ETV Bharat / sitara

ಸಮಾಜಮುಖಿ ಕಾರ್ಯ ಮಾಡುತ್ತ ಎಲ್ಲರಿಗೂ ಮಾದರಿಯಾದ ನಿರ್ಮಾಪಕ ಮಹೇಂದ್ರ

author img

By

Published : Jun 17, 2019, 2:51 PM IST

ನಿರ್ಮಾಪಕ ಎಂದರೆ ಸಾಮಾನ್ಯವಾಗಿ ಸಿನಿಮಾಗಳ ನಿರ್ಮಾಣದಲ್ಲೇ ತಮ್ಮನ್ನು ಸಂಫೂರ್ಣ ತೊಡಗಿಸಿಕೊಂಡಿರುತ್ತಾರೆ. ಆದರೆ, ಮಹೇಂದ್ರ ಮುನೋತ್ ಇದಕ್ಕೆ ವಿರುದ್ಧವಾದವರು. ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಮಹೇಂದ್ರ

ಪ್ರತಿಯೊಬ್ಬರಿಗೂ ದಾನ ಮಾಡುವ ಹೃದಯ ವೈಶಾಲ್ಯತೆ ಇರುವುದಿಲ್ಲ. ನಮಗೆ ಇಲ್ಲದಿದ್ದರೂ ಪರವಾಗಿಲ್ಲ ನೊಂದವರಿಗೆ ಮೊದಲು ಸಹಾಯ ಮಾಡೋಣ ಎಂದುಕೊಳ್ಳುವ ಮನಸ್ಸು ಕೆಲವೇ ಕೆಲವರಲ್ಲಿ ಇರುತ್ತದೆ. ಮತ್ತೆ ಕೆಲವರು ದೇವರು ನಮಗೆ ನೀಡಿರುವುದೇ ಇಲ್ಲದಿರುವವರಿಗೆ ಸಹಾಯ ಮಾಡಲು ಎಂಬ ಮನೋಭಾವವುಳ್ಳವರು.

mahendra
ಮಹೇಂದ್ರ ಮುನೋತ್

ಅಂತಹ ವ್ಯಕ್ತಿಗಳಲ್ಲಿ ನಿರ್ಮಾಪಕ ಮಹೇಂದ್ರ ಮುನೋತ್ ಕೂಡಾ ಒಬ್ಬರು. ಪರಭಾಷೆಯವರಾಗಿ ಕನ್ನಡ ನಾಡಿನಲ್ಲಿ ಕಲಿತು, ಇಲ್ಲಿ ನೂರಾರು ವ್ಯಕ್ತಿಗಳಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಹೇಂದ್ರ. ಇದರೊಂದಿಗೆ ಗೋ ರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇತ್ತೀಚೆಗೆ ಮಂಡ್ಯ ಬಳಿ ಇರುವ ಗೋಶಾಲೆಯೊಂದಕ್ಕೆ ಭಾರೀ ಮೊತ್ತದ ಹಣವನ್ನು ದಾನವಾಗಿ ನೀಡಿದ್ದಾರೆ. ತಮ್ಮ ತಂದೆ ದಿವಂಗತ ಮೋತಿಲಾಲ್ ಮುನೋತ್ ಅವರ 8 ನೇ ಪುಣ್ಯತಿಥಿ ಅಂಗವಾಗಿ 22 ಲಕ್ಷ ರೂಪಾಯಿ ದೇಣಿಗೆಯನ್ನು ಚೈತ್ರ ಗೋಶಾಲೆಗೆ ನೀಡಿದ್ದಾರೆ. ಇದರಿಂದ ನೂರಾರು ಹಸುಗಳ ಸಂರಕ್ಷಣೆ ಆಗುತ್ತದೆ ಎಂಬ ಮನೋಭಾವ ಅವರದ್ದು.

ಕನ್ನಡದಲ್ಲಿ ಮೂರು ಸಿನಿಮಾಗಳನ್ನು ನಿರ್ಮಿಸಿರುವುದಲ್ಲದೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಕೂಡಾ ಮಾಡಿದ್ದಾರೆ ಮಹೇಂದ್ರ. ಇವರು ಅಪಾರ ದೇಶಪ್ರೇಮಿ ಕೂಡಾ. ಅಷ್ಟೇ ಅಲ್ಲ ಕನ್ನಡ ಭಾಷೆ ಬಗ್ಗೆ ಅವರು ತಮ್ಮ ಪ್ರೀತಿಯನ್ನು ಅನೇಕ ಕಡೆ ತೋರುತ್ತಾ ಬಂದಿದ್ದಾರೆ. ಮಹೇಂದ್ರ ಅವರು ಜೀವನದಲ್ಲಿ ಉತ್ತಮ ಸಿದ್ಧಾಂತಗಳನ್ನು ಹೊಂದಿದ್ದಾರೆ. ಇತರರು ಇವರನ್ನು ನೋಡಿ ಕಲಿಯುವಂತೆ ಜೀವನ ಸಾಗಿಸುತ್ತಿದ್ದಾರೆ.

ಪ್ರತಿಯೊಬ್ಬರಿಗೂ ದಾನ ಮಾಡುವ ಹೃದಯ ವೈಶಾಲ್ಯತೆ ಇರುವುದಿಲ್ಲ. ನಮಗೆ ಇಲ್ಲದಿದ್ದರೂ ಪರವಾಗಿಲ್ಲ ನೊಂದವರಿಗೆ ಮೊದಲು ಸಹಾಯ ಮಾಡೋಣ ಎಂದುಕೊಳ್ಳುವ ಮನಸ್ಸು ಕೆಲವೇ ಕೆಲವರಲ್ಲಿ ಇರುತ್ತದೆ. ಮತ್ತೆ ಕೆಲವರು ದೇವರು ನಮಗೆ ನೀಡಿರುವುದೇ ಇಲ್ಲದಿರುವವರಿಗೆ ಸಹಾಯ ಮಾಡಲು ಎಂಬ ಮನೋಭಾವವುಳ್ಳವರು.

mahendra
ಮಹೇಂದ್ರ ಮುನೋತ್

ಅಂತಹ ವ್ಯಕ್ತಿಗಳಲ್ಲಿ ನಿರ್ಮಾಪಕ ಮಹೇಂದ್ರ ಮುನೋತ್ ಕೂಡಾ ಒಬ್ಬರು. ಪರಭಾಷೆಯವರಾಗಿ ಕನ್ನಡ ನಾಡಿನಲ್ಲಿ ಕಲಿತು, ಇಲ್ಲಿ ನೂರಾರು ವ್ಯಕ್ತಿಗಳಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಹೇಂದ್ರ. ಇದರೊಂದಿಗೆ ಗೋ ರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇತ್ತೀಚೆಗೆ ಮಂಡ್ಯ ಬಳಿ ಇರುವ ಗೋಶಾಲೆಯೊಂದಕ್ಕೆ ಭಾರೀ ಮೊತ್ತದ ಹಣವನ್ನು ದಾನವಾಗಿ ನೀಡಿದ್ದಾರೆ. ತಮ್ಮ ತಂದೆ ದಿವಂಗತ ಮೋತಿಲಾಲ್ ಮುನೋತ್ ಅವರ 8 ನೇ ಪುಣ್ಯತಿಥಿ ಅಂಗವಾಗಿ 22 ಲಕ್ಷ ರೂಪಾಯಿ ದೇಣಿಗೆಯನ್ನು ಚೈತ್ರ ಗೋಶಾಲೆಗೆ ನೀಡಿದ್ದಾರೆ. ಇದರಿಂದ ನೂರಾರು ಹಸುಗಳ ಸಂರಕ್ಷಣೆ ಆಗುತ್ತದೆ ಎಂಬ ಮನೋಭಾವ ಅವರದ್ದು.

ಕನ್ನಡದಲ್ಲಿ ಮೂರು ಸಿನಿಮಾಗಳನ್ನು ನಿರ್ಮಿಸಿರುವುದಲ್ಲದೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಕೂಡಾ ಮಾಡಿದ್ದಾರೆ ಮಹೇಂದ್ರ. ಇವರು ಅಪಾರ ದೇಶಪ್ರೇಮಿ ಕೂಡಾ. ಅಷ್ಟೇ ಅಲ್ಲ ಕನ್ನಡ ಭಾಷೆ ಬಗ್ಗೆ ಅವರು ತಮ್ಮ ಪ್ರೀತಿಯನ್ನು ಅನೇಕ ಕಡೆ ತೋರುತ್ತಾ ಬಂದಿದ್ದಾರೆ. ಮಹೇಂದ್ರ ಅವರು ಜೀವನದಲ್ಲಿ ಉತ್ತಮ ಸಿದ್ಧಾಂತಗಳನ್ನು ಹೊಂದಿದ್ದಾರೆ. ಇತರರು ಇವರನ್ನು ನೋಡಿ ಕಲಿಯುವಂತೆ ಜೀವನ ಸಾಗಿಸುತ್ತಿದ್ದಾರೆ.

ನಿರ್ಮಾಪಕ, ನಟ ಮಹೇಂದ್ರ್ ಮುನೋತ್ ಹೃದಯ ವೈಶಾಲ್ಯತೆ

 

ಪರಭಾಷೆಯವರಾಗಿ ಕನ್ನಡ ನಾಡಿನಲ್ಲಿ ಕನ್ನಡ ಕಲಿತು ಇಲ್ಲಿ ನೂರಾರು ವ್ಯಕ್ತಿಗಳಿಗೆ ಕೆಲಸ ಸಹ ಮಾರುತಿ ಮೆಡಿಕಲ್ಸ್ ಮೂಲಕ ನೀಡುತ್ತಿರುವ ನಿಗರ್ವಿ, ಸಮಾಜ ಮುಖಿ ಹಾಗೂ ಗೋ ರಕ್ಷಣೆ ಬಗ್ಗೆ ಅಪಾರ ಕಾಳಜಿ ಇರುವ ಮಹೇಂದ್ರ ಮುನೋತ್ ಅವರು ಒಂದು ದೊಡ್ಡ ಮೊತ್ತವನ್ನು ಮಂಡ್ಯ ಬಳಿ ಇರುವ ಚೈತ್ರ ಗೋಶಾಲೆಗೆ ನೀಡಿದ್ದಾರೆ. ಮಹೇಂದ್ರ ಮುನೋತ್ ಅವರ ಜೀವನದಲ್ಲಿ ಹಸುವೆ ಸತ್ಯ, ಹಾಲೆ ನಿತ್ಯ ಎಂದು ನಂಬಿರುವವರು.

 

ಕನ್ನಡದಲ್ಲಿ ಮೂರು ಸಿನಿಮಾ ನಿರ್ಮಾಣ ಮಾಡಿ ಆರು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಮಹೇಂದ್ರ ಮೊನೋತ್ ಅಪಾರ ದೇಶ ಪ್ರೇಮಿ ಸಹ. ಜೊತೆಗೆ ಕನ್ನಡ ಭಾಷೆಯ ಬಗ್ಗೆ ಅವರು ತಮ್ಮ ಪ್ರೀತಿಯನ್ನು ಅನೇಕ ಕಡೆ ತೋರುತ್ತಾ ಬಂದಿದ್ದಾರೆ.

ಮಹೇಂದ್ರ ಮುನೋತ್ ಅವರ ತಂದೆ ದಿವಂಗತ ಮೋತಿಲಾಲ್ ಮುನೋತ್ ಅವರ 8 ನೇ ಪುಣ್ಯ ತಿಥಿ ಅಂಗವಾಗಿ 22 ಲಕ್ಷ ರೂಪಾಯಿ ದೇಣಿಗೆಯನ್ನು ಮಂಡ್ಯದ ಚೈತ್ರ ಗೋ ಶಾಲೆಗೆ ನೀಡಿದ್ದಾರೆ. ಇದರಿಂದ ನೂರಾರು ಹಸುಗಳ ಸಂರಕ್ಷಣೆ ಸಹ ಆಗುತ್ತದೆ.

 

ಮಹೇಂದ್ರ ಮುನೋತ್ ಅವರು ಜೀವನದಲ್ಲಿ ಅನೇಕ ಹೊಸ ಸಿದ್ದಾಂತಗಳನ್ನು ಇತರರು ಅನುಕರಿಸುವ ರೀತಿಯಲ್ಲಿ ಸಾಗಿಸುತ್ತಿದ್ದಾರೆ.

 

ಮಹೇಂದ್ರ ಮುನೋತ್ ಕನ್ನಡದಲ್ಲಿ ಅರಿವು, ಮನೆ ತುಂಬಾ ಬರಿ ಜಂಬ, ಆಟೋ, ಪುಟಾಣಿ ಪವರ್ ಸಿನಿಮಾಗಳಲ್ಲಿ ಅಭಿನಯ ಮಾಡಿ ಅದರಲ್ಲಿ ಎರಡು ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.