವರ್ಷದ ಐಪಿಎಲ್ ನೀಡಿದ ಕೊಡುಗೆ ಎಂದು ಬಣ್ಣಿಸಿದ್ದಾರೆ.​

ಯಾರ್ಕರ್​ನಲ್ಲಿ ರಬಾಡ, ಬುಮ್ರಾರನ್ನೇ ಮೀರಿಸಿದ ನಟರಾಜನ್​ ತಂಡಕ್ಕೆ ಅಗತ್ಯವಾದಾಗ ವಿಕೆಟ್ ಪಡೆಯುವುದಲ್ಲೇ ನಿರ್ಣಾಯಕ ಹಂತದಲ್ಲಿ ಯಾರ್ಕರ್​ಗಳ ಮೂಲಕ ರನ್​ಗಳಿಗೆ ಕಡಿವಾಣ ಹಾಕಿದ್ದಾರೆ. ಅವರು 16 ಪಂದ್ಯಗಳಲ್ಲಿ 16 ವಿಕೆಟ್​ ಪಡೆದು ಟೂರ್ನಿಯ ಶ್ರೇಷ್ಠ ವೇಗಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಈ ಟೂರ್ನಿಯಲ್ಲಿ ನಟರಾಜನ್​160ಕ್ಕೂ ಹೆಚ್ಚಿನ ಯಾರ್ಕರ್ ಎಸೆತಗಳನ್ನು ನಟರಾಜನ್ ಎಸೆದಿದ್ದಾರೆ.

ಭುವನೇಶ್ವರ್​ ರಂತಹ ಅನುಭವಿ ವೇಗಿ ಇಲ್ಲದ ಕೊರತೆಯನ್ನು ನಟರಾಜನ್​ ತೀರಿಸಿದ್ದಾರೆ. ಟೂರ್ನಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಯಾರ್ಕರ್​ಗಳು ನಿಜಕ್ಕೂ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದೆ. ಐಪಿಎಲ್​ ಈ ವರ್ಷದ ಆವೃತ್ತಿಯಲ್ಲಿ ಕೊಡುಗೆಯಾಗಿ ನೀಡಿರುವ ಬೌಲರ್​ಗಳಲ್ಲಿ ಅವರು ಒಬ್ಬರು ಎಂದು ಕೊಂಡಾಡಿದ್ದಾರೆ.

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್​ ನಲ್ಲಿ ಪಾಲ್ಗೊಳ್ಳುವ ಕ್ರಿಕೆಟರ್​ಗಳಿಗೆ ಕೇವಲ ಹಣ ಮಾತ್ರ ಮುಖ್ಯವಾಗುವುದಿಲ್ಲ. ಬದಲಾಗಿ ಈ ಲೀಗ್​ ವಿಶ್ವದೆಲ್ಲೆಡೆ ಪ್ರತಿಭೆಗಳ ಅನಾವರಣಕ್ಕೂ ಕಾರಣವಾಗುತ್ತಿದೆ. 13ನೇ ಆವೃತ್ತಿ ಕೋವಿಡ್​ ಸಂಕಷ್ಟದಲ್ಲಿ ನಡೆದರೂ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುವುದರಲ್ಲಿ ಮಾತ್ರ ಎಂದಿಗೂ ಹಿಂದೆ ಬಿದ್ದಿಲ್ಲ.

ಈಗಾಗಲೇ ಟೂರ್ನಿಯಿಂದ ಹೊರಬಿದ್ದರೂ 2020ರ ಐಪಿಎಲ್​ನಲ್ಲಿ ಆರ್​ಸಿಬಿಯಿಂದ ಪಡಿಕ್ಕಲ್, ರಾಜಸ್ಥಾನ್​ ತಂಡದಿಂದ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಕೆಕೆಆರ್​ನಲ್ಲಿ ನಾಗರಕೋಟಿ, ಚೆನ್ನೈ ತಂಡದಲ್ಲಿ ರುತುರಾಜ್ ಗಾಯಕ್ವಾಡ್​ , ಪಂಜಾಬ್​ನಲ್ಲಿ ಬಿಷ್ಣೋಯ್​ ಹಾಗೂ ಸನ್​ರೈಸರ್ಸ್​ ತಂಡದಲ್ಲಿ ನಟರಾಜನ್​ ತಮ್ಮನ್ನು ತಾವು ಪ್ರದರ್ಶನದ ಮೂಲಕ ಗುರುತಿಸಿಕೊಳ್ಳಲು ಐಪಿಎಲ್​ ನೆರವಾಗಿದೆ.

ಭಾನುವಾರ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡ ನಂತರ ಮಾತನಾಡಿದ ಡೇವಿಡ್ ವಾರ್ನರ್​, ಟಿ. ನಟರಾಜನ್​ ಈ ವರ್ಷದ ಐಪಿಎಲ್ ನೀಡಿದ ಕೊಡುಗೆ ಎಂದು ಬಣ್ಣಿಸಿದ್ದಾರೆ.​

ಯಾರ್ಕರ್​ನಲ್ಲಿ ರಬಾಡ, ಬುಮ್ರಾರನ್ನೇ ಮೀರಿಸಿದ ನಟರಾಜನ್​ ತಂಡಕ್ಕೆ ಅಗತ್ಯವಾದಾಗ ವಿಕೆಟ್ ಪಡೆಯುವುದಲ್ಲೇ ನಿರ್ಣಾಯಕ ಹಂತದಲ್ಲಿ ಯಾರ್ಕರ್​ಗಳ ಮೂಲಕ ರನ್​ಗಳಿಗೆ ಕಡಿವಾಣ ಹಾಕಿದ್ದಾರೆ. ಅವರು 16 ಪಂದ್ಯಗಳಲ್ಲಿ 16 ವಿಕೆಟ್​ ಪಡೆದು ಟೂರ್ನಿಯ ಶ್ರೇಷ್ಠ ವೇಗಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಈ ಟೂರ್ನಿಯಲ್ಲಿ ನಟರಾಜನ್​160ಕ್ಕೂ ಹೆಚ್ಚಿನ ಯಾರ್ಕರ್ ಎಸೆತಗಳನ್ನು ನಟರಾಜನ್ ಎಸೆದಿದ್ದಾರೆ.

ಭುವನೇಶ್ವರ್​ ರಂತಹ ಅನುಭವಿ ವೇಗಿ ಇಲ್ಲದ ಕೊರತೆಯನ್ನು ನಟರಾಜನ್​ ತೀರಿಸಿದ್ದಾರೆ. ಟೂರ್ನಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಯಾರ್ಕರ್​ಗಳು ನಿಜಕ್ಕೂ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದೆ. ಐಪಿಎಲ್​ ಈ ವರ್ಷದ ಆವೃತ್ತಿಯಲ್ಲಿ ಕೊಡುಗೆಯಾಗಿ ನೀಡಿರುವ ಬೌಲರ್​ಗಳಲ್ಲಿ ಅವರು ಒಬ್ಬರು ಎಂದು ಕೊಂಡಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.