ETV Bharat / sitara

ಸಂಜನಾ-ವಂದನಾ ಗಲಾಟೆ ಪ್ರಕರಣ: ಘಟನೆಯ ಬಗ್ಗೆ ನಿರ್ಮಾಪಕಿ ಹೇಳಿದ್ದೇನು?

ಸ್ಯಾಂಡಲ್​ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ‌ ಮಧ್ಯೆ ಜಟಾಪಟಿ ನಡೆದಿದ್ದ ಪ್ರಕರಣದ ವಿಚಾರಣೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ವಂದನಾ ಜೈನ್ಪೊಲೀಸ್​ ಠಾಣೆಗೆ ಆಗಮಿಸಿ ಘಟನೆ ಕುರಿತು ವಿವರಣೆ ನೀಡಿದ್ದಾರೆ.

author img

By

Published : Dec 30, 2019, 1:57 PM IST

Vandana statement on quarel
ಸಂಜನಾ-ವಂದನಾ ಗಲಾಟೆ ಪ್ರಕರಣ

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್​ವೊಂದರಲ್ಲಿ ಸ್ಯಾಂಡಲ್​ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ‌ ಮಧ್ಯೆ ನಡೆದ ಜಟಾಪಟಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ‌ ನಡೆದ ಘಟನೆಯ ಕುರಿತು ವಿವರ ನೀಡಿ‌ದ್ದಾರೆ.

ಸಂಜನಾ-ವಂದನಾ ಗಲಾಟೆ ಪ್ರಕರಣ

ವಂದನಾ ಜೈನ್ ಹೇಳಿದ್ದೇನು? :

ಡಿಸೆಂಬರ್ 24ರಂದು ಕೋಝಿ ಬಾರ್​ಗೆ ನಾನು ತೆರಳಿದ್ದೆ. ಅಲ್ಲಿ ಸಂಜನಾ ತನ್ನ ಕೈಯಲಿದ್ದ ವಿಸ್ಕಿಯನ್ನ ನನ್ನ ಮುಖಕ್ಕೆ ಎರಚಿದ್ದಾಳೆ. ಸುಮಾರು 10 ನಿಮಿಷಗಳ ಕಾಲ ನನ್ನ ಕಣ್ಣು ಉರಿ ಬಂದಿದೆ. ಆದರೆ ನಾನು ಆಕೆಯ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಸಂಜನಾ ಕೂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ರನ್ನು ಭೇಟಿಯಾಗಿದ್ದು, ಬಳಿಕ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿದ್ದಾರೆ. ಈ ಎಲ್ಲಾ ವಿವರಣೆಯ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ.

ಸದ್ಯ ಪೊಲೀಸರು ವಂದನಾ ಹಾಗೂ ಸಂಜನಾ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಎಫ್ಐಆರ್ ದಾಖಲು ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇಬ್ಬರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅದರ ಮೇಲೆ ತನಿಖೆ ಮುಂದುವರಿಸಲಿದ್ದೇವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್​ವೊಂದರಲ್ಲಿ ಸ್ಯಾಂಡಲ್​ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ‌ ಮಧ್ಯೆ ನಡೆದ ಜಟಾಪಟಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ‌ ನಡೆದ ಘಟನೆಯ ಕುರಿತು ವಿವರ ನೀಡಿ‌ದ್ದಾರೆ.

ಸಂಜನಾ-ವಂದನಾ ಗಲಾಟೆ ಪ್ರಕರಣ

ವಂದನಾ ಜೈನ್ ಹೇಳಿದ್ದೇನು? :

ಡಿಸೆಂಬರ್ 24ರಂದು ಕೋಝಿ ಬಾರ್​ಗೆ ನಾನು ತೆರಳಿದ್ದೆ. ಅಲ್ಲಿ ಸಂಜನಾ ತನ್ನ ಕೈಯಲಿದ್ದ ವಿಸ್ಕಿಯನ್ನ ನನ್ನ ಮುಖಕ್ಕೆ ಎರಚಿದ್ದಾಳೆ. ಸುಮಾರು 10 ನಿಮಿಷಗಳ ಕಾಲ ನನ್ನ ಕಣ್ಣು ಉರಿ ಬಂದಿದೆ. ಆದರೆ ನಾನು ಆಕೆಯ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಸಂಜನಾ ಕೂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ರನ್ನು ಭೇಟಿಯಾಗಿದ್ದು, ಬಳಿಕ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿದ್ದಾರೆ. ಈ ಎಲ್ಲಾ ವಿವರಣೆಯ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ.

ಸದ್ಯ ಪೊಲೀಸರು ವಂದನಾ ಹಾಗೂ ಸಂಜನಾ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಎಫ್ಐಆರ್ ದಾಖಲು ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇಬ್ಬರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅದರ ಮೇಲೆ ತನಿಖೆ ಮುಂದುವರಿಸಲಿದ್ದೇವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.

Intro:KN_BNG_03__SANJANA VANDANA -7204498

ಕೈಯಲ್ಲಿದ್ದ ವಿಸ್ಕಿ ಮುಖಕ್ಕೆ ಚೆಲ್ಲಿದಳು.
ನಟಿ_ನಿರ್ಮಾಪಕಿ ಹೇಳಿಕೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ

ಸ್ಯಾಂಡಲ್ ವುಡ್ ಸ್ಟಾರ್ ನಟಿ ಹಾಗೂ ಬಾಲಿವುಡ್ ನಿರ್ಮಾಪಕಿ ಜಟಾಪಟಿ ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ವೊಂದರಲ್ಲಿ ಗಲಾಟೆಯಾಗಿ‌ ನಟಿ ಸಂಜನಾ ನಿರ್ಮಾಪಕಿ ವಂದನಾ‌ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ನಿನ್ನೆ ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ‌ ನಡೆದ ಘಟನೆತ ಕುರಿತು ವಿವರ ನೀಡಿ‌ಹೊಗಿದ್ದಾರೆ.

ವಂದನಾ ಜೈನ್ ಹೇಳಿದ್ದೇನು:-

ಡಿಸೆಂಬರ್ 24ರಂದು ಕೋಝಿ ಬಾರ್ಗೆ ತೆರಳಿದ್ದೆ. ಅಲ್ಲಿ ಸಂಜನಾ ನನ್ನ ಮೇಲೆ ಹಲ್ಲೆ ನಡೆಸಿ ಕೈಯಲಿದ್ದ ವಿಸ್ಕಿಯನ್ನ ನನ್ನ ಮುಖಕ್ಕೆ ಎರಚಿದ್ದಾಳೆ . ಸುಮಾರು 10ನಿಮಿಷಗಳ ಕಾಲ ಕಣ್ಣು ಉರಿ ಬಂದಿದೆ. ನಾನು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ . ಸದ್ಯ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾದ ಕಾರಣ ನ್ಯಾಯಾಲಯದ ಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಹೀಗಾಗಿ ಸದ್ಯ ಪೊಲೀಸರು ವಂದನಾ ಹೇಳಿಕೆಯನ್ನ ದಾಖಲಿಸಿದ್ದಾರೆ. ಒಂದು ವೇಳೆ ನ್ಯಾಯಾಲಯದ ಅನುಮತಿ ಪಡೆದು ಎಫ್ಐ ಆರ್ ದಾಖಲಿಸಲು ತಿಳಿಸಿದರೆ ಎಫ್ ಐ ಆರ್ ದಾಖಲಿಸಿ ಮುಂದಿನ ಕ್ರಮವನ್ನು ಪೊಲೀಸರು ಕೈಗೊಳ್ಳಳಿದ್ದಾರೆ

ಮತ್ತೊಂದೆಡೆ ಸಂಜನಾ ಕೂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿಯಾದ ನಂತ್ರ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿ ದ್ದಾರೆ ಹೀಗಾಗಿ ವಿವರಣೆಯ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್ ಸಿ ಆರ್ ದಾಖಲಿಸಿದ್ದಾರೆ..

ಸಧ್ಯ ಘಟನೆ ಕುರಿತು ಇಬ್ಬರು ಎನ್ ಸಿ ಆರ್ ದಾಖಲಿಸಿದ ಕಾರಣ ಎಫ್ ಐಆರ್ ದಾಖಲು ಮಾಡಲಾಗದೆ ಇಬ್ಬರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅದರ ಮೇಲೆ ತನಿಖೆ ಮುಂದುವರಿಸಲಿದ್ದೆವೆಂದು ಪೊಲಿಸ್ ಮೂಲಗಳಿಂದ ತಿಳಿದು ಬಂದಿದೆ.





Body:KN_BNG_03__SANJANA VANDANA -7204498


Conclusion:KN_BNG_03__SANJANA VANDANA -7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.