ETV Bharat / sitara

ರೀಮೇಕ್​, ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಚಿತ್ರರಂಗ ಬೆಳೆಯುವುದಿಲ್ಲ...ಹಿರಿಯ ನಟ ಶಿವರಾಂ

ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇಲ್ಲಿ ಬಹಳಷ್ಟು ಪ್ರತಿಭಾವಂತರಿದ್ದು, ಒಳ್ಳೆಯ ಕಥೆಗಳನ್ನು ರಚಿಸಿ ಸಿನಿಮಾಗಳನ್ನು ಮಾಡಬೇಕು. ರೀಮೇಕ್​ ಹಾಗೂ ಡಬ್ಬಿಂಗ್ ಚಿತ್ರಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹಿರಿಯ ನಟ ಶಿವರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

author img

By

Published : Aug 21, 2019, 3:48 PM IST

ಹಿರಿಯ ನಟ ಶಿವರಾಂ

ರೀಮೇಕ್ ಹಾಗೂ ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಪ್ರಯೋಜನವಿಲ್ಲ. ಸ್ಯಾಂಡಲ್​​ವುಡ್ ಉಳಿಯಬೇಕು, ಬೆಳೆಯಬೇಕು ಎಂದಾದಲ್ಲಿ ಎಲ್ಲರಲ್ಲೂ ಒಳ್ಳೆಯ ಮನೋಭಾವ ಬೆಳೆಯಬೇಕು ಎಂದು ಹಿರಿಯ ನಟ ಶಿವರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟ ಶಿವರಾಂ

'ದೇವರು ಬೇಕಾಗಿದ್ದಾರೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಚಿತ್ರ ಗೆದ್ದರೆ ಎಲ್ಲರೂ ಆ ಸಕ್ಸಸ್ ಹಂಚಿಕೊಂಡು ಹೇಗೆ ಸಂಭ್ರಮಿಸುತ್ತಾರೋ ಒಂದು ಸಿನಿಮಾ ಸೋತಾಗ ಕೂಡಾ ಎಲ್ಲರೂ ಆ ಹೊಣೆಯನ್ನು ಹೊರಬೇಕು. ಆದರೆ ಇಲ್ಲಿ ಕೇವಲ ನಿರ್ಮಾಪಕ ಮಾತ್ರ ಈ ಬಗ್ಗೆ ಚಿಂತಿಸುತ್ತಾನೆ. ಇತರರು ಸೋತ ಚಿತ್ರಗಳ ಬಗ್ಗೆ ವ್ಯಂಗ್ಯವಾಡಿದರೆ ಯಾವ ಚಿತ್ರರಂಗ ಕೂಡಾ ಬೆಳೆಯುವುದಿಲ್ಲ. ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಯಾವುದೇ ಮುನ್ಸೂಚನೆ ಕೂಡಾ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ರೀಮೇಕ್ ಚಿತ್ರಗಳಿಂದ ಯಾರು ಬೆಳೆಯುತ್ತಿದ್ದಾರೆ..? ರೀಮೇಕ್ ಚಿತ್ರಗಳಿಂದ ನಾಯಕ ಹಾಗೂ ನಿರ್ದೇಶಕರ ನಡುವೆ ವಿವಾದ ಆಗಿರುವುದನ್ನು ನಾನು ನೋಡಿದ್ದೇನೆ. ಇನ್ನು ಡಬ್ಬಿಂಗ್ ಚಿತ್ರಗಳಿಂದ ಕೂಡಾ ಯಾವುದೇ ಪ್ರಯೋಜನವಿಲ್ಲ. ವೃತ್ತಿ ರಂಗಭೂಮಿ ಕಣ್ಮರೆಯಾಗುತ್ತಿದೆ. ನಮ್ಮ ಭಾಷಾ ವ್ಯಾಮೋಹ ಕಡಿಮೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಸಂಸ್ಕತಿ ಬೆಳೆಯಬೇಕು. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಈ ಸಮಸ್ಯೆಗಳನ್ನು ಬಗೆಹರಿಸಲು ಯಾರಾದರೂ ಮುಂದೆ ಬಂದರೆ ಶಿರಸಾವಹಿಸಿ ಅವರ ಜೊತೆ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಶಿವರಾಂ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರೀಮೇಕ್ ಹಾಗೂ ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಪ್ರಯೋಜನವಿಲ್ಲ. ಸ್ಯಾಂಡಲ್​​ವುಡ್ ಉಳಿಯಬೇಕು, ಬೆಳೆಯಬೇಕು ಎಂದಾದಲ್ಲಿ ಎಲ್ಲರಲ್ಲೂ ಒಳ್ಳೆಯ ಮನೋಭಾವ ಬೆಳೆಯಬೇಕು ಎಂದು ಹಿರಿಯ ನಟ ಶಿವರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟ ಶಿವರಾಂ

'ದೇವರು ಬೇಕಾಗಿದ್ದಾರೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಚಿತ್ರ ಗೆದ್ದರೆ ಎಲ್ಲರೂ ಆ ಸಕ್ಸಸ್ ಹಂಚಿಕೊಂಡು ಹೇಗೆ ಸಂಭ್ರಮಿಸುತ್ತಾರೋ ಒಂದು ಸಿನಿಮಾ ಸೋತಾಗ ಕೂಡಾ ಎಲ್ಲರೂ ಆ ಹೊಣೆಯನ್ನು ಹೊರಬೇಕು. ಆದರೆ ಇಲ್ಲಿ ಕೇವಲ ನಿರ್ಮಾಪಕ ಮಾತ್ರ ಈ ಬಗ್ಗೆ ಚಿಂತಿಸುತ್ತಾನೆ. ಇತರರು ಸೋತ ಚಿತ್ರಗಳ ಬಗ್ಗೆ ವ್ಯಂಗ್ಯವಾಡಿದರೆ ಯಾವ ಚಿತ್ರರಂಗ ಕೂಡಾ ಬೆಳೆಯುವುದಿಲ್ಲ. ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಯಾವುದೇ ಮುನ್ಸೂಚನೆ ಕೂಡಾ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ರೀಮೇಕ್ ಚಿತ್ರಗಳಿಂದ ಯಾರು ಬೆಳೆಯುತ್ತಿದ್ದಾರೆ..? ರೀಮೇಕ್ ಚಿತ್ರಗಳಿಂದ ನಾಯಕ ಹಾಗೂ ನಿರ್ದೇಶಕರ ನಡುವೆ ವಿವಾದ ಆಗಿರುವುದನ್ನು ನಾನು ನೋಡಿದ್ದೇನೆ. ಇನ್ನು ಡಬ್ಬಿಂಗ್ ಚಿತ್ರಗಳಿಂದ ಕೂಡಾ ಯಾವುದೇ ಪ್ರಯೋಜನವಿಲ್ಲ. ವೃತ್ತಿ ರಂಗಭೂಮಿ ಕಣ್ಮರೆಯಾಗುತ್ತಿದೆ. ನಮ್ಮ ಭಾಷಾ ವ್ಯಾಮೋಹ ಕಡಿಮೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಸಂಸ್ಕತಿ ಬೆಳೆಯಬೇಕು. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಈ ಸಮಸ್ಯೆಗಳನ್ನು ಬಗೆಹರಿಸಲು ಯಾರಾದರೂ ಮುಂದೆ ಬಂದರೆ ಶಿರಸಾವಹಿಸಿ ಅವರ ಜೊತೆ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಶಿವರಾಂ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Intro:ರಿಮೇಕ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ಏನು ಪ್ರಯೋಜನ ವಿಲ್ಲ. ಹಿರಿಯ ನಟ ಶಿವರಾಮ್ ಹೇಳಿಕೆ..!!!!


ರೀಮೇಕ್ ಚಿತ್ರಗಳನ್ನು ಮಾಡುವುದರಿಂದ ಕನ್ನಡ ಚಿತ್ರರಂಗಕ್ಕೆ ಏನು ಉಪಯೋಗವಿಲ್ಲ ಎಂದು ಹಿರಿಯ ನಟ ಶಿವರಾಮ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ಉಳಿಯಬೇಕು ಬೆಳೆಯ ಬೇಕು ಅಂದ್ರೆ ಎಲ್ಲರಲ್ಲೂ ಒಳ್ಳೆ ಮನೋಭಾವ ಬೆಳೆಯಬೇಕು.
ಒಂದು ಚಿತ್ರ ಯಶಸ್ವಿಯಾದರೆ ಇಡೀಚಿತ್ರರಂಗ ಖುಷಿ ಪಡಬೇಕು.ಅದೇ ರೀತಿ ಒಂದು ಚಿತ್ರ ಫೇಲ್ಯೂರ್ ಆದ್ರೆ ಚಿತ್ರದ ನಿರ್ಮಾಪಕ ಮಾತ್ರ ಅದರ ಬಗ್ಗೆ ಅದರ ಬಗ್ಗೆ ಚಿತಿಂಸದೆ.ಇಡೀ ಚಿತ್ರರಂಗ ಅದರ ಬಗ್ಗೆ ಯೋಚಿಸ ಬೇಕು.ಅದನ್ನು ಬಿಟ್ಟು ಸೋತ ಚಿತ್ರಗಳ ಬಗ್ಗೆ ವ್ಯಂಗ್ಯವಾಡಿದ್ರೆ ಚಿತ್ರರಂಗ ಬೆಳೆಯೋದು ಕಷ್ಟ.ಅಲ್ಲದೆ ಇತ್ತೀಚಿನ ಚಿತ್ರರಂಗ ಬೆಳವಣಿಗೆ ಕಾಣ್ತಿಲ್ಲ ಎಂದು ಹಿರಿಯ ನಟ ಶಿವರಾಮ್ ಹೇಳಿದ್ರು.ಅಲ್ಲದೆ ಇತ್ತೀಚಿನ
ದಿನಗಳಲ್ಲಿ ರಿಮೇಕ್ ಚಿತ್ರಗಳು ಹೆಚ್ಚಗಿ ಬರ್ತಿವೆ.ಅದ್ರೆ ರೀಮೆಕ್ ಚಿತ್ರಗಳಿಂದ ಯಾರು ಬೆಳೆಯುತ್ತಿದ್ದಾರೆ. ರಿಮೇಕ್ ನಿಂದ ಏನನ್ನು ಕ್ರಿಯೇಟ್ ಮಾಡ್ತಿರಾ?. ರಿಮೇಕ್ ಚಿತ್ರಗಳಿಂದ ನಾಯಕ ಮತ್ತು ನಿರ್ದೇಶಕರ ನಡುವೆ ವಿವಾದ ಅಗಿರೋದನ್ನ
ನಾನು ನೋಡಿದ್ದೇನೆ.ಇನ್ನೂ ಡಬ್ಬಿಂಗ್ ಚಿತ್ರಗಳಿಂದ ಏನು ಸಾಧ್ಯವಿಲ್ಲ.


Body:ಇನ್ನೂ ತಮಿಳಿನವರು ನೋಡಿ ಅವರು ಏನೆ ಮಾಡಿದ್ರು ಅವರ ಭಾಷೆಯಲ್ಲೇ ಮಾಡ್ತಾರೆ.ಅದರ ಜೊತೆಗೆ ಜಾಹಿರಾತುಗಳು ಸಹ ತಮಿಳಿನಲ್ಲೆ ಬರುತ್ತವೆ.ಅದ್ರೆ ನಮ್ಮಲಿ ಅದು ಸಾಧ್ಯವಿಲ್ಲ ಯಾಕೆ.ಅಲ್ಲದೆ ನಮ್ಮ ವೃತ್ತಿ ರಂಗಭೂಮಿಗಳು ಕಣ್ಮರೆಯಾಗುತ್ತಿವೆ. ನಮ್ಮ ಭಾಷ ವ್ಯಾಮೋಹ ಕಡಿಮೆಯಾಗಿದೆ. ಅಲ್ಲದೆ ಇಂಗ್ಲೀಷ್ ನಲ್ಲಿಟೈಟಲ್
ಇಟ್ಟು ಸಿನಿಮಾ ಮಾಡ್ತಾರೆ.ಯಾಕೆ ನಮ್ಮ ಭಾಷೆಯಲ್ಲಿ ಟೈಟಲ್ ಗಳಿಲ್ವ? ತಮಿಳರ ನೋಡಿ ಎಷ್ಟೆ ಕಷ್ಟವಾದ್ರು ಸಹ ಅವರ ಭಾಷೆಯಲ್ಲೇ ಸಿನಿಮಾಗೆ ಹೆಸರಿಡ್ತಾರೆ. ನಮ್ಮಲ್ಲು ಬುದ್ದಿಂತರಿದ್ದಾರೆ.ನಾವು ಕೂಡು ಕ್ರಿಯೇಟರ್ಸ್ ಗಳೆ ನಮಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ.ಅದರೆಒಳ್ಳೆಯದನ್ನು.
ಬೆಳೆಸುವ ಮನೋಸ್ಥಿತಿ ನಮ್ಮಲಿ ಇಲ್ಲವಾಗಿದೆ. ಸದ್ಯ ಚಿತ್ರರಂಗದಲ್ಲಿ ಸಮಸ್ಯೆಗಳಿವೆ, ಅದನ್ನು ಬಗೆಹರಿಸಬೇಕಿದೆ.ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾರಾದ್ರು ಮುಂದೆ ಬಂದ್ರೆ ನಾನು ಅವರ ಜೊತೆ ಶಿರಸವಹಿಸಿ ಜೊತೆಯಾಗಿ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಶಿವರಾಮ್ ಚಿತ್ರರಂಗದಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ರು.

ಸತೀಶ ಎಂಬಿ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.