ETV Bharat / sitara

ಡಾ. ಶಿವರಾಜ್​​ಕುಮಾರ್ ಮುಂದಿನ ಚಿತ್ರಕ್ಕೆ ಹೊಸ ಪ್ರತಿಭೆಗಳ ಅನ್ವೇಷಣೆ.. ಫೆಬ್ರವರಿ 8,9 ಕ್ಕೆಆಡಿಷನ್​ - ಶಿವಣ್ಣ ಅಭಿನಯದ ಆರ್​ಡಿಎಕ್ಸ್ ಚಿತ್ರಕ್ಕೆ ಪ್ರತಿಭಾನ್ವೇಷಣೆ

ಸೆಂಚುರಿ ಸ್ಟಾರ್​​​​​​​​​​ ಡಾ. ಶಿವರಾಜ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಅವರ ಮುಂದಿನ ಸಿನಿಮಾ ‘ಆರ್​ಡಿಎಕ್ಸ್​​​​​​​​​​​​​​​’ ಗಾಗಿ ಸತ್ಯಜ್ಯೋತಿ ಫಿಲ್ಮ್ಸ್​​ ಸಂಸ್ಥೆ ಕೂಡಾ ಹೊಸ ಕಲಾವಿದರನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆ ಫೆಬ್ರವರಿ 8, 9 ರಂದು ಬೆಳಗ್ಗೆ 9 - 6 ಗಂಟೆವರೆಗೆ ನಗರದ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯುತ್ತಿದೆ.

Shivajkumar
ಡಾ. ಶಿವರಾಜ್​​ಕುಮಾರ್
author img

By

Published : Jan 31, 2020, 10:41 AM IST

ಎಷ್ಟೋ ನಿರ್ದೇಶಕ, ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆಡಿಷನ್ ಮಾಡಿ ಸೂಕ್ತ ಪ್ರತಿಭೆಗಳನ್ನು ಆರಿಸಿ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಈ ರೀತಿ ಆಡಿಷನ್​​​​ಗಳಿಂದ ಎಷ್ಟೋ ಎಲೆ ಮರೆ ಕಾಯಿಯಂತಿದ್ದ ಪ್ರತಿಭೆಗಳು ಈಗ ಸಿನಿಮಾದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

RDX movie audition
ನಿರ್ದೇಶಕ ರವಿ ಅರಸು

ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​​​​​​​​​​​​​​​​​​​ಕುಮಾರ್ ‘ಯುವರತ್ನ’ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಕಲಾವಿದರನ್ನು ಗುರುತಿಸುವ ಸಲುವಾಗಿ ಪ್ರತಿಭಾನ್ವೇಷಣೆ ನಡೆಸಿ ಕಾಲೇಜಿನ ಸನ್ನಿವೇಶಗಳಿಗೆ ಹಲವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಸೆಂಚುರಿ ಸ್ಟಾರ್​​​​​​​​​​ ಡಾ. ಶಿವರಾಜ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಅವರ ಮುಂದಿನ ಸಿನಿಮಾ ‘ಆರ್​ಡಿಎಕ್ಸ್​​​​​​​​​​​​​​​’ ಗಾಗಿ ಸತ್ಯಜ್ಯೋತಿ ಫಿಲ್ಮ್ಸ್​​ ಸಂಸ್ಥೆ ಕೂಡಾ ಹೊಸ ಕಲಾವಿದರನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆ ಫೆಬ್ರವರಿ 8, 9 ರಂದು ಬೆಳಗ್ಗೆ 9 - 6 ಗಂಟೆವರೆಗೆ ನಗರದ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯುತ್ತಿದೆ. ಡಾ. ಶಿವರಾಜ್​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಜೊತೆ ನಟಿಸುವ ಆಸೆಯಿಂದ ಆ ಎರಡು ದಿನಗಳು ಕೂಡಾ ಹೊಸ ಪ್ರತಿಭೆಗಳು ಆಡಿಷನ್​​​ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಖಂಡಿತ.

RDX movie audition
ಡಾ. ಶಿವರಾಜ್​​ಕುಮಾರ್

ಸತ್ಯ ಜ್ಯೋತಿ ಫಿಲ್ಮ್ಸ್​​​​​​​​​​ 1982 ರಲ್ಲಿ ಆರಂಭವಾಗಿದ್ದು ‘ಮುನ್ದ್ರಾಮ್ ಪಿರ್ರೈ’ ತಮಿಳು ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಿಸಿತು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದೆ. 1986 ರಲ್ಲಿ ಡಾ. ವಿಷ್ಣುವರ್ಧನ್​​​​​​​​​​​​​​​​​​​​​​​​​​​​​​​ ಹಾಗೂ ಸುಮಲತಾ ಜೋಡಿಯಾಗಿ ಅಭಿನಯಿಸಿರುವ 'ಸತ್ಯಜ್ಯೋತಿ' ಎಂಬ ಚಿತ್ರವನ್ನು ನಿರ್ಮಿಸಿತ್ತು. ಈ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು. 'ಆರ್​ಡಿಎಕ್ಸ್​​​' ಸಿನಿಮಾಗಾಗಿ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಕನ್ನಡಕ್ಕೆ ಬರುತ್ತಿದ್ದಾರೆ. ಆಡಿಷನ್​​​ನಲ್ಲಿ ಆಯ್ಕೆಯಾಗಿ ಶಿವಣ್ಣ ಜೊತೆ ನಟಿಸಲು ಯಾರಿಗೆ ಅದೃಷ್ಟ ದೊರೆಯಲಿದೆಯೋ ಕಾದು ನೋಡಬೇಕು.

ಎಷ್ಟೋ ನಿರ್ದೇಶಕ, ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆಡಿಷನ್ ಮಾಡಿ ಸೂಕ್ತ ಪ್ರತಿಭೆಗಳನ್ನು ಆರಿಸಿ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಈ ರೀತಿ ಆಡಿಷನ್​​​​ಗಳಿಂದ ಎಷ್ಟೋ ಎಲೆ ಮರೆ ಕಾಯಿಯಂತಿದ್ದ ಪ್ರತಿಭೆಗಳು ಈಗ ಸಿನಿಮಾದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

RDX movie audition
ನಿರ್ದೇಶಕ ರವಿ ಅರಸು

ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​​​​​​​​​​​​​​​​​​​ಕುಮಾರ್ ‘ಯುವರತ್ನ’ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಕಲಾವಿದರನ್ನು ಗುರುತಿಸುವ ಸಲುವಾಗಿ ಪ್ರತಿಭಾನ್ವೇಷಣೆ ನಡೆಸಿ ಕಾಲೇಜಿನ ಸನ್ನಿವೇಶಗಳಿಗೆ ಹಲವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಸೆಂಚುರಿ ಸ್ಟಾರ್​​​​​​​​​​ ಡಾ. ಶಿವರಾಜ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಅವರ ಮುಂದಿನ ಸಿನಿಮಾ ‘ಆರ್​ಡಿಎಕ್ಸ್​​​​​​​​​​​​​​​’ ಗಾಗಿ ಸತ್ಯಜ್ಯೋತಿ ಫಿಲ್ಮ್ಸ್​​ ಸಂಸ್ಥೆ ಕೂಡಾ ಹೊಸ ಕಲಾವಿದರನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆ ಫೆಬ್ರವರಿ 8, 9 ರಂದು ಬೆಳಗ್ಗೆ 9 - 6 ಗಂಟೆವರೆಗೆ ನಗರದ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯುತ್ತಿದೆ. ಡಾ. ಶಿವರಾಜ್​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಜೊತೆ ನಟಿಸುವ ಆಸೆಯಿಂದ ಆ ಎರಡು ದಿನಗಳು ಕೂಡಾ ಹೊಸ ಪ್ರತಿಭೆಗಳು ಆಡಿಷನ್​​​ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಖಂಡಿತ.

RDX movie audition
ಡಾ. ಶಿವರಾಜ್​​ಕುಮಾರ್

ಸತ್ಯ ಜ್ಯೋತಿ ಫಿಲ್ಮ್ಸ್​​​​​​​​​​ 1982 ರಲ್ಲಿ ಆರಂಭವಾಗಿದ್ದು ‘ಮುನ್ದ್ರಾಮ್ ಪಿರ್ರೈ’ ತಮಿಳು ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಿಸಿತು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದೆ. 1986 ರಲ್ಲಿ ಡಾ. ವಿಷ್ಣುವರ್ಧನ್​​​​​​​​​​​​​​​​​​​​​​​​​​​​​​​ ಹಾಗೂ ಸುಮಲತಾ ಜೋಡಿಯಾಗಿ ಅಭಿನಯಿಸಿರುವ 'ಸತ್ಯಜ್ಯೋತಿ' ಎಂಬ ಚಿತ್ರವನ್ನು ನಿರ್ಮಿಸಿತ್ತು. ಈ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು. 'ಆರ್​ಡಿಎಕ್ಸ್​​​' ಸಿನಿಮಾಗಾಗಿ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಕನ್ನಡಕ್ಕೆ ಬರುತ್ತಿದ್ದಾರೆ. ಆಡಿಷನ್​​​ನಲ್ಲಿ ಆಯ್ಕೆಯಾಗಿ ಶಿವಣ್ಣ ಜೊತೆ ನಟಿಸಲು ಯಾರಿಗೆ ಅದೃಷ್ಟ ದೊರೆಯಲಿದೆಯೋ ಕಾದು ನೋಡಬೇಕು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.