ETV Bharat / sitara

ಚಿತ್ರದ ಡೈಲಾಗ್​​​​ವೊಂದನ್ನು ರಿಲೀಸ್ ಮಾಡುವ ಮೂಲಕ ಆರ್​​ಸಿಬಿಗೆ ಶುಭ ಕೋರಿದ 'ಸಲಗ' ತಂಡ - IPL 2020

'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕ್ರಿಕೆಟ್ ಮೇಲಿನ ಪ್ರೇಮಕ್ಕಾಗಿ ಚಿತ್ರದ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಆರ್​ಸಿಬಿ ಕಪ್ ಗೆಲ್ಲುತ್ತದೆ ಹಾಗೂ 'ಸಲಗ' ಚಿತ್ರ ಕೂಡಾ ಗೆಲ್ಲುತ್ತದೆ ಎಂದು ಶ್ರೀಕಾಂತ್ ಭರವಸೆ ವ್ಯಕ್ತಪಡಿಸಿದ್ದಾರೆ.

Salga team supported to RCB
'ಸಲಗ'
author img

By

Published : Sep 21, 2020, 12:47 PM IST

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ 'ಸಲಗ'. ಈ ಔಟ್​ ಅ್ಯಂಡ್ ಔಟ್ ಆ್ಯಕ್ಷನ್ ಚಿತ್ರಕ್ಕೂ ಶನಿವಾರದಿಂದ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್​​ಗೂ ಕನೆಕ್ಷನ್ ಇದೆ. ಅದು ಏನು ಅಂತೀರಾ...?

  • " class="align-text-top noRightClick twitterSection" data="">

'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್​​ಗೆ ಕ್ರಿಕೆಟ್ ಎಂದರೆ ಬಹಳ ಇಷ್ಟ. ಅದರಲ್ಲೂ ಆರ್​​​​ಸಿಬಿ ಟೀಂ ಅಂದ್ರೆ ಪಂಚಪ್ರಾಣ. 'ಸಲಗ' ಚಿತ್ರದಲ್ಲಿ ಡಾಲಿ ಧನಂಜಯ್ ದುನಿಯಾ ವಿಜಯ್ ಕುರಿತು ಹೇಳುವ ಖಡಕ್ ಡೈಲಾಗ್​ವೊಂದನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಪೋರ್ಟ್​ ಮಾಡುವ ಮಾಡಿ ಶುಭ ಕೋರಿದೆ.

ಸದ್ಯಕ್ಕೆ 'ಸಲಗ' ಸಿನಿಮಾ ಸೆನ್ಸಾರ್​​ ಅಂಗಳದಲ್ಲಿದೆ. ಮುಂದಿನ ತಿಂಗಳು ಥಿಯೇಟರ್​​ಗಳು ತೆರೆಯಲಿದ್ದು ಸಿನಿಮಾ ಬಿಡುಗಡೆಯಾಗಲಿದೆ. ಒಂದು ಕಡೆ ಸಲಗ ಹಾಡುಗಳು ಬಹಳ ಹಿಟ್ ಆಗಿದ್ದು, ತಂಡ ಬಿಡುಗಡೆ ಮಾಡಿದ್ದ ರಾ ವಿಡಿಯೋಗೆ ಕೂಡಾ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ಗೆಲ್ಲುವ ಎಲ್ಲಾ ಸೂಚನೆಗಳಿವೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ.

ಆರ್​ಸಿಬಿ ಬಗ್ಗೆ ಮಾತನಾಡಿದ ಕೆ.ಪಿ. ಶ್ರೀಕಾಂತ್, ನಾವು ಮೊದಲಿನಿಂದಲೂ ಆರ್​ಸಿಬಿ ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ಬಾರಿ ಆರ್​ಸಿಬಿ, ಕಪ್​ ಗೆದ್ದೇ ಗೆಲ್ಲುತ್ತದೆ, ಅಲ್ಲದೆ ವಿಜಯ್ ನಿರ್ದೇಶನದ 'ಸಲಗ' ಕೂಡಾ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ 'ಸಲಗ'. ಈ ಔಟ್​ ಅ್ಯಂಡ್ ಔಟ್ ಆ್ಯಕ್ಷನ್ ಚಿತ್ರಕ್ಕೂ ಶನಿವಾರದಿಂದ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್​​ಗೂ ಕನೆಕ್ಷನ್ ಇದೆ. ಅದು ಏನು ಅಂತೀರಾ...?

  • " class="align-text-top noRightClick twitterSection" data="">

'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್​​ಗೆ ಕ್ರಿಕೆಟ್ ಎಂದರೆ ಬಹಳ ಇಷ್ಟ. ಅದರಲ್ಲೂ ಆರ್​​​​ಸಿಬಿ ಟೀಂ ಅಂದ್ರೆ ಪಂಚಪ್ರಾಣ. 'ಸಲಗ' ಚಿತ್ರದಲ್ಲಿ ಡಾಲಿ ಧನಂಜಯ್ ದುನಿಯಾ ವಿಜಯ್ ಕುರಿತು ಹೇಳುವ ಖಡಕ್ ಡೈಲಾಗ್​ವೊಂದನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಪೋರ್ಟ್​ ಮಾಡುವ ಮಾಡಿ ಶುಭ ಕೋರಿದೆ.

ಸದ್ಯಕ್ಕೆ 'ಸಲಗ' ಸಿನಿಮಾ ಸೆನ್ಸಾರ್​​ ಅಂಗಳದಲ್ಲಿದೆ. ಮುಂದಿನ ತಿಂಗಳು ಥಿಯೇಟರ್​​ಗಳು ತೆರೆಯಲಿದ್ದು ಸಿನಿಮಾ ಬಿಡುಗಡೆಯಾಗಲಿದೆ. ಒಂದು ಕಡೆ ಸಲಗ ಹಾಡುಗಳು ಬಹಳ ಹಿಟ್ ಆಗಿದ್ದು, ತಂಡ ಬಿಡುಗಡೆ ಮಾಡಿದ್ದ ರಾ ವಿಡಿಯೋಗೆ ಕೂಡಾ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ಗೆಲ್ಲುವ ಎಲ್ಲಾ ಸೂಚನೆಗಳಿವೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ.

ಆರ್​ಸಿಬಿ ಬಗ್ಗೆ ಮಾತನಾಡಿದ ಕೆ.ಪಿ. ಶ್ರೀಕಾಂತ್, ನಾವು ಮೊದಲಿನಿಂದಲೂ ಆರ್​ಸಿಬಿ ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಈ ಬಾರಿ ಆರ್​ಸಿಬಿ, ಕಪ್​ ಗೆದ್ದೇ ಗೆಲ್ಲುತ್ತದೆ, ಅಲ್ಲದೆ ವಿಜಯ್ ನಿರ್ದೇಶನದ 'ಸಲಗ' ಕೂಡಾ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.