ETV Bharat / sitara

'ಸೈರಾ ನರಸಿಂಹ ರೆಡ್ಡಿ' ಸಿನಿಮಾ ನೋಡಿದ ಉಪರಾಷ್ಟ್ರಪತಿ, ಚಿರು ಅಭಿನಯಕ್ಕೆ ಮೆಚ್ಚುಗೆ - ಸೈರಾ ಸಿನಿಮಾ ನೋಡಿದ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರ ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೈರಾ ಸಿನಿಮಾ ನೋಡಿದ ವೆಂಕಯ್ಯ ನಾಯ್ಡು​
author img

By

Published : Oct 17, 2019, 11:56 AM IST

ತೆಲುಗಿನ ಮೆಗಾಸ್ಟಾರ್​ ಜಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ರಿಲೀಸ್​ ಆಗಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಇದೀಗ ಈ ಚಿತ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ಮೇಲೆ ಪ್ರಮುಖ ರಾಜಕೀಯ ನಾಯಕರನ್ನು ಚಿತ್ರ ನೋಡುವಂತೆ ಆಹ್ವಾನಿಸುತ್ತಿರುವ ಮಾಜಿ ಸಂಸದ, ನಟ ಚಿರಂಜೀವಿ, ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ನೋಡಿರುವ ನಾಯ್ಡು​ ಚಿತ್ರ ವೀಕ್ಷಣೆ ಸಂದರ್ಭದ ಫೋಟೋವನ್ನು ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಳಿಕ ಮಾತನಾಡಿರುವ ಅವರು​, ಎನ್​.ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್​ ನಂತರ ತೆಲುಗಿನ ಅದ್ಭುತ ನಟ ಜಿರಂಜೀವಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಲು ಈಗಾಗಲೇ ಆಂಧ್ರ ಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರನ್ನೂ ಚಿರು ಆಹ್ವಾನಿಸಿದ್ದಾರಂತೆ.

ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್​ 2 ಗಾಂಧಿ ಜಯಂತಿ ದಿನ ಬಿಡುಗಡೆಯಾಗಿತ್ತು. ಸುರೇಂದರ್​ ರೆಡ್ಡಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್​, ಅಮಿತಾಬ್​ ಬಚ್ಚನ್​, ನಯನ​ ತಾರಾ ಸೇರಿದಂತೆ ಹಲವು ದೊಡ್ಡ ನಟರು ಚಿತ್ರದಲ್ಲಿದ್ದು, ಈಗಾಗಲೇ 200 ಕೋಟಿ ರೂ ಹಣ ಗಳಿಕೆ ಮಾಡಿದೆ.

ತೆಲುಗಿನ ಮೆಗಾಸ್ಟಾರ್​ ಜಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ರಿಲೀಸ್​ ಆಗಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಇದೀಗ ಈ ಚಿತ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ಮೇಲೆ ಪ್ರಮುಖ ರಾಜಕೀಯ ನಾಯಕರನ್ನು ಚಿತ್ರ ನೋಡುವಂತೆ ಆಹ್ವಾನಿಸುತ್ತಿರುವ ಮಾಜಿ ಸಂಸದ, ನಟ ಚಿರಂಜೀವಿ, ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ನೋಡಿರುವ ನಾಯ್ಡು​ ಚಿತ್ರ ವೀಕ್ಷಣೆ ಸಂದರ್ಭದ ಫೋಟೋವನ್ನು ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಳಿಕ ಮಾತನಾಡಿರುವ ಅವರು​, ಎನ್​.ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್​ ನಂತರ ತೆಲುಗಿನ ಅದ್ಭುತ ನಟ ಜಿರಂಜೀವಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಲು ಈಗಾಗಲೇ ಆಂಧ್ರ ಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರನ್ನೂ ಚಿರು ಆಹ್ವಾನಿಸಿದ್ದಾರಂತೆ.

ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್​ 2 ಗಾಂಧಿ ಜಯಂತಿ ದಿನ ಬಿಡುಗಡೆಯಾಗಿತ್ತು. ಸುರೇಂದರ್​ ರೆಡ್ಡಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್​, ಅಮಿತಾಬ್​ ಬಚ್ಚನ್​, ನಯನ​ ತಾರಾ ಸೇರಿದಂತೆ ಹಲವು ದೊಡ್ಡ ನಟರು ಚಿತ್ರದಲ್ಲಿದ್ದು, ಈಗಾಗಲೇ 200 ಕೋಟಿ ರೂ ಹಣ ಗಳಿಕೆ ಮಾಡಿದೆ.

Intro:ನಟ ಹರೀಶ್ ರಾಜ್ ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ಭಾವುಕರಾದ ಘಟನೆ ಎರಡನೇ ದಿನ ರಾತ್ರಿ ನಡೆಯಿತು.

https://www.facebook.com/102459466602897/posts/1383952975120200/



Body:ಬಿಗ್ ಬಾಸ್ ನೀಡಿದ್ದ ಗುಣಶೀಲ ಟಾಸ್ಕ್ ನಲ್ಲಿ ಹರೀಶ್ ರಾಜ್ ಅವರಿಗೆ ಭಾವುಕ ಚೀಲವನ್ನು ನೀಡಲಾಗಿತ್ತು.
ಸಂದರ್ಶನ ಸಮಿತಿ ಸದಸ್ಯರು ನೀವು ಎಷ್ಟು ಭಾವುಕರು ಎಂದು ಕೇಳಿದಾಗ ಹರೀಶ್ ರಾಜ್ ಉತ್ತರಿಸಿದ್ದು ಹೀಗೆ..
ನಾನು ತುಂಬಾ ಭಾವುಕ ಇದಕ್ಕೆ ಸಂಬಂಧಿಸಿದಂತೆ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದರು.

ನಾನು ನನ್ನ ತಂದೆಯ ವಿಷಯದಲ್ಲಿ ಅತ್ಯಂತ ಭಾವುಕನಾಗುತ್ತೇನೆ ನನ್ನ ಒಂಬತ್ತನೇ ವಯಸ್ಸಿನಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಮೂವರು ಅಕ್ಕಂದಿರು, ನಾನು ಒಬ್ಬನೇ ಮಗ ನನ್ನ ತಾಯಿ ನನಗೆ ಎಂದಿಗೂ ಕಣ್ಣೀರು ಹಾಕಲು ಬಿಟ್ಟಿಲ್ಲ. ಒಮ್ಮೊಮ್ಮೆ ದೇವರನ್ನೇ ಕೇಳುತ್ತೇನೆ ನಮ್ಮನ್ನು ಬಿಟ್ಟು ಹೋದವರು ಎಲ್ಲಿಗೆ ಹೋಗುತ್ತಾರೆ ಎಂದು ಎನ್ನುತ್ತಾ ಹರೀಶ್ ರಾಜ್ ಕಣ್ಣೀರು ಹಾಕಿದರು.
ಆನಂತರ ಸಂದರ್ಶನ ಸಮಿತಿ ಸದಸ್ಯರು ಇವರು ಹೆಚ್ಚಾಗಿ ಭಾವುಕರಾದರು ಎಂದು ಹೇಳಿ ಹರೀಶ್ ರಾಜ್ ಅವರು ಸಮಾಧಾನಪಡಿಸಿದರು.



Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.