ETV Bharat / sports

ಕೊನೆಯ 3 ಎಸೆತದಲ್ಲಿ 15 ರನ್​ ಸಿಡಿಸಿದ ಸೋಲಂಕಿ : ಸೆಮಿಫೈನಲ್​ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!

author img

By

Published : Jan 27, 2021, 4:38 PM IST

3ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿಷ್ಣು ಸೋಲಂಕಿ ಕೊನೆಯ 3 ಎಸೆತದಲ್ಲಿ ಅಗತ್ಯವಿದ್ದ 15 ರನ್​ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಹರಿಯಾಣ ವಿರುದ್ಧ ಬರೋಡ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಲು ನೆರವಾದರು..

ಸಯ್ಯದ್ ಮುಷ್ತಾಕ್ ಅಲಿ  ಕ್ವಾರ್ಟರ್​ ಫೈನಲ್
ಹರಿಯಾಣ vs ಬರೋಡ

ಅಹ್ಮದಾಬಾದ್​ : ಸಯ್ಯದ್ ಮುಷ್ತಾಕ್​ ಅಲಿ ಟಿ20 ಟ್ರೋಫಿಯ ಕ್ವಾರ್ಟರ್​ ಫೈನಲ್​ನಲ್ಲಿ ಕೊನೆಯ ಓವರ್​ನಲ್ಲಿ ಅಗತ್ಯವಿದ್ದ 18 ರನ್​ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಬರೋಡ ತಂಡ ಸೆಮಿಫೈನಲ್ ಪ್ರವೇಶಿಸಿದೆ.

3ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿಷ್ಣು ಸೋಲಂಕಿ ಕೊನೆಯ 3 ಎಸೆತದಲ್ಲಿ ಅಗತ್ಯವಿದ್ದ 15 ರನ್​ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಹರಿಯಾಣ ವಿರುದ್ಧ ಬರೋಡ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಲು ನೆರವಾದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 148 ರನ್​ಗಳಿಸಿತ್ತು. ಹಿಮಾಂಶು ರಾಣಾ 49, ಶಿವಂ ಚೌಹಾಣ್ 35, ಸ್ಮಿತ್ ಕುಮಾರ್​ 29 ಹಾಗೂ ಚೈತನ್ಯ ಬಿಷ್ನೋಯ್​ 21 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಬರೋಡ ಪರ ಕಾರ್ತಿಕ್ ಕಾಕಡೆ 2, ಬಿ.ಪಠಾಣ್ ಮತ್ತು ಅತಿತ್​ ಶೇಠ್​ ತಲಾ ಒಂದು ವಿಕೆಟ್ ಪಡೆದಿದ್ದರು.

149 ರನ್​ಗಳ ಗುರಿ ಪಡೆದ ಬರೋಡ ಆರಂಭದಿಂದಲೂ ನಿಧಾನಗತಿ ಆಟಕ್ಕೆ ಮೊರೆ ಹೋಯಿತು. ನಾಯಕ ಕೇದಾರ್ ದೇವಧರ್​​ ಮತ್ತು ಸ್ಮಿತ್ ಪಟೇಲ್(21)​ ಮೊದಲ ವಿಕೆಟ್​ಗೆ 33 ರನ್​ ಸೇರಿಸಿದರು. ಆದರೆ, 6ನೇ ಓವರ್​ನಲ್ಲಿ ಕಣಕ್ಕಿಳಿದ ಚಹಾಲ್​, ಪಟೇಲ್ ವಿಕೆಟ್​ ಪಡೆದು ಮೇಡನ್ ಓವರ್​ ಸಾಧಿಸಿದರು.

ನಂತರ ನಾಯಕನ ಜೊತೆ ಸೇರಿದ ವಿಷ್ಣು ಸೋಲಂಕಿ 2ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 43 ರನ್​ಗಳಿಸಿದ್ದ ದೇವಧರ್ ಔಟಾದ ನಂತರ ಬರೋಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಗೆಲ್ಲಲು ಕೊನೆಯ 4 ಓವರ್​ಗಳಲ್ಲಿ ​42 ರನ್​ಗಳಿಸಬೇಕಾಗಿತ್ತು.

3 ಓವರ್​ಗಳಲ್ಲಿ 24 ರನ್​ಗಳಿಸಿದ ಸೋಲಂಕಿ ಮತ್ತು ರಜಪೂತ್​ ಜೋಡಿಗೆ ಕೊನೆಯ ಓವರ್​ನಲ್ಲಿ 18 ರನ್​ಗಳಿಸಬೇಕಾದ ಅನಿವಾರ್ಯತೆ ಎದುರಾಯಿತು. ಮೊದಲ ಮೂರು ಎಸೆತಗಳಲ್ಲಿ 3 ಸಿಂಗಲ್ಸ್​ ಬಂದವು. ಆದರೆ, ವಿಷ್ಣು ಸೋಲಂಕಿ ಕೊನೆಯ ಮೂರು ಎಸೆತದಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಬರೋಡ ತಂಡ ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಸವಾಲನ್ನು ಎದುರಿಸಲಿದೆ.

ಇದನ್ನು ಓದಿ:ಎದೆ ನೋವು: ಮತ್ತೆ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಗಂಗೂಲಿ

ಅಹ್ಮದಾಬಾದ್​ : ಸಯ್ಯದ್ ಮುಷ್ತಾಕ್​ ಅಲಿ ಟಿ20 ಟ್ರೋಫಿಯ ಕ್ವಾರ್ಟರ್​ ಫೈನಲ್​ನಲ್ಲಿ ಕೊನೆಯ ಓವರ್​ನಲ್ಲಿ ಅಗತ್ಯವಿದ್ದ 18 ರನ್​ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಬರೋಡ ತಂಡ ಸೆಮಿಫೈನಲ್ ಪ್ರವೇಶಿಸಿದೆ.

3ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿಷ್ಣು ಸೋಲಂಕಿ ಕೊನೆಯ 3 ಎಸೆತದಲ್ಲಿ ಅಗತ್ಯವಿದ್ದ 15 ರನ್​ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಹರಿಯಾಣ ವಿರುದ್ಧ ಬರೋಡ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಲು ನೆರವಾದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 148 ರನ್​ಗಳಿಸಿತ್ತು. ಹಿಮಾಂಶು ರಾಣಾ 49, ಶಿವಂ ಚೌಹಾಣ್ 35, ಸ್ಮಿತ್ ಕುಮಾರ್​ 29 ಹಾಗೂ ಚೈತನ್ಯ ಬಿಷ್ನೋಯ್​ 21 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಬರೋಡ ಪರ ಕಾರ್ತಿಕ್ ಕಾಕಡೆ 2, ಬಿ.ಪಠಾಣ್ ಮತ್ತು ಅತಿತ್​ ಶೇಠ್​ ತಲಾ ಒಂದು ವಿಕೆಟ್ ಪಡೆದಿದ್ದರು.

149 ರನ್​ಗಳ ಗುರಿ ಪಡೆದ ಬರೋಡ ಆರಂಭದಿಂದಲೂ ನಿಧಾನಗತಿ ಆಟಕ್ಕೆ ಮೊರೆ ಹೋಯಿತು. ನಾಯಕ ಕೇದಾರ್ ದೇವಧರ್​​ ಮತ್ತು ಸ್ಮಿತ್ ಪಟೇಲ್(21)​ ಮೊದಲ ವಿಕೆಟ್​ಗೆ 33 ರನ್​ ಸೇರಿಸಿದರು. ಆದರೆ, 6ನೇ ಓವರ್​ನಲ್ಲಿ ಕಣಕ್ಕಿಳಿದ ಚಹಾಲ್​, ಪಟೇಲ್ ವಿಕೆಟ್​ ಪಡೆದು ಮೇಡನ್ ಓವರ್​ ಸಾಧಿಸಿದರು.

ನಂತರ ನಾಯಕನ ಜೊತೆ ಸೇರಿದ ವಿಷ್ಣು ಸೋಲಂಕಿ 2ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 43 ರನ್​ಗಳಿಸಿದ್ದ ದೇವಧರ್ ಔಟಾದ ನಂತರ ಬರೋಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಗೆಲ್ಲಲು ಕೊನೆಯ 4 ಓವರ್​ಗಳಲ್ಲಿ ​42 ರನ್​ಗಳಿಸಬೇಕಾಗಿತ್ತು.

3 ಓವರ್​ಗಳಲ್ಲಿ 24 ರನ್​ಗಳಿಸಿದ ಸೋಲಂಕಿ ಮತ್ತು ರಜಪೂತ್​ ಜೋಡಿಗೆ ಕೊನೆಯ ಓವರ್​ನಲ್ಲಿ 18 ರನ್​ಗಳಿಸಬೇಕಾದ ಅನಿವಾರ್ಯತೆ ಎದುರಾಯಿತು. ಮೊದಲ ಮೂರು ಎಸೆತಗಳಲ್ಲಿ 3 ಸಿಂಗಲ್ಸ್​ ಬಂದವು. ಆದರೆ, ವಿಷ್ಣು ಸೋಲಂಕಿ ಕೊನೆಯ ಮೂರು ಎಸೆತದಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಬರೋಡ ತಂಡ ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಸವಾಲನ್ನು ಎದುರಿಸಲಿದೆ.

ಇದನ್ನು ಓದಿ:ಎದೆ ನೋವು: ಮತ್ತೆ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.