ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಇಂಟ್ರಸ್ಟ್ರಿಂಗ್ ವಿಷಯಗಳ ಜತೆಗೆ ಅಭಿನಯ ಚಕ್ರವರ್ತಿ ಮತ್ತೊಂದು ಅಚ್ಚರಿ ವಿಷಯ ಬಿಚ್ಚಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುದೀಪ್, ತಾವು ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಸ್ಯಾಂಡಲ್ವುಡ್ ಬಾದ್ ಷಾ ಯಾಕೆ ಈ ನಿರ್ಧಾರಕ್ಕೆ ಬಂದ್ರು ಅನ್ನೋದಿಕ್ಕೆ ಕಾರಣ 'ದಿ ವಿಲನ್' ಸಿನಿಮಾ ರಿಲೀಸ್ ಬಳಿಕ ಉಂಟಾದ ಕಹಿ ಅನುಭವಗಳು.
'ದಿ ವಿಲನ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಫಸ್ಟ್ ಟೈಮ್ ಸ್ಕ್ರೀನ್ ಹಂಚಿಕೊಂಡಿದ್ರು. ಆದ್ರೆ, ಈ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲಾ ಅಂತಾ ಶಿವರಾಜ್ ಕುಮಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಇದ್ರ ಜೊತೆಗೆ ಈ ಉಭಯ ತಾರೆಯರ ಅಭಿಮಾನಿಗಳು ನಮ್ಮ ಬಾಸ್ ಗ್ರೇಟ್, ನಮ್ಮ ಅಣ್ಣ ಗ್ರೇಟ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದರು. ಇದು ಸುದೀಪ್ಗೆ ನೋವುಂಟು ಮಾಡಿದೆ ಅನ್ನಿಸುತ್ತೆ. ಇದೇ ಕಾರಣಕ್ಕೆ ಇನ್ಮುಂದೆ ಬಹುತಾರಾಗಣ ಸಿನಿಮಾ ಮಾಡಲ್ಲ ಅಂತಾ ಅವರು ಹೇಳಿದ್ದಾರೆ. ಹಾಗೇ ಬೇರಯವ್ರ ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಸ್ಕೋಪ್ ಇದ್ರೆ ಗೆಸ್ಟ್ ರೋಲ್ನಲ್ಲಿ ಆಕ್ಟ್ ಮಾಡ್ತಾರಂತೆ.