ETV Bharat / sitara

50 ವರ್ಷ ಕಲಾ ಸೇವೆ..ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಲಾತಪಸ್ವಿ ರಾಜೇಶ್..

author img

By

Published : Feb 19, 2022, 10:11 AM IST

Updated : Feb 19, 2022, 10:50 AM IST

ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ರಾಜೇಶ್ ಇಂದು ಮೃತಪಟ್ಟಿದ್ದಾರೆ.

ಕಲಾತಪಸ್ವಿ ರಾಜೇಶ್
ಕಲಾತಪಸ್ವಿ ರಾಜೇಶ್

ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ 87 ವರ್ಷದ ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಇವರು ಡಾ.ರಾಜ್​ಕುಮಾರ್ ಸಮಕಾಲೀನವರು. ಚಿಕ್ಕ ಚಿಕ್ಕ ಪೋಷಕ ಪಾತ್ರಗಳಿಗೆ ಜೀವ ತುಂಬುವ ಶಕ್ತಿ ಹೊಂದಿದ್ದ ಅದ್ಭುತ ಕಲಾವಿದ ಇವರು.

ರಂಗಕರ್ಮಿ, ಕಲಾತಪಸ್ವಿ ರಾಜೇಶ್ ಜನಿಸಿದ್ದು ಬೆಂಗಳೂರಲ್ಲಿ. ಇವರ ಮೂಲ ಹೆಸರು ಮುನಿ ಚೌಡಪ್ಪ. ಆದರೆ ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಬಳಿಕ 1968ರ ನಮ್ಮ ಊರು ಚಿತ್ರದಲ್ಲಿ ರಾಜೇಶ್ ಅಂತ ಹೆಸರು ಬದಲಿಸಿಕೊಂಡರು.

ಇವರು ನಟನೆ ಜೊತೆ ಶಕ್ತಿ ನಾಟಕ‌ ಮಂಡಳಿ‌ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ‌ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.

60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಇವರು ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೌರವ ನೀಡಿ ಪುರಸ್ಕರಿಸಿತ್ತು.

ಅಳಿಯ, ಮಗಳು, ಮೊಮ್ಮಗಳು ಸೇರಿದಂತೆ ಇಡೀ ಕುಟುಂಬದಿಂದ ಕಲಾಸೇವೆ: ಇನ್ನು ತಮ್ಮ ಪುತ್ರಿ ನಿವೇದಿತಾ ಅವರನ್ನು ನಟ ಅರ್ಜುನ ಸರ್ಜಾಗೆ ಕೊಟ್ಟು ಮದುವೆ ಮಾಡಿದ್ದರು. ನಿವೇದಿತಾ ಅವರು ಕೂಡ ರಥಸಪ್ತಮಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇತ್ತೀಚೆಗೆ ಇವರ ಮೊಮ್ಮಗಳು ಕೂಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ.

ಕೊನೆಯ ಚಿತ್ರ ರಿಲೀಸ್​ಗೂ ಮುನ್ನವೇ ವಿಧಿವಶ:

ಶ್ರೀನಿ ನಟನೆಯ ಓಲ್ಡ್ ಮಾಂಕ್ ರಾಜೇಶ್ ಅವರ ಕೊನೆಯ ಸಿನಿಮಾ ಚಿತ್ರವಾಗಿದೆ. ಈ ಚಿತ್ರ ಇದೇ 25 ರಂದು ಬಿಡುಗಡೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ಹಿರಿಯ ನಟ ನಮ್ಮನ್ನೆಲ್ಲ ಅಗಲಿದ್ದಾರೆ.

(ಇದನ್ನೂ ಓದಿ: ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ)

ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ 87 ವರ್ಷದ ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಇವರು ಡಾ.ರಾಜ್​ಕುಮಾರ್ ಸಮಕಾಲೀನವರು. ಚಿಕ್ಕ ಚಿಕ್ಕ ಪೋಷಕ ಪಾತ್ರಗಳಿಗೆ ಜೀವ ತುಂಬುವ ಶಕ್ತಿ ಹೊಂದಿದ್ದ ಅದ್ಭುತ ಕಲಾವಿದ ಇವರು.

ರಂಗಕರ್ಮಿ, ಕಲಾತಪಸ್ವಿ ರಾಜೇಶ್ ಜನಿಸಿದ್ದು ಬೆಂಗಳೂರಲ್ಲಿ. ಇವರ ಮೂಲ ಹೆಸರು ಮುನಿ ಚೌಡಪ್ಪ. ಆದರೆ ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಬಳಿಕ 1968ರ ನಮ್ಮ ಊರು ಚಿತ್ರದಲ್ಲಿ ರಾಜೇಶ್ ಅಂತ ಹೆಸರು ಬದಲಿಸಿಕೊಂಡರು.

ಇವರು ನಟನೆ ಜೊತೆ ಶಕ್ತಿ ನಾಟಕ‌ ಮಂಡಳಿ‌ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ‌ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.

60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಇವರು ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೌರವ ನೀಡಿ ಪುರಸ್ಕರಿಸಿತ್ತು.

ಅಳಿಯ, ಮಗಳು, ಮೊಮ್ಮಗಳು ಸೇರಿದಂತೆ ಇಡೀ ಕುಟುಂಬದಿಂದ ಕಲಾಸೇವೆ: ಇನ್ನು ತಮ್ಮ ಪುತ್ರಿ ನಿವೇದಿತಾ ಅವರನ್ನು ನಟ ಅರ್ಜುನ ಸರ್ಜಾಗೆ ಕೊಟ್ಟು ಮದುವೆ ಮಾಡಿದ್ದರು. ನಿವೇದಿತಾ ಅವರು ಕೂಡ ರಥಸಪ್ತಮಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇತ್ತೀಚೆಗೆ ಇವರ ಮೊಮ್ಮಗಳು ಕೂಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ.

ಕೊನೆಯ ಚಿತ್ರ ರಿಲೀಸ್​ಗೂ ಮುನ್ನವೇ ವಿಧಿವಶ:

ಶ್ರೀನಿ ನಟನೆಯ ಓಲ್ಡ್ ಮಾಂಕ್ ರಾಜೇಶ್ ಅವರ ಕೊನೆಯ ಸಿನಿಮಾ ಚಿತ್ರವಾಗಿದೆ. ಈ ಚಿತ್ರ ಇದೇ 25 ರಂದು ಬಿಡುಗಡೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ಹಿರಿಯ ನಟ ನಮ್ಮನ್ನೆಲ್ಲ ಅಗಲಿದ್ದಾರೆ.

(ಇದನ್ನೂ ಓದಿ: ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ)

Last Updated : Feb 19, 2022, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.