ETV Bharat / sitara

'ಮಿಷನ್ ಮಂಗಲ್' ಸಿನಿಮಾ ಯಾಕೆ ನೋಡ್ಬೇಕು?: ದತ್ತಣ್ಣ ಕೊಟ್ರು ರಿಯಲ್ ಕಾರಣ ​ - undefined

ಮಂಗಳಯಾನ ಕಥೆಯಾಧಾರಿತ ಬಾಲಿವುಡ್​​ನ 'ಮಿಷನ್ ಮಂಗಲ್' ಸಿನಿಮಾ ಆಗಸ್ಟ್​ 15 ರಂದು ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್​ ನಟಿಸಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿದ್ದು, ಕನ್ನಡಿಗ ಜಗನ್ ಶಕ್ತಿ. ಅಲ್ಲದೆ ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ಕೂಡ ಪ್ರಮುಖ ಪಾತ್ರ ನಿಭಾಯಿಸಿರುವುದು ವಿಶೇಷ.

ದತ್ತಣ್ಣ
author img

By

Published : Jul 23, 2019, 9:59 AM IST

Updated : Jul 23, 2019, 2:12 PM IST

'ಮಿಷನ್ ಮಂಗಲ್'ನಲ್ಲಿ ‘ಸ್ಟ್ರಕ್ಚರಲ್ ಇಂಜಿನಿಯರ್’ ಪಾತ್ರ ನಿರ್ವಹಿಸಿರುವ ದತ್ತಣ್ಣ ಈ ಸಿನಿಮಾ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತಾಡಿದ್ದಾರೆ. ದತ್ತಣ್ಣ ಅವರಿಗೆ ಇದು ಬಾಲಿವುಡ್​​​​ನಲ್ಲಿ ಮೊದಲ ಚಿತ್ರವಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಹಿಂದಿ ಸಿನಿಮಾ ಮೂಲಕ. ಟಿ.ಎಸ್.ರಂಗ ಅವರ 'ಉದ್ಭವ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅವರು ನಂತರ ಹಿಂದಿಯ ದೂಸ್ರಾ ಸಿನಿಮಾದಲ್ಲಿ ನಟಿಸುತ್ತಾರೆ. ಹೀಗೆ ತಮ್ಮ ಸಿನಿ ಪಯಣ ಆರಂಭದ ಬಗ್ಗೆ ಹೇಳಿದ ದತ್ತಣ್ಣ, ನಾನು ನಟಿಸಿದ ಬಾಲಿವುಡ್​​ನ ಬಿಗ್ ಸ್ಟಾರ್​​​ಗಳ ಹೈ-ಬಜೆಟ್​​ನ ಪಕ್ಕಾ ಕಮರ್ಷಿಯಲ್ ಚಿತ್ರ ಅಂದ್ರೆ ಅದು ಮಿಷನ್ ಮಂಗಲ್ ಎಂದರು.

ಮಿಷನ್ ಮಂಗಲ್ ಸಿನಿಮಾ ಅನುಭವ ಹಂಚಿಕೊಂಡ ದತ್ತಣ್ಣ

ಈ ಸಿನಿಮಾದ ನಿರ್ದೇಶಕ ಕನ್ನಡಿಗ ಜಗನ್ ಶಕ್ತಿ. ಮೊದಲಿಗೆ ಅವರು ಬಂದು ನನ್ನ ಬಳಿ ಚಿತ್ರದ ಬಗ್ಗೆ ಮಾತನಾಡಿದರು. ಪ್ರಾರಂಭದಲ್ಲಿ ನನ್ನ ಹಿಂದಿ ಭಾಷೆ ಅಷ್ಟು ಸರಿಯಿಲ್ಲ ಎಂದು ಅವರಿಗೆ ಹೇಳಿದೆ. ಆದರೆ, ಈ ಚಿತ್ರ ಬೆಂಗಳೂರು ಬೇಸ್ಡ್​​ ಚಿತ್ರವಾದ್ದರಿಂದ ಭಾಷೆಯ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದ ಮೇಲೆ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ ದತ್ತಣ್ಣ.

ಮಿಷನ್ ಮಂಗಲ್ ಅನುಭವ ಹಂಚಿಕೊಂಡಿರುವ ಅವರು, ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟರು ದೂರದಿಂದ ನೋಡಿದ್ದೆ. ಆದರೆ, ಹತ್ತಿರದಿಂದ ನೋಡಿ ಅವರ ಜತೆ ಕೆಲಸ ಮಾಡಿದೆ. ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿ ನನ್ನ ಜೊತೆ ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರೊಬ್ಬ ಜಂಟಲ್​​ಮನ್, ಅವರ ಬದುಕಿನ ರೀತಿಯೇ ಬೇರೆ. ಅವರು ತುಂಬಾ ಶಿಸ್ತಿನ ನಟ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಹಿತ, ದೇಶಭಕ್ತಿ ಉದ್ಧೀಪನಗೊಳಿಸುವಂತಹ ಸಿನಿಮಾ ಮಾಡಿದ್ದಾರೆ. ಬಹಳ ಕಮಿಟೆಡ್ ಆರ್ಟಿಸ್ಟ್, ಒಂದು ಒಳ್ಳೆಯ ಸಿನಿಮಾ ಸಿಕ್ಕರೆ ಅವರೇ ನಿರ್ಮಾಣ ಮಾಡ್ತಾರೆ. ಬೇರೆ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಆದ್ರೆ ಇವರು ವರ್ಷದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಾರೆ ಎಂದು ಅಕ್ಷಯ್ ಕುಮಾರ್ ಅವರನ್ನು ಹೊಗಳಿದ್ರು ದತ್ತಣ್ಣ.

ಇನ್ನು ಮಿಷನ್ ಮಂಗಲ್ ಎಲ್ಲ ವರ್ಗದವರು ನೋಡಬೇಕಾದ ಚಿತ್ರ. ಅದರಲ್ಲೂ ವಿದ್ಯಾರ್ಥಿಗಳು ತಪ್ಪದೆ ನೋಡಬೇಕು. ನಮ್ಮ ರಾಜಕಾರಣಿಗಳು ಸಹ ನೋಡಲೇಬೇಕಾದಂತಹ ಚಿತ್ರವಾಗಿದೆ. ಯಾಕೆಂದ್ರೆ ಇಲ್ಲಿ ಕ್ರೈಸಿಸ್ ಆಫ್​ ಲೀಡರ್​​ಶಿಪ್​ ಇದೆ. ಈ ಸಿನಿಮಾ ನೋಡಿದ್ರೆ ನಾಯಕನ ಅಂದ್ರೆ ಏನು? ಅವನು ಯಾವ ರೀತಿ ಕೆಲಸ ಮಾಡಿದರೆ ಜನರನ್ನು ಒಟ್ಟುಗೂಡಿಸಿ ಸಬಹುದು, ಅಲ್ಲದೆ ದೇಶದ ಹಿತದೃಷ್ಟಿಯಿಂದ ಒಂದು ಒಳ್ಳೆ ಕೆಲಸ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬ ರಾಜಕಾರಣಿ ಈ ಸಿನಿಮಾ ನೋಡಲೇಬೇಕು ಎಂದು ದತ್ತಣ್ಣ ಮನವಿ ಮಾಡಿದ್ರು.

'ಮಿಷನ್ ಮಂಗಲ್'ನಲ್ಲಿ ‘ಸ್ಟ್ರಕ್ಚರಲ್ ಇಂಜಿನಿಯರ್’ ಪಾತ್ರ ನಿರ್ವಹಿಸಿರುವ ದತ್ತಣ್ಣ ಈ ಸಿನಿಮಾ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತಾಡಿದ್ದಾರೆ. ದತ್ತಣ್ಣ ಅವರಿಗೆ ಇದು ಬಾಲಿವುಡ್​​​​ನಲ್ಲಿ ಮೊದಲ ಚಿತ್ರವಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಹಿಂದಿ ಸಿನಿಮಾ ಮೂಲಕ. ಟಿ.ಎಸ್.ರಂಗ ಅವರ 'ಉದ್ಭವ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅವರು ನಂತರ ಹಿಂದಿಯ ದೂಸ್ರಾ ಸಿನಿಮಾದಲ್ಲಿ ನಟಿಸುತ್ತಾರೆ. ಹೀಗೆ ತಮ್ಮ ಸಿನಿ ಪಯಣ ಆರಂಭದ ಬಗ್ಗೆ ಹೇಳಿದ ದತ್ತಣ್ಣ, ನಾನು ನಟಿಸಿದ ಬಾಲಿವುಡ್​​ನ ಬಿಗ್ ಸ್ಟಾರ್​​​ಗಳ ಹೈ-ಬಜೆಟ್​​ನ ಪಕ್ಕಾ ಕಮರ್ಷಿಯಲ್ ಚಿತ್ರ ಅಂದ್ರೆ ಅದು ಮಿಷನ್ ಮಂಗಲ್ ಎಂದರು.

ಮಿಷನ್ ಮಂಗಲ್ ಸಿನಿಮಾ ಅನುಭವ ಹಂಚಿಕೊಂಡ ದತ್ತಣ್ಣ

ಈ ಸಿನಿಮಾದ ನಿರ್ದೇಶಕ ಕನ್ನಡಿಗ ಜಗನ್ ಶಕ್ತಿ. ಮೊದಲಿಗೆ ಅವರು ಬಂದು ನನ್ನ ಬಳಿ ಚಿತ್ರದ ಬಗ್ಗೆ ಮಾತನಾಡಿದರು. ಪ್ರಾರಂಭದಲ್ಲಿ ನನ್ನ ಹಿಂದಿ ಭಾಷೆ ಅಷ್ಟು ಸರಿಯಿಲ್ಲ ಎಂದು ಅವರಿಗೆ ಹೇಳಿದೆ. ಆದರೆ, ಈ ಚಿತ್ರ ಬೆಂಗಳೂರು ಬೇಸ್ಡ್​​ ಚಿತ್ರವಾದ್ದರಿಂದ ಭಾಷೆಯ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದ ಮೇಲೆ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ ದತ್ತಣ್ಣ.

ಮಿಷನ್ ಮಂಗಲ್ ಅನುಭವ ಹಂಚಿಕೊಂಡಿರುವ ಅವರು, ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟರು ದೂರದಿಂದ ನೋಡಿದ್ದೆ. ಆದರೆ, ಹತ್ತಿರದಿಂದ ನೋಡಿ ಅವರ ಜತೆ ಕೆಲಸ ಮಾಡಿದೆ. ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿ ನನ್ನ ಜೊತೆ ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರೊಬ್ಬ ಜಂಟಲ್​​ಮನ್, ಅವರ ಬದುಕಿನ ರೀತಿಯೇ ಬೇರೆ. ಅವರು ತುಂಬಾ ಶಿಸ್ತಿನ ನಟ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಹಿತ, ದೇಶಭಕ್ತಿ ಉದ್ಧೀಪನಗೊಳಿಸುವಂತಹ ಸಿನಿಮಾ ಮಾಡಿದ್ದಾರೆ. ಬಹಳ ಕಮಿಟೆಡ್ ಆರ್ಟಿಸ್ಟ್, ಒಂದು ಒಳ್ಳೆಯ ಸಿನಿಮಾ ಸಿಕ್ಕರೆ ಅವರೇ ನಿರ್ಮಾಣ ಮಾಡ್ತಾರೆ. ಬೇರೆ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಆದ್ರೆ ಇವರು ವರ್ಷದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಾರೆ ಎಂದು ಅಕ್ಷಯ್ ಕುಮಾರ್ ಅವರನ್ನು ಹೊಗಳಿದ್ರು ದತ್ತಣ್ಣ.

ಇನ್ನು ಮಿಷನ್ ಮಂಗಲ್ ಎಲ್ಲ ವರ್ಗದವರು ನೋಡಬೇಕಾದ ಚಿತ್ರ. ಅದರಲ್ಲೂ ವಿದ್ಯಾರ್ಥಿಗಳು ತಪ್ಪದೆ ನೋಡಬೇಕು. ನಮ್ಮ ರಾಜಕಾರಣಿಗಳು ಸಹ ನೋಡಲೇಬೇಕಾದಂತಹ ಚಿತ್ರವಾಗಿದೆ. ಯಾಕೆಂದ್ರೆ ಇಲ್ಲಿ ಕ್ರೈಸಿಸ್ ಆಫ್​ ಲೀಡರ್​​ಶಿಪ್​ ಇದೆ. ಈ ಸಿನಿಮಾ ನೋಡಿದ್ರೆ ನಾಯಕನ ಅಂದ್ರೆ ಏನು? ಅವನು ಯಾವ ರೀತಿ ಕೆಲಸ ಮಾಡಿದರೆ ಜನರನ್ನು ಒಟ್ಟುಗೂಡಿಸಿ ಸಬಹುದು, ಅಲ್ಲದೆ ದೇಶದ ಹಿತದೃಷ್ಟಿಯಿಂದ ಒಂದು ಒಳ್ಳೆ ಕೆಲಸ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬ ರಾಜಕಾರಣಿ ಈ ಸಿನಿಮಾ ನೋಡಲೇಬೇಕು ಎಂದು ದತ್ತಣ್ಣ ಮನವಿ ಮಾಡಿದ್ರು.

Intro:ಭಾರತದ ಮಂಗಳಯಾನ ಸತ್ಯ ಕಥೆಯಾಧಾರಿತ ಅಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ" ಮಿಷನ್ ಮಂಗಲ್" ಬಾಲಿವುಡ್ ನ ಎಕ್ಸ್ಟರ್ನಲ್ ಬಜೆಟ್ ನ ಈ ಚಿತ್ರದ ವಿಶೇಷ ಏನೆಂದರೆ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಕನ್ನಡಿಗರಾದ ಜಗನ್, ಅಲ್ಲದೆ ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಕೂಡ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದು, ಮಿಷನ್ ಮಂಗಲ್ ಚಿತ್ರದ ಅನುಭವವನ್ನು ಈಟಿವಿ ಭಾರತ್ ಜೊತೆ ದತ್ತಣ್ಣ ಅವರು ಹಂಚಿಕೊಂಡಿದ್ದಾರೆ.


Body:ಇನ್ನು ದತ್ತಣ್ಣ ಅವರಿಗೆ ಮಿಷನ್ ಮಂಗಲ್ ಬಾಲಿವುಡ್ನಲ್ಲಿ ಮೊದಲ ಚಿತ್ರವೇನಲ್ಲ. ಇನ್ನು ದತ್ತಣ್ಣ ಅವರು ಬಣ್ಣದ ಬದುಕು ಆರಂಭಿಸಿದೆ ಹಿಂದಿ ಸಿನಿಮಾ ಮೂಲಕವಂತೆ . ಟಿ ಎಸ್ ರಂಗ ಅವರ ಉದ್ಭವ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ದತ್ತಣ್ಣ ಅವರು ಕೆಲವು ವರ್ಷಗಳ ಹಿಂದೆ ದೂಸ್ರಾ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದೆ.ಅದ್ರೆ ನಾನು ನಟಿಸಿದ ಬಾಲಿವುಡ್ ನ ಬಿಗ್ ಸ್ಟಾರ್ಗಳ ಹೈ ಬಜೆಟ್ ನ ಪಕ್ಕಾ ಕಮರ್ಷಿಯಲ್ ಚಿತ್ರ ಅಂದ್ರೆ ಅದು ಮಿಷನ್ ಮಂಗಲ್ ಎಂದು ದತ್ತಣ್ಣ ತಿಳಿಸಿದರು. ಅಲ್ಲದೆ ಮಿಷನ್ ಮಂಗಲ್ ಚಿತ್ರತಂಡ ಸೇರಿದ್ದು ಹೇಗೆ ಎಂದು ನನಗೆ ಈಗಲೂ ಕೂಡ ಗೊತ್ತಿಲ್ಲ. ಮೊದಲಿಗೆ ನಿರ್ದೇಶಕ ಜಗನ್ ಅವರು ಬಂದು ನನ್ನ ಬಳಿ ಚಿತ್ರದ ಬಗ್ಗೆ ಮಾತನಾಡಿದರು ನಂತರ ನಾನು ಚಿತ್ರದಲ್ಲಿ ನಟಿಸಿದೆ ಆದರೆ ನನಗೆ ಪಕ್ಕ ಬಾಂಬೆ ಸ್ಟೈಲ್ನ ಹಿಂದಿ ಬರಲ್ಲ ಎಂದು ನಾನು ಹೇಳಿದೆ .ಆದರೆ ಈ ಚಿತ್ರ ಬೆಂಗಳೂರು ಬೇಸ್ಡ್ ಚಿತ್ರವಾದ್ದರಿಂದ ಭಾಷೆಯ ತೊಡಕು ನನಗೆ ಆಗಲಿಲ್ಲ ಎಂದು ತಿಳಿಸಿದರು.


Conclusion:ಇನ್ನು ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟರು ದೂರದಿಂದ ನನಗೆ ದೊಡ್ಡ ದೊಡ್ಡ ಸ್ಟಾರ್ಗಳ ಆಗಿದ್ದರು. ಆದರೆ ಹತ್ತಿರದಿಂದ ನೋಡಿದಾಗ ನನಗೆ ಆಗಮಿಸಲಿಲ್ಲ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿ ನನ್ನ ಜೊತೆ ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.ಅಲ್ಲದೆ ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರೊಬ್ಬ ಜಂಟಲ್ ಮ್ಯಾನ್, ಇನ್ನು ಅಕ್ಷಯ್ ಕುಮಾರ್ ಅವರ ಬದುಕಿನ ರೀತಿಯೇ ಬೇರೆ ಅವರು ತುಂಬಾ ಡಿಸಿಪ್ಲಿನ್ ಇರುವಂತಹ ನಟ. ಅಲ್ಲದೆ ಅವರ ದೇಹವನ್ನು ತುಂಬಾ ಅಚ್ಚುಕಟ್ಟಾಗಿ ಕಾಪಾಡಿಕೊಂಡಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ರಾಷ್ಟ್ರಹಿತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಾಡ್ತಾ ಬಂದಿದ್ದಾರೆ, ದೇಶಭಕ್ತಿಯನ್ನು ಉದ್ಧೀಪನಗೊಳಿಸುವ ಅಂತಹ ಚಿತ್ರಗಳನ್ನು ಅಕ್ಷಯ್ ಕುಮಾರ್ ಇತ್ತೀಚಿಗೆ ಮಾಡುತ್ತಾ ಬಂದಿದ್ದಾರೆ, ಈ ದೇಶಕ್ಕೆ ಸಂಬಂಧಪಟ್ಟ ಹೊಸಹೊಸ ವಿಷಯಗಳ ಆಧಾರಿತವಾದ ಪ್ಯಾಡ್ ಮ್ಯಾನ್ ಹಾಗೂ ಕೇಸರಿ ಗಳಂತಹ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಬಹಳ ಕಮಿಟೆಡ್ ಆರ್ಟಿಸ್ಟ್, ಒಂದು ಒಳ್ಳೆ ಸಬ್ಜೆಕ್ಟ್ ಇದೆ ಎಂದರೆ ಅದನ್ನು ಅವರೇ ನಿರ್ಮಾಣ ಸಹ ಮಾಡುತ್ತಾರೆ, ಬೇರೆ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಆದ್ರೆ ಅಕ್ಷಯ್ ಕುಮಾರ್ ಒಂದು ವರ್ಷದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಾರೆ. ಇನ್ನು ಇದು ಅವರಿಗೆ ಹೇಗಪ್ಪ ಸಾಧ್ಯ ಅಂದ್ರೆ ಅವರಿಗೆ ಯಾವುದೇ ಸೋಶ್ಯಗಳಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವ ನಟ 6:00 ಗೆ ಸೆಟ್ಟಿಗೆ ಬರಬೇಕೆಂದರೆ ಆ ಟೈಮಿಗೆ ಸೆಟ್ನಲ್ಲಿ ಇರ್ತಾರೆ ಅಲ್ಲದೆ ಆರು ಗಂಟೆಗೆ ವಾಪಸ್ ಹೋಗಬೇಕೆಂದರೆ ಅದೇ ಟೈಮಿಗೆ ವಾಪಸ್ ಹೋಗ್ತಾರೆ ,ಅವರು ತುಂಭಾ ಡಿಸಿಪ್ಲೀನ್ ಆರ್ಟಿಸ್ಟ್ ಎಂದು ದತ್ತಣ್ಣ ಅಕ್ಷಯ್ ಕುಮಾರ್ ಅವರನ್ನು ಕೊಂಡಾಡಿದರು.

ಇನ್ನೂ ಈಚಿತ್ರ ಯಾರು ಯಾಕೇ ನೋಡಬೇಕು.

ಇನ್ನು ಮಿಷನ್ ಮಂಗಲ್ ಎಲ್ಲಾ ವರ್ಗದ ಜನರು ನೋಡ ಬೇಕಾದಂತಹ ಚಿತ್ರ, ಅದರಲ್ಲೂ ವಿದ್ಯಾರ್ಥಿಗಳು ಈ ಚಿತ್ರವನ್ನು ತಪ್ಪದೆ ನೋಡಬೇಕು, ಇನ್ನು ಈ ಚಿತ್ರವನ್ನು ಸೈನ್ಸ್ ಓದುತ್ತಿರುವ ವಿದ್ಯಾರ್ಥಿಗಳಲ್ಲದೆ ಆರ್ ಕಾಮರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಸಹ ನೋಡಲೇಬೇಕಾದಂತಹ ಒಂದು ಉತ್ತಮವಾದ ಚಿತ್ರ,ಯಾಕಂದ್ರೆ, ಮಿಷನ್ ಮಂಗಲ್ ಚಿತ್ರ ಮಕ್ಕಳ ಇಮ್ಯಾಜಿನೇಷನ್ ಅನ್ನು ಫೈಯರ್ ಮಾಡುತ್ತೆ. ಅಲ್ಲದೆ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಸಣ್ಣ ಪುಟ್ಟ ಪ್ರಾಬ್ಲಮ್ ಗಳು ಇರುತ್ತೆ ಆದರೆ ಅದನ್ನು ನಿವಾರಣೆ ಮಾಡಿಕೊಳ್ಳ ಬೇಕು.ಅಲ್ಲದೆ ಪ್ರತಿಯೊಬ್ಬರಲ್ಲೂ ನೇಟಿವ್ ಇಂಟಲಿಜೆನ್ಸ್ ಅನ್ನುವುದು ಇರುತ್ತೆ. ಇಂಟಲಿಜೆನ್ಸ್ ಅನ್ನು ಬಳಸಿಕೊಂಡು ಯಾವ ರೀತಿಯ ದೊಡ್ಡ ದೊಡ್ಡ ಆವಿಷ್ಕಾರಗಳನ್ನು ಮಾಡಬಹುದು ಎಂಬ ಅಂಶಕ್ಕೆ ಈ ಚಿತ್ರ ಧೈರ್ಯ ಕೊಡುವಂತಹ ಚಿತ್ರವಾಗಿದೆ.ಅಲ್ಲದೆ ಈ ಚಿತ್ರವನ್ನು ನಮ್ಮ ರಾಜಕಾರಣಿಗಳು ಸಹ ನೋಡಲೇಬೇಕಾದಂತಹ ಚಿತ್ರವಾಗಿದೆ ಯಾಕಂದ್ರೆ ಇಲ್ಲಿ ಕ್ರೈಸಿಸ್ ಆಪ್ ಲೀಡರ್ಶಿಪ್ ಇದೆ. ಈ ಸಿನಿಮಾ ನೋಡಿದ್ರೆ ಲೀಡರ್ ಅಂದ್ರೆ ಏನು ಒಬ್ಬ ಲೀಡರ್ ಹೇಗಿರಬೇಕು, ಆ ಲೀಡರ್ ಯಾವ ರೀತಿ ಕೆಲಸ ಮಾಡಿದರೆ ಜನರನ್ನು ಒಟ್ಟುಗೂಡಿಸಿ ಸಬಹುದು ಅಲ್ಲದೆ ದೇಶದ ಹಿತದೃಷ್ಟಿಯಿಂದ ಒಂದು ಒಳ್ಳೆ ಕೆಲಸ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಆದ್ದರಿಂದ ಪ್ರತಿಯೊಬ್ಬ ಪೊಲಿಟಿಷಿಯನ್ಸ್ ಸಿನಿಮಾ ನೋಡಲೇಬೇಕು ಎಂದು ದತ್ತಣ್ಣ ಮಿಷನ್ ಮಂಗಲ್ ಚಿತ್ರದ ಬಗ್ಗೆ ಈಟಿವಿ ಭಾರತ್ ಜೊತೆ ಮನ ಬಿಚ್ಚಿ ಮಾತನಾಡಿದರು

ಸತೀಶ ಎಂಬಿ
Last Updated : Jul 23, 2019, 2:12 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.