ETV Bharat / sitara

ಬೆಂಗಳೂರಲ್ಲಿ ತಮ್ಮ ಹೊಸ ಕಚೇರಿ ಆರಂಭಿಸಿದ ನಟ, ನಿರ್ಮಾಪಕ ನವರಸನ್

author img

By

Published : May 17, 2019, 10:24 AM IST

ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ‘ ಸಿನಿಮಾ ನಿರ್ಮಾಪಕ ನವರಸನ್​​​​​ ಮೂಲತಃ ತಮಿಳುನಾಡಿನವರಾಗಿದ್ದು ಇದೀಗ ಬೆಂಗಳೂರಿನ ನಾಗರಬಾವಿಯಲ್ಲಿ ತಮ್ಮ ಹೊಸ ಕಚೇರಿ ಆರಂಭಿಸಿದ್ದಾರೆ. ಚಿತ್ರರಂಗದ ಗಣ್ಯರು ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ನವರಸನ್​​ಗೆ ಶುಭ ಕೋರಿದ್ದಾರೆ.

ನವರಸನ್

ಬೇರೆ ದೇಶ, ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಇಲ್ಲೇ ಕೆಲಸ ಅರಿಸಿ ಸೆಟಲ್ ಆಗಿರುವವರು ಸಾಕಷ್ಟು ಮಂದಿ ಇದ್ದಾರೆ. ಸಾಮಾನ್ಯರು ಮಾತ್ರವಲ್ಲ ಸಿನಿಮಾ ನಟರು, ನಿರ್ದೇಶಕರು ಕೂಡಾ ಬೇರೆ ಕಡೆಯಿಂದ ಬಂದು ಈಗ ನಮ್ಮವರೇ ಆಗಿ ಹೋಗಿದ್ದಾರೆ.

navarasan
ನವರಸನ್

ತಮಿಳುನಾಡಿನಿಂದ ಬಂದು ಕನ್ನಡದ ‘ರಾಕ್ಷಸಿ‘ ಸಿನಿಮಾದಿಂದ ಸ್ಯಾಂಡಲ್​​​ವುಡ್​​ನಲ್ಲಿ ನಿರ್ದೇಶನ, ನಟನೆ ಆರಂಭಿಸಿ ಸಾಕಷ್ಟು ಸಿನಿಮಾಗಳಿಗೆ ವಿತರಕರಾಗಿ ಕೆಲಸ ಮಾಡಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ‘ ಸಿನಿಮಾ ಮೂಲಕ ನಿರ್ಮಾಪಕ ಕೂಡಾ ಆದ ನವರಸನ್​, ಇದೀಗ ಬೆಂಗಳೂರಿನ ನಾಗರಬಾವಿಯಲ್ಲಿ ‘ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್‘ ಹೆಸರಿನಲ್ಲಿ ತಮ್ಮದೇ ಕಚೇರಿ ಆರಂಭಿಸಿದ್ದಾರೆ. ‘ವೈರ‘, ‘ಸೈಕೋ ಶಂಕ್ರ‘ ಸಿನಿಮಾಗಳಲ್ಲಿ ಕೂಡಾ ನವರಸನ್ ನಟಿಸಿದ್ದರು. ಒಬ್ಬರೇ ವ್ಯಕ್ತಿ ನಟನೆ, ನಿರ್ದೇಶನ, ನಿರ್ಮಾಣ ಹಾಗೂ ಚಿತ್ರಗಳ ವಿತರಣೆ ಕೂಡಾ ಮಾಡುವುದು ಬಹಳ ವಿರಳ.

navarasan
ನವರಸನ್

ಮಾತಿನ ಮಲ್ಲ ನವರಸನ್ ನೂತನ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಭಾ.ಮಾ. ಹರೀಶ್, ಭಾ.ಮಾ. ಗಿರೀಶ್​​​​​, ನಿರ್ದೇಶಕ ಗುರು ದೇಶಪಾಂಡೆ , ಚೇತನ್ ಕುಮಾರ್, ತಬಲಾ ನಾಣಿ, ಕೆಂಪೇಗೌಡ, ಭಜರಂಗಿ ಲೋಕಿ, ಮಜಾ ಟಾಕೀಸ್ ಖ್ಯಾತಿಯ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿಗೌಡ ಇತರರು ಆಗಮಿಸಿ ಶುಭ ಕೋರಿದ್ದಾರೆ.

ಬೇರೆ ದೇಶ, ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಇಲ್ಲೇ ಕೆಲಸ ಅರಿಸಿ ಸೆಟಲ್ ಆಗಿರುವವರು ಸಾಕಷ್ಟು ಮಂದಿ ಇದ್ದಾರೆ. ಸಾಮಾನ್ಯರು ಮಾತ್ರವಲ್ಲ ಸಿನಿಮಾ ನಟರು, ನಿರ್ದೇಶಕರು ಕೂಡಾ ಬೇರೆ ಕಡೆಯಿಂದ ಬಂದು ಈಗ ನಮ್ಮವರೇ ಆಗಿ ಹೋಗಿದ್ದಾರೆ.

navarasan
ನವರಸನ್

ತಮಿಳುನಾಡಿನಿಂದ ಬಂದು ಕನ್ನಡದ ‘ರಾಕ್ಷಸಿ‘ ಸಿನಿಮಾದಿಂದ ಸ್ಯಾಂಡಲ್​​​ವುಡ್​​ನಲ್ಲಿ ನಿರ್ದೇಶನ, ನಟನೆ ಆರಂಭಿಸಿ ಸಾಕಷ್ಟು ಸಿನಿಮಾಗಳಿಗೆ ವಿತರಕರಾಗಿ ಕೆಲಸ ಮಾಡಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ‘ ಸಿನಿಮಾ ಮೂಲಕ ನಿರ್ಮಾಪಕ ಕೂಡಾ ಆದ ನವರಸನ್​, ಇದೀಗ ಬೆಂಗಳೂರಿನ ನಾಗರಬಾವಿಯಲ್ಲಿ ‘ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್‘ ಹೆಸರಿನಲ್ಲಿ ತಮ್ಮದೇ ಕಚೇರಿ ಆರಂಭಿಸಿದ್ದಾರೆ. ‘ವೈರ‘, ‘ಸೈಕೋ ಶಂಕ್ರ‘ ಸಿನಿಮಾಗಳಲ್ಲಿ ಕೂಡಾ ನವರಸನ್ ನಟಿಸಿದ್ದರು. ಒಬ್ಬರೇ ವ್ಯಕ್ತಿ ನಟನೆ, ನಿರ್ದೇಶನ, ನಿರ್ಮಾಣ ಹಾಗೂ ಚಿತ್ರಗಳ ವಿತರಣೆ ಕೂಡಾ ಮಾಡುವುದು ಬಹಳ ವಿರಳ.

navarasan
ನವರಸನ್

ಮಾತಿನ ಮಲ್ಲ ನವರಸನ್ ನೂತನ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಭಾ.ಮಾ. ಹರೀಶ್, ಭಾ.ಮಾ. ಗಿರೀಶ್​​​​​, ನಿರ್ದೇಶಕ ಗುರು ದೇಶಪಾಂಡೆ , ಚೇತನ್ ಕುಮಾರ್, ತಬಲಾ ನಾಣಿ, ಕೆಂಪೇಗೌಡ, ಭಜರಂಗಿ ಲೋಕಿ, ಮಜಾ ಟಾಕೀಸ್ ಖ್ಯಾತಿಯ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿಗೌಡ ಇತರರು ಆಗಮಿಸಿ ಶುಭ ಕೋರಿದ್ದಾರೆ.

ನವರಸನ್ ಹೊಸ ಕಚೇರಿ ಪ್ರಾರಂಭ

ಪಕ್ಕದ ತಮಿಳು ನಾಡಿನಿಂದ ಬಂದು ರಾಕ್ಷಸಿ ಸಿನಿಮಾ (ಪಿಶಾಚಿ ತಮಿಳು ರೀಮೇಕ್) ಇಂದ ನಟನೆ ಹಾಗೂ ನಿರ್ದೇಶನದಲ್ಲಿ ವಿಶೇಷವಾಗಿ ಕಂಡು ಬಂದು ನವರಸನ್ ಕನ್ನಡದ ಅನೇಕ ಸಿನಿಮಾಗಳ ವಿತರಕ ಆಗಿ ಸಹ ಕೆಲಸ ಮಾಡಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ಧಮಯಂತಿ ಚಿತ್ರದ ನಿರ್ಮಾಪಕರು ಸಹ ಆದರು.

ಈಗ ಅವರ ಸ್ವಂತ ಕಚೇರಿ ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ ಸ್ಥಾಪನೆ ಮಾಡಿದ್ದಾರೆ. ನವರಸನ್ ವೈರ, ಸೈಕೋ ಶಂಕ್ರ ಸಿನಿಮಾಗಳ್ಳಿ ಪಾತ್ರ ಸಹ ಮಾಡಿದ್ದರು. 2017 ರಲ್ಲಿ ವೈರ ಚಿತ್ರಕ್ಕೆ ಸೆನ್ಸಾರ್ ಪತ್ರ ನೀಡಿದಾಗ ಕೋಪಗೊಂಡಿದ್ದರು. ಅದೇ ಚಿತ್ರದಲ್ಲಿ ನಾಯಕಿ ಪ್ರಿಯಾಂಕ ಮಲ್ನಾಡ್ ಬೆನ್ನು ತೋರಿಸುವ ದೃಶ್ಯ ಮತ್ತಷ್ಟು ವಿವಾದಕ್ಕೆ ಸೇರಿಕೊಂಡಿತು.

ನವರಸನ್ ಮಾತಿನ ಮಲ್ಲ ಸಹ. ಅನೇಕ ಹೊಸ ಯೋಚನೆಗಳನ್ನು ಇಟ್ಟುಕೊಂಡಿದ್ದಾರೆ. ನಾಗರಾಭವಿ ಅಲ್ಲಿರುವ ಇವರ ನೂತನ ಕಚೇರಿ ಉದ್ಘಾಟನೆ ಸಮಾರಂಭಕ್ಕೆ ಭಾ ಮಾ ಹರೀಶ್, ಭಾ ಮಾ ಗಿರೀಷ್, ನಿರ್ದೇಶಕ ಗುರು ದೇಶ್ಪಾಂಡೆ, ಚೇತನ್ ಕುಮಾರ್, ತಬಲಾ ನಾಣಿ, ಕೆಂಪೆ ಗೌಡ, ಭಜರಂಗಿ ಲೋಕಿ, ಮಜಾ ಟಾಕೀಸ್ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿ ಗೌಡ ಇತರರು ಆಗಮಿಸಿದ್ದರು.

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ವಿತರಕ ಸಹ ಒಬ್ಬರೇ ಆಗಿರುವುದು ಬಹಳ ವಿರಳ.

 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.