ETV Bharat / sitara

ಜೀ ಕನ್ನಡಕ್ಕೆ ಜಿಗಿದ ಗಣಿ.. ಸದ್ಯದಲ್ಲೇ ಹೊಸ ರಿಯಾಲಿಟಿ ಶೋ ಮೂಲಕ ಗೋಲ್ಡನ್​ ಸ್ಟಾರ್​ ಎಂಟ್ರಿ

author img

By

Published : Sep 12, 2021, 9:36 AM IST

ಬಹಳ ದಿನಗಳ ನಂತರ ಜೀ ಕನ್ನಡದ ಮೂಲಕ ಹೊಸ ರಿಯಾಲಿಟಿ ಶೋಗೆ ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಗೆ ಮರಳುತ್ತಿದ್ದಾರೆ.

golden-star-ganesh-to-zee-kannada
ಸದ್ಯದಲ್ಲೇ ಹೊಸ ಶೋ ಮೂಲಕ ಕಿರುತೆರೆಗೆ ಗೋಲ್ಡನ್​ ಸ್ಟಾರ್​ ಎಂಟ್ರಿ

ಜೀ ಕನ್ನಡದಲ್ಲಿ 'ಸರಿಗಮಪ' ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ತೀರ್ಪುಗಾರರಾಗಿದ್ದ ಹಿರಿಯ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಕಲರ್ಸ್ ಕನ್ನಡ ವಾಹಿನಿಯು ಸೆಳೆದಿದ್ದು ಗೊತ್ತೇ ಇದೆ. ರಾಜೇಶ್, ಜೀ ಕನ್ನಡವನ್ನು ಬಿಟ್ಟು ಕಲರ್ಸ್​​ನ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅದೇ ರೀತಿ ಕಲರ್ಸ್​​ನಲ್ಲಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜೀ ಕನ್ನಡದಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಹೊಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಈ ಬಗ್ಗೆ ಸ್ವತಃ ಗಣೇಶ್ ಟ್ವೀಟ್​ ಮಾಡಿದ್ದು, ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಜೀ ಕನ್ನಡಕ್ಕಾಗಿ ಹೊಸ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಹೇಳಿದ್ದಾರೆ. ಬಹಳ ದಿನಗಳ ನಂತರ ಜೀ ಕನ್ನಡದ ಮೂಲಕ ಹೊಸ ರಿಯಾಲಿಟಿ ಶೋ ಜೊತೆ ಬರುತ್ತಿದ್ದೇನೆ. ಶೀಘ್ರದಲ್ಲೇ ನಿರೀಕ್ಷಿಸಿ.. ಎಂದು ಹೇಳಿದ್ದಾರೆ.

ಈ ಪ್ರೋಮೋದಲ್ಲಿ ಗಣೇಶೋತ್ಸವವೊಂದರಲ್ಲಿ ಎಲ್ಲರೂ ಗಣೇಶನಿಗೆ ಕಾಯುತ್ತಿರುತ್ತಾರೆ. ಆಗ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಟ್ಟು, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೇನು ನೃತ್ಯದ ಕಾರ್ಯಕ್ರಮವಾ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಇದೊಂದು ವಿಭಿನ್ನ ಗೇಮ್ ಶೋ ಎನ್ನಲಾಗಿದ್ದು, ಅದೇನೆಂದು ಸದ್ಯದಲ್ಲೇ ಗೊತ್ತಾಗಲಿದೆ. ಅಕ್ಟೋಬರ್​ನಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಗಣೇಶ್ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದೇ ಕಿರುತೆರೆಯಿಂದ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ವಠಾರ' ಧಾರಾವಾಹಿಯಲ್ಲಿ ನಟಿಸಿದ ಅವರು, ನಂತರ 'ಕಾಮಿಡಿ ಟೈಮ್​'ನಲ್ಲಿ ಮಿಂಚಿದರು. ಅಲ್ಲಿಂದ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಅವರು, ಕಲರ್ಸ್ ಕನ್ನಡಕ್ಕಾಗಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಟ್ಟರು. ಇದೀಗ ಜೀ ಕನ್ನಡದಲ್ಲಿ ಅವರು ಹೊಸ ಪರ್ವ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ : ಘಟನೆಗೆ ಕಾರಣ ತಿಳಿಸಿದ ಉಪ ಪೊಲೀಸ್ ಆಯುಕ್ತ

ಜೀ ಕನ್ನಡದಲ್ಲಿ 'ಸರಿಗಮಪ' ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ತೀರ್ಪುಗಾರರಾಗಿದ್ದ ಹಿರಿಯ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಕಲರ್ಸ್ ಕನ್ನಡ ವಾಹಿನಿಯು ಸೆಳೆದಿದ್ದು ಗೊತ್ತೇ ಇದೆ. ರಾಜೇಶ್, ಜೀ ಕನ್ನಡವನ್ನು ಬಿಟ್ಟು ಕಲರ್ಸ್​​ನ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅದೇ ರೀತಿ ಕಲರ್ಸ್​​ನಲ್ಲಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜೀ ಕನ್ನಡದಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಹೊಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಈ ಬಗ್ಗೆ ಸ್ವತಃ ಗಣೇಶ್ ಟ್ವೀಟ್​ ಮಾಡಿದ್ದು, ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಜೀ ಕನ್ನಡಕ್ಕಾಗಿ ಹೊಸ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಹೇಳಿದ್ದಾರೆ. ಬಹಳ ದಿನಗಳ ನಂತರ ಜೀ ಕನ್ನಡದ ಮೂಲಕ ಹೊಸ ರಿಯಾಲಿಟಿ ಶೋ ಜೊತೆ ಬರುತ್ತಿದ್ದೇನೆ. ಶೀಘ್ರದಲ್ಲೇ ನಿರೀಕ್ಷಿಸಿ.. ಎಂದು ಹೇಳಿದ್ದಾರೆ.

ಈ ಪ್ರೋಮೋದಲ್ಲಿ ಗಣೇಶೋತ್ಸವವೊಂದರಲ್ಲಿ ಎಲ್ಲರೂ ಗಣೇಶನಿಗೆ ಕಾಯುತ್ತಿರುತ್ತಾರೆ. ಆಗ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಟ್ಟು, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೇನು ನೃತ್ಯದ ಕಾರ್ಯಕ್ರಮವಾ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಇದೊಂದು ವಿಭಿನ್ನ ಗೇಮ್ ಶೋ ಎನ್ನಲಾಗಿದ್ದು, ಅದೇನೆಂದು ಸದ್ಯದಲ್ಲೇ ಗೊತ್ತಾಗಲಿದೆ. ಅಕ್ಟೋಬರ್​ನಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಗಣೇಶ್ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದೇ ಕಿರುತೆರೆಯಿಂದ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ವಠಾರ' ಧಾರಾವಾಹಿಯಲ್ಲಿ ನಟಿಸಿದ ಅವರು, ನಂತರ 'ಕಾಮಿಡಿ ಟೈಮ್​'ನಲ್ಲಿ ಮಿಂಚಿದರು. ಅಲ್ಲಿಂದ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಅವರು, ಕಲರ್ಸ್ ಕನ್ನಡಕ್ಕಾಗಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಟ್ಟರು. ಇದೀಗ ಜೀ ಕನ್ನಡದಲ್ಲಿ ಅವರು ಹೊಸ ಪರ್ವ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ : ಘಟನೆಗೆ ಕಾರಣ ತಿಳಿಸಿದ ಉಪ ಪೊಲೀಸ್ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.