ETV Bharat / sitara

ಬೊಂಬೆ ಹೇಳುತೈತೆ ಹಾಡಿನಷ್ಟೇ ಹಿಟ್ ಆಗುವ ಸೂಚನೆ ಕೊಟ್ಟ 'ಯುವರತ್ನ' ಪಾಠಶಾಲಾ ಹಾಡು

author img

By

Published : Mar 3, 2021, 6:40 AM IST

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪವರ್​​​​​​​​​​​​​​​​​​​​​ ಸ್ಟಾರ್ ಪುನೀತ್ ನಟಿಸಿರುವ 'ಯುವರತ್ನ' ಸಿನಿಮಾದ 3ನೇ ಹಾಡು ಇಂದು ಮಧ್ಯಾಹ್ನ 3.28 ಕ್ಕೆ ಬಿಡುಗಡೆ ಆಗಲಿದೆ. ಈ ಹಾಡಿನ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ಅಭಿಮಾನಿಗಳು ಹಾಡು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Yuvaratna Pathashala song
'ಯುವರತ್ನ' ಪಾಠಶಾಲಾ ಹಾಡು

ಪುನೀತ್​ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ 2 ಹಾಡುಗಳು ಬಿಡುಗಡೆಯಾಗಿವೆ. ಇಂದು ಮಧ್ಯಾಹ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದ್ದು ಪುನೀತ್ ಅಭಿಮಾನಿಗಳು ಈ ಹೊಸ ಹಾಡನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ...ಧನ್ಯಾಗೆ ಶುಭ ಕೋರಿದ ಸ್ನೇಹಿತರು

'ಯುವರತ್ನ' ಚಿತ್ರದ ಪಾಠಶಾಲಾ ಹಾಡು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಪುನೀತ್ ರಾಜ್ ಕುಮಾರ್ ಹೇಳುವ ಹಾಗೆ, ಈ ಪಾಠಶಾಲಾ ಹಾಡು ಪ್ರತಿಯೊಬ್ಬರ ಶಾಲೆಯ ದಿನಗಳನ್ನು ನೆನಪಿಸಲಿದೆಯಂತೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. 'ರಾಜಕುಮಾರ' ಸಿನಿಮಾದ, ಬೊಂಬೆ ಹೇಳುತೈತೆ...ಹಾಡಿನಷ್ಟೇ ಈ ಪಾಠಶಾಲಾ ಹಾಡು ಕೂಡಾ ಸೂಪರ್ ಹಿಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. 'ಯುವರತ್ನ' ಪುನೀತ್ ರಾಜ್​ಕುಮಾರ್ ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಕಾಶ್ ರೈ, ಧನಂಜಯ್, ಸೋನುಗೌಡ, ದಿಗಂತ್ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ. ಎಸ್​​​.ಎಸ್​. ತಮನ್ ಸಂಗೀತ ನಿರ್ದೇಶನ ಇರುವ, ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​​​​​​​​​ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಏಪ್ರಿಲ್​ 1ರಂದು ಯುವರತ್ನ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಪುನೀತ್​ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ 2 ಹಾಡುಗಳು ಬಿಡುಗಡೆಯಾಗಿವೆ. ಇಂದು ಮಧ್ಯಾಹ್ನ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದ್ದು ಪುನೀತ್ ಅಭಿಮಾನಿಗಳು ಈ ಹೊಸ ಹಾಡನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ...ಧನ್ಯಾಗೆ ಶುಭ ಕೋರಿದ ಸ್ನೇಹಿತರು

'ಯುವರತ್ನ' ಚಿತ್ರದ ಪಾಠಶಾಲಾ ಹಾಡು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಪುನೀತ್ ರಾಜ್ ಕುಮಾರ್ ಹೇಳುವ ಹಾಗೆ, ಈ ಪಾಠಶಾಲಾ ಹಾಡು ಪ್ರತಿಯೊಬ್ಬರ ಶಾಲೆಯ ದಿನಗಳನ್ನು ನೆನಪಿಸಲಿದೆಯಂತೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. 'ರಾಜಕುಮಾರ' ಸಿನಿಮಾದ, ಬೊಂಬೆ ಹೇಳುತೈತೆ...ಹಾಡಿನಷ್ಟೇ ಈ ಪಾಠಶಾಲಾ ಹಾಡು ಕೂಡಾ ಸೂಪರ್ ಹಿಟ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. 'ಯುವರತ್ನ' ಪುನೀತ್ ರಾಜ್​ಕುಮಾರ್ ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಕಾಶ್ ರೈ, ಧನಂಜಯ್, ಸೋನುಗೌಡ, ದಿಗಂತ್ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ. ಎಸ್​​​.ಎಸ್​. ತಮನ್ ಸಂಗೀತ ನಿರ್ದೇಶನ ಇರುವ, ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​​​​​​​​​ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಏಪ್ರಿಲ್​ 1ರಂದು ಯುವರತ್ನ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.