ETV Bharat / sitara

ಕೊರೊನಾ ಸೋಂಕಿತರು ಹೆಚ್ಚಿರುವ ಆಸ್ಪತ್ರೆಗೆ 10 ಸಾವಿರ ಪಿಪಿಇ ಕಿಟ್:  ಕಿರುತೆರೆ ನಟಿ ಶ್ವೇತಾ ಪ್ರಸಾದ್​​​​ರಿಂದ ಸಹಾಯ

author img

By

Published : May 4, 2020, 1:24 PM IST

ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಕದ್ದಿರುವ ಶ್ವೇತಾ ಪ್ರಸಾದ್ ಇದೀಗ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

10 ಸಾವಿರ ಪಿಪಿಇ ಕಿಟ್ ವಿತರಣೆಗೆ ಮುಂದಾದ ಕಿರುತೆರೆ ನಟಿ ಶ್ವೇತಾ ಪ್ರಸಾದ್
10 ಸಾವಿರ ಪಿಪಿಇ ಕಿಟ್ ವಿತರಣೆಗೆ ಮುಂದಾದ ಕಿರುತೆರೆ ನಟಿ ಶ್ವೇತಾ ಪ್ರಸಾದ್

ರಾಧಾ ರಮಣ ಧಾರಾವಾಹಿಯ ಆರಾಧನಾಳಾಗಿ ಕಿರುತೆರೆ ಲೋಕದಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಶ್ವೇತಾ ಪ್ರಸಾದ್ ಅವರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಪ್ರವಾಹ ಎದುರಾದಾಗ ಪತಿ ಪ್ರದೀಪ್ ಜತೆ ಸೇರಿ ಪ್ರವಾಹ ಪೀಡಿತ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಸುದ್ದಿಯಲ್ಲಿದ್ದರು.

ಇದೀಗ ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬಂದಿದ್ದಾರೆ. ಈ ಸಮಯದಲ್ಲಿ ಊಟ, ರೇಷನ್ ಅನ್ನು ನೀಡುವವರು ಕೊಂಚ ಸ್ಯಾನಿಟರಿ ನ್ಯಾಪ್ಕಿನ್ ನತ್ತ ಗಮನ ಹರಿಸಿ ಎಂದು ಶ್ವೇತಾ ಮನವಿ ಮಾಡಿದ್ದಾರೆ. ಜನೌಷಧಿ ಕೇಂದ್ರದವರು ಸ್ಯಾನಿಟರಿ ನ್ಯಾಪ್ಕಿನ್ ಅನ್ನು ವಿತರಿಸುತ್ತಾರೆ ನಿಜ, ಆದರೆ ಜನರಿಗೂ ನ್ಯಾಪ್ಕಿನ್ ಅಗತ್ಯವಿದೆ. ಊಟ, ರೇಷನ್ ನೀಡುವವರು ನ್ಯಾಪ್ಕಿನ್ ಕೂಡ ನೀಡಲು ಮುಂದಾಗಿ ಎಂದು ಹೇಳಿದ್ದಾರೆ ಶ್ವೇತಾ ಪ್ರಸಾದ್.

ಶ್ವೇತಾ ಪ್ರಸಾದ್​
ಶ್ವೇತಾ ಪ್ರಸಾದ್​
ಇದರ ಜೊತೆಗೆ ಕೊರೊನಾ ವೈರಸ್ ನಿಂದಾಗಿ ಬಳಲುತ್ತಿರುವ ರೋಗಿಗಳನ್ನು ಆರೈಕೆ ಮಾಡುತ್ತಿರುವ ವೈದ್ಯರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಗತ್ಯವಿರುವಂತಹ ವಸ್ತುಗಳನ್ನು ಪೂರೈಸಿ ಸಹಾಯ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೀಗ ಹೆಲ್ತ್ ಕೇರ್ ಕಮ್ಯೂನಿಟಿಯೊಂದಿಗೆ ಕೈ ಜೋಡಿಸಿರುವ ಶ್ವೇತಾ ಪ್ರಸಾದ್ ಅವರು ಆಸ್ಪತ್ರೆಗಳಿಗೆ ತೆರಳಿ ಪಿಪಿಇ ಕಿಟ್ ನೀಡುವ ನಿರ್ಧಾರ ಮಾಡಿದ್ದಾರೆ. 10000 ಕಿಟ್ ಗಳನ್ನು ನೀಡುವ ನಿರ್ಧಾರ ಮಾಡಿದ ಶ್ವೇತಾ ವೈದ್ಯರು ನೀಡುವ ಸಲಹೆಯ ಆಧಾರಿತವಾಗಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಆಸ್ಪತ್ರೆಗೆ ಕಿಟ್ ನೀಡಲಿದ್ದಾರೆ. ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಕದ್ದಿರುವ ಶ್ವೇತಾ ಪ್ರಸಾದ್ ಇದೀಗ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಧಾ ರಮಣ ಧಾರಾವಾಹಿಯ ಆರಾಧನಾಳಾಗಿ ಕಿರುತೆರೆ ಲೋಕದಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಶ್ವೇತಾ ಪ್ರಸಾದ್ ಅವರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಪ್ರವಾಹ ಎದುರಾದಾಗ ಪತಿ ಪ್ರದೀಪ್ ಜತೆ ಸೇರಿ ಪ್ರವಾಹ ಪೀಡಿತ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಸುದ್ದಿಯಲ್ಲಿದ್ದರು.

ಇದೀಗ ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬಂದಿದ್ದಾರೆ. ಈ ಸಮಯದಲ್ಲಿ ಊಟ, ರೇಷನ್ ಅನ್ನು ನೀಡುವವರು ಕೊಂಚ ಸ್ಯಾನಿಟರಿ ನ್ಯಾಪ್ಕಿನ್ ನತ್ತ ಗಮನ ಹರಿಸಿ ಎಂದು ಶ್ವೇತಾ ಮನವಿ ಮಾಡಿದ್ದಾರೆ. ಜನೌಷಧಿ ಕೇಂದ್ರದವರು ಸ್ಯಾನಿಟರಿ ನ್ಯಾಪ್ಕಿನ್ ಅನ್ನು ವಿತರಿಸುತ್ತಾರೆ ನಿಜ, ಆದರೆ ಜನರಿಗೂ ನ್ಯಾಪ್ಕಿನ್ ಅಗತ್ಯವಿದೆ. ಊಟ, ರೇಷನ್ ನೀಡುವವರು ನ್ಯಾಪ್ಕಿನ್ ಕೂಡ ನೀಡಲು ಮುಂದಾಗಿ ಎಂದು ಹೇಳಿದ್ದಾರೆ ಶ್ವೇತಾ ಪ್ರಸಾದ್.

ಶ್ವೇತಾ ಪ್ರಸಾದ್​
ಶ್ವೇತಾ ಪ್ರಸಾದ್​
ಇದರ ಜೊತೆಗೆ ಕೊರೊನಾ ವೈರಸ್ ನಿಂದಾಗಿ ಬಳಲುತ್ತಿರುವ ರೋಗಿಗಳನ್ನು ಆರೈಕೆ ಮಾಡುತ್ತಿರುವ ವೈದ್ಯರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಗತ್ಯವಿರುವಂತಹ ವಸ್ತುಗಳನ್ನು ಪೂರೈಸಿ ಸಹಾಯ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೀಗ ಹೆಲ್ತ್ ಕೇರ್ ಕಮ್ಯೂನಿಟಿಯೊಂದಿಗೆ ಕೈ ಜೋಡಿಸಿರುವ ಶ್ವೇತಾ ಪ್ರಸಾದ್ ಅವರು ಆಸ್ಪತ್ರೆಗಳಿಗೆ ತೆರಳಿ ಪಿಪಿಇ ಕಿಟ್ ನೀಡುವ ನಿರ್ಧಾರ ಮಾಡಿದ್ದಾರೆ. 10000 ಕಿಟ್ ಗಳನ್ನು ನೀಡುವ ನಿರ್ಧಾರ ಮಾಡಿದ ಶ್ವೇತಾ ವೈದ್ಯರು ನೀಡುವ ಸಲಹೆಯ ಆಧಾರಿತವಾಗಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಆಸ್ಪತ್ರೆಗೆ ಕಿಟ್ ನೀಡಲಿದ್ದಾರೆ. ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಕದ್ದಿರುವ ಶ್ವೇತಾ ಪ್ರಸಾದ್ ಇದೀಗ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.