ETV Bharat / sitara

ಹೊಸ ಪ್ರತಿಭೆಗಳ 'ನಾವೆಲ್ರೂ ಹಾಫ್ ಬಾಯಿಲ್ಡ್' ಚಿತ್ರಕ್ಕೆ ತಬಲಾ ನಾಣಿ ಡೈಲಾಗ್​​​​​​​​​​​ ಕಿಕ್​​...! - ನಾವೆಲ್ರೂ ಹಾಫ್ ಬಾಯಿಲ್ಡ್ ಚಿತ್ರಕ್ಕೆ ತಬಲಾ ನಾಣಿ ಡೈಲಾಗ್​​​

'ನಾವೆಲ್ರೂ ಹಾಫ್ ಬಾಯಿಲ್ಡ್' ಹಳ್ಳಿ ಸೊಗಡಿನ ನಾಲ್ಕು ಜನ ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ.

Half boiled movie
'ನಾವೆಲ್ರೂ ಹಾಫ್ ಬಾಯಿಲ್ಡ್'
author img

By

Published : Jan 11, 2020, 11:00 PM IST

ಈ ಸಿನಿಮಾ ಪ್ರಪಂಚವೇ ಹಾಗೆ. ಸ್ಟಾರ್ ನಟರ ಮಧ್ಯೆ ಉತ್ಸಾಹಿ ನಿರ್ದೇಶಕರು, ನಟರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಇಲ್ಲೊಂದು ಹೊಸಬರ ತಂಡವೊಂದು 'ನಾವೆಲ್ರೂ..ಹಾಫ್​ ಬಾಯಿಲ್ಡ್' ಎಂಬ ಹೆಸರಿಟ್ಟುಕೊಂಡು ಸಿನಿಮಾ ತಯಾರಿಸಿದೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.

'ನಾವೆಲ್ರೂ ಹಾಫ್ ಬಾಯಿಲ್ಡ್' ಸುದ್ದಿಗೋಷ್ಠಿ

ಇದು ಹಳ್ಳಿ ಸೊಗಡಿನ ನಾಲ್ಕು ಜನ ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ.ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಪ್ರಕಾರ ಇದು ಔಟ್ ಅ್ಯಂಡ್ ಔಟ್ ಕಾಮಿಡಿ ಸಿನಿಮಾವಂತೆ. ಆದರೆ ಈ ಸಿನಿಮಾ ಮಾಡಲು ನಿರ್ದೇಶಕ ಶಿವರಾಜ್ ಹಾಗೂ ಈ ಚಿತ್ರದ ಯುವ ನಟರು ಸಾಕಷ್ಟು ಚಾಲೆಂಜಿಂಗ್ ಎದುರಿಸಿದ್ದಾರಂತೆ.

Half boiled movie
'ನಾವೆಲ್ರೂ ಹಾಫ್ ಬಾಯಿಲ್ಡ್'

ಇನ್ನು ಈ ಯುವ ಪ್ರತಿಭೆಗಳ ಸಿನಿಮಾ ಮೇಲಿನ ಆಸಕ್ತಿ ನೋಡಿ ಅಮೀರ್ ಅಹಮದ್ ಎಂಬುವವರು ಹಣ ಹೂಡಲು ಮುಂದೆ ಬಂದಿದ್ದಾರೆ. ಈ ಚಿತ್ರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ನಾಲ್ಕು ಹುಡುಗರ ಜೊತೆ ಮಾತಂಗಿ ಪ್ರಸನ್ನ ಹಾಗೂ ಅವಿನ್ಯ ಶೆಟ್ಟಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಬಲಾ ನಾಣಿ, ಕರಿಸುಬ್ಬು, ಮಜಾ ಟಾಕೀಸ್ ಪವನ್, ಹಿರಿಯ ನಟ ಉಮೇಶ್ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಬಾಹುಬಲಿ, ಮಗಧೀರ ಸಿನಿಮಾಗಳ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ರಿವೀಲ್ ಆಗಿದ್ದು ಇದೇ ತಿಂಗಳ 24 ರಂದು ಸಿನಿಮಾ ತೆರೆಗೆ ಬರಲಿದೆ.

ಈ ಸಿನಿಮಾ ಪ್ರಪಂಚವೇ ಹಾಗೆ. ಸ್ಟಾರ್ ನಟರ ಮಧ್ಯೆ ಉತ್ಸಾಹಿ ನಿರ್ದೇಶಕರು, ನಟರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಇಲ್ಲೊಂದು ಹೊಸಬರ ತಂಡವೊಂದು 'ನಾವೆಲ್ರೂ..ಹಾಫ್​ ಬಾಯಿಲ್ಡ್' ಎಂಬ ಹೆಸರಿಟ್ಟುಕೊಂಡು ಸಿನಿಮಾ ತಯಾರಿಸಿದೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.

'ನಾವೆಲ್ರೂ ಹಾಫ್ ಬಾಯಿಲ್ಡ್' ಸುದ್ದಿಗೋಷ್ಠಿ

ಇದು ಹಳ್ಳಿ ಸೊಗಡಿನ ನಾಲ್ಕು ಜನ ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ.ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಪ್ರಕಾರ ಇದು ಔಟ್ ಅ್ಯಂಡ್ ಔಟ್ ಕಾಮಿಡಿ ಸಿನಿಮಾವಂತೆ. ಆದರೆ ಈ ಸಿನಿಮಾ ಮಾಡಲು ನಿರ್ದೇಶಕ ಶಿವರಾಜ್ ಹಾಗೂ ಈ ಚಿತ್ರದ ಯುವ ನಟರು ಸಾಕಷ್ಟು ಚಾಲೆಂಜಿಂಗ್ ಎದುರಿಸಿದ್ದಾರಂತೆ.

Half boiled movie
'ನಾವೆಲ್ರೂ ಹಾಫ್ ಬಾಯಿಲ್ಡ್'

ಇನ್ನು ಈ ಯುವ ಪ್ರತಿಭೆಗಳ ಸಿನಿಮಾ ಮೇಲಿನ ಆಸಕ್ತಿ ನೋಡಿ ಅಮೀರ್ ಅಹಮದ್ ಎಂಬುವವರು ಹಣ ಹೂಡಲು ಮುಂದೆ ಬಂದಿದ್ದಾರೆ. ಈ ಚಿತ್ರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ನಾಲ್ಕು ಹುಡುಗರ ಜೊತೆ ಮಾತಂಗಿ ಪ್ರಸನ್ನ ಹಾಗೂ ಅವಿನ್ಯ ಶೆಟ್ಟಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಬಲಾ ನಾಣಿ, ಕರಿಸುಬ್ಬು, ಮಜಾ ಟಾಕೀಸ್ ಪವನ್, ಹಿರಿಯ ನಟ ಉಮೇಶ್ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಬಾಹುಬಲಿ, ಮಗಧೀರ ಸಿನಿಮಾಗಳ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ರಿವೀಲ್ ಆಗಿದ್ದು ಇದೇ ತಿಂಗಳ 24 ರಂದು ಸಿನಿಮಾ ತೆರೆಗೆ ಬರಲಿದೆ.

Intro:Body:ಹೊಸ ಪ್ರತಿಭೆಗಳ ಹಾಫ್ ಬಾಯಿಲ್ಡ್ ಚಿತ್ರಕ್ಕೆ ತಬಲಾ ನಾಣಿಯ ಡೈಲಾಗ್ ಕಿಕ್!!!

ಈ ಸಿನಿಮಾ ಪ್ರಪಂಚನೇ ಹಾಗೇ ಸ್ಟಾರ್ ನಟರ ಮಧ್ಯೆ ಉತ್ಸಾಹಿ ನಿರ್ದೇಶಕರು, ನಟರನ್ನ ಕೈ ಬೀಸಿ ಕರೆಯುತ್ತನೆ ಇರುತ್ತೆ..ಇಲ್ಲೊಂದು ಹೊಸಬರ ಟೀಮ್ ಹಾಫ್ ಬಾಯಿಲ್ಡ್ ಎಂಬ ಟ್ಯಾಗ್ ಲೈನ್ ಇಟ್ಟು, ಬಿಡುಗಡೆಗೆ ಸಿದ್ಧವಾಗಿದೆ ನಾವೆಲ್ರೂ ಸಿನಿಮಾ..ಹಳ್ಳಿ ಸೊಗಡಿನ ನಾಲ್ಕು ಜನ ಹುಡುಗರ ಕಥೆ..ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಅಭಿನಯಿಸಿದ್ದು,. ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಬಹಳ ದಿನಗಳ ನಂತ್ರ ಹಾಫ್ ಬಾಯಿಲ್ಡ್ ಚಿತ್ರಕ್ಕೆ ಡೈಲಾಗ್ ಬರೆದಿರೋದು ಈ ಚಿತ್ರದ ಹೈಲೆಟ್ಸ್..ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ, ಬಿ.ಶಿವರಾಜ್ ವೆಂಕಟಾಚ್ಚ ಚೊಚ್ವಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.ನಿರ್ದೇಶಕ ಪ್ರಕಾರ ಔಟ್ ಅಂಟ್ ಔಟ್ ಕಾಮಿಡಿ ಚಿತ್ರವಂತೆ..ಆದ್ರೆ ಈ ಸಿನಿಮಾ ಮಾಡೋದಿಕ್ಕೆ ನಿರ್ದೇಶಕ ಶಿವರಾಜ್ ಹಾಗು ಈ ಚಿತ್ರದ ಯುವ ನಟರು ಸಾಕಷ್ಟು ಚಾಲೆಂಜಿಂಗ್ ನ್ನ ಎದುರಿಸಿದ್ದಾರೆ..ಅದಕ್ಕೆ ಬೆಸ್ಟ್ ಉದಾಹರಣೆ, ದಾವಣಗೆರೆಗೆ ಕಾರ್ ವರ್ಕ್ ಶಾಪ್ ನಲ್ಲಿ ನಿರ್ದೇಶಕ ಮತ್ತು ಚಿತ್ರದ ನಾಯಕ ನಟರು ಚಿತ್ರೀಕರಣಕ್ಕೆಂದು ಬಂದಿದ್ದರು. ಅದೇ ಸಮಯದಲ್ಲಿ ಚಿತ್ರೀಕರಣಕ್ಕೆ ಹಣ ನೀಡುತ್ತೇನೆ ಎಂದು ಹೇಳಿದ ನಿರ್ಮಾಪಕರೊಬ್ಬರು,
ಕಾಲ್ ಪಿಕ್ ಮಾಡದೆ ಇದ್ದದ್ದು ನಿರ್ದೇಶಕರಿಗೆ ತಲೆ ನೋವು ತರಿಸಿತ್ತು. ಆ ಟೈಮಲ್ಲಿ ಸಹಾಯಕ್ಕೆ ಬಂದಿದ್ದು, ಅಮೀರ್ ಅಹಮದ್ ಹೊಸ ನಿರ್ಮಾಪಕ.. ಈ ಯುವ ಪ್ರತಿಭೆಗಳ ಸಿನಿಮಾ ಆಸಕ್ತಿ ನೋಡಿ ಅಮೀರ್ ಅಹಮದ್ ಈ ಚಿತ್ರವನ್ನ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ..ಈ ನಾಲ್ಕು ಹುಡುಗರ ಜೊತೆ ಮಾತಂಗಿ ಪ್ರಸನ್ನ ಹಾಗು ಅವಿನ್ಯ ಶೆಟ್ಟಿ ಡಿಫ್ರೆಂಟ್ ಕ್ಯಾರೆಕ್ಟರ್ ಕಾಣಿಸಿಕೊಂಡಿದ್ದಾರೆ..ಇನ್ನು ತಬಲಾ ನಾಣಿ, ಕರಿಸುಬ್ಬು, ಮಜಾ ಟಾಕೀಸ್ ಪವನ್, ಹಿರಿಯ ನಟ ಉಮೇಶ್ ಅಭಿನಯಿಸಿದ್ದಾರೆ.ಈ ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಬಾಹುಬಲಿ, ಮಗಧೀರ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ನಟರಿಗೆ ಹೆಜ್ಜೆ ಹಾಕಿಸಿದ್ದಾರೆ.ಸದ್ಯ ಈ ಚಿತ್ರದ ಟೀಸರ್ ರಿವೀಲ್ ಮಾಡಿರೋ ನಾವೆಲ್ರೂ ಚಿತ್ರತಂಡ ಇದೇ 24ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ..


https://youtu.be/7sC9klWYgQUConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.