ETV Bharat / sitara

ನಿರೂಪಕಿ ಚಂದನಾಗೆ ಸಿಕ್ತು ರಘುದೀಕ್ಷಿತರ ಪ್ರಶಂಸೆಯ ಸುರಿಮಳೆ....ಕಾರಣ - ಹಾಡು ಕರ್ನಾಟಕ ಕಾರ್ಯಕ್ರಮದ ತೀರ್ಪುಗಾರ ರಘುದೀಕ್ಷಿತ್

ನಿರೂಪಕಿ ಚಂದನಾ ಅವರ ಪ್ರಯತ್ನಕ್ಕೆ ಒಳ್ಳೆಯ ಪ್ರಶಂಸೆಗಳು ಹುಡುಕಿಕೊಂಡು ಬರುತ್ತಿವೆ. ಹಾಡು ಕರ್ನಾಟಕದ ತೀರ್ಪುಗಾರರಾಗಿರುವ ರಘು ದೀಕ್ಷಿತ್ ಅವರು ಚಂದನಾ ಅವರನ್ನು ಹಾಡಿಹೊಗಳಿದ್ದು, ಆಕೆ ನೀಡುವ ಶೇ 100 ರಷ್ಟು ಡೆಡಿಕೇಷನ್​​ಗೆ ತಲೆಬಾಗಿದ್ದೇನೆ ಎಂದಿದ್ದಾರೆ.

praise-from-raghudeeksit-for-the-narrator-chandana
ಹಾಡು ಕರ್ನಾಟಕದ ರಿಯಾಲಿಟಿ ಶೋ ನಿರೂಪಕಿ ಚಂದನಾ ಅನಂತಕೃಷ್ಣ
author img

By

Published : Mar 20, 2020, 4:41 PM IST

ಹಾಡು ಕರ್ನಾಟಕದ ರಿಯಾಲಿಟಿ ಶೋ ನಿರೂಪಕಿ ಚಂದನಾ ಅನಂತಕೃಷ್ಣ ಅವರಿಗೆ ಕಿರುತೆರೆ ಲೋಕ ಹೊಸದೇನಲ್ಲ. ಆದರೆ, ನಿರೂಪಣಾ ಜಗತ್ತು ತೀರಾ ಹೊಸದು. ರಾಜರಾಣಿ ಧಾರಾವಾಹಿಯಲ್ಲಿ ಎಡವಟ್ ರಾಣಿ ಆಲಿಯಾಸ್ ಚುಕ್ಕಿಯಾಗಿ ಅಭಿನಯಿಸಿದ ಚಂದನಾ, ಕಿರುತೆರೆ ವೀಕ್ಷಕರಿಗೆ ತೀರಾ ಹತ್ತಿರವಾದುದು ದೊಡ್ಮನೆಯೊಳಗೆ ಹೋದ ನಂತರವೇ!

ಬಿಗ್​ಬಾಸ್​​ನಿಂದ ಹೊರಬಂದ ಚಂದನಾಗೆ ಹಾಡು ಕರ್ನಾಟಕದ ನಿರೂಪಣೆ ಮಾಡುವ ಅವಕಾಶ ದೊರೆಯಿತು. ತನಗೆ ಅನುಭವ ಇಲ್ಲದಿರುವಂತಹ ಕ್ಷೇತ್ರವಾದರೂ ಒಲ್ಲೆ ಎನ್ನದೇ ನೋಡೋಣ ಎಂದೇ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.

ಚಂದನಾ ಅವರ ಪ್ರಯತ್ನಕ್ಕೆ ಒಳ್ಳೆಯ ಪ್ರಶಂಸೆ ಕೂಡಾ ದೊರತಿದೆ. ಹಾಡು ಕರ್ನಾಟಕ ಕಾರ್ಯಕ್ರಮದ ತೀರ್ಪುಗಾರರಾಗಿರುವ ರಘುದೀಕ್ಷಿತ್ ಅವರು ಚಂದನಾ ಅವರನ್ನು ಹಾಡಿಹೊಗಳಿದ್ದಾರೆ. ಚಂದನಾ ಅವರೊಂದಿಗೆ ತಾವಿರುವ ಪೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ರಘು ದೀಕ್ಷಿತ್, 'ಕಾರ್ಯಕ್ರಮದ ಡಾರ್ಲಿಂಗ್​​ನೊಂದಿಗೆ..! ಚಂದನಾ ವಯಸ್ಸಿನಲ್ಲಿ ತುಂಬಾ ಸಣ್ಣವಳಿರಬಹುದು. ಮಾತ್ರವಲ್ಲ ಈ ಕ್ಷೇತ್ರದ ಕುರಿತು ಅವಳಿಗೆ ಅನುಭವವೂ ಕಡಿಮೆ ಇರಬಹುದು. ಆದರೆ, ಅವಳ ಹಾರ್ಡ್​​ವರ್ಕ್ ಅನ್ನು ನಾವೆಲ್ಲಾ ಮೆಚ್ಚಲೇಬೇಕು. ಅವಳು ನೀಡುವ 100ರಷ್ಟು ಡೆಡಿಕೇಷನ್​​ಗೆ ತಲೆಬಾಗಿದ್ದೇನೆ. ಚಂದನಾ ಅವರೊಂದಿಗೆವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ನಿಜವಾಗಿಯೂ ತುಂಬಾ ಸಂತಸವಾಗುತ್ತಿದೆ. ಆಲ್ ದಿ ಬೆಸ್ಟ್ ಲಿಟ್ಲ್​​ ಗರ್ಲ್" ಎಂದು ಬರೆದುಕೊಂಡಿದ್ದಾರೆ ರಘು ದೀಕ್ಷಿತ್ .

ಹಾಡು ಕರ್ನಾಟಕದ ರಿಯಾಲಿಟಿ ಶೋ ನಿರೂಪಕಿ ಚಂದನಾ ಅನಂತಕೃಷ್ಣ ಅವರಿಗೆ ಕಿರುತೆರೆ ಲೋಕ ಹೊಸದೇನಲ್ಲ. ಆದರೆ, ನಿರೂಪಣಾ ಜಗತ್ತು ತೀರಾ ಹೊಸದು. ರಾಜರಾಣಿ ಧಾರಾವಾಹಿಯಲ್ಲಿ ಎಡವಟ್ ರಾಣಿ ಆಲಿಯಾಸ್ ಚುಕ್ಕಿಯಾಗಿ ಅಭಿನಯಿಸಿದ ಚಂದನಾ, ಕಿರುತೆರೆ ವೀಕ್ಷಕರಿಗೆ ತೀರಾ ಹತ್ತಿರವಾದುದು ದೊಡ್ಮನೆಯೊಳಗೆ ಹೋದ ನಂತರವೇ!

ಬಿಗ್​ಬಾಸ್​​ನಿಂದ ಹೊರಬಂದ ಚಂದನಾಗೆ ಹಾಡು ಕರ್ನಾಟಕದ ನಿರೂಪಣೆ ಮಾಡುವ ಅವಕಾಶ ದೊರೆಯಿತು. ತನಗೆ ಅನುಭವ ಇಲ್ಲದಿರುವಂತಹ ಕ್ಷೇತ್ರವಾದರೂ ಒಲ್ಲೆ ಎನ್ನದೇ ನೋಡೋಣ ಎಂದೇ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.

ಚಂದನಾ ಅವರ ಪ್ರಯತ್ನಕ್ಕೆ ಒಳ್ಳೆಯ ಪ್ರಶಂಸೆ ಕೂಡಾ ದೊರತಿದೆ. ಹಾಡು ಕರ್ನಾಟಕ ಕಾರ್ಯಕ್ರಮದ ತೀರ್ಪುಗಾರರಾಗಿರುವ ರಘುದೀಕ್ಷಿತ್ ಅವರು ಚಂದನಾ ಅವರನ್ನು ಹಾಡಿಹೊಗಳಿದ್ದಾರೆ. ಚಂದನಾ ಅವರೊಂದಿಗೆ ತಾವಿರುವ ಪೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ರಘು ದೀಕ್ಷಿತ್, 'ಕಾರ್ಯಕ್ರಮದ ಡಾರ್ಲಿಂಗ್​​ನೊಂದಿಗೆ..! ಚಂದನಾ ವಯಸ್ಸಿನಲ್ಲಿ ತುಂಬಾ ಸಣ್ಣವಳಿರಬಹುದು. ಮಾತ್ರವಲ್ಲ ಈ ಕ್ಷೇತ್ರದ ಕುರಿತು ಅವಳಿಗೆ ಅನುಭವವೂ ಕಡಿಮೆ ಇರಬಹುದು. ಆದರೆ, ಅವಳ ಹಾರ್ಡ್​​ವರ್ಕ್ ಅನ್ನು ನಾವೆಲ್ಲಾ ಮೆಚ್ಚಲೇಬೇಕು. ಅವಳು ನೀಡುವ 100ರಷ್ಟು ಡೆಡಿಕೇಷನ್​​ಗೆ ತಲೆಬಾಗಿದ್ದೇನೆ. ಚಂದನಾ ಅವರೊಂದಿಗೆವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ನಿಜವಾಗಿಯೂ ತುಂಬಾ ಸಂತಸವಾಗುತ್ತಿದೆ. ಆಲ್ ದಿ ಬೆಸ್ಟ್ ಲಿಟ್ಲ್​​ ಗರ್ಲ್" ಎಂದು ಬರೆದುಕೊಂಡಿದ್ದಾರೆ ರಘು ದೀಕ್ಷಿತ್ .

ETV Bharat Logo

Copyright © 2025 Ushodaya Enterprises Pvt. Ltd., All Rights Reserved.