ETV Bharat / sitara

ದೊಡ್ಮನೆಯವರ ಆಸ್ತಿಯನ್ನು ನಟ ದರ್ಶನ್​ಗೆ ಕೊಡಲಿಲ್ಲ: ಉಮಾಪತಿ ಸ್ಪಷ್ಟನೆ

author img

By

Published : Jul 17, 2021, 1:37 PM IST

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಆ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದು, ಅದನ್ನು ದರ್ಶನ್​ಗೆ ನೀಡಲು ಉಮಾಪತಿ ನಿರಾಕರಿಸಿದ್ದರು. ಆದರೆ ಈ ವಿಚಾರದಲ್ಲಿ ಯಾವ ಮನಸ್ಥಾಪವೂ ಆಗಿರಲಿಲ್ಲ ಅಂತಾ ಉಮಾಪತಿ ಸ್ಪಷ್ಟಪಡಿಸಿದ್ದಾರೆ .

Producer Umapati
ನಿರ್ಮಾಪಕ ಉಮಾಪತಿ

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಬಿಗ್ರೇಡ್ ರೋಡ್​ನಲ್ಲಿರುವ ರೆಸಿಡೆನ್ಸಿ ಹೋಟೆಲ್​ ಬಳಿ ರಾಘವೇಂದ್ರ ರಾಜ್​ ಕುಮಾರ್ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಬಿಲ್ಡಿಂಗ್ ಹೊಂದಿದ್ದರು. ಈ ಬಿಲ್ಡಿಂಗ್ ಅನ್ನು ನಾನು ಖರೀದಿಸಿದ್ದೆ ಎಂದು ಸ್ವತಃ ಉಮಾಪತಿ ತಿಳಿಸಿದ್ದು, ಈ ವ್ಯವಹಾರದಲ್ಲಿ ಯಾರೊಂದಿಗೂ ಯಾವುದೇ ತೊಂದರೆ, ಮನಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ನಿರ್ಮಾಪಕ ಉಮಾಪತಿ

ಉಮಾಪತಿ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು. ಆದರೆ, ಅದನ್ನು ದರ್ಶನ್​ಗೆ ನೀಡಲು ನಿರಾಕರಿಸಿದ್ದರು. ಅದು ದೊಡ್ಮನೆ(ರಾಜ್​ಕುಮಾರ್ ಕುಟುಂಬ) ಆಸ್ತಿಯಾಗಿದ್ದು, ದರ್ಶನ್​ಗೆ ಮಾರಿದ್ರೆ ಬೇರೆ ಆಯಾಮ ಪಡೆದುಕೊಳ್ಳುವ ಭೀತಿಯಿಂದ, ಆಸ್ತಿಯನ್ನ ಕೊಟ್ಟಿರಲಿಲ್ಲ ಅಂತ ಉಮಾಪತಿ ತಿಳಿಸಿದ್ದಾರೆ. ಇನ್ನು ನಟ ದರ್ಶನ್ ಕೋಪ ಮಾಡಿಕೊಂಡಿದ್ದರೂ ಅಂತಾನೂ ಅನ್ನಿಸಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ ಮೆಲಂಟಾ

ದೊಡ್ಮನೆಯವ್ರ ಆಸ್ತಿ ಕೊಟ್ರೆ ಸರಿ ಹೋಗಲ್ಲ ಎಂದು ನನಗೆ ಅನಿಸಿತ್ತು. ಈ ವಿಚಾರದಲ್ಲಿ ಪುನೀತ್ ಅವರನ್ನು ಎಳೆದು ತರಬೇಡಿ. ‌ನನ್ನ ಮತ್ತು ಪುನೀತ್ ನಡುವೆ ವ್ಯವಹಾರ ನಡೆದಿದೆ. ನಾನು ದುಡ್ಡು ಕೊಟ್ಟು ಅವ್ರ ಬಳಿ ಆಸ್ತಿ ಖರೀದಿಸಿದ್ದೇನೆ. ದರ್ಶನ್ ಅವರಿಗೆ ಮಾರಿದ್ರೂ ದುಡ್ಡು ತಗೊಂಡೇ ಮಾರುತ್ತಿದ್ದೆ. ಆ ಆಸ್ತಿಗೆ ಪರ್ಯಾಯವಾಗಿ ಬೇರೆ ಆಸ್ತಿ ನೀಡುವುದಾಗಿ ಹೇಳಿದ್ದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಬಿಗ್ರೇಡ್ ರೋಡ್​ನಲ್ಲಿರುವ ರೆಸಿಡೆನ್ಸಿ ಹೋಟೆಲ್​ ಬಳಿ ರಾಘವೇಂದ್ರ ರಾಜ್​ ಕುಮಾರ್ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಬಿಲ್ಡಿಂಗ್ ಹೊಂದಿದ್ದರು. ಈ ಬಿಲ್ಡಿಂಗ್ ಅನ್ನು ನಾನು ಖರೀದಿಸಿದ್ದೆ ಎಂದು ಸ್ವತಃ ಉಮಾಪತಿ ತಿಳಿಸಿದ್ದು, ಈ ವ್ಯವಹಾರದಲ್ಲಿ ಯಾರೊಂದಿಗೂ ಯಾವುದೇ ತೊಂದರೆ, ಮನಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ನಿರ್ಮಾಪಕ ಉಮಾಪತಿ

ಉಮಾಪತಿ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು. ಆದರೆ, ಅದನ್ನು ದರ್ಶನ್​ಗೆ ನೀಡಲು ನಿರಾಕರಿಸಿದ್ದರು. ಅದು ದೊಡ್ಮನೆ(ರಾಜ್​ಕುಮಾರ್ ಕುಟುಂಬ) ಆಸ್ತಿಯಾಗಿದ್ದು, ದರ್ಶನ್​ಗೆ ಮಾರಿದ್ರೆ ಬೇರೆ ಆಯಾಮ ಪಡೆದುಕೊಳ್ಳುವ ಭೀತಿಯಿಂದ, ಆಸ್ತಿಯನ್ನ ಕೊಟ್ಟಿರಲಿಲ್ಲ ಅಂತ ಉಮಾಪತಿ ತಿಳಿಸಿದ್ದಾರೆ. ಇನ್ನು ನಟ ದರ್ಶನ್ ಕೋಪ ಮಾಡಿಕೊಂಡಿದ್ದರೂ ಅಂತಾನೂ ಅನ್ನಿಸಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ ಮೆಲಂಟಾ

ದೊಡ್ಮನೆಯವ್ರ ಆಸ್ತಿ ಕೊಟ್ರೆ ಸರಿ ಹೋಗಲ್ಲ ಎಂದು ನನಗೆ ಅನಿಸಿತ್ತು. ಈ ವಿಚಾರದಲ್ಲಿ ಪುನೀತ್ ಅವರನ್ನು ಎಳೆದು ತರಬೇಡಿ. ‌ನನ್ನ ಮತ್ತು ಪುನೀತ್ ನಡುವೆ ವ್ಯವಹಾರ ನಡೆದಿದೆ. ನಾನು ದುಡ್ಡು ಕೊಟ್ಟು ಅವ್ರ ಬಳಿ ಆಸ್ತಿ ಖರೀದಿಸಿದ್ದೇನೆ. ದರ್ಶನ್ ಅವರಿಗೆ ಮಾರಿದ್ರೂ ದುಡ್ಡು ತಗೊಂಡೇ ಮಾರುತ್ತಿದ್ದೆ. ಆ ಆಸ್ತಿಗೆ ಪರ್ಯಾಯವಾಗಿ ಬೇರೆ ಆಸ್ತಿ ನೀಡುವುದಾಗಿ ಹೇಳಿದ್ದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.