ETV Bharat / sitara

ಎಲ್ಲರನ್ನೂ ನಗಿಸುವ ನಟನ ಎದೆಯಲ್ಲಿ ಎಷ್ಟೊಂದು ನೋವು? ಬಿಕ್ಕಿ ಬಿಕ್ಕಿ ಅತ್ತರು ಚಿಕ್ಕಣ್ಣ

author img

By

Published : Jun 25, 2019, 8:53 AM IST

ಕಾಮಿಡಿ ಕಿಂಗ್ ಚಿಕ್ಕಣ್ಣ ತಮ್ಮ ವಿಶಿಷ್ಟ ಮ್ಯಾನರಿಸಂ, ನಟನೆಯಿಂದ ಕನ್ನಡ ಸಿನಿರಸಿಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಾರೆ. ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನೂ ನಗಿಸುವ ಈ ಪ್ರತಿಭಾವಂತ ಕಲಾವಿದ ಮಾತ್ರ ವೀಕೆಂಡ್ ಟೆಂಟ್​​ನಲ್ಲಿ ಬಿಕ್ಕಿ ಬಿಕ್ಕಿ ಅತ್ತರು.

ಚಿಕ್ಕಣ್ಣ

ಭಾನುವಾರದ ಸಂಚಿಕೆಯಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದ ಹೆಸರಾಂತ ಹಾಸ್ಯ ನಟ ಚಿಕ್ಕಣ್ಣ, ತಮ್ಮ ತಂದೆ ಬೈರೇಗೌಡರನ್ನು ನೆನದು ಕಣ್ಣೀರಿನ ಕೋಡಿ ಹರಿಸಿದರು. ಬಾಲ್ಯದಲ್ಲಿ ಅಪ್ಪನಿಂದ ತಿಂದ ಏಟುಗಳನ್ನು ಮೆಲುಕು ಹಾಕಿದ ಅವರು, ಅಪಘಾತದಿಂದ ಆಸ್ಪತ್ರೆಗೆ ಸೇರಿದ ಅಪ್ಪನನ್ನು ಉಳಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೆ ಅವರನ್ನು ಕಳೆದುಕೊಂಡಾಗಾದ ಆದ ದುಃಖವನ್ನು ನೆನೆದ ಚಿಕ್ಕಣ್ಣ ಅವರಿಗೆ ತಮ್ಮ ಕಣ್ಣುಗಳಿಂದ ಸುರಿಯುತ್ತಿದ್ದ ನೀರುಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ.

ಅವರಮ್ಮ, ಸಹೋದರಿಯರು ಗಾರೆ ಕೆಲಸ ಮಾಡಿ ಜೀವನ ಸಾಗಿಸಿದ್ದನ್ನು ನೆನಪಿಸಿಕೊಂಡು ಮಾತಾಡುವ ವೇಳೆ ಚಿಕ್ಕಣ್ಣನ ಗಂಟಲು ಬಿಗಿದುಕೊಂಡಿತ್ತು. ಮಾತುಗಳು ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಅಪ್ಪನಿಗೆ ಬೆಂಗಳೂರು ತೋರಿಸೋ ವಿಚಾರಕ್ಕೆ ನಾನು ಮನಸ್ಸು ಮಾಡಲೇ ಇಲ್ಲ. ಅವರು ನನ್ನ ಜೀವನದಲ್ಲಿ ದುಡ್ಡು ಇದ್ದಾಗ ಇಹಲೋಕ ತ್ಯಜಿಸಿ ಹೋಗೆ ಬಿಟ್ಟರು. ನನ್ನ ಅಪ್ಪನಿಗೆ ಇಲ್ಲಿ ಕರೆತಂದು ನೋಡಿಕೊಳ್ಳುವ ಆಸೆ ಕೈಗೂಡಲೇ ಇಲ್ಲವೆಂದು ತಮ್ಮ ಟಿ ಷರ್ಟ್ ಅಂಚಿನಿಂದ ಕಣ್ಣು ಒರೆಸಿಕೊಂಡರು. ಸಾಧಕರ ಕುರ್ಚಿಯಲ್ಲಿ ಕುಳಿತಿದ್ದ ಚಿಕ್ಕಣ್ಣ ಅತ್ತರೆ, ಎದುರಿಗೆ ಅವರ ತಾಯಿ, ಸಹೋದರಿಯರು ಸೀರೆಯ ಅಂಚಿನಿಂದ ಕಣ್ಣು ಒರೆಸಿಕೊಂಡಿದ್ದು ಕಂಡುಬಂತು.

ಎಲ್ಲರನ್ನು ನಗಿಸುವವರ ಜೀವನದಲ್ಲಿ ನಗಲಾರದಷ್ಟು ದುಃಖವಿರುತ್ತೆ. ಹಾಸ್ಯನಟ ಚಿಕ್ಕಣ್ಣ ಅವರ ಜೀವನ ಸಹ ಹಾಗೇ ಇದೆ ಅನ್ನೋದು ಅವರು ವೀಕೆಂಡ್​ ಟೆಂಟ್​​ಗೆ ಬಂದಾಗ ಗೊತ್ತಾಗಿದೆ.

ಭಾನುವಾರದ ಸಂಚಿಕೆಯಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದ ಹೆಸರಾಂತ ಹಾಸ್ಯ ನಟ ಚಿಕ್ಕಣ್ಣ, ತಮ್ಮ ತಂದೆ ಬೈರೇಗೌಡರನ್ನು ನೆನದು ಕಣ್ಣೀರಿನ ಕೋಡಿ ಹರಿಸಿದರು. ಬಾಲ್ಯದಲ್ಲಿ ಅಪ್ಪನಿಂದ ತಿಂದ ಏಟುಗಳನ್ನು ಮೆಲುಕು ಹಾಕಿದ ಅವರು, ಅಪಘಾತದಿಂದ ಆಸ್ಪತ್ರೆಗೆ ಸೇರಿದ ಅಪ್ಪನನ್ನು ಉಳಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೆ ಅವರನ್ನು ಕಳೆದುಕೊಂಡಾಗಾದ ಆದ ದುಃಖವನ್ನು ನೆನೆದ ಚಿಕ್ಕಣ್ಣ ಅವರಿಗೆ ತಮ್ಮ ಕಣ್ಣುಗಳಿಂದ ಸುರಿಯುತ್ತಿದ್ದ ನೀರುಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ.

ಅವರಮ್ಮ, ಸಹೋದರಿಯರು ಗಾರೆ ಕೆಲಸ ಮಾಡಿ ಜೀವನ ಸಾಗಿಸಿದ್ದನ್ನು ನೆನಪಿಸಿಕೊಂಡು ಮಾತಾಡುವ ವೇಳೆ ಚಿಕ್ಕಣ್ಣನ ಗಂಟಲು ಬಿಗಿದುಕೊಂಡಿತ್ತು. ಮಾತುಗಳು ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಅಪ್ಪನಿಗೆ ಬೆಂಗಳೂರು ತೋರಿಸೋ ವಿಚಾರಕ್ಕೆ ನಾನು ಮನಸ್ಸು ಮಾಡಲೇ ಇಲ್ಲ. ಅವರು ನನ್ನ ಜೀವನದಲ್ಲಿ ದುಡ್ಡು ಇದ್ದಾಗ ಇಹಲೋಕ ತ್ಯಜಿಸಿ ಹೋಗೆ ಬಿಟ್ಟರು. ನನ್ನ ಅಪ್ಪನಿಗೆ ಇಲ್ಲಿ ಕರೆತಂದು ನೋಡಿಕೊಳ್ಳುವ ಆಸೆ ಕೈಗೂಡಲೇ ಇಲ್ಲವೆಂದು ತಮ್ಮ ಟಿ ಷರ್ಟ್ ಅಂಚಿನಿಂದ ಕಣ್ಣು ಒರೆಸಿಕೊಂಡರು. ಸಾಧಕರ ಕುರ್ಚಿಯಲ್ಲಿ ಕುಳಿತಿದ್ದ ಚಿಕ್ಕಣ್ಣ ಅತ್ತರೆ, ಎದುರಿಗೆ ಅವರ ತಾಯಿ, ಸಹೋದರಿಯರು ಸೀರೆಯ ಅಂಚಿನಿಂದ ಕಣ್ಣು ಒರೆಸಿಕೊಂಡಿದ್ದು ಕಂಡುಬಂತು.

ಎಲ್ಲರನ್ನು ನಗಿಸುವವರ ಜೀವನದಲ್ಲಿ ನಗಲಾರದಷ್ಟು ದುಃಖವಿರುತ್ತೆ. ಹಾಸ್ಯನಟ ಚಿಕ್ಕಣ್ಣ ಅವರ ಜೀವನ ಸಹ ಹಾಗೇ ಇದೆ ಅನ್ನೋದು ಅವರು ವೀಕೆಂಡ್​ ಟೆಂಟ್​​ಗೆ ಬಂದಾಗ ಗೊತ್ತಾಗಿದೆ.

ನಗೆ ನಟ ಚಿಕ್ಕಣ್ಣ ಬಿಕ್ಕಿ ಬಿಕ್ಕಿ ಆತ್ತರು

ಈ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಣ್ಣೀರು ಇಲ್ಲ ಅಂದರೆ ಗಿಟ್ಟೋದಿಲ್ಲ ಅಂತ ಕಾಣುತ್ತೆ. ಅದೆಂತಹ ಮಹನೀಯರು ಬಂದು ಕುಳಿತರು ಭಾವನಾತ್ಮಕ ಸನ್ನಿವೇಶ ಎದುರಾಗಿ ಕಣ್ಣಂಚಿನಲ್ಲಿ ಬಂದ ಹನಿಯನ್ನು ಒರಸಿಕೊಂಡಿದ್ದು ಹೆಚ್ಚಾಗಿ ನೋಡಿದ್ದೇವೆ. ಇನ್ನೂ ಚಿಕ್ಕಣ್ಣ ರೀತಿ ಕೆಲವರು ಬಿಕ್ಕಿ ಬಿಕ್ಕಿ ಅತ್ತಿದ್ದು ಆಗಿದೆ.

ಆದರೆ ಹೆಸರಾಂತ ನಗೆ ನಟ ಚಿಕ್ಕಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದು ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರ ತಂದೆ ಬೈರೆ ಗೌಡರನ್ನು ನೆನದು. ನಮ್ಮಪ್ಪ ಯಾವಾಗಲೂ ನನಗೆ ತದಕ್ತ ಇದ್ದರು. ಒಮ್ಮೆ ಮದುವೆ ಮನೇಲಿ ಅಟ್ಟಾಡಿಸಿಕೊಂಡು ಹೊಡೆದರು ಕಾರಣ ಮದುವೆಗೆ ಸಂಬಂದಿಕಾರೊಬ್ಬರನ್ನ ಮದುವೆ ದಿನ ಆಮಂತ್ರಣ ನೀಡಿದ್ದೆ. ಒಮ್ಮೆ ನಾಯಿ ಕಚ್ಚಿದಾಗ ಸಹ ನನಗೆ ಏಟು ಕೊಟ್ಟಿದ್ದರು. ಅವರಿಗಂತೂ ನನಗೆ ಏಟು ಕೊಡ್ತಾ ಇರ್ಲಿಲ್ಲ ಅಂದರೆ ಸಮಾಧಾನವೇ ಇಲ್ಲ. ಆದರೆ ನಮ್ಮಮ್ಮ ನಿಗಮ್ಮ 15 ವರ್ಷ ಗಾರೆ ಕೆಲ್ಸ ಮಾಡಿ ನಮ್ಮ ಮನೆಯ ಆರು ಮಕ್ಕಳನ್ನು ಸಾಕುತ್ತಾ ಇದ್ದರು.

ಆದರೆ ಅವರು ಕೊಟ್ಟ ಏಟು ಬೆಳವಣಿಗೆ ಸಹ ಕಾರಣವಾಯಿತು ಅಂತ ಹೇಳಿಕೊಂಡು ಚಿಕ್ಕಣ್ಣ ಅವರನ್ನು ಬೆಂಗಳೂರು ತೋರಿಸೋ ವಿಚಾರಕ್ಕೆ ನಾನು ಮನಸ್ಸು ಮಾಡಲೇ ಇಲ್ಲ. ಅವರು ನನ್ನ ಜೀವನದಲ್ಲಿ ದುಡ್ಡು ಇದ್ದಾಗ ಇಹಲೋಕ ತ್ಯಜಿಸಿ ಹೊಗೆ ಬಿಟ್ಟರು. ನನ್ನ ಅಪ್ಪನಿಗೆ ಇಲ್ಲಿ ಕರೆತಂದು ನೋಡಿಕೊಳ್ಳುವ ಆಸೆ ಕೈಗೂಡಲೆಯಿಲ್ಲ ಎಂದು ತಮ್ಮ ಟಿ ಷರ್ಟ್ ಅಂಚಿನಿಂದ ಕಣ್ಣು ವರೆಸಿಕೊಂಡು ಸಾಧಕರ ಕುಚಿಯಲ್ಲಿ ಕುಳಿತ ಚಿಕ್ಕಣ್ಣ ಅತ್ತರೆ, ಎದುರುಗಡೆ ಅವರ ಸಂಬಂದಿಕರು ಸೀರೆಯ ಅಂಚಿನಿಂದ ಕಣ್ಣು ಒರೆಸಿಕೊಂಡಿದ್ದು ಕಂಡುಬಂದಿತು.

ಕಷ್ಟದ ದಿವಸಗಳನ್ನು ದಾಟಿ ಇಂದು ಚಿಕ್ಕಣ್ಣ ಜನಪ್ರಿಯತೆ ಜೊತೆ ಹಣ ಸಹ ಸಂಪಾದಿಸಿ ನಾಯಕ ಪಟ್ಟ ಸಹ ಏರುತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.