ETV Bharat / sitara

ರಂಗನಾಯಕಿಯ ಬ್ಯೂಟಿಫುಲ್​​ ವಿಲನ್​​ ಬಗ್ಗೆ ನಿಮಗೆಷ್ಟು ಗೊತ್ತು?

author img

By

Published : Jun 7, 2020, 12:24 AM IST

Updated : Jun 7, 2020, 1:02 PM IST

ರಂಗನಾಯಕಿ ಧಾರಾವಾಹಿಯಲ್ಲಿ ವಿಲನ್​ ಪಾತ್ರ ಮಾಡುತ್ತಿದ್ದ ಅನುಶ್ರೀ ಇಂದು ಕಿರುತೆರಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಹಾಗಾದ್ರೆ ಅವರ ಬಣ್ಣದ ಪಯಣದ ಬಗ್ಗೆ ಇಲ್ಲಿದೆ ಸ್ಮಾಲ್​​ ಸ್ಟೋರಿ.

About ranganayaki anushree
ರಂಗನಾಯಕಿಯ ಬ್ಯೂಟಿಫುಲ್​​ ವಿಲನ್​​ ಬಗ್ಗೆ ನಿಮಗೆ ಗೊತ್ತು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿ ಪ್ರಸಾರ ನಿಲ್ಲಿಸಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ರಂಗನಾಯಕಿ ಧಾರಾವಾಹಿ ಎಂದ ಕೂಡಲೇ ನೆನಪಾಗುವುದು ವಿಭಾ ಪಾತ್ರ. ಹೌದು, ರಂಗನಾಯಕಿ ಧಾರಾವಾಹಿಯಲ್ಲಿ ವಿಲನ್ ವಿಭಾಳಾಗಿ ಮೋಡಿ ಮಾಡುತ್ತಿದ್ದ ಚೆಂದುಳ್ಳಿ ಚೆಲುವೆ ಅನುಶ್ರೀ ಜನಾರ್ಧನ್ ಅವರ ಅಂದ ಚೆಂದಕ್ಕೆ ಮರುಳಾದವರು ಅದೆಷ್ಟೋ ಮಂದಿ.

ಅನುಶ್ರೀ

ರಂಗನಾಯಕಿಯಲ್ಲಿ ಖಡಕ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನುಶ್ರೀ , ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ನೋರು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ ಹಾಕುವ ಫೋಟೋಗಳನ್ನು ನೋಡಿದರೆ ಪಡ್ಡೆ ಹುಡುಗರ ದಿಲ್​​ಗೆ ಗಾಯವಾಗುವುದಂತೂ ಗ್ಯಾರಂಟಿ.

About ranganayaki anushree
ಅನುಶ್ರೀ

ದಂತದ ಗೊಂಬೆಯಂತಿರುವ ಅನುಶ್ರೀ ಜನಾರ್ಧನ್ ಇಂದು ಕಿರುತೆರೆ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಡ್ಯಾನ್ಸ್. ಯಾಕೆಂದರೆ ಸಣ್ಣ ಪ್ರಾಯದಿಂದಲೂ ಆಕೆಗಿದ್ದ ಕನಸು ಕೂಡಾ ಅದೊಂದೇ. ಮೂರು ಹೊತ್ತು ಡ್ಯಾನ್ಸ್​​ನ ಕುರಿತು ಜಪ ಮಾಡುತ್ತಿದ್ದ ಅನುಶ್ರೀಯ ಡ್ಯಾನ್ಸ್ ನೋಡಿದ ಸ್ನೇಹಿತರು ಧಾರಾವಾಹಿ ಆಡಿಶನ್ ನಡಿತಿದೆ. ಟ್ರೈ ಮಾಡಿ ನೋಡು ಎಂದರು.

About ranganayaki anushree
ಅನುಶ್ರೀ

ಅದರಲ್ಲೇನಿದೆ ಎಂದು ಟ್ರೈ ಮಾಡಿದ ಅನುಶ್ರೀ ಅವರನ್ನು ಬಣ್ಣದ ಲೋಕ ಸ್ವಾಗತಿಸಿತು. ಮಹಾಕಾಳಿ ಧಾರಾವಾಹಿ ಮೂಲಕ ನಟನಾ ಯಾನಕ್ಕೆ ಮುನ್ನುಡಿ ಬರೆಸಿಕೊಂಡ ಸಕ್ಕರೆ ನಾಡಿನ ಬೆಡಗಿ ಮುಂದೆ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಶ್ರೀ ವಿಷ್ಣು ದಶಾವತಾರದಲ್ಲಿ ಅಭಿನಯಿಸಿರುವ ಈಕೆಗೆ ಹೆಸರು ತಂದು ಕೊಟ್ಟಿದ್ದು ರಂಗನಾಯಕಿಯ ವಿಭಾ ಪಾತ್ರ. ಧಾರಾವಾಹಿ ಪ್ರಸಾರ ಮುಗಿದಿದ್ದರೂ ಜನ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಮತ್ತೊಮ್ಮೆ ಬರಲಿ ಎಂದು ಆಶಿಸುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿ ಪ್ರಸಾರ ನಿಲ್ಲಿಸಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ರಂಗನಾಯಕಿ ಧಾರಾವಾಹಿ ಎಂದ ಕೂಡಲೇ ನೆನಪಾಗುವುದು ವಿಭಾ ಪಾತ್ರ. ಹೌದು, ರಂಗನಾಯಕಿ ಧಾರಾವಾಹಿಯಲ್ಲಿ ವಿಲನ್ ವಿಭಾಳಾಗಿ ಮೋಡಿ ಮಾಡುತ್ತಿದ್ದ ಚೆಂದುಳ್ಳಿ ಚೆಲುವೆ ಅನುಶ್ರೀ ಜನಾರ್ಧನ್ ಅವರ ಅಂದ ಚೆಂದಕ್ಕೆ ಮರುಳಾದವರು ಅದೆಷ್ಟೋ ಮಂದಿ.

ಅನುಶ್ರೀ

ರಂಗನಾಯಕಿಯಲ್ಲಿ ಖಡಕ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನುಶ್ರೀ , ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ನೋರು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ ಹಾಕುವ ಫೋಟೋಗಳನ್ನು ನೋಡಿದರೆ ಪಡ್ಡೆ ಹುಡುಗರ ದಿಲ್​​ಗೆ ಗಾಯವಾಗುವುದಂತೂ ಗ್ಯಾರಂಟಿ.

About ranganayaki anushree
ಅನುಶ್ರೀ

ದಂತದ ಗೊಂಬೆಯಂತಿರುವ ಅನುಶ್ರೀ ಜನಾರ್ಧನ್ ಇಂದು ಕಿರುತೆರೆ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಡ್ಯಾನ್ಸ್. ಯಾಕೆಂದರೆ ಸಣ್ಣ ಪ್ರಾಯದಿಂದಲೂ ಆಕೆಗಿದ್ದ ಕನಸು ಕೂಡಾ ಅದೊಂದೇ. ಮೂರು ಹೊತ್ತು ಡ್ಯಾನ್ಸ್​​ನ ಕುರಿತು ಜಪ ಮಾಡುತ್ತಿದ್ದ ಅನುಶ್ರೀಯ ಡ್ಯಾನ್ಸ್ ನೋಡಿದ ಸ್ನೇಹಿತರು ಧಾರಾವಾಹಿ ಆಡಿಶನ್ ನಡಿತಿದೆ. ಟ್ರೈ ಮಾಡಿ ನೋಡು ಎಂದರು.

About ranganayaki anushree
ಅನುಶ್ರೀ

ಅದರಲ್ಲೇನಿದೆ ಎಂದು ಟ್ರೈ ಮಾಡಿದ ಅನುಶ್ರೀ ಅವರನ್ನು ಬಣ್ಣದ ಲೋಕ ಸ್ವಾಗತಿಸಿತು. ಮಹಾಕಾಳಿ ಧಾರಾವಾಹಿ ಮೂಲಕ ನಟನಾ ಯಾನಕ್ಕೆ ಮುನ್ನುಡಿ ಬರೆಸಿಕೊಂಡ ಸಕ್ಕರೆ ನಾಡಿನ ಬೆಡಗಿ ಮುಂದೆ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಶ್ರೀ ವಿಷ್ಣು ದಶಾವತಾರದಲ್ಲಿ ಅಭಿನಯಿಸಿರುವ ಈಕೆಗೆ ಹೆಸರು ತಂದು ಕೊಟ್ಟಿದ್ದು ರಂಗನಾಯಕಿಯ ವಿಭಾ ಪಾತ್ರ. ಧಾರಾವಾಹಿ ಪ್ರಸಾರ ಮುಗಿದಿದ್ದರೂ ಜನ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಮತ್ತೊಮ್ಮೆ ಬರಲಿ ಎಂದು ಆಶಿಸುತ್ತಿದ್ದಾರೆ.

Last Updated : Jun 7, 2020, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.