ETV Bharat / sports

2013 ರಲ್ಲಿ ನಿರಂತರವಾಗಿ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡಿದೆ: ಶ್ರೀಶಾಂತ್ - 2013 ರ ಇಂಡಿಯನ್ ಪ್ರೀಮಿಯರ್ ಲೀಗ್

ಇದು ನಾನು 2013 ರಲ್ಲಿ ನಿರಂತರವಾಗಿ ಹೋರಾಡುತ್ತಿದ್ದ ಸಂಗತಿಯಾಗಿದೆ. ನಿರಂತರವಾಗಿ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡಿದೆ ಎಂದು ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್ ಹೇಳಿದರು.

ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
author img

By

Published : Jun 21, 2020, 11:34 PM IST

ಕೊಚ್ಚಿ: ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್ ಅವರು 2013 ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಬೆಚ್ಚಿಬೀಳಿಸಿದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 2013 ರ ಆಗಸ್ಟ್​ನಲ್ಲಿ ಬಿಸಿಸಿಐನಿಂದ ಜೀವಾವಧಿ ನಿಷೇಧಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದವು ಎಂದು ಅವರು ಬಹಿರಂಗಪಡಿಸಿದರು.

ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್

2015 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿತು. ತನ್ನ ಜೀವನದಲ್ಲಿ ಆ ಕರಾಳ ಹಂತದಲ್ಲಿ ಆತ್ಮಹತ್ಯಾ ಆಲೋಚನೆಗಳ ವಿರುದ್ಧ ತೀವ್ರವಾಗಿ ಹೋರಾಡಿದೆನೆಂದು ಈಗ ಹೇಳಿದರು..

"ಇದು ನಾನು 2013 ರಲ್ಲಿ ನಿರಂತರವಾಗಿ ಹೋರಾಡುತ್ತಿದ್ದ ಸಂಗತಿಯಾಗಿದೆ. ನಿರಂತರವಾಗಿ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡಿದೆ. ಆದರೆ ನನ್ನ ಕುಟುಂಬವು ನನ್ನನ್ನು ವಿವೇಕದಿಂದ ಇಟ್ಟುಕೊಂಡಿತ್ತು. ನನ್ನ ಕುಟುಂಬಕ್ಕಾಗಿ ನಾನು ಬದುಕುಳಿಯಲೂ ಇಚ್ಛಿಸಿದೆ. ಅವರು ನನಗೆ ಬೇಕು ಎಂದು ನನಗೆ ತಿಳಿದಿತ್ತು" ಎಂದು ಶ್ರೀಶಾಂತ್ ಹೇಳಿದರು.

ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್

ಇತ್ತೀಚೆಗೆ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಉತ್ತಮ ಸ್ನೇಹಿತ. ಅದಕ್ಕಾಗಿಯೇ ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ನಾನು ಆ ಅಂಚಿನಲ್ಲಿದ್ದೆ. ನಾನು ಒಂದು ಸಣ್ಣ ಪುಸ್ತಕವನ್ನು ಬರೆಯುತ್ತಿದ್ದೇನೆ. ಅದು ಒಂದು ತಿಂಗಳಲ್ಲಿ ಹೊರಬರಲಿದೆ. ಈ ಪ್ರಸಂಗದ ಬಗ್ಗೆ ಮತ್ತು ನೀವು ಹೇಗೆ ಒಂಟಿಯಾಗಿಲ್ಲ ಎಂಬುದರ ಬಗ್ಗೆ ಬರೆಯುತ್ತಿರುವೆ. ನೀವು ಏಕಾಂಗಿಯಾಗಿದ್ದರೆ ಅದು ಕೆಟ್ಟ ವಿಷಯವಲ್ಲ ಏಕೆಂದರೆ ಒಂಟಿತನದ ಈ ಸ್ಥಳದಿಂದ ದೊಡ್ಡ ವಿಷಯಗಳು ಬರಬಹುದು ಎಂದರು.

ಕೊಚ್ಚಿ: ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್ ಅವರು 2013 ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಬೆಚ್ಚಿಬೀಳಿಸಿದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 2013 ರ ಆಗಸ್ಟ್​ನಲ್ಲಿ ಬಿಸಿಸಿಐನಿಂದ ಜೀವಾವಧಿ ನಿಷೇಧಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದವು ಎಂದು ಅವರು ಬಹಿರಂಗಪಡಿಸಿದರು.

ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್

2015 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿತು. ತನ್ನ ಜೀವನದಲ್ಲಿ ಆ ಕರಾಳ ಹಂತದಲ್ಲಿ ಆತ್ಮಹತ್ಯಾ ಆಲೋಚನೆಗಳ ವಿರುದ್ಧ ತೀವ್ರವಾಗಿ ಹೋರಾಡಿದೆನೆಂದು ಈಗ ಹೇಳಿದರು..

"ಇದು ನಾನು 2013 ರಲ್ಲಿ ನಿರಂತರವಾಗಿ ಹೋರಾಡುತ್ತಿದ್ದ ಸಂಗತಿಯಾಗಿದೆ. ನಿರಂತರವಾಗಿ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡಿದೆ. ಆದರೆ ನನ್ನ ಕುಟುಂಬವು ನನ್ನನ್ನು ವಿವೇಕದಿಂದ ಇಟ್ಟುಕೊಂಡಿತ್ತು. ನನ್ನ ಕುಟುಂಬಕ್ಕಾಗಿ ನಾನು ಬದುಕುಳಿಯಲೂ ಇಚ್ಛಿಸಿದೆ. ಅವರು ನನಗೆ ಬೇಕು ಎಂದು ನನಗೆ ತಿಳಿದಿತ್ತು" ಎಂದು ಶ್ರೀಶಾಂತ್ ಹೇಳಿದರು.

ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್
ಫಾಸ್ಟ್ ಬೌಲರ್ ಎಸ್. ಶ್ರೀಶಾಂತ್

ಇತ್ತೀಚೆಗೆ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಉತ್ತಮ ಸ್ನೇಹಿತ. ಅದಕ್ಕಾಗಿಯೇ ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ನಾನು ಆ ಅಂಚಿನಲ್ಲಿದ್ದೆ. ನಾನು ಒಂದು ಸಣ್ಣ ಪುಸ್ತಕವನ್ನು ಬರೆಯುತ್ತಿದ್ದೇನೆ. ಅದು ಒಂದು ತಿಂಗಳಲ್ಲಿ ಹೊರಬರಲಿದೆ. ಈ ಪ್ರಸಂಗದ ಬಗ್ಗೆ ಮತ್ತು ನೀವು ಹೇಗೆ ಒಂಟಿಯಾಗಿಲ್ಲ ಎಂಬುದರ ಬಗ್ಗೆ ಬರೆಯುತ್ತಿರುವೆ. ನೀವು ಏಕಾಂಗಿಯಾಗಿದ್ದರೆ ಅದು ಕೆಟ್ಟ ವಿಷಯವಲ್ಲ ಏಕೆಂದರೆ ಒಂಟಿತನದ ಈ ಸ್ಥಳದಿಂದ ದೊಡ್ಡ ವಿಷಯಗಳು ಬರಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.