ETV Bharat / sitara

'ರಂಗನಾಯಕಿ'ಗೆ ಮುಹೂರ್ತ: ಚರ್ಚೆಗೆ ಗ್ರಾಸವಾಯ್ತು ಚಿತ್ರದ ಟ್ಯಾಗ್​​​ಲೈನ್​​ - undefined

ದಯಾಳ್ ಪದ್ಮನಾಭನ್ ಕಥೆ ಬರೆದು ನಿರ್ದೇಶಿಸುತ್ತಿರುವ 'ರಂಗನಾಯಕಿ' ಸಿನಿಮಾಗೆ ಇಂದು ಮುಹೂರ್ತ ನೆರವೇರಿದ್ದು, ಟೈಟಲ್​​​​​ ಟ್ಯಾಗ್​​ಲೈನ್​​​ ಚರ್ಚೆಗೆ ಕಾರಣವಾಗಿದೆ.

ಅಧಿತಿ ಪ್ರಭುದೇವ
author img

By

Published : Apr 26, 2019, 4:42 PM IST

ಇತ್ತೀಚಿನ ದಿನಗಳಲ್ಲಿ ಹಳೆಯ ಸಿನಿಮಾಗಳ ಟೈಟಲನ್ನು ಹೊಸ ಸಿನಿಮಾಗಳಿಗೆ ಬಳಸುವುದು ಸಾಮಾನ್ಯವಾಗಿದೆ. ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ 'ರಂಗನಾಯಕಿ' ಸಿನಿಮಾ ಹೆಸರನ್ನು ತಮ್ಮ ಹೊಸ ಸಿನಿಮಾ ಟೈಟಲ್ ಆಗಿ ಬಳಸಿಕೊಂಡಿದ್ದಾರೆ.

adhiti
ಅಧಿತಿ

ಈ ಸಿನಿಮಾ ಕಥೆ ದಯಾಳ್ ಅವರದ್ದೇ ಆಗಿದ್ದು, ಇಂದು 'ರಂಗನಾಯಕಿ' ಕಾದಂಬರಿ ಬಿಡುಗಡೆ ಹಾಗೂ ಚಿತ್ರದ ಮುಹೂರ್ತ ಸಮಾರಂಭ ಏರ್ಪಡಿಸಲಾಗಿತ್ತು. ಚಿತ್ರದ ಮೊದಲ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ. ಹಾಗೇ 'ರಂಗನಾಯಕಿ' ಟೈಟಲ್ ಕೆಳಗೆ ವಾಲ್ಯೂಮ್ 1-ವರ್ಜಿನಿಟಿ ಎಂಬ ಟ್ಯಾಗ್​​​ಲೈನ್ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪೋಸ್ಟರ್ ಚಿತ್ರದ ಮೇಲೆ ಭಾರೀ ಕುಹೂಹಲ ಹುಟ್ಟಿಸಿದೆ.

ranganayaki
'ರಂಗನಾಯಕಿ' ಚಿತ್ರದ ಪೋಸ್ಟರ್​​

ಇನ್ನು ಅಧಿತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದು ಪುಣ್ಣಣ್ಣ ಕಣಗಾಲ್ ಚಿತ್ರದಲ್ಲಿ ಆರತಿ ರಂಗನಾಯಕಿಯಾಗಿ ಗಮನ ಸೆಳೆದಿದ್ದರು. ಈ ರಂಗನಾಯಕಿಯಲ್ಲಿ ಅಧಿತಿ ಪ್ರಭುದೇವ ರಂಗನಾಯಕಿಯಾಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

adhiti
ಅಧಿತಿ ಪ್ರಭುದೇವ

ಶ್ರೀನಿವಾಸ ಕಲ್ಯಾಣ ಸಿನಿಮಾದ ಶ್ರೀನಿ ಹಾಗೂ ತ್ರಿವಿಕ್ರಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಹಗ್ಗದ ಕೊನೆ', 'ಆ ಕರಾಳ ರಾತ್ರಿ', 'ಪುಟ 109' ಹಾಗೂ 'ತ್ರಯಂಬಕಂ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವ ದಯಾಳ್ ಈಗ 'ರಂಗನಾಯಕಿ' ಕಥೆ ಹೇಳುತ್ತಿದ್ದಾರೆ. ಎಸ್​​​​.ವಿ. ನಾರಾಯಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಈ ಮಟ್ಟಿಗೆ ಸೆನ್ಸೇಷನ್ ಸೃಷ್ಟಿ ಮಾಡಿದೆ ಎಂದರೆ ಚಿತ್ರದ ಕಥೆ ಹೇಗಿರಬಹುದು ಎಂಬುದು ಈಗ ಚರ್ಚಾ ವಿಷಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಹಳೆಯ ಸಿನಿಮಾಗಳ ಟೈಟಲನ್ನು ಹೊಸ ಸಿನಿಮಾಗಳಿಗೆ ಬಳಸುವುದು ಸಾಮಾನ್ಯವಾಗಿದೆ. ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ 'ರಂಗನಾಯಕಿ' ಸಿನಿಮಾ ಹೆಸರನ್ನು ತಮ್ಮ ಹೊಸ ಸಿನಿಮಾ ಟೈಟಲ್ ಆಗಿ ಬಳಸಿಕೊಂಡಿದ್ದಾರೆ.

adhiti
ಅಧಿತಿ

ಈ ಸಿನಿಮಾ ಕಥೆ ದಯಾಳ್ ಅವರದ್ದೇ ಆಗಿದ್ದು, ಇಂದು 'ರಂಗನಾಯಕಿ' ಕಾದಂಬರಿ ಬಿಡುಗಡೆ ಹಾಗೂ ಚಿತ್ರದ ಮುಹೂರ್ತ ಸಮಾರಂಭ ಏರ್ಪಡಿಸಲಾಗಿತ್ತು. ಚಿತ್ರದ ಮೊದಲ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ. ಹಾಗೇ 'ರಂಗನಾಯಕಿ' ಟೈಟಲ್ ಕೆಳಗೆ ವಾಲ್ಯೂಮ್ 1-ವರ್ಜಿನಿಟಿ ಎಂಬ ಟ್ಯಾಗ್​​​ಲೈನ್ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪೋಸ್ಟರ್ ಚಿತ್ರದ ಮೇಲೆ ಭಾರೀ ಕುಹೂಹಲ ಹುಟ್ಟಿಸಿದೆ.

ranganayaki
'ರಂಗನಾಯಕಿ' ಚಿತ್ರದ ಪೋಸ್ಟರ್​​

ಇನ್ನು ಅಧಿತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದು ಪುಣ್ಣಣ್ಣ ಕಣಗಾಲ್ ಚಿತ್ರದಲ್ಲಿ ಆರತಿ ರಂಗನಾಯಕಿಯಾಗಿ ಗಮನ ಸೆಳೆದಿದ್ದರು. ಈ ರಂಗನಾಯಕಿಯಲ್ಲಿ ಅಧಿತಿ ಪ್ರಭುದೇವ ರಂಗನಾಯಕಿಯಾಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

adhiti
ಅಧಿತಿ ಪ್ರಭುದೇವ

ಶ್ರೀನಿವಾಸ ಕಲ್ಯಾಣ ಸಿನಿಮಾದ ಶ್ರೀನಿ ಹಾಗೂ ತ್ರಿವಿಕ್ರಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಹಗ್ಗದ ಕೊನೆ', 'ಆ ಕರಾಳ ರಾತ್ರಿ', 'ಪುಟ 109' ಹಾಗೂ 'ತ್ರಯಂಬಕಂ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವ ದಯಾಳ್ ಈಗ 'ರಂಗನಾಯಕಿ' ಕಥೆ ಹೇಳುತ್ತಿದ್ದಾರೆ. ಎಸ್​​​​.ವಿ. ನಾರಾಯಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಈ ಮಟ್ಟಿಗೆ ಸೆನ್ಸೇಷನ್ ಸೃಷ್ಟಿ ಮಾಡಿದೆ ಎಂದರೆ ಚಿತ್ರದ ಕಥೆ ಹೇಗಿರಬಹುದು ಎಂಬುದು ಈಗ ಚರ್ಚಾ ವಿಷಯವಾಗಿದೆ.

Intro:ಬರ್ತೀದ್ದಾರೆ ಈ ಶತಮಾನದ ರಂಗನಾಯಕಿ‌ ಅಧಿತಿ!!

ಕನ್ನಡ ಚಿತ್ರರಂಗದಲ್ಲಿ ಹಳೆಯ ಸಿನಿಮಾಗಳ ಟೈಟಲ್ ಮತ್ತೆ ರಿಪೀಟ್ ಆಗ್ತಾ ಇರೋದು ಹೊಸತೆನಲ್ಲಾ..ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ ತ್ರಯಂಬಂಕ ನಂತ್ರ ಮತ್ತೊಂದು ವಿವಾದ ಸೃಷ್ಟಿಸುವ ಸಿನಿಮಾಕ್ಕೆ ಕೈ ಹಾಕಿದ್ದಾರೆ.. ಸದ್ಯ ಈ ಚಿತ್ರದ ರಂಗನಾಯಕಿ ಅಂತಾ ಟೈಟಲ್ ಇಟ್ಟಿದ್ದು, ಇದರ ಮೊದಲ ಪೋಸ್ಟರ್ ರಿವೀಲ್ ಆಗಿದೆ..ಹಾಗೇ ಟೈಟಲ್ ಕೆಳಗೆ ವಾಲ್ಯೂಮ್ 1-ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಚರ್ಚೆಗೆ ಕಾರಣವಾಗಲಿದೆ...ಸಿನಿಮಾದ ಪೋಸ್ಟರ್ ಚಿತ್ರದ ಕಥೆ ಬಗ್ಗೆ ಕುತೂಹಲ ಹುಟ್ಟಿಸಿದೆ. ಅದಿತಿ ಪ್ರಭುದೇವ ಈ ಶತಮಾನದ ರಂಗನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ..ಈ ಹಿಂದೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರಂಗನಾಯಕಿ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿದ್ರು..ಅಂದು ರಂಗನಾಯಕಿನಾಗಿ ಆರತಿ ಗಮನ ಸೆಳೆದಿದ್ರು..ಇದೀಗ ರಂಗನಾಯಕಿ ಅದಿತಿ ಪ್ರಭುದೇವ ಆಕ್ಟ್ ಮಾಡಲಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾದ ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ. ಹಗ್ಗದ ಕೊನೆ, ಆ ಕರಾಳ ರಾತ್ರಿ,ಪುಟ 109 ಹಾಗು ತ್ರಯಂಬಂಕಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡುತ್ತಿರುವ ದಯಾಳ್ ಈಗ ರಂಗನಾಯಕಿ ಕಥೆ ಹೇಳುತ್ತಿದ್ದಾರೆ. ಏಪ್ರಿಲ್ 26 ರಂದು ರಂಗನಾಯಕಿ ಚಿತ್ರದ ಮುಹೂರ್ತ ಕಾರ್ಯಕ್ರಮ ಎಸ್ ವಿ ನಾರಾಯಣ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಬಿ ರಾಕೇಶ್ ಸಿನಿಮಾಟೋಗ್ರಾಫಿ, ಮಣಿಕಾಂತ್ ಕದ್ರಿ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ.Body:ಬರ್ತೀದ್ದಾರೆ ಈ ಶತಮಾನದ ರಂಗನಾಯಕಿ‌ ಅಧಿತಿ!!

ಕನ್ನಡ ಚಿತ್ರರಂಗದಲ್ಲಿ ಹಳೆಯ ಸಿನಿಮಾಗಳ ಟೈಟಲ್ ಮತ್ತೆ ರಿಪೀಟ್ ಆಗ್ತಾ ಇರೋದು ಹೊಸತೆನಲ್ಲಾ..ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ ತ್ರಯಂಬಂಕ ನಂತ್ರ ಮತ್ತೊಂದು ವಿವಾದ ಸೃಷ್ಟಿಸುವ ಸಿನಿಮಾಕ್ಕೆ ಕೈ ಹಾಕಿದ್ದಾರೆ.. ಸದ್ಯ ಈ ಚಿತ್ರದ ರಂಗನಾಯಕಿ ಅಂತಾ ಟೈಟಲ್ ಇಟ್ಟಿದ್ದು, ಇದರ ಮೊದಲ ಪೋಸ್ಟರ್ ರಿವೀಲ್ ಆಗಿದೆ..ಹಾಗೇ ಟೈಟಲ್ ಕೆಳಗೆ ವಾಲ್ಯೂಮ್ 1-ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಚರ್ಚೆಗೆ ಕಾರಣವಾಗಲಿದೆ...ಸಿನಿಮಾದ ಪೋಸ್ಟರ್ ಚಿತ್ರದ ಕಥೆ ಬಗ್ಗೆ ಕುತೂಹಲ ಹುಟ್ಟಿಸಿದೆ. ಅದಿತಿ ಪ್ರಭುದೇವ ಈ ಶತಮಾನದ ರಂಗನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ..ಈ ಹಿಂದೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರಂಗನಾಯಕಿ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿದ್ರು..ಅಂದು ರಂಗನಾಯಕಿನಾಗಿ ಆರತಿ ಗಮನ ಸೆಳೆದಿದ್ರು..ಇದೀಗ ರಂಗನಾಯಕಿ ಅದಿತಿ ಪ್ರಭುದೇವ ಆಕ್ಟ್ ಮಾಡಲಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾದ ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ. ಹಗ್ಗದ ಕೊನೆ, ಆ ಕರಾಳ ರಾತ್ರಿ,ಪುಟ 109 ಹಾಗು ತ್ರಯಂಬಂಕಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡುತ್ತಿರುವ ದಯಾಳ್ ಈಗ ರಂಗನಾಯಕಿ ಕಥೆ ಹೇಳುತ್ತಿದ್ದಾರೆ. ಏಪ್ರಿಲ್ 26 ರಂದು ರಂಗನಾಯಕಿ ಚಿತ್ರದ ಮುಹೂರ್ತ ಕಾರ್ಯಕ್ರಮ ಎಸ್ ವಿ ನಾರಾಯಣ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಬಿ ರಾಕೇಶ್ ಸಿನಿಮಾಟೋಗ್ರಾಫಿ, ಮಣಿಕಾಂತ್ ಕದ್ರಿ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.