ETV Bharat / sitara

'ಪಂಚತಂತ್ರ' ನಂತ್ರ ಮತ್ತೊಂದು ಚಿತ್ರಕ್ಕೆ ಗ್ರೀನ್​​​​​​ ಸಿಗ್ನಲ್​​​​​​​ ಕೊಟ್ಟ ವಿಹಾನ್​​​ ಗೌಡ - ವಿಹಾನ್ ಗೌಡ ಮತ್ತೊಂದು ಸಿನಿಮಾ

ಪಂಚತಂತ್ರ ಸಿನಿಮಾ ಮೂಲಕ ಕರ್ನಾಟದಲ್ಲಿ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ.

vihan gowda next in subhash chandra direction
ಮತ್ತೊಂದು ಚಿತ್ರಕ್ಕೆ ಗ್ರೀನ್​​ ಸಿಗ್ನಲ್​​​ ಕೊಟ್ಟ ವಿಹಾನ್ ಗೌಡ
author img

By

Published : Dec 10, 2019, 10:12 AM IST

ಯೋಗರಾಜ್​ ಭಟ್​​ ನಿರ್ದೇಶನದಲ್ಲಿ ಮೂಡಿಬಂದ ಪಂಚತಂತ್ರ ಸಿನಿಮಾ ಮೂಲಕ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ವಿಹಾನ್​ ಗೌಡ ನಟಿಸುತ್ತಿರುವ ಈ ಚಿತ್ರಕ್ಕೆ ಹೆಸರು ಇನ್ನೂ ನಿರ್ಧಾರವಾಗಿಲ್ಲ.

ನಿರ್ದೇಶಕ ಸುಭಾಷ್ ಚಂದ್ರ, ದರ್ಶನ್ ಅವರ ಆಫೀಸಿಯಲ್ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಆಸಕ್ತಿ ಹಾಗೂ ಶ್ರದ್ಧೆ ಗಮನಿಸಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಕೆಲಸ ಮಾಡಲು ದರ್ಶನ್​​ ಅವಕಾಶ ಕಲ್ಪಿಸಿದ್ದರು.

ಈ ಸಿನಿಮಾ ಶೂಟಿಂಗ್​​​ ಮುಂಬರುವ ಜನವರಿಯಿಂದ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದಲ್ಲಿ ಶೂಟಿಂಗ್​ ಮಾಡಲಾಗುತ್ತದೆಯಂತೆ.

ಈ ಸಿನಿಮಾ 1990ರಿಂದ 2019ರ ಸಮಯದಲ್ಲಿ ಬರಹಗಾರನೊಬ್ಬನ ಜೀವನದ ಕಥೆಯನ್ನು ಹೇಳುತ್ತದೆಯಂತೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಹಾಯಕ, ಸುರೇಶ್ ರಾಜ್ ಸಂಗೀತ ನೀಡುತ್ತಿದ್ದು, ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಲಿದ್ದಾರೆ.

ಯೋಗರಾಜ್​ ಭಟ್​​ ನಿರ್ದೇಶನದಲ್ಲಿ ಮೂಡಿಬಂದ ಪಂಚತಂತ್ರ ಸಿನಿಮಾ ಮೂಲಕ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ವಿಹಾನ್​ ಗೌಡ ನಟಿಸುತ್ತಿರುವ ಈ ಚಿತ್ರಕ್ಕೆ ಹೆಸರು ಇನ್ನೂ ನಿರ್ಧಾರವಾಗಿಲ್ಲ.

ನಿರ್ದೇಶಕ ಸುಭಾಷ್ ಚಂದ್ರ, ದರ್ಶನ್ ಅವರ ಆಫೀಸಿಯಲ್ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಆಸಕ್ತಿ ಹಾಗೂ ಶ್ರದ್ಧೆ ಗಮನಿಸಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಕೆಲಸ ಮಾಡಲು ದರ್ಶನ್​​ ಅವಕಾಶ ಕಲ್ಪಿಸಿದ್ದರು.

ಈ ಸಿನಿಮಾ ಶೂಟಿಂಗ್​​​ ಮುಂಬರುವ ಜನವರಿಯಿಂದ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದಲ್ಲಿ ಶೂಟಿಂಗ್​ ಮಾಡಲಾಗುತ್ತದೆಯಂತೆ.

ಈ ಸಿನಿಮಾ 1990ರಿಂದ 2019ರ ಸಮಯದಲ್ಲಿ ಬರಹಗಾರನೊಬ್ಬನ ಜೀವನದ ಕಥೆಯನ್ನು ಹೇಳುತ್ತದೆಯಂತೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಹಾಯಕ, ಸುರೇಶ್ ರಾಜ್ ಸಂಗೀತ ನೀಡುತ್ತಿದ್ದು, ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಲಿದ್ದಾರೆ.

ವಿಹಾನ್ ಗೌಡ ಪಂಚತಂತ್ರ ನಾಯಕ ಮತ್ತೆ ಬಂದರು

 

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ....ಯೋಗರಾಜ ಭಟ್ಟರ ಸಾಲುಗಳಲ್ಲಿ ವಿಹಾನ್ ಗೌಡ ಹಾಗೂ ಸೋನಲ್ ಮೋಹಕ ಹಾಡು ನೆನಪಿದೆ ತಾನೇ. ಅದೇ ಪಂಚತಂತ್ರಸಿನಿಮಾದಲ್ಲಿ ನಟಿಸಿದ ವಿಹಾನ್ ಗೌಡ ನಿಧಾನವಾಗಿ ಅವರ ಆಯ್ಕೆ ಬಗ್ಗೆ ಗಮನ ಹರಿಸಿದ್ದಾರೆ.

 

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕ ಆದ ವ್ಯಕ್ತಿ ಎಂ ಸುಭಾಷ್ ಚಂದ್ರ ಈಗ ಸ್ವತಂತ್ರ ನಿರ್ದೇಶಕ ಆಗಿ ವಿಹಾನ್ ಗೌಡ ಅವರ ಮುಖ್ಯ ತಾರಾಗಣದಲ್ಲಿ ಪ್ರೊಡಕ್ಷನ್ ನಂ 1 ಚಿತ್ರಕ್ಕೆ ಮುಹೂರ್ತ ಆಚರಿಸಿಕೊಂಡಿದ್ದಾರೆ. ಇದು ಗ್ರೇಟ್ ಬ್ರೋಸ್ ಸಂಸ್ಥೆಯ ಪ್ರಥಮ ಚಿತ್ರ.

 

ಈ ಸುಭಾಷ್ ಚಂದ್ರ ದರ್ಶನ್ ಅವರ ಆಫೀಸಿಯಲ್ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ ಸಹ ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ದರ್ಶನ್ ಇವರ ಆಸಕ್ತಿ ಹಾಗೂ ಶ್ರದ್ದೆ ಗಮನಿಸಿ ಕುರುಕ್ಷೇತ್ರಸಿನಿಮಾಕ್ಕೆ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು.

 

ಇನ್ನೂ ಹೆಸರಿಡದ ಚಿತ್ರಕ್ಕೆ ಸುಭಾಷ್ ಅವರೇ ಕಥೆಯನ್ನು ಮಾಡಿದ್ದಾರೆ ಮತ್ತು ಹೊಸ ಸಂಸ್ಥೆ

ಗ್ರೇಟ್ ಬ್ರೋಸ್ ಪಿಕ್ಚರ್ಸ್ ಸಹ ಹುಟ್ಟು ಹಾಕಿದ್ದಾರೆ. ಮಂಜುನಾಥ್ ಹಾಗೂ ರಾಜೇಂದ್ರ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

 

ಜನವರಿ 2020 ರಿಂದ ಚಿತ್ರೀಕರಣ ಆರಂಭ ಆಗಲಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರ ಚಿತ್ರೀಕರಣದ ಸ್ಥಳಗಳು.

 

ಇದು 1990 ರಿಂದ 2019 ರ ಸಮಯದಲ್ಲಿ ಬರಹಗಾರನೊಬ್ಬನ ಜೀವನದ ಕಥೆ. ಇಂದಿನ ಪೀಳಿಗೆಗೆ ಸರಿಯಾದ ಸಿನಿಮಾ. ಜೊತೆಗೆ ಆಕ್ಷನ್, ತ್ರಿಲ್ ಸಹ ಮತ್ತು ತಂದೆ ಮಗನ ಭಾವನಾತ್ಮಕ ಸಂಬಂದ ಕಾಣಲಿದೆ.

 

ವಿಹಾನ್ ಗೌಡ ಅವರಿಗೆ ನಾಯಕಿ ಹುಡುಕಾಟ ನಡೆಯುತ್ತಿದೆ. ಎ ಆರ್ ರೆಹಮಾನ್ ಸಹಾಯಕ ಸುರೇಶ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಡಾ ವಿ ನಾಗೇಂದ್ರ ಪ್ರಸಾದ್ ಗೀತ ರಚನೆ, ಸುಂದರ್ ಪಿ ಛಾಯಾಗ್ರಹಣ, ಸುನಿಲ್ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.