ಶಿವ.. ಇದು ಈ ಹಿಂದೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ದೊಡ್ಡಮಟ್ಟದ ಸದ್ದು ಮಾಡಿದ್ದ ಸಿನಿಮಾ. 2012ರಲ್ಲಿ ಶಿವ ಅನ್ನೋ ಟೈಟಲ್ ಇರುವ ಚಿತ್ರ ಶಿವರಾಜ್ ಕುಮಾರ್ ಅಭಿನಯದಲ್ಲಿ ತೆರೆಗೆ ಬಂದಿತ್ತು. ಇದೀಗ ಮತ್ತೆ ಶಿವ ಎಂಬ ಟೈಟಲ್ನೊಂದಿಗೆ ಗಾಂಧಿನಗರದಲ್ಲಿ ತೆರೆಕಾಣೋಕೆ ಸಿದ್ಧವಾಗಿದೆ.
ಮಂಡ್ಯದ ರೈತ ಹಾಗೂ ರಂಗಭೂಮಿ ಕಲಾವಿದ ರಘು ವಿಜಯ ಕಸ್ತೂರಿ ಚೊಚ್ಚಲ ಬಾರಿಗೆ ನಟನೆ ಜೊತೆಗೆ ನಿರ್ದೇಶನ ಹಾಗೂ ಚಿತ್ರ ನಿರ್ಮಾಣ ಮಾಡಿದ್ದಾರೆ. ಶಿವ ಎಂಬ ಮಾಸ್ ಟೈಟಲ್ ಇಟ್ಟು, ಮಂಡ್ಯದ ಹಳ್ಳಿಯಲ್ಲಿರುವ ಲೋಕಲ್ ರೌಡಿಸಂ, ಲವ್ ಸ್ಟೋರಿ ಹಾಗೂ ಲೋಕಲ್ ಪಾಲಿಟಿಕ್ಸ್ ಬಗ್ಗೆ ಕಥೆ ಹೇಳ ಹೊರಟ್ಟಿದ್ದಾರೆ. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ನಾಟಕಗಳನ್ನ ಮಾಡಿರುವ ರಘು ಸಾಕಷ್ಟು ಜನ ರಂಗಭೂಮಿ ಕಲಾವಿದರನ್ನ ಒಟ್ಟುಗೂಡಿಸಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
ರಘು ವಿಜಯ ಕಸ್ತೂರಿ ನಾಯಕನಾಗಿ ನಟಿಸಿದ್ದು, ಧರಣಿ ಎಂಬ ಯುವ ನಟಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಿಶಾಂತ್, ಪಾಲಳ್ಳಿ ಉಮೇಶ್, ರಂಜನ್ ಶೆಟ್ಟಿ, ಚೇತನ್ ರಾವ್ ಹೀಗೆ ಸಾಕಷ್ಟು ಜನ ರಂಗಭೂಮಿ ಕಲಾವಿದರಿದ್ದಾರೆ. ಈ ಚಿತ್ರದ ವಿಶೇಷತೆ ಅಂದರೆ ಇದು ಹಾಡುಗಳಿಲ್ಲದ ಚಿತ್ರ. ಹೀಗಾಗಿ ಸಂಗೀತ ನಿರ್ದೇಶಕ ಸತೀಶ್ ಬಾಬು ಹಿನ್ನೆಲೆ ಸಂಗೀತ ಮಾಡಿದ್ದಾರೆ. ರಮೇಶ್ ರಾಜ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದು, ಸ್ಟಂಟ್ ಮಾಸ್ಟರ್ ರಾಮ್ ದೇವ್ ನಾಲ್ಕು ಆ್ಯಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ.
ಅಭಿನಯ ಜತೆಗೆ ವ್ಯವಸಾಯ ಮಾಡುವ ರಘು ವಿಜಯ ಈ ಚಿತ್ರವನ್ನ ಮಹಾ ಶಿವರಾತ್ರಿಯಂದು ಬಿಡುಗಡೆ ಮಾಡಬೇಕು ಎಂಬ ಯೋಜನೆ ಹಾಕಿದ್ದಾರೆ.