ETV Bharat / sitara

'ಐ ಲವ್​​​ ಯು' ಮೆಚ್ಚಿದ ಪ್ರೇಕ್ಷಕ: ಪ್ರೇಯಸಿಯ ಒಲವೋ, ಮಡದಿಯ ಗೆಲುವೋ? - undefined

ಐ ಲವ್​ ಯು
author img

By

Published : Jun 14, 2019, 4:06 PM IST

ಆರ್​. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್​ ಅಭಿನಯದ ‘ಐ ಲವ್​ ಯು‘ ಸಿನಿಮಾ ಇಂದು ಕನ್ನಡ, ತೆಲುಗು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಈ ಸಿನಿಮಾದಲ್ಲಿ ಕೂಡಾ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಉಪೇಂದ್ರ ಹೇಳಿದರೂ ಇದು ಅವರ ಇತರ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಕಾಲೇಜು ವಿದ್ಯಾರ್ಥಿನಿ ಧಾರ್ಮಿಕ ( ರಚಿತಾ ರಾಮ್​) ಪ್ರೀತಿಯ ಬಗ್ಗೆ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆಯಲು ನಿರ್ಧರಿಸುತ್ತಾಳೆ. ಈ ವ್ಯಾಸಂಗದ ಬಗ್ಗೆ ತಿಳಿಯಲು ಸಂತೋಷ್ ನಾರಾಯಣ್ (ಉಪೇಂದ್ರ) ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಅವನ ಬಳಿ ಬಂದು ತನ್ನ ವ್ಯಾಸಂಗದ ವಿಚಾರವಾಗಿ ತಿಳಿಸುತ್ತಾಳೆ. ಪ್ರೀತಿಯನ್ನು ಪ್ರಾಕ್ಟಿಕಲ್ ಆಗಿ ತೋರಿಸುತ್ತೇನೆ ಎಂದು ಸಂತೋಷ್ ಹೇಳುತ್ತಾನೆ. ಆದರೆ ಧಾರ್ಮಿಕ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾಳೆ. ಕೆಲವು ದಿನಗಳ ನಂತರ ಇಬ್ಬರ ನಡುವೆ ಜಗಳ ನಡೆದು ಧಾರ್ಮಿಕ ಬೇರೆ ಸ್ಥಳಕ್ಕೆ ಹೊರಡುತ್ತಾಳೆ. ಆಗ ಸಂತೋಷ್ ಆಕೆಯ ಹಿಂದೆ ಹೋಗಿ ನಿಜವಾದ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಧಾರ್ಮಿಕ ಆತನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ.

i love you
'ಐ ಲವ್​ ಯು'

ಕೆಲವು ದಿನಗಳ ನಂತರ ಸಂತೋಷ್​ ಹಳ್ಳಿ ಹುಡುಗಿ ಗೌರಿ (ಸೋನುಗೌಡ)ಯನ್ನು ಮದುವೆಯಾಗಿ ಹೆಣ್ಣು ಮಗುವಿಗೆ ತಂದೆಯಾಗುತ್ತಾನೆ. ಜೊತೆಗೆ ಆಗರ್ಭ ಶ್ರೀಮಂತನಾಗುತ್ತಾನೆ. ಆದರೆ 10 ವರ್ಷಗಳಾದರೂ ಆತ ಧಾರ್ಮಿಕಳನ್ನು ಮಾತ್ರ ಮರೆಯುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಧಾರ್ಮಿಕ ಸಂತೋಷ್​​ಗೆ ಫೋನ್ ಮಾಡಿ ಆತನನ್ನು ಭೇಟಿಯಾಗಲು ಬಯಸುತ್ತಾಳೆ. ಇದರಿಂದ ಖುಷಿಯಾದ ಸಂತೋಷ್​​, ಆಕೆಗಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ಖರೀದಿಸಿ ಆಕೆ ಹೇಳಿದ ಜಾಗಕ್ಕೆ ಹೊರಡುತ್ತಾನೆ. ಆತ ಧಾರ್ಮಿಕಳನ್ನು ಭೇಟಿ ಮಾಡುತ್ತಾನೆಯೇ... ಆತನ ಪತ್ನಿ ಗೌರಿಗೆ ಈ ವಿಷಯ ತಿಳಿಯುವುದೇ.. ಆ ಉಂಗುರ ಯಾರ ಪಾಲಾಗುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಬಹಳ ದಿನಗಳ ನಂತರ ಉಪ್ಪಿಯನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ರಚಿತಾ ರಾಮ್​​​​ ಹಾಡೊಂದರಲ್ಲಿ ಸಖತ್ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸೋನುಗೌಡ ಚಿತ್ರಕ್ಕೆ ಟ್ವಿಸ್ಟ್ ನೀಡುತ್ತಾರೆ. ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಅನೇಕರು ಹೇಳುವುದೂ ಉಂಟು. ಪಿ.ಡಿ.ಸತೀಶ್ ಅವರ ಕಾಮಿಡಿ ಟೈಮಿಂಗ್ ಸಖತ್ ಮಜಾ ಕೊಡುತ್ತದೆ. ಡಾ. ಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಬರುವ ಮೂರು ಹಾಡುಗಳು ಮೆಲೋಡಿ ಆಗಿವೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಕೂಡಾ ಚೆನ್ನಾಗಿದೆ. ಸುಜ್ಞಾನ್ ತಮ್ಮ ಛಾಯಾಗ್ರಹಣದಲ್ಲಿ ಯಾವ ಕೊರತೆ ಇಲ್ಲದ ಹಾಗೆ ನೋಡಿಕೊಂಡಿದ್ದಾರೆ. ಪ್ರೀತಿ ಕಾಡುವುದು ಸಹಜ. ಆದರೆ ವಿವಾಹ ಬಂಧನ ಕಡೆಯವರೆಗೂ ಕರೆದೊಯ್ಯುವುದು ಎಂಬ ಸಂದೇಶವನ್ನೂ ಆರ್​.ಚಂದ್ರು ಚಿತ್ರದಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ‘ಐ ಲವ್ ಯು’ ಕೊಟ್ಟ ಕಾಸಿಗೆ ತೃಪ್ತಿ ನೀಡುವ ಸಿನಿಮಾ ಎನ್ನಬಹುದು.

ಆರ್​. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್​ ಅಭಿನಯದ ‘ಐ ಲವ್​ ಯು‘ ಸಿನಿಮಾ ಇಂದು ಕನ್ನಡ, ತೆಲುಗು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಈ ಸಿನಿಮಾದಲ್ಲಿ ಕೂಡಾ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಉಪೇಂದ್ರ ಹೇಳಿದರೂ ಇದು ಅವರ ಇತರ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಕಾಲೇಜು ವಿದ್ಯಾರ್ಥಿನಿ ಧಾರ್ಮಿಕ ( ರಚಿತಾ ರಾಮ್​) ಪ್ರೀತಿಯ ಬಗ್ಗೆ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆಯಲು ನಿರ್ಧರಿಸುತ್ತಾಳೆ. ಈ ವ್ಯಾಸಂಗದ ಬಗ್ಗೆ ತಿಳಿಯಲು ಸಂತೋಷ್ ನಾರಾಯಣ್ (ಉಪೇಂದ್ರ) ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಅವನ ಬಳಿ ಬಂದು ತನ್ನ ವ್ಯಾಸಂಗದ ವಿಚಾರವಾಗಿ ತಿಳಿಸುತ್ತಾಳೆ. ಪ್ರೀತಿಯನ್ನು ಪ್ರಾಕ್ಟಿಕಲ್ ಆಗಿ ತೋರಿಸುತ್ತೇನೆ ಎಂದು ಸಂತೋಷ್ ಹೇಳುತ್ತಾನೆ. ಆದರೆ ಧಾರ್ಮಿಕ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾಳೆ. ಕೆಲವು ದಿನಗಳ ನಂತರ ಇಬ್ಬರ ನಡುವೆ ಜಗಳ ನಡೆದು ಧಾರ್ಮಿಕ ಬೇರೆ ಸ್ಥಳಕ್ಕೆ ಹೊರಡುತ್ತಾಳೆ. ಆಗ ಸಂತೋಷ್ ಆಕೆಯ ಹಿಂದೆ ಹೋಗಿ ನಿಜವಾದ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಧಾರ್ಮಿಕ ಆತನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ.

i love you
'ಐ ಲವ್​ ಯು'

ಕೆಲವು ದಿನಗಳ ನಂತರ ಸಂತೋಷ್​ ಹಳ್ಳಿ ಹುಡುಗಿ ಗೌರಿ (ಸೋನುಗೌಡ)ಯನ್ನು ಮದುವೆಯಾಗಿ ಹೆಣ್ಣು ಮಗುವಿಗೆ ತಂದೆಯಾಗುತ್ತಾನೆ. ಜೊತೆಗೆ ಆಗರ್ಭ ಶ್ರೀಮಂತನಾಗುತ್ತಾನೆ. ಆದರೆ 10 ವರ್ಷಗಳಾದರೂ ಆತ ಧಾರ್ಮಿಕಳನ್ನು ಮಾತ್ರ ಮರೆಯುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಧಾರ್ಮಿಕ ಸಂತೋಷ್​​ಗೆ ಫೋನ್ ಮಾಡಿ ಆತನನ್ನು ಭೇಟಿಯಾಗಲು ಬಯಸುತ್ತಾಳೆ. ಇದರಿಂದ ಖುಷಿಯಾದ ಸಂತೋಷ್​​, ಆಕೆಗಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ಖರೀದಿಸಿ ಆಕೆ ಹೇಳಿದ ಜಾಗಕ್ಕೆ ಹೊರಡುತ್ತಾನೆ. ಆತ ಧಾರ್ಮಿಕಳನ್ನು ಭೇಟಿ ಮಾಡುತ್ತಾನೆಯೇ... ಆತನ ಪತ್ನಿ ಗೌರಿಗೆ ಈ ವಿಷಯ ತಿಳಿಯುವುದೇ.. ಆ ಉಂಗುರ ಯಾರ ಪಾಲಾಗುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಬಹಳ ದಿನಗಳ ನಂತರ ಉಪ್ಪಿಯನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ರಚಿತಾ ರಾಮ್​​​​ ಹಾಡೊಂದರಲ್ಲಿ ಸಖತ್ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸೋನುಗೌಡ ಚಿತ್ರಕ್ಕೆ ಟ್ವಿಸ್ಟ್ ನೀಡುತ್ತಾರೆ. ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಅನೇಕರು ಹೇಳುವುದೂ ಉಂಟು. ಪಿ.ಡಿ.ಸತೀಶ್ ಅವರ ಕಾಮಿಡಿ ಟೈಮಿಂಗ್ ಸಖತ್ ಮಜಾ ಕೊಡುತ್ತದೆ. ಡಾ. ಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಬರುವ ಮೂರು ಹಾಡುಗಳು ಮೆಲೋಡಿ ಆಗಿವೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಕೂಡಾ ಚೆನ್ನಾಗಿದೆ. ಸುಜ್ಞಾನ್ ತಮ್ಮ ಛಾಯಾಗ್ರಹಣದಲ್ಲಿ ಯಾವ ಕೊರತೆ ಇಲ್ಲದ ಹಾಗೆ ನೋಡಿಕೊಂಡಿದ್ದಾರೆ. ಪ್ರೀತಿ ಕಾಡುವುದು ಸಹಜ. ಆದರೆ ವಿವಾಹ ಬಂಧನ ಕಡೆಯವರೆಗೂ ಕರೆದೊಯ್ಯುವುದು ಎಂಬ ಸಂದೇಶವನ್ನೂ ಆರ್​.ಚಂದ್ರು ಚಿತ್ರದಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ‘ಐ ಲವ್ ಯು’ ಕೊಟ್ಟ ಕಾಸಿಗೆ ತೃಪ್ತಿ ನೀಡುವ ಸಿನಿಮಾ ಎನ್ನಬಹುದು.

ಐ ಲವ್ ಯು ಚಿತ್ರ ವಿಮರ್ಶೆ

ಉಪ್ಪಿ ಒಲವು ಪ್ರೇಯಸಿಯ ಬಲವು ಮಡದಿಯ ಗೆಲುವು

ಅವದಿ – 120 ನಿಮಿಷ ಕ್ಯಾಟಗರಿ – ಲವ್ ಸ್ಟೋರಿ, ರೇಟಿಂಗ್ – 3.5/5

ಚಿತ್ರ – ಐ ಲವ್ ಯು, ನಿರ್ಮಾಪಕ = ಆ ಚಂದ್ರು, ನಿರ್ದೇಶನ – ಆರ್ ಚಂದ್ರು, ಸಂಗೀತ – ಡಾ ಕಿರಣ್, ಛಾಯಾಗ್ರಹಣ – ಸುಜ್ಞಾನ್, ತಾರಾಗಣ – ಉಪೇಂದ್ರ, ರಚಿತ ರಾಮ್, ಸೋನು ಗೌಡ, ಪಿ ಡಿ ಸತೀಶ್, ಬ್ರಹ್ಮನಂದಾಮ್ ಹಾಗೂ ಇತರರು.

ಇದು ಆಧುನಿಕ ಎರಡು ಕನಸು (1974 ರಲ್ಲಿ ಬಿಡುಗಡೆ ಆದ) ಸಿನಿಮಾ ಅಂತ ಹೇಳಬಹುದು. ನಿರ್ದೇಶಕ ಆ ಚಂದ್ರು ಅಂದಿನ ಅಣ್ಣಾವ್ರ ಜೊತೆ ಕಲ್ಪನ, ಮಂಜುಳ ಅಭಿನಯಿಸಿದ ಎರಡು ಕನಸು ಚಿತ್ರವನ್ನು ಇಂದಿನ ದಿನಕ್ಕೆ ಒಗ್ಗಿಸಿಕೊಂಡಿದ್ದಾರೆ. ಪ್ರೀತಿ ಒಂದು ಕಡೆ, ಮದುವೆ ಮತ್ತೊಬ್ಬರ ಜೊತೆಯಲ್ಲಿ ಹ್ಯಾಗೆ ಡಾ ರಾಜಕುಮಾರ್ ಅನುಭವಿಸಿದರೋ ಅದನ್ನೇ ಉಪೇಂದ್ರ ಸಹ ಇಲ್ಲಿ ಅನುಭವಿಸುವುದು. ಹೇಳಿ ಕೇಳಿ ಆ ಎರಡು ಕನಸು ಚಿತ್ರದಲ್ಲಿ ಬರುವ ಒಂದು ರಾಗದ ಹಾಡು ತೆರೆಯೋ ಬಾಗಿಲನು....ಬೇರೆ ಪದಗಳಿಂದ ಇಲ್ಲಿ ತುಂಬಲಾಗಿದೆ.

ಪ್ರೀತಿ, ಪ್ರೇಮ, ಎಲ್ಲ ಪುಸ್ತಕದ ಬದನೆ ಕಾಯಿ ಎಂದು ಎಂದೋ ಹೇಳಿದ ಸಂತೋಷ್ ನಾರಾಯಣ್ (ಉಪೇಂದ್ರ) ಹತ್ತು ವರ್ಷವಾದರೂ ಧಾರ್ಮಿಕ (ರಚಿತ ರಾಮ್) ಮನಸಿನಿಂದ ಮರೆತಿಲ್ಲ. ಸಂತೋಷ್ ತನ್ನ ಕನಸಿನಲ್ಲೂ ಸಹ ಅವಳ ಹೆಸರು ಕನವರಿಸುತ್ತಾನೆ. ಆದರೆ ಅವನಿಗೆ ಈಗಿನ ಜೀವನದಲ್ಲಿ ಪತ್ನಿ ಗೌರಿ (ಸೋನು ಗೌಡ) ಹಾಗೂ ಒಂದು ಹೆಣ್ಣು ಮಗು ಇದೆ. 10 ವರ್ಷದಲ್ಲಿ ಒಮ್ಮೆಯೂ ಕಾಣದ ಧಾರ್ಮಿಕ ಈಗ ಮತ್ತೆ ಫೋನ್ ಮಾಡಿದ್ದಾಳೆ. ನಿನ್ನನ್ನು ಬೇಟಿ ಮಾಡಬೇಕು ಒಂದು ರೂಂ ಅಲ್ಲಿ ಇಬ್ಬರು ಕುಳಿತು ಮಾತನಾಡುವ ಅಂತ ಹೇಳುತ್ತಾಳೆ.

ಸಂತೋಷ್ ಸ್ನೇಹಿತರು ಇದಕ್ಕೆ ಒಂದು ಸರಿಯಾದ ಸಮಯ ಧಾರ್ಮಿಕ ನಿನಗಾಗಿ ಬರುತ್ತಿದ್ದಾಳೆ ನಿನ್ನ ಆಸೆ ತೀರಿಸಿಕೊ ಅಂತ ಹೇಳುತ್ತಾರೆ. ಸಂತೋಷ್ ಆಗರ್ಭ ಶ್ರೀಮಂತ ಈಗ ಒಂದು ದೊಡ್ಡ ಹೊಟೇಲ್ ಅಲ್ಲಿ ರೂಂ ಸಹ ಬುಕ್ ಮಾಡುತ್ತಾನೆ.

ಯಾರಿದು ಧಾರ್ಮಿಕ? ಕಾಲೇಜಿನ ವಿಧ್ಯಾರ್ತಿ ಧಾರ್ಮಿಕ ಪ್ರೀತಿಯ ಬಗ್ಗೆ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆಯಬೇಕು ಅಂತ ಇರುವವಳು. ಧಾರ್ಮಿಕ ಈ ವ್ಯಾಸಂಗದ ಬಗ್ಗೆ ಸಂತೋಷ್ ಸರಿಯಾದ ವ್ಯಕ್ತಿ ಎಂದು ಅವನಿಂದ ನಿಜವಾದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಶುರು ಮಾಡುತ್ತಾಳೆ. ಸಂತೋಷ್ ಪ್ರೀತಿ ಅಂದರೆ ಪ್ರಕ್ಟಿಕಲ್ ಆಗಿ ತೋರಿಸುತ್ತೇನೆ ಅಂದರೆ ಧಾರ್ಮಿಕ ಪ್ರೀತಿ ಅಂದರೆ ಒಲವೇ ಜೀವನ ಸಾಕ್ಷಾತ್ಕಾರವೇ ಪ್ರೀತಿ ಅನ್ನುತ್ತಾಳೆ. ಸಂತೋಷ್ ಹಾಗೂ ಧಾರ್ಮಿಕ ನಡುವೆ ಪರಸ್ಪರ ಮಾತು ಕಥೆ ನಡೆದು ಹೋಗುತ್ತದೆ. ಕೋಪಗೊಂಡ ಧಾರ್ಮಿಕ ಬೇರೆ ಸ್ಥಳಕ್ಕೆ ಹೊರಟರು, ಸಂತೋಷ್ ಹಿಂಬಾಲಿಸಿ ಅವನ ನಿಜವಾದ ಪ್ರೀತಿಯನ್ನು ನಿವೇಧನೆ ಮಾಡಿಕೊಳ್ಳುತ್ತಾನೆ.

ಇದೆ ಸಂದರ್ಭಕ್ಕೆ ಕಾಯುತ್ತಾ ಇದ್ದ ಧಾರ್ಮಿಕ ತನ್ನ ಅಧ್ಯಯನಕ್ಕೆ ಬೇಕಾದ್ದ ಎರಡು ಪುಟಗಳನ್ನು ನೀನು ನೀಡಿದೆ ಎಂದು ಸಂತೋಷ್ ಪ್ರೀತಿಯನ್ನು ತಿರಸ್ಕರಿಸುತ್ತಾಳೆ. ಅಲ್ಲಿಂದಲೆ ಸಂತೋಷ್ ತನ್ನ ಜೀವನದಲ್ಲಿ ಬದಲಾಗಿ, ಹಳ್ಳಿ ಹುಡುಗಿ ಗೌರಿಯನ್ನು ಮಧುವೆ ಆಗಿ, ಮಗಳಿಗೆ ತಂದೆಯಾಗುತ್ತಾನೆ. ಆಗರ್ಭ ಶ್ರೀಮಂತ ಸಹ ಆಗುತ್ತಾನೆ.

ಆದರೆ ನೆನಪು ಇದೆಯಲ್ಲ ಅದು ಸಂತೋಷ್ ಜೀವನದಲ್ಲಿ ಮತ್ತೆ ಮರೆಕಳಿಸುತ್ತದೆ. ಧಾರ್ಮಿಕ ಫೋನಾಯಿಸಿದಾಗ 3.5 ಕೋಟಿ ಬೆಲೆಯ ವಜ್ರದ ರಿಂಗ್ ಪಡೆದು ಬೇಟಿಯಾಗಲು ಹೋಗುತ್ತಾನೆ....ಆಮೇಲೆ ಏನಾಯಿತು, ಆ ವಜ್ರದ ರಿಂಗ್ ಯಾರ ಪಾಲಿಗೆ ಸೇರಿತು ಎಂಬುದು ನೀವು ನೋಡಿ ತಿಳಿಯಬೇಕು.

ಉಪೇಂದ್ರ ಈ ಸಿನಿಮಾ ಇಂದ ಅಭಿಮಾನಿಗಳ ಚಕ್ರವರ್ತಿ ಎಂದು ಬಿರುದಾಂಕಿತವಾಗಿದ್ದಾರೆ. ಒಂದೆರಡು ಫೈಟ್, ಅಭಿಮಾನಿಗಳಿಗೆ ಒಪ್ಪುವ ಸಂಭಾಷಣೆ, ಒಂದು ರೊಮ್ಯಾಂಟಿಕ್ ಹಾಡು ಅಭಿಮಾನಿಗಳು ಕೊಟ್ಟ ಕಾಸಿಗೆ ಮೋಸವಿಲ್ಲ. ರಚಿತ ರಾಮ್ ಸಕ್ಕತ್ ಹಾಟ್ ಆಗಿ ಒಂದು ಹಾಡಿನಲ್ಲಿ ಕಂಗೊಳಿಸಿದರೆ, ಅವರ ಸಂಭಾಷಣೆ ಶೈಲಿ ಚನ್ನಾಗಿದೆ. ಬಾತ್ ರೂಂ ಅಲ್ಲಿ ಬರುವ ದೃಶ್ಯ ಹಾಗೂ ಆಲಿಂಗನದ ದೃಶ್ಯಗಳು ಅವರಿಗೆ ಹೊಸದು ಪಡ್ಡೆ ಹುಡುಗರಿಗೆ ನಿದ್ದೆ ಕೆಡಿಸುತ್ತದೆ.

ಸೋನು ಗೌಡ ಗೌರಿ ಆಗಿ ಚಿತ್ರಕ್ಕೆ ಒಂದು ಟ್ವಿಸ್ಟ್ ನೀಡುತ್ತಾರೆ. ಇದ್ದರೆ ಇಂತ ಹೆಂಡತಿ ಇರಬೇಕು ಅಂತ ಅನೇಕರು ಹೇಳುವುದು ಉಂಟು. ಪಿ ಡಿ ಸತೀಶ್ ಅವರ ಕಾಮಿಡಿ ಟೈಮಿಂಗ್ ಸಕ್ಕತ್ ಮಜಾ ಕೊಡುತ್ತದೆ.

ಡಾ ಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಮೇಲೋಡಿ ಆಗಿದೆ. ಗುರುಕಿರಣ್ ಅವರ ಹಿನ್ನಲೆ ಸಂಗೀತ ಸಹ ಮೆಚ್ಚಿಕೊಳ್ಳಬಹುದು. ಸುಜ್ಞಾನ್ ಅವರ ಛಾಯಾಗ್ರಹಣದಲ್ಲಿ ಯಾವ ಕೊರತೆ ಇಲ್ಲದ ಹಾಗೆ ನೋಡಿಕೊಂಡಿದ್ದಾರೆ.

ಪ್ರೀತಿ ಕಾಡುವುದು ಸಹಜ ಆದರೆ ವಿವಾಹ ಬಂದನ ಕಡೆಯವರೆಗೂ ಕರೆದೊಯ್ಯುವುದು ಎಂಬುದು ಸಹ ಸತ್ಯ ಎಂದು ಆರ್ ಚಂದ್ರು ಈ ಚಿತ್ರದಲ್ಲಿ ಹೇಳಿದ್ದಾರೆ.

ಮುಲಾಜಿಲ್ಲದೆ ಒಮ್ಮೆ ನೋಡಬಹುದಾದ ಸಿನಿಮಾ ಈ ಐ ಲವ್ ಯು’.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.