ETV Bharat / sitara

ನಾಯಕ, ನಾಯಕಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ 'ರಣಭೂಮಿ' ನಿರ್ದೇಶಕ - ನಾಯಕ, ನಾಯಕಿ ಬಗ್ಗೆ ರಣಭೂಮಿ ನಿರ್ದೇಶಕ ಅಸಮಾಧಾನ

ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್​​​​​​​​​​​ಗೆ ಬಂದು ಸಿನಿಮಾ ನೋಡ್ತಾರೆ, ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

'ರಣಭೂಮಿ' ಸುದ್ದಿಗೋಷ್ಠಿ
author img

By

Published : Nov 4, 2019, 9:35 PM IST

ಕೆಲವೊಂದು ಸಿನಿಮಾಗಳು ಶೂಟಿಂಗ್ ಆರಂಭಕ್ಕೂ ಮುನ್ನ, ಮತ್ತೆ ಕೆಲವು ಸಿನಿಮಾಗಳು ತೆರೆ ಕಂಡಾಗ ಯಾವುದಾದರೂ ಒಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಎಷ್ಟೋ ಉದಾಹರಣೆಗಳು ಸ್ಯಾಂಡಲ್​​ವುಡ್​​ನಲ್ಲಿ ನಡೆದಿವೆ.

'ರಣಭೂಮಿ' ಸುದ್ದಿಗೋಷ್ಠಿ

ಇದೀಗ ಇಂತಹದ್ದೇ ಪರಿಸ್ಥಿತಿ 'ರಣಭೂಮಿ' ಸಿನಿಮಾ ತಂಡಕ್ಕೆ ಎದುರಾಗಿದೆ. 'ಜೋಕಾಲಿ' ಸಿನಿಮಾವನ್ನು ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಅವರು ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ನಿರಂಜನ್‌‌ ಒಡೆಯರ್ ಭಜರಂಗಿ ಲೋಕಿ ಹಾಗೂ ಇನ್ನಿತರರನ್ನು ಹಾಕಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಚಿರಂಜೀವಿ ಸಿನಿಮಾ ಚಿತ್ರೀಕರಣದ ದಿನಾಂಕವನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. ಕ್ರೈಂ, ಸಸ್ಪೆನ್ಸ್​, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾ 'ರಣಭೂಮಿ' ನವೆಂಬರ್​​ 8 ರಂದು ಬಿಡುಗಡೆಯಾಗಲಿದೆ. ಮಾನಸಿ ಫಿಲ್ಮ್​ ಬ್ಯಾನರ್​​​ ಅಡಿ ಚಿರಂಜೀವಿ ದೀಪಕ್​​ ಅವರೇ ನಿರ್ಮಾಣ ಮಾಡಿದ್ದಾರೆ.

Ranbhoomi movie release on november 8th, ನವೆಂಬರ್ 8 ರಂದು ರಣಭೂಮಿ ಚಿತ್ರ ಬಿಡುಗಡೆ
'ರಣಭೂಮಿ'

ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಚಿರಂಜೀವಿ ದೀಪಕ್, ಖಳನಟ‌ ಡ್ಯಾನಿ ಕುಟ್ಟಪ್ಪ, ಛಾಯಾಗ್ರಾಹಕ ನಾಗಾರ್ಜುನ್‌, ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಸೇರಿ ಕೆಲವೇ ಕೆಲವು ಮಂದಿ ಇದ್ದರು. ಪ್ರೆಸ್​​​ಮೀಟ್​​ಗೆ ನಾಯಕ, ನಾಯಕಿ ಬರದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ, 'ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್​​​​ಗೆ ಬಂದು ಸಿನಿಮಾ ನೋಡ್ತಾರೆ, ಇಲ್ಲಿ ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಕೆಲವೊಂದು ಸಿನಿಮಾಗಳು ಶೂಟಿಂಗ್ ಆರಂಭಕ್ಕೂ ಮುನ್ನ, ಮತ್ತೆ ಕೆಲವು ಸಿನಿಮಾಗಳು ತೆರೆ ಕಂಡಾಗ ಯಾವುದಾದರೂ ಒಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಎಷ್ಟೋ ಉದಾಹರಣೆಗಳು ಸ್ಯಾಂಡಲ್​​ವುಡ್​​ನಲ್ಲಿ ನಡೆದಿವೆ.

'ರಣಭೂಮಿ' ಸುದ್ದಿಗೋಷ್ಠಿ

ಇದೀಗ ಇಂತಹದ್ದೇ ಪರಿಸ್ಥಿತಿ 'ರಣಭೂಮಿ' ಸಿನಿಮಾ ತಂಡಕ್ಕೆ ಎದುರಾಗಿದೆ. 'ಜೋಕಾಲಿ' ಸಿನಿಮಾವನ್ನು ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಅವರು ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ನಿರಂಜನ್‌‌ ಒಡೆಯರ್ ಭಜರಂಗಿ ಲೋಕಿ ಹಾಗೂ ಇನ್ನಿತರರನ್ನು ಹಾಕಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಚಿರಂಜೀವಿ ಸಿನಿಮಾ ಚಿತ್ರೀಕರಣದ ದಿನಾಂಕವನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. ಕ್ರೈಂ, ಸಸ್ಪೆನ್ಸ್​, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾ 'ರಣಭೂಮಿ' ನವೆಂಬರ್​​ 8 ರಂದು ಬಿಡುಗಡೆಯಾಗಲಿದೆ. ಮಾನಸಿ ಫಿಲ್ಮ್​ ಬ್ಯಾನರ್​​​ ಅಡಿ ಚಿರಂಜೀವಿ ದೀಪಕ್​​ ಅವರೇ ನಿರ್ಮಾಣ ಮಾಡಿದ್ದಾರೆ.

Ranbhoomi movie release on november 8th, ನವೆಂಬರ್ 8 ರಂದು ರಣಭೂಮಿ ಚಿತ್ರ ಬಿಡುಗಡೆ
'ರಣಭೂಮಿ'

ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಚಿರಂಜೀವಿ ದೀಪಕ್, ಖಳನಟ‌ ಡ್ಯಾನಿ ಕುಟ್ಟಪ್ಪ, ಛಾಯಾಗ್ರಾಹಕ ನಾಗಾರ್ಜುನ್‌, ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಸೇರಿ ಕೆಲವೇ ಕೆಲವು ಮಂದಿ ಇದ್ದರು. ಪ್ರೆಸ್​​​ಮೀಟ್​​ಗೆ ನಾಯಕ, ನಾಯಕಿ ಬರದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ, 'ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್​​​​ಗೆ ಬಂದು ಸಿನಿಮಾ ನೋಡ್ತಾರೆ, ಇಲ್ಲಿ ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

Intro:ಹೀರೋ ಹೀರೋಯಿನ್ ಬಗ್ಗೆ ಅಸಮಾಧಾನ ಹೊರ ಹಾಕಿದ ರಣಭೂಮಿ ಚಿತ್ರದ ನಿರ್ದೇಶಕ!!.

ಈ ಸಿನಿಮಾರಂಗದಲ್ಲಿ ಸಿನಿಮಾ ಸ್ಟಾರ್ಟ್ ಆಗೋ ಹೊಸದ್ರಲ್ಲಿ ಹೀರೋ, ಹೀರೋಯಿನ್ ನಿರ್ದೇಶಕರು ಹಾಗು ನಿರ್ಮಾಪಕರು ಅಂಟಿಕೊಂಡು ಇರ್ತಾರೆ.. ಈ ಶೂಟಿಂಗ್ ಕಂಪ್ಲೀಟ್ ಆಗಿ ರಿಲೀಸ್ ಹೊತ್ತಿಗೆ, ನಾಯಕ, ನಾಯಕಿ ಸಿನಿಮಾ‌‌ ಪ್ರಚಾರಕ್ಕೆ ಬರೋದಿಲ್ಲ..ಇದೀಗ ಇಂತಹದ್ದೇ ಪರಿಸ್ಥಿತಿ ರಣಭೂಮಿ ಸಿನಿಮಾಗೆ ಎದುರಾಗಿದೆ..ಜೋಕಾಲಿ ಸಿನಿಮಾ‌‌‌ ಮಾಡಿದ್ದ, ಚಿರಂಜೀವಿ ದೀಪಕ್ , ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ನಿರಂಜನ್‌‌ ಒಡೆಯರ್ ಹಾಗು ಭಜರಂಗಿ ಲೋಕಿ ಹಾಕ್ಕೊಂಡು ಸಿನಿಮಾ‌ ಮಾಡಿದ್ದಾರೆ..ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ರಣಭೂಮಿ ಸಿನಿಮಾದ ನಾಯಕ, ನಾಯಕಿರು ಇಲ್ಲದೇ ನಿರ್ದೇಶಕ ಚಿರಂಜೀವಿ ದೀಪಕ್, ಖಳ ನಟ‌ ಡ್ಯಾನಿ ಕುಟ್ಟಪ್ಪ ಹಾಗು ಛಾಯಾಗ್ರಹಕ ನಾಗರ್ಜುನ್‌,ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಜೊತೆಗೂಡಿ‌ ಸಿನಿಮಾ ರಿಲೀಸ್ ಡೇಟ್ ನ್ನ ಅನೌಸ್ ಮಾಡಿದ್ದಾರೆ..ಯಾಕೇ ಈ ಸಿನಿಮಾ ಪ್ರಚಾರಕ್ಕೆ ನಾಯಕ, ನಾಯಕಿ ಬಂದಿಲ್ಲ‌ ಅಂತಾ ನಿರ್ದೇಶಕ ಚಿರಂಜೀವಿ ದೀಪಕ್ ಕೇಳಿದ್ರೆ, ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲಾ ಕಥೆ ಚೆನ್ನಾಗಿದ್ರೆ ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡ್ತಾರೆ, ಇಲ್ಲಿ ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗೋಲ್ಲ ಅಂತಾ ನಿರ್ದೇಶಕರು ಹೀರೋ, ಹೀರೋಯಿನ್ ವಿರುದ್ಧ ತಮ್ಮ ಅಸಮಾಧಾನವನ್ನ‌ ಹೊರ ಹಾಕಿದ್ರು..ಖಳ‌‌‌ ನ‌ಟ‌ ಡ್ಯಾನೀ ಕುಟ್ಟಪ್ಪ ಇಂಟೆಲಿಜೆಂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ..Body:ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು ಎಂಬ ಟ್ಯಾಗ್ ಲೈನ್ ಹೊಂದಿರುವ ರಣಭೂಮಿ ಚಿತ್ರ, ಕ್ರೈಂ, ಸಸ್ಪೆನ್ಸ್​​​​​​​​​, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾವಾಗಿದೆ..ಮಾನಸಿ ಫಿಲ್ಮ್​ ಬ್ಯಾನರ್​​​ ಅಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ..
ಇದೇ ನವೆಂಬರ್ 8ಕ್ಕೆ ರಣಭೂಮಿ ಸಿನಿಮಾ‌ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಅಗಲಿದೆ..

ಬೈಟ್ ಡ್ಯಾನೀ ಕುಟ್ಟಪ್ಲ ಖಳ‌ನಟ
ಚಿರಂಜೀವಿ ದೀಪಕ್ ನಿರ್ದೇಶಕConclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.