ETV Bharat / sitara

'ಏನ್​ ಚಂದಾನೋ ತಕೊ' ಅವ್ರು ಹಾಡಿಸಿದ್ರು ನಾನ್​ ಹಾಡಿದೆ: ನವೀನ್ ಸಜ್ಜು ಹೇಳಿಕೆ - ನವೀನ್​ ಸಜ್ಜು ಲೇಟೆಸ್ಟ್​ ನ್ಯೂಸ್​​

ಇನ್ನಷ್ಟೇ ತೆರೆಗೆ ಬರಬೇಕಿರುವ 'ಬಡ್ಡಿ ಮಗನ್ ಲೈಫ್' ಚಿತ್ರದ ಹಾಡಿನ ಕಾಂಟ್ರವರ್ಸಿ ಬಗ್ಗೆ ನವೀನ್ ಸಜ್ಜು ಮಾತನಾಡಿದ್ದು, ಆ ಹಾಡನ್ನು ಬರೆದವರು ಯಾರೋ, ಸಂಗೀತ ನೀಡಿದವರು‌ ಯಾರೋ, ನಾನು ಹಾಡಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ನವೀನ್ ಸಜ್ಜು
author img

By

Published : Oct 19, 2019, 3:20 PM IST

ಇನ್ನೂ ತೆರೆ ಕಾಣಬೇಕಿರುವ 'ಬಡ್ಡಿಮಗನ್ ಲೈಫ್' ಚಿತ್ರದ ಏನ್ ಚೆಂದಾನೋ ತಕೊ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳಿಗೆ ಅವಮಾನ ಮಾಡಲಾಗಿದೆ ಎಂದು ಅರೋಪಿಸಿ ಒಕ್ಕಲಿಗ ಸಮುದಾಯದವರು ನಿರ್ಮಾಪಕ ಭಾಮಾ ಹರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಿ‌ ಸಮುದಾಯದ ಕ್ಷಮೆ ಕೇಳಬೇಕು. ಜೊತೆಗೆ ಹಾಡಿನ ಸಾಹಿತ್ಯ ಬದಲಿಸಬೇಕು. ಇಲ್ಲದಿದ್ರೆ ಚಿತ್ರತಂಡದ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಈ ಬಗ್ಗೆ ನವೀನ್ ಸಜ್ಜು ಇದೀಗ ಸ್ಪಷ್ಟನೆ ನೀಡಿದ್ದಾರೆ.

ನವೀನ್ ಸಜ್ಜು ಮಾತನಾಡಿ, ಆ ಹಾಡನ್ನು ಬರೆದವರು ಯಾರೋ, ಸಂಗೀತ ನೀಡಿದವರು‌ ಯಾರೋ, ಆ ಹಾಡನ್ನು ನಾನು ಹಾಡಿದ್ದೆ ಅಷ್ಟೆ ಎಂದಿದ್ದಾರೆ. ಅಲ್ಲದೇ ಚಿತ್ರದ ನಿರ್ದೇಶಕರು ಹಾಡಿನ ಸನ್ನಿವೇಶವನ್ನು ನನಗೆ ಹೇಳಿದ್ರು‌. ಜೊತೆಗೆ ಚಿತ್ರದ ಸನ್ನಿವೇಶಕ್ಕೂ, ಸಾಹಿತ್ಯಕ್ಕೂ ಹೊಂದಾಣಿಕೆ ಇತ್ತು. ಅದರೆ ಕಾಂಟ್ರವರ್ಸಿ ಅಂತ ಯಾಕನ್ನಿಸಿತೋ ಗೊತ್ತಿಲ್ಲ ಎಂದರು.

ಅವರು ಹಾಡಿಸಿದ್ರು ನಾನ್​ ಹಾಡಿದೆ - ನವೀನ್ ಸಜ್ಜು

ನಾನೊಬ್ಬ ಸೆನ್ಸಿಬಲ್ ಸಿಂಗರ್ ಆಗಿದ್ದು, ಯಾವುದನ್ನು‌ ಹಾಡಬೇಕು ಹಾಡಬಾರದು ಎಂದು ಅರ್ಥವಾಗುತ್ತೆ. ಒಂದು ವೇಳೆ ಸರಿ ಬರಲ್ಲ ಅನ್ನಿಸಿದರೆ ಸೆನ್ಸಾರ್​​ನವರು ಅದಕ್ಕೆ ಕತ್ತರಿ ಹಾಕುತ್ತಾರೆ. ಅದರೆ, ಇತರೆ ಯಾರಿಗೂ ಮನಸ್ಸು ನೋಯಿಸುವುದು ಬೇಡ ಎಂದು ನಿರ್ಧರಿಸಿ ಚಿತ್ರದಲ್ಲಿ ಆ ಸಾಹಿತ್ಯ ಬದಲಾವಣೆ ಮಾಡಲಾಗಿದೆ ಎಂದು ನವೀನ್‌ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ರು.

ಇನ್ನೂ ತೆರೆ ಕಾಣಬೇಕಿರುವ 'ಬಡ್ಡಿಮಗನ್ ಲೈಫ್' ಚಿತ್ರದ ಏನ್ ಚೆಂದಾನೋ ತಕೊ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳಿಗೆ ಅವಮಾನ ಮಾಡಲಾಗಿದೆ ಎಂದು ಅರೋಪಿಸಿ ಒಕ್ಕಲಿಗ ಸಮುದಾಯದವರು ನಿರ್ಮಾಪಕ ಭಾಮಾ ಹರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಿ‌ ಸಮುದಾಯದ ಕ್ಷಮೆ ಕೇಳಬೇಕು. ಜೊತೆಗೆ ಹಾಡಿನ ಸಾಹಿತ್ಯ ಬದಲಿಸಬೇಕು. ಇಲ್ಲದಿದ್ರೆ ಚಿತ್ರತಂಡದ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಈ ಬಗ್ಗೆ ನವೀನ್ ಸಜ್ಜು ಇದೀಗ ಸ್ಪಷ್ಟನೆ ನೀಡಿದ್ದಾರೆ.

ನವೀನ್ ಸಜ್ಜು ಮಾತನಾಡಿ, ಆ ಹಾಡನ್ನು ಬರೆದವರು ಯಾರೋ, ಸಂಗೀತ ನೀಡಿದವರು‌ ಯಾರೋ, ಆ ಹಾಡನ್ನು ನಾನು ಹಾಡಿದ್ದೆ ಅಷ್ಟೆ ಎಂದಿದ್ದಾರೆ. ಅಲ್ಲದೇ ಚಿತ್ರದ ನಿರ್ದೇಶಕರು ಹಾಡಿನ ಸನ್ನಿವೇಶವನ್ನು ನನಗೆ ಹೇಳಿದ್ರು‌. ಜೊತೆಗೆ ಚಿತ್ರದ ಸನ್ನಿವೇಶಕ್ಕೂ, ಸಾಹಿತ್ಯಕ್ಕೂ ಹೊಂದಾಣಿಕೆ ಇತ್ತು. ಅದರೆ ಕಾಂಟ್ರವರ್ಸಿ ಅಂತ ಯಾಕನ್ನಿಸಿತೋ ಗೊತ್ತಿಲ್ಲ ಎಂದರು.

ಅವರು ಹಾಡಿಸಿದ್ರು ನಾನ್​ ಹಾಡಿದೆ - ನವೀನ್ ಸಜ್ಜು

ನಾನೊಬ್ಬ ಸೆನ್ಸಿಬಲ್ ಸಿಂಗರ್ ಆಗಿದ್ದು, ಯಾವುದನ್ನು‌ ಹಾಡಬೇಕು ಹಾಡಬಾರದು ಎಂದು ಅರ್ಥವಾಗುತ್ತೆ. ಒಂದು ವೇಳೆ ಸರಿ ಬರಲ್ಲ ಅನ್ನಿಸಿದರೆ ಸೆನ್ಸಾರ್​​ನವರು ಅದಕ್ಕೆ ಕತ್ತರಿ ಹಾಕುತ್ತಾರೆ. ಅದರೆ, ಇತರೆ ಯಾರಿಗೂ ಮನಸ್ಸು ನೋಯಿಸುವುದು ಬೇಡ ಎಂದು ನಿರ್ಧರಿಸಿ ಚಿತ್ರದಲ್ಲಿ ಆ ಸಾಹಿತ್ಯ ಬದಲಾವಣೆ ಮಾಡಲಾಗಿದೆ ಎಂದು ನವೀನ್‌ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ರು.

Intro:ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಡಿರುವ
",ಬಡ್ಡಿಮಗನ್ ಲೈಫ್" ಚಿತ್ರದ ಏನ್ ಚೆಂದನೋ ತಗೋ ಹಾಡು ಸಖತ್ ಸೌಂಡ್ ಮಾಡಿತ್ತು,ಅಲ್ಲದೆ ಈ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ, ಎಂದು ಅರೋಪಿಸಿ ಒಕ್ಕಲಿಗ ಸಮುದಾಯದವರು ನಿರ್ಮಾಪಕ ಭಾಮ ಹರೀಶ್ ನೇತ್ರತ್ವದಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಿ‌, ಸಮುದಾಯದ ಕ್ಷಮೆ ಕೇಳ ಬೇಕು,ಹಾಗು ಹಾಡಿನ ಸಾಹಿತ್ಯ ಬದಲಿಸ ಬೇಕು,ಇಲದಿದ್ರೆ ಚಿತ್ರತಂಡದ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ರು.


Body:ಅಲ್ಲದೆ ಈ ಕಾಂಟ್ರವರ್ಸಿ ಚಿತ್ರತಂಡಕ್ಕಿಂತ ಹೆಚ್ಚಾಗಿ ಹಾಡನ್ನು ಹಾಡಿದ್ದ ನವೀನ್ ಸಜ್ಜುಗೆ ಸುತ್ತಿ ಕೊಂಡಿತ್ತು. ಈಗ ಈ ಕಾಂಟ್ರವರ್ಸಿ ಬಗ್ಗೆ ನವೀನ್ ಸಜ್ಜು ಮಾತನಾಡಿದ್ದು, ಆ ಹಾಡನ್ನು ಬರೆದವರು ಯಾರೋ,ಸಂಗೀತ ನೀಡಿದವರು‌ ಯಾರೋ , ಆ ಹಾಡನ್ನು ನಾನು ಹಾಡಿದ್ದೆ.ಅವತು ಬರೆದು ಕೊಟ್ಟಿದ್ದನ್ನು ನಾನು ಹಾಡಿದ್ದೆ ಅಷ್ಟೆ, ಅಲ್ಲದೆ ಚಿತ್ರದ ನಿರ್ದೇಶಕರು ಹಾಡಿನ ಸನ್ನಿವೇಶವನ್ನು ನನಗೆ ಹೇಳಿದ್ರು‌,ಅದ ಕೇಳಿದ ನಂತ್ರ ನಾನು ಹಾಡನ್ನು ಹಾಡಿದೆ.ಜೊತೆಗೆ ಚಿತ್ರದ ಸನ್ನಿವೇಶಕ್ಕೂ ಸಾಹಿತ್ಯಕ್ಕೂ ಹೊಂದಾಣಿಕೆ ಇತ್ತು.ಅದರೆ ಅದು ಕಾಂಟ್ರವರ್ಸಿ ಅಂತ ಯಾಕನಿಸಿತೋ ಗೊತ್ತಿಲ್ಲ, ಅಲ್ಲದೆ‌ ನಾನೋಬ್ಬ ಸೆನ್ನಿಬಲ್ ಸಿಂಗರ್ ಆಗಿದ್ದು,ಯಾವುದನ್ನು‌ ಹಾಡಬೇಕು ಹಾಡಬಾರದು ಎಂದು ನನಗೂ ಅರ್ಥವಾಗುತ್ತೆ.
ಒಂದು ವೇಳೆ ಸರಿ ಬರಲ್ಲ ಅನಿಸಿದರೆ ಸೆನ್ಸಾರ್ ನವರು ಅದಕ್ಕೆ ಕತ್ತರಿ ಹಾಕುತ್ತಾರೆ.ಅದರೆ ಇತರ ಕಂಪ್ಲೈಂಟ್ ಆದಾಗ ಯಾರಿಗೂ ಮನಸ್ಸು ನೋಯಿಸುವುದು ಬೇಡ ಎಂದು ನಿರ್ಧರಿಸಿ ಚಿತ್ರದಲ್ಲಿ ಆ ಸಾಹಿತ್ಯ ಬದಲಾವಣೆ ಮಾಡಲಾಗಿದೆ.ಅದನ್ನು ಮತ್ತೆ ನಾನು ಹಾಡಿದ್ದೇನೆ ಎಂದು ಆ ಕಾಂಟ್ರವರ್ಸಿಗೆ ನವೀನ್ ಸಜ್ಜು ಅಂತ್ಯ ಹಾಡಿದ್ರು.

ಸತೀಶ ಎಂಬಿ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.