ETV Bharat / sitara

'ಕನ್ನಡ ಕೋಗಿಲೆ' ಕಿರೀಟವನ್ನು ಮುಡಿಗೇರಿಸಿಕೊಂಡ ಅರುಂಧತಿ ವಸಿಷ್ಠ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಸೂಪರ್ ಸೀಸನ್​ನ ಗ್ರ್ಯಾಂಡ್ ಫಿನಾಲೆಯಲ್ಲಿ ಅರುಂಧತಿ ವಸಿಷ್ಠ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

author img

By

Published : Nov 3, 2019, 11:41 PM IST

Updated : Nov 4, 2019, 12:25 AM IST

Arundhati Vasishta

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಸೂಪರ್ ಸೀಸನ್​ನ ಗ್ರ್ಯಾಂಡ್ ಫಿನಾಲೆಯಲ್ಲಿ ಅರುಂಧತಿ ವಸಿಷ್ಠ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಎರಡನೇ ಸ್ಥಾನವನ್ನು ಅಖಿಲಾ ಪಜಿಮಣ್ಣು ಮತ್ತು ಮನೋಜವಂ ಪಡೆದಿದ್ದರೆ, ಮೂರನೇ ಸ್ಥಾನವನ್ನು ನಿತಿನ್ ಶಾಸ್ತ್ರಿ ಪಡೆದಿದ್ದಾರೆ.

ಕನ್ನಡ ಕೋಗಿಲೆ ಸೂಪರ್ ಸೀಸನ್ ಉತ್ತಮ ಸ್ಫರ್ಧಿಯಾಗಿ ಗುರುತಿಸಿಕೊಂಡಿರುವ ಅರುಂಧತಿ ಅವರು ಪ್ರತಿವಾರವೂ ಗೋಲ್ಡನ್ ಬಜರ್ ಪಡೆದುಕೊಂಡಿದ್ದರು. ಜನಪದ ಹಾಡು, ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳನ್ನು ಸುಮಧುರವಾಗಿ ಹಾಡುವ ಅರುಂಧತಿ ಅವರು ಶ್ರೀಪಾದ ಹೆಗಡೆ ಸೋಮನ ಮನೆ, ಶ್ರೀಪಾದ ಹೆಗಡೆ ಕಂಪ್ಲಿ, ಪಂಡಿತ್ ಕೈವಲ್ಯ ಕುಮಾರ ಅವರ ಸಂಗೀತ ಗರಡಿಯಲ್ಲಿ ಪಳಗಿದ್ದು,ಶ್ರೀಕಾಂತ್ ಕುಲಕರ್ಣಿ ಅವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡಿರುವ ಇವರು ಈಗಾಗಲೇ ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ.

Arundhati Vasishta
ಅರುಂಧತಿ ವಸಿಷ್ಠ

ಇವರು ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿ ಜನಮನ ಸೆಳೆದಿದ್ದಾರೆ. ಅಲ್ಲದೇ ಕಥಕ್​ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. ಮಂಡಲ ಆರ್ಟ್ಸ್, ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿರುವ ಅರುಂಧತಿ ಕನ್ನಡದಲ್ಲಿ ಗಜಲ್, ಚೀಸ್ ಬರೆದಿದ್ದಾರೆ. ಬಹುಮುಖ ಪ್ರತಿಭೆ ಅರುಂಧತಿ ಅವರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ‌. ಇವರಿಗೆ ಕರ್ನಾಟಕ ಸರ್ಕಾರದಿಂದ ಕೊಡ ಮಾಡುವ ಕಲಾರತ್ನ ಪ್ರಶಸ್ತಿ ದೊರಕಿದೆ.

Arundhati Vasishta
ಅರುಂಧತಿ ವಸಿಷ್ಠ

ಒಟ್ಟಿನಲ್ಲಿ ಸಂಗೀತವಿಲ್ಲದೇ ನನ್ನ ಬದುಕಿಲ್ಲ ಎನ್ನುವ ಅರುಂಧತಿ ಕನ್ನಡ ಕೋಗಿಲೆ ಸೂಪರ್ ಸೀಸನ್​ನಲ್ಲಿ ಸುಮಧುರ ಗಾಯನದ ಮೂಲಕ ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡ ಕೋಗಿಲೆ' ಸೂಪರ್ ಸೀಸನ್​ನ ಗ್ರ್ಯಾಂಡ್ ಫಿನಾಲೆಯಲ್ಲಿ ಅರುಂಧತಿ ವಸಿಷ್ಠ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಎರಡನೇ ಸ್ಥಾನವನ್ನು ಅಖಿಲಾ ಪಜಿಮಣ್ಣು ಮತ್ತು ಮನೋಜವಂ ಪಡೆದಿದ್ದರೆ, ಮೂರನೇ ಸ್ಥಾನವನ್ನು ನಿತಿನ್ ಶಾಸ್ತ್ರಿ ಪಡೆದಿದ್ದಾರೆ.

ಕನ್ನಡ ಕೋಗಿಲೆ ಸೂಪರ್ ಸೀಸನ್ ಉತ್ತಮ ಸ್ಫರ್ಧಿಯಾಗಿ ಗುರುತಿಸಿಕೊಂಡಿರುವ ಅರುಂಧತಿ ಅವರು ಪ್ರತಿವಾರವೂ ಗೋಲ್ಡನ್ ಬಜರ್ ಪಡೆದುಕೊಂಡಿದ್ದರು. ಜನಪದ ಹಾಡು, ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳನ್ನು ಸುಮಧುರವಾಗಿ ಹಾಡುವ ಅರುಂಧತಿ ಅವರು ಶ್ರೀಪಾದ ಹೆಗಡೆ ಸೋಮನ ಮನೆ, ಶ್ರೀಪಾದ ಹೆಗಡೆ ಕಂಪ್ಲಿ, ಪಂಡಿತ್ ಕೈವಲ್ಯ ಕುಮಾರ ಅವರ ಸಂಗೀತ ಗರಡಿಯಲ್ಲಿ ಪಳಗಿದ್ದು,ಶ್ರೀಕಾಂತ್ ಕುಲಕರ್ಣಿ ಅವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡಿರುವ ಇವರು ಈಗಾಗಲೇ ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ.

Arundhati Vasishta
ಅರುಂಧತಿ ವಸಿಷ್ಠ

ಇವರು ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿ ಜನಮನ ಸೆಳೆದಿದ್ದಾರೆ. ಅಲ್ಲದೇ ಕಥಕ್​ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. ಮಂಡಲ ಆರ್ಟ್ಸ್, ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿರುವ ಅರುಂಧತಿ ಕನ್ನಡದಲ್ಲಿ ಗಜಲ್, ಚೀಸ್ ಬರೆದಿದ್ದಾರೆ. ಬಹುಮುಖ ಪ್ರತಿಭೆ ಅರುಂಧತಿ ಅವರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ‌. ಇವರಿಗೆ ಕರ್ನಾಟಕ ಸರ್ಕಾರದಿಂದ ಕೊಡ ಮಾಡುವ ಕಲಾರತ್ನ ಪ್ರಶಸ್ತಿ ದೊರಕಿದೆ.

Arundhati Vasishta
ಅರುಂಧತಿ ವಸಿಷ್ಠ

ಒಟ್ಟಿನಲ್ಲಿ ಸಂಗೀತವಿಲ್ಲದೇ ನನ್ನ ಬದುಕಿಲ್ಲ ಎನ್ನುವ ಅರುಂಧತಿ ಕನ್ನಡ ಕೋಗಿಲೆ ಸೂಪರ್ ಸೀಸನ್​ನಲ್ಲಿ ಸುಮಧುರ ಗಾಯನದ ಮೂಲಕ ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಿದ್ದಾರೆ.

Intro:Body:ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಸೂಪರ್ ಸೀಸನ್ ನ ಗ್ರ್ಯಾಂಡ್ ಫಿನಾಲೆ ನಡೆದಿದ್ದು ವಿಜೇತರಾಗಿ ಅರುಂಧತಿ ವಸಿಷ್ಠ ಅವರು ಆಯ್ಕೆ ಆಗಿದ್ದಾರೆ.

ಕನ್ನಡ ಕೋಗಿಲೆ ಸೂಪರ್ ಸೀಸನ್ ನ ಸ್ಟ್ರಾಂಗ್ ಸ್ಫರ್ಧಿಯಾಗಿ ಗುರುತಿಸಿಕೊಂಡಿರುವ ಅರುಂಧತಿ ಅವರು ಪ್ರತಿವಾರವೂ ಗೋಲ್ಡನ್ ಬಜಾರ್ ಪಡೆದುಕೊಂಡಿದ್ದಾರೆ. ಜನಪದ ಹಾಡಾಗಲಿ, ಶಾಸ್ತ್ರೀಯ ಸಂಗೀತವಾಗಲಿ, ಸಿನಿಮಾ ಹಾಡುಗಳಾಗಲಿ ಸುಂದರ ಸುಲಲಿತವಾಗಿ ಹಾಡುವ ಅರುಂಧತಿ ಅವರು ಶ್ರೀಪಾದ ಹೆಗಡೆ ಸೋಮನ ಮನೆ, ಶ್ರೀಪಾದ ಹೆಗಡೆ ಕಂಪ್ಲಿ, ಪಂಡಿತ್ ಕೈವಲ್ಯಕುಮಾರ ಅವರ ಸಂಗೀತ ಗರಡಿಯಲ್ಲಿ ಪಳಗಿರುತ್ತಾರೆ. ಇದರೊಂದಿಗೆ ಶ್ರೀಕಾಂತ್ ಕುಲಕರ್ಣಿ ಅವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡಿರುವ ಇವರು ಈಗಾಗಲೇ ಸುಮಾರು ನೂರೈವತ್ತಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಕೂಡಾ ನೀಡಿರುತ್ತಾರೆ.

ಚಂದನ ವಾಹಿನಿಯಲ್ಲಿ ಪ್ರಸಾರವಾಗಿದ್ದ ಎಂ ಎಸ್ ಐ ಎಲ್ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಹಾಡಿ ಮನ ಸೆಳೆದಿದ್ದ ಈಕೆ ಎದೆ ತುಂಬಿ ಹಾಡಿದೆನು ಸೀಸನ್ 1, ಸರಿಗಮಪ ಸೀಸನ್ 1ರ ಸೆಮಿಫೈನಲ್ ತನಕ ಬಂದಿದ್ದರು. ಸಕಲಾಕಲಾವಲ್ಲಭೆಯಾಗಿರುವ ಅರುಂಧತಿ ಸಂಗೀತದ ಜೊತೆಗೆ ಭರತನಾಟ್ಯ ದಲ್ಲಿ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಮಾತ್ರವಲ್ಲ ಕಥಕ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿರುವ ಮಂಡಲ ಆರ್ಟ್ಸ್, ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿರುವ ಅರುಂಧತಿ ಕನ್ನಡದಲ್ಲಿ ಗಜಲ್, ಚೀಸ್ ಬರೆದಿದ್ದಾರೆ. ಸಂತಸದ ಸಂಗತಿಯೆಂದರೆ ಮನೋವತಿ ಮತ್ತು ಕೃಷ್ಣಾ ಎಂಬ ನೂತನ ರಾಗವನ್ನು ಕೂಡಾ ಇವರು ಹುಟ್ಟು ಹಾಕಿದ್ದಾರೆ.

ಇಂಟರ್ ನ್ಯಾಷನಲ್ ಬ್ಯಾಲೆಯಲ್ಲಿ ಠುಮ್ರಿ ಮೂಲಕ ಗುರುತಿಸಿಕೊಂಡಿರುವ ಈಕೆ ವಿಶಾಲ್ ರಾಜ್ ನಿರ್ದೇಶನದ ದಂತ ಪುರಾಣ ಸಿನಿಮಾದಲ್ಲಿ ಹಿನ್ನಲೆಗಾಯಕಿ ಯಾಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೇ ಆ ಹಾಡಿಗೆ ಸ್ವತಃ ಅವರೇ ಹೆಜ್ಜೆ ಹಾಕಿದ್ದಾರೆ.

ಇಂತಿಪ್ಪ ಬಹುಮುಖ ಪ್ರತಿಭೆ ಅರುಂಧತಿ ಅವರನ್ನು ಅರಸಿ ಸುಮಾರು ಪ್ರಶಸ್ತಿಗಳು ಬಂದಿವೆ‌. ಸತತ ಐದು ವರುಷ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರಿಗೆ ಕರ್ನಾಟಕ ಸರಕಾರದಿಂದ ಕೊಡಮಾಡುವ ಕಲಾರತ್ನ ಪ್ರಶಸ್ತಿ ದೊರಕಿದೆ. ಮಾತ್ರವಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಕಿಶೋರ ಪ್ರತಿಭೆಯನ್ನು ಪಡೆದಿದ್ದಾರೆ.

https://www.facebook.com/622443414596258/posts/1365532940287298/

ಅವಕಾಶ ಏನೇ ಇರಲಿ, ಅದು ಯಾವ ರೀತಿಯಾಗಿರಲಿ ಅದನ್ನು ಚೆನ್ನಾಗಿ ಉಪಯೋಗ ಪಡಿಸಿಕೊಳ್ಳಬೇಕು ಎಂಬುದು ಅರುಂಧರಿ ಪತಿ ಮನೋಜ್ ವಸಿಷ್ಠ ಅವರ ಉವಾಚ. ಇದರ ಜೊತೆಗೆ ನಾವು ಎಂದಿಗೂ ಪ್ರಶಸ್ತಿಗಾಗಿ ಹಾಡಲೇಬಾರದು. ಆದರೆ ಆ ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂಬುದೇ ನನ್ನ ಅಭಿಪ್ರಾಯ ಎನ್ನುವ ಅರುಂಧತಿ ಅವರನ್ನು ಇದೀಗ ಪ್ರಶಸ್ತಿಯೇ ಹುಡುಕಿಕೊಂಡು ಬಂದಿದೆ. ಒಟ್ಟಿನಲ್ಲಿ ಸಂಗೀತವಿಲ್ಲದೇ ನನ್ನ ಬದುಕಿಲ್ಲ ಎನ್ನುವ ಅರುಂಧರಿ ಕನ್ನಡ ಕೋಗಿಲೆ ಸೂಪರ್ ಸೀಸನ್ ನಲ್ಲಿ ಸುಮಧುರ ಗಾಯನದ ಮೂಲಕ ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸಿದ್ದಾರೆ.Conclusion:
Last Updated : Nov 4, 2019, 12:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.