ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್ಬಾಸ್ ಸೀಸನ್ 7 ಆರಂಭವಾಗಿ ಕೇವಲ 2 ದಿನಗಳು ಕಳೆದಿವೆ. ಈ ಬಾರಿ 18 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದು ಮೊದಲ ದಿನವೇ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೊರ ಹೋಗಿದ್ದಾರೆ. ಅಲ್ಲದೆ ಮೊದಲ ದಿನವೇ 6 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳ ನಡುವೆ ಹಾವು ಮುಂಗುಸಿ ಜಗಳ ಆರಂಭವಾಗಿದೆ. ನಿನ್ನೆ ನಾಗಿಣಿ ಖ್ಯಾತಿಯ ದೀಪಿಕಾದಾಸ್, ಹಾಸ್ಯನಟ ರಾಜು ತಾಳಿಕೋಟಿ ಮೇಲೆ ಬುಸ್ಗುಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪರ್ಧಿಗಳು ಲಿವಿಂಗ್ ಏರಿಯಾದಿಂದ ಡೈನಿಂಗ್ ಹಾಲ್ಗೆ ಹೋಗುವ ಸಂದರ್ಭದಲ್ಲಿ ರಾಜು ತಾಳಿಕೋಟೆ ದೀಪಿಕಾ ಅವರ ಕೈಮುಟ್ಟಿ ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದೀಪಿಕಾ ದಾಸ್, ನನ್ನ ಕೈ ಮುಟ್ಟಿ ಮಾತನಾಡಬೇಡಿ ನನಗೆ ಕೋಪ ಬರುತ್ತೆ ಎಂದು ರಾಜು ತಾಳಿಕೋಟೆಗೆ ಬೈದಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ಎರಡೇ ದಿನಕ್ಕೆ ಹಾವು ಮುಂಗುಸಿ ಆಟ ಆರಂಭವಾಗಿದ್ದು, ದಿನಕಳೆದಂತೆ ಇದು ಎಲ್ಲಿ ಹೋಗಿ ಮುಟ್ಟುವುದೋ ಕಾದು ನೋಡಬೇಕು.