ETV Bharat / sports

ರಾಷ್ಟ್ರ ನಿಮ್ಮ ಅಪಾರ ಸೇವೆಯನ್ನು ಸದಾ ನೆನಪಿಟ್ಟುಕೊಳ್ಳುತ್ತದೆ: ಪ್ರಣಬ್​ ನಿಧನಕ್ಕೆ ಗಂಭೀರ್, ಕೊಹ್ಲಿ​ ಸಂತಾಪ

author img

By

Published : Aug 31, 2020, 7:50 PM IST

ಇವರಲ್ಲದೆ ರೋಹಿತ್​ ಶರ್ಮಾ, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​, ಆರ್​ ಅಶ್ವಿನ್​, ವೃದ್ಧಿಮಾನ್ ಸಹಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಪ್ರಣಬ್​ ಮುಖರ್ಜಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಪ್ರಣಬ್​ ಮುಖರ್ಜಿ
ಪ್ರಣಬ್​ ಮುಖರ್ಜಿ

ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾದಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಸೋಮವಾರ ನಿಧನರಾಗಿದ್ದಾರೆ. ಇವರ ಸಾವಿಗೆ ಸಂತಾಪ ಸೂಚಿಸಿರುವ ಗಂಭೀರ್​, 'ನಿಮ್ಮ ಅಪಾರ ಸೇವೆಯನ್ನು ರಾಷ್ಟ್ರ ಸದಾ ನೆನೆಪಿನಲ್ಲಿಟ್ಟುಕೊಳ್ಳುತ್ತದೆ' ಎಂದಿದ್ದಾರೆ.

ಪ್ರಣಬ್​ ಅವರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ವೈರಸ್ ಪಾಸಿಟಿವ್ ಎಂಬುದು ಬಳಿಕ ತಿಳಿದುಬಂದಿತ್ತು. ಮುಖರ್ಜಿ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಂತರ ಕೆಲವು ದಿನಗಳಿಂದ ಕೋಮಕ್ಕೆ ಜಾರಿದ್ದರು. ಅವರು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಖಚಿತಪಡಿಸಿದ್ದರು.

  • Deeply saddened to hear about the demise of former President Shri Pranab Mukherjee. He belonged to the league of leaders respected & loved across the spectrum. May god give strength to his family & loves ones. The nation will remember his immense contributions forever! pic.twitter.com/aqsilNOOgb

    — Gautam Gambhir (@GautamGambhir) August 31, 2020 " class="align-text-top noRightClick twitterSection" data=" ">

ಭಾರತ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದರಾಗಿರುವ ಗೌತಮ್​ ಗಂಭೀರ್​, " ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರು ಪಕ್ಷಾತೀತವಾಗಿ ಗೌರವಿಸಲ್ಪಟ್ಟ ಮತ್ತು ಪ್ರೀತಿಸಿದ ನಾಯಕರ ಗುಂಪಿಗೆ ಸೇರಿದವರು. ದೇವರು ಅವರ ಕುಟುಂಬಕ್ಕೆ ಮತ್ತು ಪ್ರೀತಿಪಾತ್ರರಿಗೆ ದುಃಖವನ್ನು ತಡೆಯುವ ಬಲವನ್ನು ನೀಡಲಿ. ಅವರ ಅಪಾರ ಕೊಡುಗೆಗಳನ್ನು ರಾಷ್ಟ್ರ ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ" ಎಂದು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

  • The nation has lost a brilliant leader. Saddened to hear about the passing of Shri Pranab Mukherjee. My sincere condolences to his family. 🙏🏼

    — Virat Kohli (@imVkohli) August 31, 2020 " class="align-text-top noRightClick twitterSection" data=" ">

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ದೇಶ ಒಬ್ಬ ಒಬ್ಬ ಅದ್ಭುತ ನಾಯಕನನ್ನು ಕಳೆದುಕೊಂಡಿದೆ. ಪ್ರಣಬ್​ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇವರಲ್ಲದೆ ರೋಹಿತ್​ ಶರ್ಮಾ, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​, ಆರ್​ ಅಶ್ವಿನ್​, ವೃದ್ಧಿಮಾನ್ ಸಹಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಪ್ರಣಬ್​ ಮುಖರ್ಜಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • Rest in Peace #PranabMukherjee ji. An inspiring figure to the nation. My condolences are with his loved ones.

    — Rohit Sharma (@ImRo45) August 31, 2020 " class="align-text-top noRightClick twitterSection" data=" ">
  • My heartfelt condolences on the passing of Shri. #PranabMukherjee May his soul rest in peace. 🙏

    — Ashwin 🇮🇳 (@ashwinravi99) August 31, 2020 " class="align-text-top noRightClick twitterSection" data=" ">

ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾದಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಸೋಮವಾರ ನಿಧನರಾಗಿದ್ದಾರೆ. ಇವರ ಸಾವಿಗೆ ಸಂತಾಪ ಸೂಚಿಸಿರುವ ಗಂಭೀರ್​, 'ನಿಮ್ಮ ಅಪಾರ ಸೇವೆಯನ್ನು ರಾಷ್ಟ್ರ ಸದಾ ನೆನೆಪಿನಲ್ಲಿಟ್ಟುಕೊಳ್ಳುತ್ತದೆ' ಎಂದಿದ್ದಾರೆ.

ಪ್ರಣಬ್​ ಅವರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ವೈರಸ್ ಪಾಸಿಟಿವ್ ಎಂಬುದು ಬಳಿಕ ತಿಳಿದುಬಂದಿತ್ತು. ಮುಖರ್ಜಿ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಂತರ ಕೆಲವು ದಿನಗಳಿಂದ ಕೋಮಕ್ಕೆ ಜಾರಿದ್ದರು. ಅವರು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಖಚಿತಪಡಿಸಿದ್ದರು.

  • Deeply saddened to hear about the demise of former President Shri Pranab Mukherjee. He belonged to the league of leaders respected & loved across the spectrum. May god give strength to his family & loves ones. The nation will remember his immense contributions forever! pic.twitter.com/aqsilNOOgb

    — Gautam Gambhir (@GautamGambhir) August 31, 2020 " class="align-text-top noRightClick twitterSection" data=" ">

ಭಾರತ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದರಾಗಿರುವ ಗೌತಮ್​ ಗಂಭೀರ್​, " ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರು ಪಕ್ಷಾತೀತವಾಗಿ ಗೌರವಿಸಲ್ಪಟ್ಟ ಮತ್ತು ಪ್ರೀತಿಸಿದ ನಾಯಕರ ಗುಂಪಿಗೆ ಸೇರಿದವರು. ದೇವರು ಅವರ ಕುಟುಂಬಕ್ಕೆ ಮತ್ತು ಪ್ರೀತಿಪಾತ್ರರಿಗೆ ದುಃಖವನ್ನು ತಡೆಯುವ ಬಲವನ್ನು ನೀಡಲಿ. ಅವರ ಅಪಾರ ಕೊಡುಗೆಗಳನ್ನು ರಾಷ್ಟ್ರ ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ" ಎಂದು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

  • The nation has lost a brilliant leader. Saddened to hear about the passing of Shri Pranab Mukherjee. My sincere condolences to his family. 🙏🏼

    — Virat Kohli (@imVkohli) August 31, 2020 " class="align-text-top noRightClick twitterSection" data=" ">

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ದೇಶ ಒಬ್ಬ ಒಬ್ಬ ಅದ್ಭುತ ನಾಯಕನನ್ನು ಕಳೆದುಕೊಂಡಿದೆ. ಪ್ರಣಬ್​ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇವರಲ್ಲದೆ ರೋಹಿತ್​ ಶರ್ಮಾ, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​, ಆರ್​ ಅಶ್ವಿನ್​, ವೃದ್ಧಿಮಾನ್ ಸಹಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಪ್ರಣಬ್​ ಮುಖರ್ಜಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • Rest in Peace #PranabMukherjee ji. An inspiring figure to the nation. My condolences are with his loved ones.

    — Rohit Sharma (@ImRo45) August 31, 2020 " class="align-text-top noRightClick twitterSection" data=" ">
  • My heartfelt condolences on the passing of Shri. #PranabMukherjee May his soul rest in peace. 🙏

    — Ashwin 🇮🇳 (@ashwinravi99) August 31, 2020 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.