ETV Bharat / sitara

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪೋಷಕ ಕಲಾವಿದರ ಕುಟುಂಬದ ನಟಿಯ ಆಗಮನ - Vinaya prasad

ಸ್ಟಾರ್​ಡಮ್ ಇರುವ ನಟರ ಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪೋಷಕ ಕಲಾವಿದರ ಕುಟುಂಬದಿಂದ ಬರುವ ಪ್ರತಿಭೆಗಳು ಬಹಳ ಕಡಿಮೆ ಎಂದೇ ಹೇಳಬಹುದು. ಇದೀಗ ಕನ್ನಡ ಚಿತ್ರರಂಗದ ಪೋಷಕ ಕಲಾವಿದರ ಕುಟುಂಬದಿಂದ ಮತ್ತೊಬ್ಬರು ನಟಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಕೃಷ್ಣಾ ಭಟ್
author img

By

Published : Aug 1, 2019, 1:41 PM IST

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಕಿರಿಯ ಸಹೋದರ ರವಿಭಟ್ ಗೌರವಾನ್ವಿತ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈಗ ಅವರ ಪುತ್ರಿ ಕೃಷ್ಣಾ ಭಟ್ ‘ಸವರ್ಣಧೀರ್ಘಸಂಧಿ’ ಚಿತ್ರದ ಮುಖಾಂತರ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ತುಳು ಭಾಷೆಯ 'ಚಾಲಿ ಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದ ವಿರೇಂದ್ರ ಶೆಟ್ಟಿ ‘ಸವರ್ಣಧೀರ್ಘಸಂಧಿ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸುತ್ತಿದ್ದಾರೆ. ವಿರೇಂದ್ರ ಶೆಟ್ಟಿಗೆ ಕೃಷ್ಣಾ ಭಟ್ ಜೊತೆಯಾಗಿ ನಟಿಸಿದ್ದಾರೆ.

krishna bhatt
ಕೃಷ್ಣಾ ಭಟ್, ವಿರೇಂದ್ರ ಶೆಟ್ಟಿ

ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಹೊಟೆಲ್ ಮ್ಯಾನೇಜ್​​ಮೆಂಟ್​​​ ಪದವಿ ಪಡೆದ ನಂತರ ರೆಸ್ಟೋರೆಂಟ್ ಆರಂಭಿಸಬೇಕು ಎಂದು ಕೃಷ್ಣಾ ಅಂದುಕೊಂಡಿದ್ರಂತೆ. ಅವಕಾಶ ಸಿಕ್ಕಾಗ ಮಾಡೆಲಿಂಗ್​​​ನಲ್ಲಿ ಕೂಡಾ ಭಾಗವಹಿಸುತ್ತಾ ಕೆಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅಪ್ಪನಂತೆ ಮಗಳು ಎನ್ನುವುದಕ್ಕೆ ಕೃಷ್ಣ ಭಟ್ ಕೂಡಾ ಸಾಕ್ಷಿ ಎನ್ನಬಹುದು. ಒಳ್ಳೆ ಕಥೆಗಳಿರುವ ಸಿನಿಮಾಗಳು ಸಿಗುವುದು ಅದೃಷ್ಟ. ‘ಸವರ್ಣಧೀರ್ಘಸಂಧಿ’ ಸಿನಿಮಾಗೆ ಆಫರ್ ಬಂದಾಗ ಅಪ್ಪನ ಜೊತೆ ಹೋಗಿ ಕಥೆ ಕೇಳಿದ್ದೆ. ಅವರ ಒಪ್ಪಿಗೆ ಪಡೆದ ನಂತರವೇ ಈ ಪಾತ್ರಕ್ಕೆ ಒಪ್ಪಿಕೊಂಡದ್ದು. ಈ ಚಿತ್ರದಲ್ಲಿ ನನ್ನದು ಸಂಗೀತ ನಿರ್ದೇಶಕರ ಮಗಳ ಪಾತ್ರ. ನನ್ನ ಅಪ್ಪ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.

‘ಸವರ್ಣಧೀರ್ಘ ಸಂಧಿ’ ಚಿತ್ರವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ವಿರೇಂದ್ರ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದಾರೆ. ಮೆಲೋಡಿ ಕಿಂಗ್ ಮನೋಮೂರ್ತಿ ಅವರು ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಆನೇಕಲ್, ಬೆಂಗಳೂರು, ಮೂಡಿಗೆರೆ ಹಾಗೂ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಕಿರಿಯ ಸಹೋದರ ರವಿಭಟ್ ಗೌರವಾನ್ವಿತ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈಗ ಅವರ ಪುತ್ರಿ ಕೃಷ್ಣಾ ಭಟ್ ‘ಸವರ್ಣಧೀರ್ಘಸಂಧಿ’ ಚಿತ್ರದ ಮುಖಾಂತರ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ತುಳು ಭಾಷೆಯ 'ಚಾಲಿ ಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದ ವಿರೇಂದ್ರ ಶೆಟ್ಟಿ ‘ಸವರ್ಣಧೀರ್ಘಸಂಧಿ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸುತ್ತಿದ್ದಾರೆ. ವಿರೇಂದ್ರ ಶೆಟ್ಟಿಗೆ ಕೃಷ್ಣಾ ಭಟ್ ಜೊತೆಯಾಗಿ ನಟಿಸಿದ್ದಾರೆ.

krishna bhatt
ಕೃಷ್ಣಾ ಭಟ್, ವಿರೇಂದ್ರ ಶೆಟ್ಟಿ

ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಹೊಟೆಲ್ ಮ್ಯಾನೇಜ್​​ಮೆಂಟ್​​​ ಪದವಿ ಪಡೆದ ನಂತರ ರೆಸ್ಟೋರೆಂಟ್ ಆರಂಭಿಸಬೇಕು ಎಂದು ಕೃಷ್ಣಾ ಅಂದುಕೊಂಡಿದ್ರಂತೆ. ಅವಕಾಶ ಸಿಕ್ಕಾಗ ಮಾಡೆಲಿಂಗ್​​​ನಲ್ಲಿ ಕೂಡಾ ಭಾಗವಹಿಸುತ್ತಾ ಕೆಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅಪ್ಪನಂತೆ ಮಗಳು ಎನ್ನುವುದಕ್ಕೆ ಕೃಷ್ಣ ಭಟ್ ಕೂಡಾ ಸಾಕ್ಷಿ ಎನ್ನಬಹುದು. ಒಳ್ಳೆ ಕಥೆಗಳಿರುವ ಸಿನಿಮಾಗಳು ಸಿಗುವುದು ಅದೃಷ್ಟ. ‘ಸವರ್ಣಧೀರ್ಘಸಂಧಿ’ ಸಿನಿಮಾಗೆ ಆಫರ್ ಬಂದಾಗ ಅಪ್ಪನ ಜೊತೆ ಹೋಗಿ ಕಥೆ ಕೇಳಿದ್ದೆ. ಅವರ ಒಪ್ಪಿಗೆ ಪಡೆದ ನಂತರವೇ ಈ ಪಾತ್ರಕ್ಕೆ ಒಪ್ಪಿಕೊಂಡದ್ದು. ಈ ಚಿತ್ರದಲ್ಲಿ ನನ್ನದು ಸಂಗೀತ ನಿರ್ದೇಶಕರ ಮಗಳ ಪಾತ್ರ. ನನ್ನ ಅಪ್ಪ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.

‘ಸವರ್ಣಧೀರ್ಘ ಸಂಧಿ’ ಚಿತ್ರವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ವಿರೇಂದ್ರ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದಾರೆ. ಮೆಲೋಡಿ ಕಿಂಗ್ ಮನೋಮೂರ್ತಿ ಅವರು ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಆನೇಕಲ್, ಬೆಂಗಳೂರು, ಮೂಡಿಗೆರೆ ಹಾಗೂ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಕನ್ನಡ ಚಿತ್ರರಗಕ್ಕೆ ಮತ್ತೊಂದು ಕಲಾವಿದರ ಕುಟುಂಬದ ನಟಿ ಕೃಷ್ಣಾ ಭಟ್

ಪೋಷಕ ಕಲಾವಿದರುಗಳ ಪೈಕಿ ನೆಕ್ಸ್ಟ್ ಜೆನೆರೇಷನ್ ಚಿತ್ರ ರಂಗಕ್ಕೆ ಬರುವುದು ಇತ್ತೀಚಿಗೆ ಹೆಚ್ಚಾಗಿದೆ. ನಟಿ ವಿನಯಾ ಪ್ರಸಾದ್ ಮಗಳು ಪ್ರಥಮ ಪ್ರಸಾದ್ ಚಿತ್ರ ರಂಗಕ್ಕೆ ಬಂದಂತೆ, ಪ್ರಕಾಶ್ ಬೆಳವಾಡಿ ಮಗಳು ತೆಜು ಬೆಳವಾಡಿ ಅಂತೆ ವಿನಯಾ ಪ್ರಸಾದ್ ಅವರ ಕಿರಿಯ ಸಹೋದರ ರವಿ ಭಟ್ ಸಹ ಗೌರವಾನ್ವಿತ ಪಾತ್ರಗಳಲ್ಲಿ ಅಚ್ಚುಮೆಚ್ಚು. ಈಗ ರವಿ ಭಟ್ ಅವರ ಮಗಳು ಕೃಷ್ಣಾ ಭಟ್ ಸವರ್ಣಧೀರ್ಘಸಂಧಿ ಮುಖಾಂತರ ಬಣ್ಣ ಹಚ್ಚಿದ್ದಾರೆ. ಕೃಷ್ಣ ಭಟ್ ಈ ಚಿತ್ರದಲ್ಲಿ ಗಾಯಕಿ ಆಗಿ ಅಮೃತ ವರ್ಷಿಣಿ ಪಾತ್ರದಲ್ಲಿ ವೀರೇಂದ್ರ ಶೆಟ್ಟಿ ನಾಯಕ ಹಾಗೂ ನಿರ್ದೇಶಕನ ಜೊತೆ ಅಭಿನಯಿಸಿದ್ದಾರೆ.

ಕ್ರೈಸ್ಟ್ ಉನಿವರ್ಸಿಟಿ ಅಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಪದವಿ ಪಡೆದ ನಂತರ ರೆಸ್ಟೋರಂಟ್ ಪ್ರಾರಂಭಿಸಬೇಕು ಎಂದು ಕೃಷ್ಣ ಭಟ್ ಅಂದುಕೊಂಡರು. ಅವಕಾಶ ಸಿಕ್ಕಾಗ ಮಾಡೆಲಿಂಗ್ ಸಹ ಭಾಗವಹಿಸುತ್ತಾ ಕೆಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಯನು ಪಡೆದರು. ಆನಂತರ ಟಿ ವಿ ಧಾರಹಿಗಳು ಮತ್ತು ಸಿನಿಮಾಗಳಲ್ಲಿ ಅವಕಾಶ ಒದಗಿ ಬಂತು. ವಿಧ್ಯಭ್ಯಾಸ ನಂತರ ಕೃಷ್ಣಾ ಭಟ್ ಉಷಾ ಭಂಡಾರಿ ಅವರ ತರಬೇತಿ ಶಾಲೆಗೆ ಸೇರಿಕೊಂಡರು.

ಅಪ್ಪನಂತೆ ಮಗಳು ಎನ್ನುವುದಕ್ಕೆ ಕೃಷ್ಣ ಭಟ್ ಸಹ ಸಾಕ್ಷಿ. ಅತ್ಯುತ್ತಮ ಸ್ಕ್ರಿಪ್ಟ್ ಒದಗಿ ಬರುವುದು ಪುಣ್ಯ. ಸವರ್ಣಧೀರ್ಘಸಂಧಿ ಅಪ್ಪನ ಜೊತೆ ಹೋಗಿ ಕಥೆ ಕೇಳಿದ್ದು. ಅಪ್ಪನ ಒಪ್ಪಿಗೆ ಮೇರೆಗೆ ಈ ಪಾತ್ರ ಸಹ ಕೃಷ್ಣ ಭಟ್ ಒಪ್ಪಿಕೊಂಡಿದ್ದು.

ಒಬ್ಬ ಸಂಗೀತ ನಿರ್ದೇಶಕರ ಮಗಳಾಗಿ ಈ ಚಿತ್ರದಲ್ಲಿ ನನ್ನ ಪಾತ್ರ ಇದ್ದರೂ, ಈಗಿನ ಕಾಲ ಹುಡ್ಗಿ ರೀತಿ ಇದೆ. ಶಾಸ್ಟ್ರೀಯ ಸಂಗೀತ ಇದೆ, ಇದೆಲ್ಲದರ ಜೊತೆ ನನ್ನ ಅಪ್ಪ ರವಿ ಭಟ್ ಸಹ ಪಾತ್ರ ಮಾಡಿರುವ ಚಿತ್ರ ಇದು.

ಸವರ್ಣಧೀರ್ಘ ಸಂಧಿ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಅಂತ ಅಂದುಕೊಂಡಿದ್ದಾರೆ ನಿರ್ದೇಶಕ ವೀರೇಂದ್ರ ಶೆಟ್ಟಿ. ತುಳು ಸಿನಿಮಾ ಚಾಲಿಪೊಳಿಲು ಯಶಸ್ಸಿನ ನಂತರ ವೀರೇಂದ್ರ ಶೆಟ್ಟಿ ಕನ್ನಡಕ್ಕೆ ಬಂದಿದ್ದಾರೆ. ಮೇಲೋಡಿ ಕಿಂಗ್ ಮನೋ ಮೂರ್ತಿ ಅವರು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಆನೇಕಲ್, ಬೆಂಗಳೂರು, ಮೂಡಿಗೆರೆ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.