ETV Bharat / sitara

'ಗುಳ್ಟು' ನವೀನ್​ ಶಂಕರ್ ಹೊಸ ಸಿನಿಮಾಗೆ ಮುಹೂರ್ತ

author img

By

Published : Jun 25, 2019, 11:44 PM IST

'ಗುಳ್ಟು' ಖ್ಯಾತಿಯ ನವೀನ್ ಶಂಕರ್ ಅಭಿನಯದ ಎರಡನೇ ಸಿನಿಮಾಗೆ ನಿನ್ನೆ ಮುಹೂರ್ತ ನೆರವೇರಿದ್ದು, ನೀನಾಸಂ ಸತೀಶ್ ಹಾಗೂ ಹಿರಿಯ ನಟ ಅವಿನಾಶ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನವೀನ್​ ಶಂಕರ್ ಹೊಸ ಸಿನಿಮಾ

ಕಳೆದ ವರ್ಷ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರದಲ್ಲಿ 'ಗುಳ್ಟು' ಕೂಡಾ ಒಂದು. ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ನಟಿಸಿದ್ದರೆ, ಹೊಸ ಪ್ರತಿಭೆ ನವೀನ್ ಶಂಕರ್ ನಾಯಕನಾಗಿ ನಟಿಸಿ ಸ್ಯಾಂಡಲ್​ವುಡ್​​ನಲ್ಲಿ ಭರವಸೆ ಮೂಡಿಸಿದ್ದರು.

naveen shankar
ನೀನಾಸಂ ಸತೀಶ್, ನವೀನ್ ಶಂಕರ್​

'ಗುಳ್ಟು' ಯಶಸ್ವಿ 50 ದಿನಗಳನ್ನು ಪೂರೈಸಿದ್ದರೂ ಕೂಡಾ ನವೀನ್​​​ಗೆ ಒಳ್ಳೆಯ ಆಫರ್ ಸಿಕ್ಕಿರಲಿಲ್ಲ. ಇದೀಗ ಅವರು ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದು, ನಿನ್ನೆ ಸಿನಿಮಾದ ಮುಹೂರ್ತ ನೆರವೇರಿದೆ. ಜೆ.ಪಿ. ನಗರದ ಸತ್ಯ ಗಣಪತಿ ದೇವಾಲಯದಲ್ಲಿ ನಡೆದ‌ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ ಆಗಮಿಸಿ ಕ್ಯಾಮರಾ ಚಾಲನೆ ಮಾಡಿದರೆ, ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರ ಪ್ರೊಡಕ್ಷನ್​​ ನಂ.1 ಹೆಸರಿನಲ್ಲಿ ಸೆಟ್ಟೇರಿದೆ. ಪೂರಿ ಜಗನ್ನಾಥ್ ಶಿಷ್ಯ ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

naveen shankar
ಅವಿನಾಶ್, ನೀನಾಸಂ ಸತೀಶ್, ಐಶಾನಿ ಶೆಟ್ಟಿ

ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಐಶಾನಿ ‌ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.

naveen shankar
ಅವಿನಾಶ್, ನೀನಾಸಂ ಸತೀಶ್

ಕಳೆದ ವರ್ಷ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರದಲ್ಲಿ 'ಗುಳ್ಟು' ಕೂಡಾ ಒಂದು. ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ನಟಿಸಿದ್ದರೆ, ಹೊಸ ಪ್ರತಿಭೆ ನವೀನ್ ಶಂಕರ್ ನಾಯಕನಾಗಿ ನಟಿಸಿ ಸ್ಯಾಂಡಲ್​ವುಡ್​​ನಲ್ಲಿ ಭರವಸೆ ಮೂಡಿಸಿದ್ದರು.

naveen shankar
ನೀನಾಸಂ ಸತೀಶ್, ನವೀನ್ ಶಂಕರ್​

'ಗುಳ್ಟು' ಯಶಸ್ವಿ 50 ದಿನಗಳನ್ನು ಪೂರೈಸಿದ್ದರೂ ಕೂಡಾ ನವೀನ್​​​ಗೆ ಒಳ್ಳೆಯ ಆಫರ್ ಸಿಕ್ಕಿರಲಿಲ್ಲ. ಇದೀಗ ಅವರು ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದು, ನಿನ್ನೆ ಸಿನಿಮಾದ ಮುಹೂರ್ತ ನೆರವೇರಿದೆ. ಜೆ.ಪಿ. ನಗರದ ಸತ್ಯ ಗಣಪತಿ ದೇವಾಲಯದಲ್ಲಿ ನಡೆದ‌ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ ಆಗಮಿಸಿ ಕ್ಯಾಮರಾ ಚಾಲನೆ ಮಾಡಿದರೆ, ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರ ಪ್ರೊಡಕ್ಷನ್​​ ನಂ.1 ಹೆಸರಿನಲ್ಲಿ ಸೆಟ್ಟೇರಿದೆ. ಪೂರಿ ಜಗನ್ನಾಥ್ ಶಿಷ್ಯ ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

naveen shankar
ಅವಿನಾಶ್, ನೀನಾಸಂ ಸತೀಶ್, ಐಶಾನಿ ಶೆಟ್ಟಿ

ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಐಶಾನಿ ‌ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.

naveen shankar
ಅವಿನಾಶ್, ನೀನಾಸಂ ಸತೀಶ್
" ಗುಳ್ಟು " ನವೀನ್ ಶಂಕರ್ ಎರಡನೇ ಚಿತ್ರಕ್ಕೆ ಐಶಾನಿ ನಾಯಕಿ ಜುಲೈನಲ್ಲಿ ಶೂಟಿಂಗ್ ...!!!!!


'ಗುಳ್ಟು" ಕಳೆದ ವರ಼್ ಬಿಡುಗಡೆಯಾದ ಹೊಸಸಬರ ಚಿತ್ರದಲ್ಲಿ ಭರವಸೆ ಮೂಡಿಸಿ‌ ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಿದ ಚಿತ್ರ. ಇನ್ನೂ ಈ ಚಿತ್ರದಲ್ಲಿ ನವೀನ್ ಎಂಬ ನಟ ಉತ್ತಮ ಅಭಿನಯದ ಮೂಲಕ ಚಂದನವನದಲ್ಲಿ ಮಿನಿಗುವ ಸೂಚನೆ ಕೊಟ್ಟಿದ್ರು. ಅದ್ರೆ ಗುಳ್ಟು ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದ್ರು ಸಹ ನಟ ನವೀನ್ ಗೆ ಯಾವುದೇ ಆಫರ್ ಗಳಿಲ್ಲದೆ ನಿರಾಸೆ ಮೂಡಿಸಿದ್ರು. ಅದ್ರೆ ಈಗ ಕೊನೆಗೂ ಅದೃಷ್ಟ ನವೀನ್ ಶಂಕರ್ ಕೈ ಹಿಡಿದಿದ್ದು .ನವೀನ್ ೨ನೇ ಸಿನಿಮಾ ಮಾಡುತ್ತಿದ್ದು,‌. ನಿನ್ನೆ (ಸೋಮವಾರ) ಈ ಹೊಸ ಸಿನಿಮಾದಮುಹೂರ್ತ ಕಾರ್ಯಕ್ರಮ ಸದ್ದಿಲ್ಲದೆ ನಡೆದಿದೆ. ಜೆಪಿ ನಗರದ ಸತ್ಯ ಗಣಪತಿ ದೇವಲಯದಲ್ಲಿ ನಡೆದ‌ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ ಆಗಮಿಸಿ ಕ್ಯಾಮರಾ ಚಾಲನೆ ಮಾಡಿದ್ರೆ ಮತ್ತು ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದ್ರು.ಇನ್ನೂ ಈ ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ‌ ಪ್ರೊಡಕ್ಷನ್ ನಂ೧ ಹೆಸರಿನಲ್ಲಿ ಸೆಟ್ಟೇರಿರುವ ಈ ಚಿತ್ರಕ್ಕೆ ಪೂರಿ ಜಗನ್ನಾಥ್ ಶಿಷ್ಯ ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪೂರಿ ಜಗನ್ನಾಥ್ ಜೊತೆಗೆ ಕೆಲಸ ಮಾಡಿದ್ದ, ಇವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ನಿರ್ಮಾಣ ಚಿತ್ರಕ್ಕಿದೆ. ಇನ್ನೂ ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಸ್ತಿದ್ದಾರೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಐಶಾನಿ ‌ ಈಸಿನಿಮಾದಲ್ಲಿ ಕಾಣಿಸುತ್ತಿದ್ದಾರೆ. ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾವಾಗಿದ್ದು ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳು ಬರೆಯುತ್ತಿದ್ದು ದ್ಜುಲೈ ಕೊನೆಯವಾರದಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದೆ.


ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.