ETV Bharat / sitara

ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ರವಿ ಬೆಳಗೆರೆ... ಹೇಳಿ ಹೋದ್ರು ಕಾರಣ!

author img

By

Published : Oct 14, 2019, 9:11 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ 7ನೇ ಅವೃತ್ತಿಯ ಎರಡನೇ ಸ್ಪರ್ಧಿಯಾಗಿ ಹಿರಿಯ ಪತ್ರಕರ್ತ ರವಿಬೆಳಗೆರೆ ಎಂಟ್ರಿ ಕೊಟ್ಟಾಗಿದೆ. ಅದ್ರೆ ಈ ಪತ್ರಕರ್ತ ಬಿಗ್​ಬಾಸ್​​ಗೆ ಹೋಗಿದ್ದಾದರೂ ಯಾಕೆ ಎಂಬ ಅಂಶವನ್ನು ತಮ್ಮ ಲ್ಯಾಪ್​​ಟಾಪ್​ನಲ್ಲಿ ಟೈಪ್ ಮಾಡಿ ಹೋಗಿದ್ದಾರೆ. ಅದರ ಸಂಪೂರ್ಣ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಕಾಂಟ್ರವರ್ಸಿ ಪತ್ರಕರ್ತ

ಕನ್ನಡ ಕಿರುತೆರೆಯ ಅತ್ಯುತ್ತಮ ವಾಹಿನಿ ಎನಿಸಿಕೊಂಡಿರುವ ಕಲರ್ಸ್ ಕನ್ನಡ ಈ ಬಾರಿಯೂ ಬಿಗ್​ಬಾಸ್ - 7ನೇ ಸೀಸನ್ ಆರಂಭಿಸಿದೆ. ಉಳಿದೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್​​ಬಾಸ್ ಭಾರತದ ಬಹುತೇಕ ಭಾಷೆಗಳಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಅಂದಾಜಿನ ಪ್ರಕಾರ ಬಿಗ್​ಬಾಸ್ ಶೋ ಪ್ರತಿನಿತ್ಯ ಒಂದು ಕೋಟಿ ವೀಕ್ಷಕರನ್ನು ತಲುಪುತ್ತದೆ. ನಿಮಗೆ ಗೊತ್ತಿರುವಂತೆ ನಾನು ಟಿವಿ ನೋಡುವುದಿಲ್ಲ. ನಾನೇ ನಟಿಸಿದ ಒಂದಷ್ಟು ಸಿನಿಮಾಗಳನ್ನು ನಾನೇ ನೋಡಿಲ್ಲ. ಅವೆರಡೂ ನನ್ನ ಪಾಲಿಗೆ ಆನ್​ ಇಂಟ್ರೆಸ್ಟಿಂಗ್​. ನನ್ನದೇನಿದ್ದರೂ ಅಕ್ಷರ ಉಂಟು, ಪುಸ್ತಕ ಉಂಟು. ಆ ಪ್ರೀತಿಯಿಂದಲೇ ನಾನು ಇಪ್ಪತ್ತೈದು ವರ್ಷ ಅವಿಚ್ಛಿನ್ನವಾಗಿ ‘ಹಾಯ್ ಬೆಂಗಳೂರ್!’ ಪತ್ರಿಕೆ ನಡೆಸಿದೆ. ಅದು ನನಗೆ ಅನ್ನ ಕೊಟ್ಟಿತು. ಆತ್ಮ ಸಮಾಧಾನ ಕೊಟ್ಟಿತು ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ ನನ್ನ ಅನೇಕ ವರ್ಷಗಳ ಕನಸಾದ ‘ಓ ಮನಸೇ’ ಪಾಕ್ಷಿಕವನ್ನು ಆರಂಭಿಸಿದೆ. ಈ ತೆರನಾದ ಪತ್ರಿಕೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗುತ್ತದೋ ಎಂಬ ಆತಂಕವಿತ್ತು. ಇವತ್ತಿಗು ಆದು 155 ಸಂಚಿಕೆ ದಾಟಿ ಕನ್ನಡದ ಮನೆ ಮಾತಾಗಿದೆ. ಇವತ್ತು ಅದನ್ನು ಪ್ರತಿಯೊಬ್ಬರು ಸಂತೋಷದಿಂದ ಆತ್ಮವಿಶ್ವಾಸಕ್ಕಾಗಿ ಓದುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ರವಿ ಅಜ್ಜೀಪುರ ಅದರ ಸಂಪಾದಕತ್ವವನ್ನು ತುಂಬ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ನನಗೆ ಬಿಗ್​ಬಾಸ್ ಬೇಕಾಗಿತ್ತಾ? ಎಂಬುದು ನನ್ನ ಪ್ರಶ್ನೆ ಎಂದು ಬರೆದಿದ್ದಾರೆ.

ಇನ್ನು ಬಿಗ್​ಬಾಸ್ ಮನೆಗೆ ಹೋಗುವ ಕುರಿತು, ನನ್ನ ಯುವ ಮಿತ್ರ ಹಾಗೂ ಕ್ರಿಯಾಶೀಲ ಯುವಕ ಕಲರ್ಸ್ ವಾಹಿನಿಯನ್ನು ತುಂಬ ಯಶಸ್ವಿಯಾಗಿ ನಡೆಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಬಂದು ಅಕ್ಕರೆಯಿಂದ ನಮ್ಮ ‘ಬಿಗ್​ಬಾಸ್’ ರಿಯಾಲಿಟಿ ಶೋಗೆ ನೀವೇಕೆ ಬರಬಾರದು? ಅಂದರು. ನನ್ನನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಸಿಬ್ಬಂದಿ ಮತ್ತು ಗೆಳೆಯರು ‘ಬಾಸ್’ ಅಂತಲೇ ಕರೆಯುತ್ತಾರೆ. ಈಗೊಮ್ಮೆ ‘ಬಿಗ್​ಬಾಸ್’ ಆಗಿ ನೋಡಿ ಅಂತ ಪರಂ​ ನಕ್ಕರು. ಯಾಕೋ ಇಲ್ಲವೆನ್ನಲಾಗಲಿಲ್ಲ. ಅಲ್ಲಿ ದಿನಗಟ್ಟಲೆ ನ್ಯೂಸ್ ಪೇಪರ್ ಸಿಗುವುದಿಲ್ಲ, ಕಾಫಿ ಸಿಗುವುದಿಲ್ಲ, ಪೀಡೆಯಂತಹ ಮೊಬೈಲ್ ಸಿಗುವುದಿಲ್ಲ. ಒಂದಷ್ಟು ದಿನ ನನಗೆ ಪರಿಚಯವೇ ಇಲ್ಲದ ‘ಸೆಲೆಬ್ರಿಟಿಗಳ’ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವ ಅವಕಾಶ ನನಗೆ ದೊರೆತಿದೆ. ಪರಂ ಆಗ್ರಹಕ್ಕೆ ಇಲ್ಲವೆನ್ನಲಾಗದೆ ಬಿಗ್​ಬಾಸ್ ಮನೆಗೆ ಹೋಗುತ್ತಿದ್ದೇನೆ. ಒಂದು ಮಾತಿನ ಪ್ರಕಾರ 'ಬಾಸ್​ ಈಜ್​ ಆಲ್​ವೇಸ್​ ರೈಟ್'​ ಎಂದಿನಂತೆ ನಿಮ್ಮ ಹಾರೈಕೆ ಇರಲಿ. -ರವಿ ಬೆಳಗೆರೆ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಕಿರುತೆರೆಯ ಅತ್ಯುತ್ತಮ ವಾಹಿನಿ ಎನಿಸಿಕೊಂಡಿರುವ ಕಲರ್ಸ್ ಕನ್ನಡ ಈ ಬಾರಿಯೂ ಬಿಗ್​ಬಾಸ್ - 7ನೇ ಸೀಸನ್ ಆರಂಭಿಸಿದೆ. ಉಳಿದೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್​​ಬಾಸ್ ಭಾರತದ ಬಹುತೇಕ ಭಾಷೆಗಳಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಅಂದಾಜಿನ ಪ್ರಕಾರ ಬಿಗ್​ಬಾಸ್ ಶೋ ಪ್ರತಿನಿತ್ಯ ಒಂದು ಕೋಟಿ ವೀಕ್ಷಕರನ್ನು ತಲುಪುತ್ತದೆ. ನಿಮಗೆ ಗೊತ್ತಿರುವಂತೆ ನಾನು ಟಿವಿ ನೋಡುವುದಿಲ್ಲ. ನಾನೇ ನಟಿಸಿದ ಒಂದಷ್ಟು ಸಿನಿಮಾಗಳನ್ನು ನಾನೇ ನೋಡಿಲ್ಲ. ಅವೆರಡೂ ನನ್ನ ಪಾಲಿಗೆ ಆನ್​ ಇಂಟ್ರೆಸ್ಟಿಂಗ್​. ನನ್ನದೇನಿದ್ದರೂ ಅಕ್ಷರ ಉಂಟು, ಪುಸ್ತಕ ಉಂಟು. ಆ ಪ್ರೀತಿಯಿಂದಲೇ ನಾನು ಇಪ್ಪತ್ತೈದು ವರ್ಷ ಅವಿಚ್ಛಿನ್ನವಾಗಿ ‘ಹಾಯ್ ಬೆಂಗಳೂರ್!’ ಪತ್ರಿಕೆ ನಡೆಸಿದೆ. ಅದು ನನಗೆ ಅನ್ನ ಕೊಟ್ಟಿತು. ಆತ್ಮ ಸಮಾಧಾನ ಕೊಟ್ಟಿತು ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ ನನ್ನ ಅನೇಕ ವರ್ಷಗಳ ಕನಸಾದ ‘ಓ ಮನಸೇ’ ಪಾಕ್ಷಿಕವನ್ನು ಆರಂಭಿಸಿದೆ. ಈ ತೆರನಾದ ಪತ್ರಿಕೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗುತ್ತದೋ ಎಂಬ ಆತಂಕವಿತ್ತು. ಇವತ್ತಿಗು ಆದು 155 ಸಂಚಿಕೆ ದಾಟಿ ಕನ್ನಡದ ಮನೆ ಮಾತಾಗಿದೆ. ಇವತ್ತು ಅದನ್ನು ಪ್ರತಿಯೊಬ್ಬರು ಸಂತೋಷದಿಂದ ಆತ್ಮವಿಶ್ವಾಸಕ್ಕಾಗಿ ಓದುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ರವಿ ಅಜ್ಜೀಪುರ ಅದರ ಸಂಪಾದಕತ್ವವನ್ನು ತುಂಬ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ನನಗೆ ಬಿಗ್​ಬಾಸ್ ಬೇಕಾಗಿತ್ತಾ? ಎಂಬುದು ನನ್ನ ಪ್ರಶ್ನೆ ಎಂದು ಬರೆದಿದ್ದಾರೆ.

ಇನ್ನು ಬಿಗ್​ಬಾಸ್ ಮನೆಗೆ ಹೋಗುವ ಕುರಿತು, ನನ್ನ ಯುವ ಮಿತ್ರ ಹಾಗೂ ಕ್ರಿಯಾಶೀಲ ಯುವಕ ಕಲರ್ಸ್ ವಾಹಿನಿಯನ್ನು ತುಂಬ ಯಶಸ್ವಿಯಾಗಿ ನಡೆಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಬಂದು ಅಕ್ಕರೆಯಿಂದ ನಮ್ಮ ‘ಬಿಗ್​ಬಾಸ್’ ರಿಯಾಲಿಟಿ ಶೋಗೆ ನೀವೇಕೆ ಬರಬಾರದು? ಅಂದರು. ನನ್ನನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಸಿಬ್ಬಂದಿ ಮತ್ತು ಗೆಳೆಯರು ‘ಬಾಸ್’ ಅಂತಲೇ ಕರೆಯುತ್ತಾರೆ. ಈಗೊಮ್ಮೆ ‘ಬಿಗ್​ಬಾಸ್’ ಆಗಿ ನೋಡಿ ಅಂತ ಪರಂ​ ನಕ್ಕರು. ಯಾಕೋ ಇಲ್ಲವೆನ್ನಲಾಗಲಿಲ್ಲ. ಅಲ್ಲಿ ದಿನಗಟ್ಟಲೆ ನ್ಯೂಸ್ ಪೇಪರ್ ಸಿಗುವುದಿಲ್ಲ, ಕಾಫಿ ಸಿಗುವುದಿಲ್ಲ, ಪೀಡೆಯಂತಹ ಮೊಬೈಲ್ ಸಿಗುವುದಿಲ್ಲ. ಒಂದಷ್ಟು ದಿನ ನನಗೆ ಪರಿಚಯವೇ ಇಲ್ಲದ ‘ಸೆಲೆಬ್ರಿಟಿಗಳ’ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವ ಅವಕಾಶ ನನಗೆ ದೊರೆತಿದೆ. ಪರಂ ಆಗ್ರಹಕ್ಕೆ ಇಲ್ಲವೆನ್ನಲಾಗದೆ ಬಿಗ್​ಬಾಸ್ ಮನೆಗೆ ಹೋಗುತ್ತಿದ್ದೇನೆ. ಒಂದು ಮಾತಿನ ಪ್ರಕಾರ 'ಬಾಸ್​ ಈಜ್​ ಆಲ್​ವೇಸ್​ ರೈಟ್'​ ಎಂದಿನಂತೆ ನಿಮ್ಮ ಹಾರೈಕೆ ಇರಲಿ. -ರವಿ ಬೆಳಗೆರೆ ಎಂದು ಬರೆದುಕೊಂಡಿದ್ದಾರೆ.

Intro:ಕ್ಯಾಮರ ಸೆರಮನೆಗೆ ಎಂಟ್ರಿಕೊಟ್ಟಿದಕ್ಕೆ ರೀಸನ್ ಕೊಟ್ಟ ಕಾಂಟ್ರವರ್ಸಿ ಪತ್ರಕರ್ತ...ಎಕ್ಸುಕ್ಲೂಸಿವ್ ಸ್ಟೋರಿ..


ಅಭಿನಯ ಚಕ್ರವರ್ತಿ ಕಿಚ್ಚ‌ಸುದೀಪ್ ನಡೆಸಿಕೊಡುವ
ಬಿಗ್ ಬಾಸ್ ರಿಯಾಲಿಟಿ ಶೋ ೭ ನೇ ಅವೃತ್ತಿಯ
ಎರಡನೇ ಸ್ಪರ್ದಿಯಾಗಿ ಹೈಟೆಕ್ ಸೆರೆಮನೆಗೆ ಹಿರಿಯ ಪತ್ರಕರ್ತ ರವಿಬೆಳಗೆರೆ ಎಂಟ್ರಿ ಕೊಟ್ಟಾಗಿದೆ.ಇನ್ನೂ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಾರೆ ಎಂಬ ವಿಷಯವನ್ನು ಈ ಹಿಂದೆ ಈ ಟಿವಿ ಭಾರತ್ ಬ್ರೇಕ್ ಮಾಡಿತ್ತು.ಅದೇ ರೀತಿ‌ ಈಗ. ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ ಎಂಟ್ರಿಕೊಟ್ಟಾಗಿದ್ದು.ಕಂಟ್ರವರ್ಸ್ ಜರ್ನಲಿಸ್ಟ್ ಕ್ಯಾಮರಗಳ ಸೆರೆಮನೆಗೆ ಹೋಗಿದ್ದು ಯಾಕೆ ಎಂಬ ಅಂಶವನ್ನು ರವಿ ಬೆಳಗೆರೆ ಅವರ ಲ್ಯಾಪ್ ಟಾಪ್ ನಲ್ಲಿ
ಟೈಪ್ ಮಾಡಿಹೋಗಿ್್ದ್ದುದ್ದು ಅದರ ಸಂಪೂರ್ಣ ಮಾಹಿತಿ ಈ ಟಿವಿ ಭಾರತ ಗೆ ಲಭ್ಯವಾಗಿದೆ.

ಸಾಮಾನ್ಯರಲ್ಲಿ ಸಾಮಾನ್ಯನಾದ ಬಾಸ್ ಹೋಗ್ತಿರೋದು ‘ಬಿಗ್ ಬಾಸ್’ ಮನೆಗೆ ಕನ್ನಡ ಕಿರುತೆರೆಯ ಅತ್ಯುತ್ತಮ ವಾಹಿನಿ ಎನಿಸಿಕೊಂಡಿರುವ ಕಲರ್ಸ್ ಕನ್ನಡ ಈ ಬಾರಿ ತನ್ನ ಎಂದಿನ ಸಂಚಲನವಾದ ಬಿಗ್ ಬಾಸ್ - 7ನೇ ಸೀಸನ್ ಆರಂಭಿಸಿದೆ. ಉಳಿದೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್ ಭಾರತದ ಬಹುತೇಕ ಭಾಷೆಗಳಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಅಂದಾಜಿನ ಪ್ರಕಾರ ಬಿಗ್ ಬಾಸ್ ಶೋ ಪ್ರತಿನಿತ್ಯ ಒಂದು ಕೋಟಿ ವೀಕ್ಷಕರನ್ನು ತಲುಪುತ್ತದೆ. ನಿಮಗೆ ಗೊತ್ತಿರುವಂತೆ ನಾನು ಟಿವಿ ನೋಡುವುದಿಲ್ಲ. ನಾನೇ ನಟಿಸಿದ ಒಂದಷ್ಟು ಸಿನೆಮಾಗಳನ್ನು ನಾನೇ ನೋಡಿಲ್ಲ. ಅವೆರಡೂ ನನ್ನ ಪಾಲಿಗೆ uninteresting. ನನ್ನದೇನಿದ್ದರೂ ಅಕ್ಷರ ಉಂಟು ಪುಸ್ತಕ ಉಂಟು. ಆ ಪ್ರೀತಿಯಿಂದಲೇ ನಾನು ಇಪ್ಪತ್ತೈದು ವರ್ಷ ಅವಿಚ್ಛಿನ್ನವಾಗಿ ‘ಹಾಯ್ ಬೆಂಗಳೂರ್!’ ಪತ್ರಿಕೆ ನಡೆಸಿದೆ. ಅದು ನನಗೆ ಅನ್ನ ಕೊಟ್ಟಿತು. ಆತ್ಮ ಸಮಾಧಾನ ಕೊಟ್ಟಿತು. Body:ಅಂತೆಯೇ ನನ್ನ ಅನೇಕ ವರ್ಷಗಳ ಕನಸಾದ ‘ಓ ಮನಸೇ’ ಪಾಕ್ಷಿಕವನ್ನು ಆರಂಭಿಸಿದೆ. ಈ ತೆರನಾದ ಪತ್ರಿಕೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗುತ್ತದೋ ಎಂಬ ಆತಂಕವಿತ್ತು. ಇವತ್ತಿಗದು 155 ಸಂಚಿಕೆ ದಾಟಿದೆ. ಕನ್ನಡದ ಮನೆ ಮಾತಾಗಿದೆ. ಇವತ್ತು ಅದನ್ನು ಪ್ರತಿ ಹೆಣ್ಣು ಮಗಳು, ಪ್ರತಿ ಹುಡುಗಿಯು, ಪ್ರತಿ ಯುವಕನು ಸಂತೋಷದಿಂದ ಆತ್ಮವಿಶ್ವಾಸಕ್ಕಾಗಿ ಓದುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ರವಿ ಅಜ್ಜೀಪುರ ಅದರ ಸಂಪಾದಕತ್ವವನ್ನು ತುಂಬ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದೆಲ್ಲದರ ಮಧ್ಯೆ ನನಗೆ ಬಿಗ್ ಬಾಸ್ ಬೇಕಾಗಿತ್ತಾ? ಎಂಬುದು ಪ್ರಶ್ನೆ. ನನ್ನ ಯುವಮಿತ್ರ ಹಾಗೂ ಕ್ರಿಯಾಶೀಲ ಯುವಕ ಕಲರ್ಸ್ ವಾಹಿನಿಯನ್ನು ತುಂಬ ಯಶಸ್ವಿಯಾಗಿ ನಡೆಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಬಂದು ಅಕ್ಕರೆಯಿಂದ ಲೋಕಾಭಿರಾಮವಾಗಿ ಮಾತನಾಡಿ, ಮಾತಿನ ಮಧ್ಯೆ ‘‘ನಮ್ಮ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ನೀವೇಕೆ ಬರಬಾರದು?" ಅಂದರು. ನನ್ನನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಸಿಬ್ಬಂದಿ ಮತ್ತು ಗೆಳೆಯರು ‘ಬಾಸ್’ ಅಂತಲೇ ಕರೆಯುತ್ತಾರೆ. ‘‘ಈಗೊಮ್ಮೆ ‘ಬಿಗ್ ಬಾಸ್’ ಆಗಿ ನೋಡಿ" ಅಂತ ನಕ್ಕರು ಪರಂ. ಯಾಕೋ ಇಲ್ಲವೆನ್ನಲಾಗಲಿಲ್ಲ. ಅಲ್ಲಿ ದಿನಗಟ್ಟಲೆ ನ್ಯೂಸ್ ಪೇಪರ್ ಸಿಗುವುದಿಲ್ಲ. ನನ್ನ ಪರಮ ಪ್ರೀತಿಯ ಕಾಫಿ ಸಿಗುವುದಿಲ್ಲ. ಪೀಡೆಯಂತಹ ಮೊಬೈಲ್ ಸಿಗುವುದಿಲ್ಲ. ಒಂದಷ್ಟು ದಿನ ನನಗೆ ಪರಿಚಯವೇ ಇಲ್ಲದ ‘ಸೆಲೆಬ್ರಿಟಿಗಳ’ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವ ಅವಕಾಶ ನನಗೆ ದೊರೆತಿದೆ. ಪರಂ ಆಗ್ರಹಕ್ಕೆ ಇಲ್ಲವೆನ್ನಲಾಗದೆ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ. ಒಂದು ಮಾತಿನ ಪ್ರಕಾರ Boss is always right!

ಎಂದಿನಂತೆ ನಿಮ್ಮ ಹಾರೈಕೆ ಇರಲಿ.
         -ರವಿ ಬೆಳಗೆರೆ

( ಸತೀಶ ಎಂಬಿ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.