ETV Bharat / sitara

ಡಾ.ರಾಜ್​​​ಕುಮಾರ್ ಐಎಎಸ್ ಅಕಾಡೆಮಿ ಈಗ ಟ್ರಸ್ಟ್, ಹಣ ಮಾಡುವ ಆಸೆಯಿಲ್ಲ: ರಾಘಣ್ಣ

author img

By

Published : Oct 15, 2019, 4:05 PM IST

ಡಾ.ರಾಜ್‌ಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ. ಟ್ರಸ್ಟ್ ಆಗಿ ಬದಲಾಗುವುದರಿಂದ ಇಲ್ಲಿ ಸೇವೆ ಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ ಎಂದು ರಾಘವೇಂದ್ರ ರಾಜ್​ ಕುಮಾರ್​ ತಿಳಿದರು.

ರಾಜ್​ ಕುಮಾರ್​ ಮತ್ತು ರಾಘವೇಂದ್ರ ರಾಜ್​ ಕುಮಾರ್​​

ಕೆಲವು ವರ್ಷಗಳ ಹಿಂದೆ ಆರಂಭವಾದ ಡಾ.ರಾಜಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರಸ್ಟ್ ಆಗಿ ಬದಲಾಗುವುದರಿಂದ ಸೇವೆಯೇ ಮುಖ್ಯ ಉದ್ದೇಶವಾಗುತ್ತದೆ. ಈ ಆಲೋಚನೆಯನ್ನು ತಮ್ಮ ಎರಡನೇ ಮಗ ಗುರು ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ತಿಳಿಸಿದ್ದಾರೆ ಎಂದು ರಾಘಣ್ಣ ಹೇಳಿದ್ರು.

rajkumar IAS academy is trust now
ಗುರು ರಾಜಕುಮಾರ್ ಹಾಗೂ ಮಡದಿ ಶ್ರೀ ದೇವಿ

ತಮ್ಮ ತಂದೆ ಡಾ. ರಾಜ್‌ ಕುಮಾರ್​​ ಜೀವನದ ಬಗ್ಗೆ ಹೇಳುತ್ತಾ ರಾಘಣ್ಣ, ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ತಿಳಿಯದೆ ದಾನ ಮಾಡುತ್ತಿದ್ದರಂತೆ. ಅಣ್ಣಾವ್ರ ಈ ಗುಣ ಶಿವರಾಜಕುಮಾರ್ ಅವರಿಗೆ ಬಾಲ್ಯದಲ್ಲಿ ಇದ್ದಿದ್ದು ನಿಜ. ಬಾಲಕನಾಗಿದ್ದಾಗ ಶಿವರಾಜ್‌ ಕುಮಾರ್ ತಾವು ಹಾಕಿಕೊಂಡಿದ್ದ ಅಂಗಿಯನ್ನೇ ಕೇಳಿದವರಿಗೆ ಕೊಟ್ಟು ಮನೆಗೆ ಬರ್ತಿದ್ರಂತೆ ಎಂದರು.

rajkumar IAS academy is trust now
ರಾಜ್​​ ಕುಮಾರ್​ ಕುಟುಂಬ

ಈಗ ಗುರು ರಾಜಕುಮಾರ್ ಐಎಎಸ್ ಅಕಾಡೆಮಿಯಿಂದ ಹಣ ಮಾಡುವ ಪರಿಕಲ್ಪನೆಗೆ ತಿಲಾಂಜಲಿ ಹಾಡಿದ್ದಾರೆ. ಒಬ್ಬ ವ್ಯಕ್ತಿ ಐಎಎಸ್ ಓದುವುದಕ್ಕೆ ಈ ಟ್ರಸ್ಟ್ ಸೇರಿಕೊಂಡರೆ ಆತನ ವಿದ್ಯಾಭ್ಯಾಸ ಮುಗಿಸಿದ ನಂತರ ಆತನಿಂದ ಪಡೆದ ಫೀಜ್ 55000 ರೂಪಾಯಿಯನ್ನು ಹಿಂತಿರುಗಿಸಲಾಗುವುದು ಎಂಬ ಆಲೋಚನೆ ಇದೆ ಎಂದರು.

ಕೆಲವು ವರ್ಷಗಳ ಹಿಂದೆ ಆರಂಭವಾದ ಡಾ.ರಾಜಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರಸ್ಟ್ ಆಗಿ ಬದಲಾಗುವುದರಿಂದ ಸೇವೆಯೇ ಮುಖ್ಯ ಉದ್ದೇಶವಾಗುತ್ತದೆ. ಈ ಆಲೋಚನೆಯನ್ನು ತಮ್ಮ ಎರಡನೇ ಮಗ ಗುರು ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ತಿಳಿಸಿದ್ದಾರೆ ಎಂದು ರಾಘಣ್ಣ ಹೇಳಿದ್ರು.

rajkumar IAS academy is trust now
ಗುರು ರಾಜಕುಮಾರ್ ಹಾಗೂ ಮಡದಿ ಶ್ರೀ ದೇವಿ

ತಮ್ಮ ತಂದೆ ಡಾ. ರಾಜ್‌ ಕುಮಾರ್​​ ಜೀವನದ ಬಗ್ಗೆ ಹೇಳುತ್ತಾ ರಾಘಣ್ಣ, ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ತಿಳಿಯದೆ ದಾನ ಮಾಡುತ್ತಿದ್ದರಂತೆ. ಅಣ್ಣಾವ್ರ ಈ ಗುಣ ಶಿವರಾಜಕುಮಾರ್ ಅವರಿಗೆ ಬಾಲ್ಯದಲ್ಲಿ ಇದ್ದಿದ್ದು ನಿಜ. ಬಾಲಕನಾಗಿದ್ದಾಗ ಶಿವರಾಜ್‌ ಕುಮಾರ್ ತಾವು ಹಾಕಿಕೊಂಡಿದ್ದ ಅಂಗಿಯನ್ನೇ ಕೇಳಿದವರಿಗೆ ಕೊಟ್ಟು ಮನೆಗೆ ಬರ್ತಿದ್ರಂತೆ ಎಂದರು.

rajkumar IAS academy is trust now
ರಾಜ್​​ ಕುಮಾರ್​ ಕುಟುಂಬ

ಈಗ ಗುರು ರಾಜಕುಮಾರ್ ಐಎಎಸ್ ಅಕಾಡೆಮಿಯಿಂದ ಹಣ ಮಾಡುವ ಪರಿಕಲ್ಪನೆಗೆ ತಿಲಾಂಜಲಿ ಹಾಡಿದ್ದಾರೆ. ಒಬ್ಬ ವ್ಯಕ್ತಿ ಐಎಎಸ್ ಓದುವುದಕ್ಕೆ ಈ ಟ್ರಸ್ಟ್ ಸೇರಿಕೊಂಡರೆ ಆತನ ವಿದ್ಯಾಭ್ಯಾಸ ಮುಗಿಸಿದ ನಂತರ ಆತನಿಂದ ಪಡೆದ ಫೀಜ್ 55000 ರೂಪಾಯಿಯನ್ನು ಹಿಂತಿರುಗಿಸಲಾಗುವುದು ಎಂಬ ಆಲೋಚನೆ ಇದೆ ಎಂದರು.

ಡಾ ರಾಜಕುಮಾರ್ ಐ ಎ ಎಸ್ ಅಕಾಡೆಮಿ ಈಗ ಟ್ರಸ್ಟ್

ಕೆಲವು ವರ್ಷಗಳ ಹಿಂದೆ ಆರಂಭವಾದ ಡಾ ರಾಜಕುಮಾರ್ ಐ ಎ ಎಸ್ ಅಕಾಡೆಮಿ ಈಗ ಟ್ರಸ್ಟ್ ಆಗಿ ಪರಿವರ್ತನೆ ಆಗಿದೆ ಎಂದು ರಾಘವೇಂದ್ರ ರಾಜಕುಮಾರ್ ಒಂದು ಕಿರು ಸಂದರ್ಶನದಲ್ಲಿ ನಿನ್ನೆ ಮಾತಿಗೆ ಸಿಕ್ಕಾಗ ಹೇಳಿಕೊಂಡಿದ್ದಾರೆ.

ಈ ರೀತಿ ಟ್ರಸ್ಟ್ ಆಗಿ ಕನ್ವರ್ಟ್ ಆಗುವುದರಿಂದ ಇದು ಬಹು ಉಪಯೋಗಿ ಆಗಿ ಇಲ್ಲಿ ಯಾರು ದುಡಿಮೆ ಮಾಡದೆ ಸೇವೆ ಮಾಡುವುದೇ ಮುಖ್ಯ ಆಗಿರುತ್ತದೆ. ಈ ಆಲೋಚನೆ ತಮ್ಮ ಎರಡನೇ ಮಗ ಗುರು ರಾಜಕುಮಾರ್ ಹಾಗೂ ಮಡದಿ ಶ್ರೀ ದೇವಿ ಅವರಿಗೆ ಬಂದದ್ದನ್ನು ಕಂಡು ರಾಘವೇಂದ್ರ ರಾಜಕುಮಾರ್ ಮನಸಾರೆ ಮಗನ ಸೇವ ಮನೋಭಾವವನ್ನು ಕೊಂಡಾಡಿದ್ದಾರೆ.

ಫ್ಲ್ಯಾಶ್ ಬ್ಯಾಕ್ ಹೋಗಿ ಬರುವ ರಾಘವೇಂದ್ರ ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಅಣ್ಣಾವ್ರು ಮನೆಯಲ್ಲಿ ಇದ್ದ ವಸ್ತುಗಳನ್ನು ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ತಿಳಿಯದೆ ದಾನ ಮಾಡುತ್ತಾ ಇದ್ದದ್ದನ್ನು ಕಂಡು ಆಗಿನ ಮುತ್ತು ರಾಜನಿಗೆ ನಿನ್ನ ನೀತಿ ಸರಿಯಾಗಿದೆ ಆದರೆ ರೀತಿ ಸರಿಯಾಗಿಲ್ಲ ಎಂದು ತಿಳವಳಿಕೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಹೇಳಿದ್ದರಂತೆ. ಅಣ್ಣಾವ್ರ ಗುಣ ಶಿವರಾಜಕುಮಾರ್ ಅವರಿಗೆ ಬಾಲ್ಯದಲ್ಲಿ ಇದ್ದದ್ದು ನಿಜ. ಬಾಲಕ ಆಗಿದ್ದಾಗ ಶಿವರಾಜಕುಮಾರ್ ತಾವು ಹಾಕಿಕೊಂಡಿದ್ದ ಅಂಗಿಯನ್ನೇ ಕೇಳಿದವರಿಗೆ ಕೊಟ್ಟು ಬಿಡುತ್ತಾ ಇದ್ದರಂತೆ.

ಈಗ ಗುರು ರಾಜಕುಮಾರ್ ಈ ಐ ಎ ಎಸ್ ಅಕಾಡೆಮಿ ಇಂದ ಹಣ ಮಾಡುವ ಪರಿಕಲ್ಪನೆಗೆ ತಿಲಾಂಜಲಿ ಹಾಡಿದ್ದಾರೆ. ಒಬ್ಬ ವ್ಯಕ್ತಿ ಐ ಎ ಎಸ್ ಓದುವುದಕ್ಕೆ ಈ ಟ್ರಸ್ಟ್ ಸೇರಿಕೊಂಡರೆ ಆತನ ವಿಧ್ಯಾಬ್ಯಾಸ ಮುಗಿಸಿದ ನಂತರ ಅವರ ಹೆತ್ತವರನ್ನು ಆಹ್ವಾನಿಸಿ ಪಡೆದ ಫೀಜ್ 55000 ರೂಪಾಯಿಯನ್ನು ಸಹ ಹಿಂತುರಿಗಿಸಲಾಗುವುದು ಎಂದು ಆಲೋಚನೆ ಇದೆ. ಯಾವಾಗ ಬೇರೆಯವರ ಜೊತೆ ಸ್ಪರ್ಧೆಗೆ ಇಳಿಯುತ್ತೇವೆಯೋ ಅಂತಹ ವಿಧ್ಯ ಸಂಸ್ಥೆ ಹಣ ಮಾಡುವ ಪೈಪೋಟಿಯಲ್ಲಿ ತೊಡಗಿಕೊಳ್ಳುತ್ತದೆ. ಡಾ ರಾಜಕುಮಾರ್ ಐ ಎ ಎಸ್ ಅಕಾಡೆಮಿ ಅಲ್ಲಿ ಯಾವುದೇ ವರ್ಗದ ವ್ಯಕ್ತಿ ನೋಂದಾಯಿಸಿಕೊಳ್ಳಬಹುದು.

ಹಣ ಮಾಡುವ ಆಲೋಚನೆ ಡಾ ರಾಜಕುಮಾರ್ ಐ ಎ ಎಸ್ ಅಕಾಡೆಮಿ ಮಾಡುತ್ತಾ ಇಲ್ಲ ಎಂದು ಹರ್ಷದಿಂದ ಹೇಳಿಕೊಂಡು ಇಂತಹ ಆಲೋಚನೆ ಇಷ್ಟು ಚಿಕ್ಕ ವಯಸ್ಸಿಗೆ ಬಂದಿರುವುದು ಸಹ ದೇವರ ಕೃಪೆ ಹಾಗೂ ಅಪ್ಪಾಜಿ ಆಶೀರ್ವಾದ ಇರಬೇಕು ಅನ್ನುತ್ತಾರೆ ರಾಘಣ್ಣ.

ಅಂದಹಾಗೆ ರಾಘವೇಂದ್ರ ರಾಜಕುಮಾರ್ ಸಹ ಒಂದು ಕಥೆಯನ್ನು ಬರೆಯಲು ಶುರು ಮಾಡಿದ್ದಾರೆ. ಅದು ಅಪ್ಪ ಹಾಗೂ ಮಗಳ ಭಾಂದವ್ಯದ ಕಥೆ ಆಗಿರಲಿದೆ. ಅದು ಸಂಪೂರ್ಣ ಆದ ಮೇಲೆ ಅದನ್ನು ಚಿತ್ರ ಮಾಡಿ ತಾವೇ ಅಭಿನಯಿಸಬೇಕು ಅಂತ ತೀರ್ಮಾನಿಸಿದ್ದಾರೆ.

ಗುರು ರಾಜಕುಮಾರ್ ಈಗ ಐ ಎ ಎಸ್ ಅಕಾಡೆಮಿ ಒಂದು ಹಂತಕ್ಕೆ ತಂದು ತಾವು ಸಹ ಒಂದು ಸಿನಿಮಾದಲ್ಲಿ ಅಭಿನಯಿಸಲು ಸಿದ್ದರಾಗುತ್ತ ಇದ್ದಾರೆ. ತಮ್ಮದೇ ಒಂದು ಟೀಮ್ ಸೆಟ್ ಮಾಡಿಕೊಂಡು ರಾಘಣ್ಣ ಮುಂದೆ ಸಿನಿಮಾ ಬಗ್ಗೆ ವಿವರಣೆ ಕೊಡಲಿದ್ದಾರಂತೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.