ETV Bharat / sitara

"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಸುಜೈಗೆ ತಂದಿತು ಸಂಕಷ್ಟ.. - ನನ್ನ ಪ್ರೀತಿಯ ರಾಮು ಸಿನಿಮಾ

ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್​ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಇನ್ನು ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.

ಹಾಸ್ಯನಟ ಸುಜೈ ಶಾಸ್ತ್ರೀ
author img

By

Published : Aug 3, 2019, 9:44 PM IST

ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್​ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ಸುಜೈ, ಈ ಪಾತ್ರದಿಂದ ನಿಜ ಜೀವನದಲ್ಲೂ ಕಷ್ಟ ಪಟ್ಟಿದ್ದಾರಂತೆ. ಕಣ್ಣಿನ ಕಪ್ಪು ಗುಡ್ಡೆಗಳನ್ನು ಪಕ್ಕಕ್ಕೆ ಸರಿಸಿ ಅಭಿನಯ ಮಾಡಬೇಕಿತ್ತಂತೆ. ಈ ಸಂದರ್ಭದಲ್ಲಿ ಸುಜೈಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ನನ್ನ ಪ್ರೀತಿಯ ರಾಮು ಸಿನಿಮಾ ಮಾಡುವಾಗ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸಿದ್ದರಂತೆ. ಆ ಸಿನಿಮಾದಲ್ಲಿ ದರ್ಶನ ತನ್ನ ಕಣ್ಣುಗಳ ಕಪ್ಪು ಭಾಗವನ್ನು ಮೇಲಕ್ಕೆ ಮಾಡಿಕೊಂಡು ಅಭಿನಯಿಸಿದ್ದರು. ಈ ಸಮಯದಲ್ಲಿ ದರ್ಶನ್​ಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ಈ ರೀತಿಯ ನಟನೆಯಿಂದ ಸುಜೈಗೆ ಕಣ್ಣಿನ ಸಮಸ್ಯೆ ಕಂಡುಬಂದಿದ್ದು, ಕೆಲವು ಬಾರಿ ಕಾರು ಚಲಾಯಿಸುವಾಗಲೂ ಸಮಸ್ಯೆ ಕಾಡಿತ್ತಂತೆ. ಆನಂತರ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಅದಕ್ಕೆ ಬೇಕಾದ ಔಷಧಿ ಪಡೆದು ಕೆಲವು ದಿವಸಗಳ ನಂತರ ಮಾಮೂಲು ಸ್ಥಿತಿಗೆ ಬಂದರಂತೆ.

ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್​ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ಸುಜೈ, ಈ ಪಾತ್ರದಿಂದ ನಿಜ ಜೀವನದಲ್ಲೂ ಕಷ್ಟ ಪಟ್ಟಿದ್ದಾರಂತೆ. ಕಣ್ಣಿನ ಕಪ್ಪು ಗುಡ್ಡೆಗಳನ್ನು ಪಕ್ಕಕ್ಕೆ ಸರಿಸಿ ಅಭಿನಯ ಮಾಡಬೇಕಿತ್ತಂತೆ. ಈ ಸಂದರ್ಭದಲ್ಲಿ ಸುಜೈಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ನನ್ನ ಪ್ರೀತಿಯ ರಾಮು ಸಿನಿಮಾ ಮಾಡುವಾಗ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸಿದ್ದರಂತೆ. ಆ ಸಿನಿಮಾದಲ್ಲಿ ದರ್ಶನ ತನ್ನ ಕಣ್ಣುಗಳ ಕಪ್ಪು ಭಾಗವನ್ನು ಮೇಲಕ್ಕೆ ಮಾಡಿಕೊಂಡು ಅಭಿನಯಿಸಿದ್ದರು. ಈ ಸಮಯದಲ್ಲಿ ದರ್ಶನ್​ಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ಈ ರೀತಿಯ ನಟನೆಯಿಂದ ಸುಜೈಗೆ ಕಣ್ಣಿನ ಸಮಸ್ಯೆ ಕಂಡುಬಂದಿದ್ದು, ಕೆಲವು ಬಾರಿ ಕಾರು ಚಲಾಯಿಸುವಾಗಲೂ ಸಮಸ್ಯೆ ಕಾಡಿತ್ತಂತೆ. ಆನಂತರ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಅದಕ್ಕೆ ಬೇಕಾದ ಔಷಧಿ ಪಡೆದು ಕೆಲವು ದಿವಸಗಳ ನಂತರ ಮಾಮೂಲು ಸ್ಥಿತಿಗೆ ಬಂದರಂತೆ.

ನಟ, ನಿರ್ದೇಶಕ ಸುಜೈ ಶಾಸ್ತ್ರೀ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ

ಹಾಸ್ಯ ನಟ ಸುಜೈ ಶಾಸ್ತ್ರೀ (ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್...) ಪ್ರಸಿದ್ದಿ ಪಡೆದು ನಿರ್ದೇಶನಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಇಂದ ಪಾದ ಬೆಳಸಿದ್ದಾರೆ. ಇಷ್ಟೊಂದು ವೇಗದಲ್ಲಿ ಒಬ್ಬ ಹಾಸ್ಯ ನಟ ನಿರ್ದೇಶನಕ್ಕೆ ಕಾಲಿಟ್ಟ ಉದಾಹರಣೆ ಇಲ್ಲ.

ಅದೆಲ್ಲ ಸರಿ ಈ ಚಿತ್ರಕ್ಕೆ ಸುಜೈ ಶಾಸ್ತ್ರೀ ಒಂದು ಪಾತ್ರವನ್ನು ಸಹ ಆಯ್ಕೆ ಮಾಡಿಕೊಂಡು ಅಭಿನಯಿಸಿದ್ದು ಅವರಿಗೆ ತೊಂದರೆಗೆ ಕಾರಣವಾಯಿತು. ಅದು ಅವರ ಕಣ್ಣನ್ನು ದೃಷ್ಟಿಸುವ ರೀತಿಯಿಂದ. ಕಣ್ಣಿನ ಗುಡ್ಡೆಯನ್ನು ಎಡ ಭಾಗದಲ್ಲಿ ಇಟ್ಟು – ವಂಡರಗಣ್ಣಿನ ಹಾಗೆ ನೋಡುವುದು ಅವರಿಗೆ ದೃಷ್ಟಿಯಲ್ಲಿ ಏರುಪೇರು ಆಗಲು ಶುರು ಆಯಿತು.

ಇದರ ಜೊತೆಗೆ ದಪ್ಪ ಗಾಜು ಬೇರೆ ಸುಜೈ ಶಾಸ್ತ್ರೀ ಸಾಕಪ್ಪ ಸಾಕು ಎಂದು ಅಂದುಕೊಳ್ಳುತ್ತಿದ್ದರಂತೆ. ಎಡಕ್ಕೆ ನಿಂತವರನ್ನು ಇವರು ಪಕ್ಕಕ್ಕೆ ಸರಿದು ನೋಡುವಂತೆ ಆಗುತ್ತಲಿತ್ತು, ಇನ್ನೂ ಕಣ್ಣಿನ ಗುಡ್ಡೆ ಮೇಲೆ ಇಟ್ಟು ಪಾತ್ರ ಮಾಡುವುದು ಮತ್ತಷ್ಟು ಕಷ್ಟ ಅಂತ ಅವರಿಗೆ ತಿಳಿದಿತ್ತು. ಇದಕ್ಕೆ ಉದಾಹರಣೆ ಛಾಲೆಂಜಿಂಗ್ ಸ್ಟಾರ್ ದರ್ಶನ್. ನನ್ನ ಪ್ರೀತಿಯ ರಾಮು ಚಿತ್ರಕ್ಕೆ ದರ್ಶನ್ ಅವರ ಕಣ್ಣಿನ ಕಪ್ಪು ಗುಡ್ಡೆಯನ್ನು ಕಣ್ಣಿನ ಮೇಲಕ್ಕೆ ಸರಿಸಿ ಕುರುಡನಾಗಿ ಅಭಿನಯಿಸಿದ್ದು ಬಹಳ ತಿಂಗಳು ದರ್ಶನ್ ಯಾತನೆ ಅನುಭವಿಸಿದ್ದನ್ನು ಹೇಳಿಕೊಂಡಿದ್ದರು.

ಈಗ ಸುಜಯ್ ಶಾಸ್ತ್ರೀ ಚಿತ್ರದ ಕೆಲವಾರು ಸನ್ನಿವೇಶಗಳಿಗೆ ಕಪ್ಪು ಗುಡ್ಡೆಯನ್ನು ಪಕ್ಕಕ್ಕೆ ಸರಿಸಿ ಅಭಿನಯಿಸಿದ್ದು ಅವರಿಗೆ ನಿಜ ಜೀವನದಲ್ಲಿ ಕಾರು ಚಲಾಯಿಸುವಾಗ ಸಹ ತೊಂದರೆ ಅನುಭವ ಆಯಿತಂತೆ. ಆನಂತರ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಅದಕ್ಕೆ ಬೇಕಾದ ಔಷದಿ ಪಡೆದು ಕೆಲವು ದಿವಸಗಳ ನಂತರ ಮಾಮೂಲು ಸ್ಥಿತಿಗೆ ಬಂದರಂತೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.