ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಆಗಮಿಸಲಿದ್ದಾರೆ. ಈಗಾಗಲೇ ಅಧಿಕೃತವಾಗಿ ಈ ಸಾಧಕನ ಹೆಸರು ವಾಹಿನಿ ರಿವೀಲ್ ಮಾಡಿದೆ. ಇದೀಗ ಶ್ರೀಮುರಳಿ ಹೊರತುಪಡಿಸಿ ಮತ್ತಿಬ್ಬರು ಸಾಧಕರು ರೆಡ್ ಸೀಟ್ ಮೇಲೆ ಆಸೀನರಾಗುತ್ತಿದ್ದಾರೆ.
ಕನ್ನಡ ನಾಡಿನ ಹೆಮ್ಮೆಯ ಉದ್ಯಮಿಗಳಾದ ಇನ್ಫೋಸಿಸ್'ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಈ ವಾರ ವೀಕೆಂಡ್ ಟೆಂಟ್ಗೆ ಆಗಮಿಸಲಿದ್ದಾರೆ. ಈ ವಿಚಾರವನ್ನು ಝೀ ಕನ್ನಡ ವಾಹಿನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದೆ.
- " class="align-text-top noRightClick twitterSection" data="
">
ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್ ಕಂಪನಿ ಕಟ್ಟಿ ಬೆಳೆಸಿರುವ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಕರ್ನಾಟಕದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದವರು. ಇದರೊಂದಿಗೆ ಸಾಮಾಜಿಕ ಕಾಳಜಿ ಹೊಂದಿರುವ ಸುಧಾಮೂರ್ತಿ ಅವರು ಸಾಕಷ್ಟು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ರಾಜ್ಯದ ಯಾವ ಮೂಲೆಯಿಂದಲಾದರೂ ನೋವಿನ ಧ್ವನಿ ಕೇಳಿಸಿದರೆ ಸಾಕು. ಅಲ್ಲಿ ಸುಧಮ್ಮನ ಸಹಾಯದ ಹಸ್ತ ಚಾಚುತ್ತದೆ. ಕಳೆದ ವರ್ಷ ಮಹಾಮಳೆಗೆ ನಲುಗಿದ ಕೊಡಗಿನ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿ ಕೊಡುತ್ತಿರುವುದು ಇವರ ಹೃದಯ ವೈಶಾಲ್ಯತೆಗೆ ಸಣ್ಣ ಉದಾಹರಣೆಯಷ್ಟೆ. ಇಂತಹ ಕನ್ನಡ ಕಣ್ಮಣಿಗಳನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡಬೇಕೆನ್ನುವುದು ಕನ್ನಡಿಗರ ಬಹುಕಾಲದ ಆಸೆಯಾಗಿತ್ತು. ಇದೀಗ ಅದು ನೆರವೇರುತ್ತಿದೆ.
ಈ ಯಶಸ್ವಿ ದಂಪತಿಗಳು ವೀಕೆಂಟ್ ಟೆಂಟ್ಗೆ ಬರುವ ವಿಚಾರ ಹಂಚಿಕೊಂಡಿರುವ ವಾಹಿನಿ, ಯುವ ಉದ್ಯಮಿಗಳು, ನವ ಇಂಜಿನಿಯರುಗಳು, ಸಾಧನೆಯ ಕನಸು ಕಾಣುತ್ತಿರುವವರು,ಈ ಹೆಮ್ಮೆಯ ಸಾಧಕರ ಬಳಿ ನೀವೂ ಸಲಹೆ, ಸೂಚನೆ, ಪ್ರೇರಣೆ ಪಡೆಯಲು ಪ್ರಶ್ನೆಗಳನ್ನು ಕೇಳಬಹುದು. ನೀವು ಕೇಳಲಿಚ್ಚಿಸುವ ಪ್ರಶ್ನೆಯನ್ನು #WeekendWithRamesh4 ಎಂದು ಬರೆದು Comment ಮಾಡಿ ಎಂದು ವೀಕ್ಷಕರಲ್ಲಿ ವಾಹಿನಿ ಕೋರಿದೆ.