ETV Bharat / sports

ವಾರ್ನರ್​ ಕೈಬಿಟ್ಟ ಹೈದರಾಬಾದ್​​:'Chapter closed' ಎಂದು ಟ್ವೀಟ್ ಮಾಡಿದ ಸ್ಫೋಟಕ ಬ್ಯಾಟರ್​!

author img

By

Published : Dec 1, 2021, 5:37 PM IST

2016ರಿಂದಲೂ ಸನ್​​ರೈಸರ್ಸ್​ ಹೈದರಾಬಾದ್​ ತಂಡದ ಖಾಯಂ ಸದಸ್ಯರಾಗಿದ್ದ ಡೇವಿಡ್​ ವಾರ್ನರ್​​ಗೆ ಇದೀಗ ಕೊಕ್​ ನೀಡಲಾಗಿದ್ದು, ಮುಂದಿನ ಆವೃತ್ತಿಯಿಂದ ಸ್ಫೋಟಕ ಬ್ಯಾಟರ್ ಬೇರೆ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತಗೊಂಡಿದೆ. ಫ್ರಾಂಚೈಸಿ ಇವರನ್ನ ಕೈಬಿಡುತ್ತಿದ್ದಂತೆ ಟ್ವೀಟ್​ ಮಾಡಿದ್ದಾರೆ.

David Warner release by Hyderabad
David Warner release by Hyderabad

ಹೈದರಾಬಾದ್​: 2021ರ ಇಂಡಿಯನ್​ ಪ್ರೀಮಿಯರ್ ಲೀಗ್​ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ಡೇವಿಡ್​​ ವಾರ್ನರ್​ಗೆ ಸಂತೋಷಕ್ಕಿಂತಲೂ ದುಃಖವನ್ನೇ ಹೆಚ್ಚಾಗಿ ನೀಡಿದೆ. ಕಾರಣವಿಲ್ಲದೇ ನಾಯಕತ್ವ ಕಿತ್ತುಕೊಳ್ಳುವುದರ ಜೊತೆಗೆ ಆಡುವ 11ರ ಬಳಗದಿಂದಲೂ ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಈಗಾಗಲೇ ಅನೇಕ ಸಲ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ವಾರ್ನರ್​​ಗೆ ಇದೀಗ ಫ್ರಾಂಚೈಸಿ ತಂಡದಿಂದ ಕೊಕ್ ನೀಡಿದೆ.

2016ರಿಂದಲೂ ಸನ್​​ರೈಸರ್ಸ್​ ಹೈದರಾಬಾದ್​​ ತಂಡದಲ್ಲಿದ್ದ ವಾರ್ನರ್​​ ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ, ಗೆಲುವಿನ ದಡ ಸೇರಿಸಿದ್ದರು. ಇದರ ಜೊತೆಗೆ ತಂಡ ಚಾಂಪಿಯನ್​​​​​​​ ಆಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಿದ್ದರು. ಆದರೆ ಈ ಸಲ ಭಾರತದಲ್ಲಿ ನಡೆದ ಟೂರ್ನಿಯಲ್ಲಿ ವಾರ್ನರ್​​ ವಿಫಲಗೊಳ್ಳುತ್ತಿದ್ದಂತೆ ನಾಯಕತ್ವ ಜವಾಬ್ದಾರಿ ಹಾಗೂ ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು.

2022ರ ಐಪಿಎಲ್​​ಗೋಸ್ಕರ ತಮ್ಮಿಷ್ಟದ ಕೆಲ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ನಿನ್ನೆ ಕೊನೆಯ ದಿನವಾಗಿದ್ದರಿಂದ ಹೈದರಾಬಾದ್​ ಕೇನ್​ ವಿಲಿಯಮ್ಸನ್​​, ಅಬ್ದುಲ್​ ಸಮದ್​​ ಹಾಗೂ ಉಮ್ರಾನ್​ ಮಲಿಕ್​ಗೆ ಉಳಿಸಿಕೊಂಡು, ಡೇವಿಡ್​​ ವಾರ್ನರ್​, ರಾಶೀದ್ ಖಾನ್​​ ಹಾಗೂ ಬೈರ್​​ಸ್ಟೋ ರಂತಹ ಪ್ಲೇಯರ್ಸ್​ಗೆ ಕೈಬಿಟ್ಟಿದೆ.

ಇದನ್ನೂ ಓದಿರಿ: 'See You On The Other Side' : ಪಂಜಾಬ್​​ ಕಿಂಗ್ಸ್​​​ನಿಂದ ಬೇರ್ಪಟ್ಟ ಕೆ ಎಲ್ ರಾಹುಲ್​ ಮೊದಲ ಟ್ವೀಟ್​​

ತಮ್ಮನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ವಾರ್ನರ್​, Chapter closed!! ಎಲ್ಲರಿಗೂ ಧನ್ಯವಾದಗಳು. ತಂಡದಲ್ಲಿದ್ದಾಗ ನನಗೆ ನೀಡಿರುವ ಬೆಂಬಲಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಹೈದರಾಬಾದ್​: 2021ರ ಇಂಡಿಯನ್​ ಪ್ರೀಮಿಯರ್ ಲೀಗ್​ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ಡೇವಿಡ್​​ ವಾರ್ನರ್​ಗೆ ಸಂತೋಷಕ್ಕಿಂತಲೂ ದುಃಖವನ್ನೇ ಹೆಚ್ಚಾಗಿ ನೀಡಿದೆ. ಕಾರಣವಿಲ್ಲದೇ ನಾಯಕತ್ವ ಕಿತ್ತುಕೊಳ್ಳುವುದರ ಜೊತೆಗೆ ಆಡುವ 11ರ ಬಳಗದಿಂದಲೂ ಕೈಬಿಡಲಾಗಿತ್ತು. ಇದೇ ವಿಚಾರವಾಗಿ ಈಗಾಗಲೇ ಅನೇಕ ಸಲ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ವಾರ್ನರ್​​ಗೆ ಇದೀಗ ಫ್ರಾಂಚೈಸಿ ತಂಡದಿಂದ ಕೊಕ್ ನೀಡಿದೆ.

2016ರಿಂದಲೂ ಸನ್​​ರೈಸರ್ಸ್​ ಹೈದರಾಬಾದ್​​ ತಂಡದಲ್ಲಿದ್ದ ವಾರ್ನರ್​​ ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ, ಗೆಲುವಿನ ದಡ ಸೇರಿಸಿದ್ದರು. ಇದರ ಜೊತೆಗೆ ತಂಡ ಚಾಂಪಿಯನ್​​​​​​​ ಆಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಿದ್ದರು. ಆದರೆ ಈ ಸಲ ಭಾರತದಲ್ಲಿ ನಡೆದ ಟೂರ್ನಿಯಲ್ಲಿ ವಾರ್ನರ್​​ ವಿಫಲಗೊಳ್ಳುತ್ತಿದ್ದಂತೆ ನಾಯಕತ್ವ ಜವಾಬ್ದಾರಿ ಹಾಗೂ ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು.

2022ರ ಐಪಿಎಲ್​​ಗೋಸ್ಕರ ತಮ್ಮಿಷ್ಟದ ಕೆಲ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ನಿನ್ನೆ ಕೊನೆಯ ದಿನವಾಗಿದ್ದರಿಂದ ಹೈದರಾಬಾದ್​ ಕೇನ್​ ವಿಲಿಯಮ್ಸನ್​​, ಅಬ್ದುಲ್​ ಸಮದ್​​ ಹಾಗೂ ಉಮ್ರಾನ್​ ಮಲಿಕ್​ಗೆ ಉಳಿಸಿಕೊಂಡು, ಡೇವಿಡ್​​ ವಾರ್ನರ್​, ರಾಶೀದ್ ಖಾನ್​​ ಹಾಗೂ ಬೈರ್​​ಸ್ಟೋ ರಂತಹ ಪ್ಲೇಯರ್ಸ್​ಗೆ ಕೈಬಿಟ್ಟಿದೆ.

ಇದನ್ನೂ ಓದಿರಿ: 'See You On The Other Side' : ಪಂಜಾಬ್​​ ಕಿಂಗ್ಸ್​​​ನಿಂದ ಬೇರ್ಪಟ್ಟ ಕೆ ಎಲ್ ರಾಹುಲ್​ ಮೊದಲ ಟ್ವೀಟ್​​

ತಮ್ಮನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ವಾರ್ನರ್​, Chapter closed!! ಎಲ್ಲರಿಗೂ ಧನ್ಯವಾದಗಳು. ತಂಡದಲ್ಲಿದ್ದಾಗ ನನಗೆ ನೀಡಿರುವ ಬೆಂಬಲಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.